ಯಲ್ಲಾಪುರ ಕ್ಷೇತ್ರದ ಬಿಜೆಪಿಗೆ ಮರ್ಮಾಘಾತವಾಗಿದೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಪಕ್ಷ ತೊರೆಯೋದು ಕನ್ಫರ್ಮ್ ಆಗಿದೆ. ಬಿಜೆಪಿ ತೊರೆದು ಇನ್ನೇನು ಕಾಂಗ್ರೆಸ್ ಸೇರಲು ಪಾಟೀಲರು ತುದಿಗಾಲಲ್ಲಿ ನಿಂತಾಗಿದೆ. ಹೀಗಾಗಿ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಅದೊಂದು ರೀತಿಯ ಸಂಚಲನಕ್ಕೆ ಕಾರಣವಾಗಿದೆ. ವಲಸಿಗರು ಹಾಗೂ ಮೂಲ ಬಿಜೆಪಿಗರ ನಡುವಿನ ಕಾಳಗಕ್ಕೆ ರಣಾಂಗಣ ಸಿದ್ದವಾಗ್ತಿದೆ. ಇದ್ರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ “ಪಬ್ಲಿಕ್ ಫಸ್ಟ್” ನುಡಿದಿದ್ದ ಭವಿಷ್ಯ ನಿಜವಾಗಿದೆ. ಸಂಭಾವಿತ ರಾಜಕಾರಣಿ..! ಅಸಲು, ವಿ.ಎಸ್.ಪಾಟೀಲ್ ಉತ್ತರ ಕನ್ನಡ ಕಂಡ ಸಂಭಾವಿತ ರಾಜಕಾರಣಿ, ಯಾವತ್ತಿಗೂ ಅಧಿಕಾರದ ದರ್ಪ ತೋರಿದವರೇ ಅಲ್ಲ. ಮಾತಿಗಿಂತ ಕೃತಿಯಲ್ಲೇ ತಾವು ಏನು ಅಂತಾ ತೋರಿಸಿಕೊಟ್ಟವರು ಇವ್ರು. ಮೊದಲ ಬಾರಿ ಶಾಸಕರಾಗಿದ್ದಾಗ, ಇಡೀ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಇವತ್ತಿಗೂ ಮಾದರಿ. ಹೀಗಾಗಿನೇ ಪಾಟೀಲರೆಂದ್ರೆ ಇವತ್ತಿಗೂ ಕ್ಷೇತ್ರದಲ್ಲಿ ಅಪ್ಪಿಕೊಳ್ಳುವ ಅಪ್ಪಟ ಅಭಿಮಾನಿಗಳಿದ್ದಾರೆ. ಇದು ಎಲ್ರಿಗೂ ಗೊತ್ತು. ಈ ಕಾರಣಕ್ಕಾಗೇ ಪಾಟೀಲರು ಕಳೆದ ಚುನಾವಣೆಯಲ್ಲಿ ಸೋತು ಗೆದ್ದಿದ್ದರು. ಪಕ್ಷಕ್ಕಾಗಿ ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು....
Top Stories
ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!
60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು..!
ಜೂನ್ 17ರವರೆಗೂ ಭಾರಿ ಮಳೆ ಮುನ್ಸೂಚನೆ: ಉತ್ತರ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!
ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!
ಇಸ್ರೇಲ್-ಇರಾನ್ ಉದ್ವಿಗ್ನ, ಚಿನ್ನದ ಬೆಲೆ ₹1 ಲಕ್ಷ ಗಡಿ ದಾಟಿದೆ : ಶುಕ್ರವಾರ 10 ಗ್ರಾಂ ಬಂಗಾರದ ಬೆಲೆ ₹2,120 ಏರಿಕೆ..!
ಪಡಿತರ ಚೀಟಿಯಲ್ಲಿನ ಸದಸ್ಯರ ಇಕೆವೈಸಿ ಪೂರ್ಣಗೊಳಿಸುವ ಅಂತಿಮ ಅವಕಾಶ..!
ಯೋಗೇಶ ಗೌಡ ಕೊಲೆ ಪ್ರಕರಣ : ಕೋರ್ಟಿಗೆ ಹಾಜರಾದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ..!
ವಿದ್ಯಾರ್ಥಿ ಬಸ್ ಪಾಸ್ ಬಗ್ಗೆ ವಿಳಂಬದ ಗೊಂದಲ, ಈ ದಾಖಲೆ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು..!
ಅರ್ಹತೆ ಇಲ್ಲದಿದ್ದರೂ ಮುಂಡಗೋಡಿನ ಆ ಖಾಸಗಿ ವೈದ್ಯ ಆಪರೇಶನ್ ಮಾಡ್ತಾರಂತೆ..! ಅವ್ರ ವಿರುದ್ಧ ಕ್ರಮಕ್ಕಾಗಿ ಪಪಂ ಸಭೆಯಲ್ಲಿ ಆಗ್ರಹ, ಗಂಭೀರ ಚರ್ಚೆ..!
ಭಾರೀ ಮಳೆ; ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ..!
ಶಕ್ತಿ ಯೋಜನೆ: 7.41 ಕೋಟಿ ಮಹಿಳೆಯರ ಉಚಿತ ಪ್ರಯಾಣ..!
ಮತ್ತಷ್ಟು ಹೆಚ್ಚಾಯ್ತು ಚಿನ್ನದ ಬೆಲೆ : ಗುರುವಾರ 10ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ ₹880 ಜಿಗಿತ..!
ಏರ್ ಇಂಡಿಯಾ ವಿಮಾನ ಪತನ; ಕುಸಿದು ಬಿದ್ದ ಟಾಟಾ ಸ್ಟಾಕ್ಸ್, ಬೋಯಿಂಗ್ ಷೇರು 8% ಇಳಿಕೆ..!
ವಿಮಾನ ಪತನ; 242 ಪ್ರಯಾಣಿಕರೂ ಸಾವು, ವಿಮಾನ ಬಿದ್ದಿದ್ದು ಹಾಸ್ಟೆಲ್ ಕಟ್ಟಡದ ಮೇಲೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ..!
ಏರ್ ಇಂಡಿಯಾ ವಿಮಾನ ಪತನ, ಜಗತ್ತನ್ನೇ ಬೆಚ್ಚಿ ಬೀಳಿಸಿದ ಬಹುದೊಡ್ಡ ದುರಂತ..! ವಿಮಾನದಲ್ಲಿದ್ದ 242 ಪ್ರಯಾಣಿಕರು ಸಾವು?
ಭೂ ಕುಸಿತ ಪ್ರದೇಶದಲ್ಲಿ ವಾಹನ ನಿಲುಗಡೆಗೆ ನಿಷೇಧ ; ಡಿಸಿ ಲಕ್ಷ್ಮೀಪ್ರಿಯ ಆದೇಶ
ಬೈಕ್ ಕಳ್ಳತನ ಕೇಸ್ ಭೇದಿಸಿದ ಮುಂಡಗೋಡ ಪೊಲೀಸ್ರು, ಮಂಚಿಕೇರಿಯ ಆರೋಪಿ ಅರೆಸ್ಟ್..!
ಧಾರಾಕಾರ ಮಳೆ: ಚರಂಡಿ ನೀರಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ..!
ವಿ.ಎಸ್.ಪಾಟೀಲರಿಂದ NWKSRTC ಅಧ್ಯಕ್ಷ ಸ್ಥಾನ ಕಿತ್ತುಕೊಂಡ ಸಿಎಂ, ಅಷ್ಟಕ್ಕೂ, ಪಾಟೀಲ್ರು ಏನಂದ್ರು..?
ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲ್ ರನ್ನು ಔಟ್ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಹಾಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿದ್ದ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ತೀರ್ಮಾನ ಕೈಗೊಂಡಿದ್ರು. ಹೀಗಾಗಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಮುಂದಾಗಿದ್ರು. ಆದ್ರೆ ಇವತ್ತು ಏಕಾಏಕಿ ಸಿಎಂ ಬಸವರಾಜ್ ಬೊಮ್ಮಾಯಿ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲರನ್ನು ಕೆಳಗಿಳಿಸಿ ಆದೇಶ ಹೊರಡಿಸಿದ್ದಾರೆ. ವಿ.ಎಸ್.ಪಾಟೀಲ್ ಫಸ್ಟ್ ರಿಯಾಕ್ಷನ್..! ಇನ್ನು, ವಿ.ಎಸ್.ಪಾಟೀಲರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಿರೋ ಆದೇಶಕ್ಕೆ ಸಂಬಂಧಿಸಿದಂತೆ ಪಾಟೀಲರು ಪಬ್ಲಿಕ್ ಫಸ್ಟ್ ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು. ನಾನು ಈಗಾಗಲೇ ರಾಜೀನಾಮೆ ನೀಡಲು ರೆಡಿಯಿದ್ದಿನಿ ಅಂತಾ ಮೊದಲೇ ತಿಳಿಸಿದ್ದೆ. ಅಷ್ಟೊತ್ತಿಗಾಗಲೇ ಸಿಎಂ ಇಂತಹ ತೀರ್ಮಾನ ಪಡೆದಿದ್ದು ಸರಿಯಲ್ಲ ಅಂತಾ ತಿಳಿಸಿದ್ರು. ಒಬ್ಬ ಮಾಜಿ ಶಾಸಕನಿಗೆ ಬಿಜೆಪಿ ಈ ರೀತಿ ಮಾಡತ್ತೆ ಅಂತಾ ಅಂದುಕೊಂಡಿರಲಿಲ್ಲ ಅಂತಾ ಖೇದ ವ್ಯಕ್ತಪಡಿಸಿದ್ರು.
ಟಿಬೇಟಿಯನ್ ಕಾಲೋನಿಯಲ್ಲಿ ಗಾಂಜಾ ಘಾಟು, ನಶೆಗಾಗಿ ಇಲ್ಲಿ ಏನೇಲ್ಲ ಬಳಸ್ತಾರೆ ಗೊತ್ತಾ..?
ಮುಂಡಗೋಡ: ಟಿಬೇಟಿಯನ್ ಕಾಲೋನಿಯಲ್ಲಿ ಸ್ವಾತಂತ್ರೋತ್ಸವದ 75 ನೇ ಅಮೃತ ಮಹೋತ್ಸವದ ದಿನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ರು. ಅವತ್ತು ಬರೋಬ್ಬರಿ 84 ಸಾವಿರ ಮೌಲ್ಯದ 6 ಕೆಜಿ ತೂಗುವ ಹಸಿ ಹಸಿ ಗಾಂಜಾ ವಶಕ್ಕೆ ಪಡೆದಿದ್ರು. ಅಸಲು, ಅವತ್ತು ಹಾಗೆ ಗಾಂಜಾದೊಂದಿಗೆ ಪೊಲೀಸರ ಬಲೆಗೆ ಬಿದ್ದಿದ್ದವನು ಟಿಬೇಟಿಗನಾಗಿದ್ದ. ನಶೆಯ ಜಗತ್ತಿನ ಎಜೆಂಟ್ ಆಗಿದ್ದ. ಇದ್ರೊಂದಿಗೆ, ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಶೆಯ ಗುಂಗು ಹಿಡಿಸುವವನಾಗಿದ್ದ. ನಿಜ ಅಂದ್ರೆ…. ಟಿಬೇಟಿಯನ್ ಕಾಲೋನಿಯ ಗಲ್ಲಿಗಳಲ್ಲಿ ಕಾಲಿಟ್ರೆ ಆಮ್ಲಜನಕ ಅದೇಷ್ಟು ಸಿಗತ್ತೋ ಗೊತ್ತಿಲ್ಲ. ಆದ್ರೆ, ಸಿಗರೇಟಿನ ಘಮ್ಮು ವಾಸನೆ ಗಬ್ಬೆಬ್ಬಿಸಿರತ್ತೆ. ಇಲ್ಲಿ ಹೈಸ್ಕೂಲಿಗೆ ಹೋಗುವ ಕೆಲವು ವಿದ್ಯಾರ್ಥಿಗಳೂ ಕೂಡ ಮಾದಕ ಜಗತ್ತಿನ ದಾಸರಾಗಿರ್ತಾರೆ ಅನ್ನೋದು ದುರಂತ. ಅಸಲಿಗೆ, ಟಿಬೇಟಿಗರಲ್ಲಿ ಹಿರಿಯರು ಶ್ರಮ ಜೀವಿಗಳಾಗಿರ್ತಾರೆ. ಬೆಳಗಾಯಿತೆಂದ್ರೆ ಕೆಲಸ ಕೆಲಸ ಅಂತಾ ಬೆವರು ಹರಿಸೋರೂ ಇರ್ತಾರೆ. ಆದ್ರೆ, ಇಲ್ಲಿನ ಕೆಲ ಯುವ ಪಡೆ ಮಾತ್ರ ನಶೆಯ ಗುಂಗಿನಲ್ಲೇ ತೇಲಾಡುವ ಚಟ ಹಚ್ಚಿಕೊಂಡಿದೆ ಎನ್ನುವ ಮಾತುಗಳಿವೆ. ಈ ಕಾರಣಕ್ಕಾಗೇ,...
ಕಲಘಟಗಿ ದಾಸ್ತಿಕೊಪ್ಪ ಬಳಿ ಭೀಕರ ಸರಣಿ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು..!
ಕಲಘಟಗಿ: ಇಲ್ಲಿನ ದಾಸ್ತಿಕೊಪ್ಪ ಬಳಿ ಬೆಳ್ಳಂ ಬೆಳಿಗ್ಗೆ ಭೀಕರ ಸರಣಿ ಅಪಘಾತವಾಗಿದೆ. ಕ್ರೂಸರ್, ಖಾಸಗಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಕ್ರೂಸರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ನಡೆದಿರೊ ಅಪಘಾತದ ಇದಾಗಿದ್ದು ಸೀಬರ್ಡ್ ಬಸ್ ಲಾರಿ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತವಾಗಿದೆ. ಅಪಘಾತದ ಭೀಕರತೆಗೆ ಕ್ರೂಸರ್ ವಾಹನ ಎರಡು ಹೋಳಾಗಿದೆ. ಹೀಗಾಗಿ ಕ್ರೂಸರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಲಘಟಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ದುಂಢಸಿ, ಅ.ಮ. ಕೊಪ್ಪದಿಂದ ಹೊಂಬುಜ ಕ್ಷೇತ್ರಕ್ಕೆ ಪಾದಯಾತ್ರೆ, ಅರಟಾಳದಲ್ಲಿ ಮುನಿಶ್ರೀ ಚಾಲನೆ..!
ಶಿಗ್ಗಾವಿ: ತಾಲೂಕಿನ ಅ. ಮ.ಕೊಪ್ಪ ಹಾಗೂ ದುಂಡಶಿ ಗ್ರಾಮದ ಜೈನ ಶ್ರಾವಕರು ಶ್ರೀ ಕ್ಷೇತ್ರ ಹೊಂಬುಜ ಪದ್ಮಾವತಿದೇವಿಯ ದರ್ಶನಕ್ಕಾಗಿ ಪಾದಯಾತ್ರೆ ಹೊರಟಿದ್ದಾರೆ. ನೂರಾರು ಶ್ರಾವಕರ ತಂಡ ಇಂದಿನಿಂದ ಪಾದಯಾತ್ರೆ ಪ್ರಾರಂಭಿಸಿದೆ. ಜೈನರ ಅತಿಶಯ ಕ್ಷೇತ್ರ ಅರಟಾಳದಲ್ಲಿ ಮುನಿಶ್ರೀ ಪುಣ್ಯಸಾಗರ ಮಹಾರಾಜರು ಹಾಗೂ ಬಾ.ಬ್ರ. ಸೋಮದೇವ ಬೈಯಾಜಿಯವವರ ನೇತೃತ್ವದಲ್ಲಿ ಹೊಂಬುಜ ಪಾದಯಾತ್ರೆಗೆ ಚಾಲನೆ ನೀಡಿದ್ರು. ಈ ವೇಳೆ ರವಿ ಪಾಸರ, ಪ್ರಕಾಶ್ ಧರಣೆಪ್ಪನವರ್, ಸುನೀಲ್ ಆರೆಗೊಪ್ಪ, ಸುಧೀರ್ ಛಬ್ಬಿ, ಮಹಾವೀರ ಧಾರವಾಡ, ಪ್ರಶಾಂತ ಬಿಶೆಟ್ಟಿ, ಪಾಯಪ್ಪ ಬ್ಯಾಹಟ್ಟಿ ಹಾಗೂ ಗ್ರಾಮದ ಶ್ರಾವಕ ಶ್ರಾವಕಿಯರು ಹಾಜರಿದ್ದರು.
ಮುಂಡಗೋಡ APMC ಸಮೀಪ, ಎಮ್ಮೆ ಅಡ್ಡ ಬಂದುಮರಕ್ಕೆ ಡಿಕ್ಕಿ ಹೊಡೆದ ಕಾರ್, ಓರ್ವ ಮಹಿಳೆ ಸ್ಥಳದಲ್ಲೇ ಸಾವು, ಐವರಿಗೆ ಗಾಯ..!
ಮುಂಡಗೋಡ: ಪಟ್ಟಣದ APMC ಬಳಿ ಭೀಕರ ಅಪಘಾತವಾಗಿದೆ. ಕಾರಿಗೆ ಎಮ್ಮೆ ಅಡ್ಡ ಬಂದ ಪರಿಣಾಮ, ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಐವರಿಗೆ ಗಂಭೀರ ಗಾಯವಾಗಿದೆ. ಮಹಾರಾಷ್ಟ್ರ ಕೊಲ್ಲಾಪುರ ಮೂಲದ ರೂಪಾಲಿ ಗೋಂದಳಿ (42) ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನು ಕಾರಲ್ಲಿ ಇನ್ನುಳಿದ ಐವರಿಗೆ ಗಾಯವಾಗಿದ್ದು ಸದ್ಯ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಕಾರಿಗೆ ಎಮ್ಮೆ ಅಡ್ಡ ಬಂದಿದೆ. ಹೀಗಾಗಿ ನಿಯಂತ್ರಿಸಲು ಹೋದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದೇನಿದು ಲೋಯೊಲಾ ಶಿಕ್ಷಣ ಸಂಸ್ಥೆಯ ದುರಹಂಕಾರ..? ವಿದ್ಯಾರ್ಥಿಗಳ ರಕ್ಷಾಬಂಧನ ಕಿತ್ತೊಗೆದದ್ದು ಸರಿನಾ..? ಹಿಂದುಪರ ಸಂಘಟನೆಗಳ ಪ್ರೊಟೆಸ್ಟ್..!
ಮುಂಡಗೋಡಿನ ಲೋಯೊಲಾ ಶಿಕ್ಷಣ ಸಂಸ್ಥೆ ವಿರುದ್ಧ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿವೆ. ಹಿಂದು ವಿದ್ಯಾರ್ಥಿಗಳು ಕೈಗೆ ಕಟ್ಟಿಸಿಕೊಂಡಿದ್ದ ರಕ್ಷಾಬಂಧನದ ರಾಖಿಗಳನ್ನು ಈ ಶಾಲೆಯಲ್ಲಿ ಕಿತ್ತೊಗೆಯಲಾಗ್ತಿದೆಯಂತೆ, ಹಿಂದು ವಿದ್ಯಾರ್ಥಿಗಳು ಹಣೆಗೆ ಕುಂಕುಮ ಹಚ್ಚಿಕೊಳ್ಳುವ ಹಾಗಿಲ್ಲವಂತೆ, ಅಲ್ಲದೇ ಕೈಯಲ್ಲಿ ಯಾವುದೇ ತರಹದ ಧಾರ್ಮಿಕ ಭಾವನೆ ಸಾರುವ ದಾರಗಳನ್ನು ಕಟ್ಟಿಕೊಳ್ಳುವ ಹಾಗಿಲ್ಲವಂತೆ, ಹೀಗಾಗಿ ಇದ್ಯಾವ ನ್ಯಾಯ ಅಂತಾ ಪೋಷಕರು ಹಾಗು ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ರಾಖಿಗಿಲ್ಲ “ರಕ್ಷೆ” ಇತ್ತೀಚೆಗೆ ನಡೆದ ರಕ್ಷಾಬಂಧನದಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳು ತಮ್ಮ ಕೈಗಳಿಗೆ ರಾಖಿ ಕಟ್ಟಿಕೊಂಡು ಬಂದಿದ್ರು. ಆದ್ರೆ, ಹಾಗೆ ರಾಖಿ ಕಟ್ಟಿಕೊಳ್ಳಬೇಡಿ ಅಂತ ಇಲ್ಲಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಗಳನ್ನು ಕಿತ್ತೆಸೆದಿದೆ ಅನ್ನೊ ಆರೋಪ ಕೇಳಿಬಂದಿದೆ. ಹೀಗಾಗಿ, ಈ ಶಾಲೆಯಲ್ಲಿ ಯಾಕೆ ಅಂತಹ ರೂಲ್ಸ್..? ಅಂತಾ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ. ಅವ್ಯವಸ್ಥೆ ಇದೆಯಾ.? ಇನ್ನು ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ಮಕ್ಕಳಿಗೆ ತುಂಬಾ ಕೀಳು ಮಟ್ಟದಲ್ಲಿ...
ಮೂಡಸಾಲಿಯಲ್ಲಿ ಕುಸಿದು ಬಿದ್ದ ಶಾಲಾ ಕಟ್ಟಡ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ, ಛೇ..ಬಿಇಓ ಸಾಹೇಬನ ನಿರ್ಲಕ್ಷಕ್ಕೆ ಏನೇನ್ನಬೇಕು..?
ಮುಂಡಗೋಡ: ತಾಲೂಕಿನ ಮೂಡಸಾಲಿಯಲ್ಲಿ ಭಾರೀ ಅನಾಹುತವೊಂದು ಜಸ್ಟ್ ಮಿಸ್ ಆಗಿದೆ. ನಿರಂತರ ಮಳೆಯಿಂದ ನೆನೆದಿದ್ದ ಶಾಲಾ ಕೊಠಡಿ ಕುಸಿದು ಬಿದ್ದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಹೀಗಾಗಿನೇ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮೊದಲೇ ಸಂಶಯವಿತ್ತು..! ಅಂದಹಾಗೆ, ಮೂಡಸಾಲಿಯ ಸರ್ಕಾರಿ ಶಾಲೆಯ ಕಟ್ಟಡದ ದುಸ್ಥಿತಿ ಮೊದಲೇ ಅರಿವಿತ್ತು, ಸಂಶಯವಿತ್ತು. ಯಾಕಂದ್ರೆ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದ್ರೆ, ಅಂತಹ ಆತಂಕದ ನಡುವೆಯೇ ಅದೇ ಕೊಠಡಿಯಲ್ಲೇ ವಿದ್ಯಾರ್ಥಿಗಳು ನಿತ್ಯ ಪಾಠ ಕೇಳುತ್ತಿದ್ದರು. ಹಾಗೊಂದು ವೇಳೆ ರಾತ್ರಿ ನಡೆದಿರೋ ಘಟನೆ ಹಗಲಲ್ಲಿ ನಡೆದಿದ್ದರೇ ಅದೇಂತಹ ದುರಂತ ಸಂಭವಿಸುತ್ತಿತ್ತು..? ನೀವೇ ಯೋಚಿಸಿ. ಕೊಠಡಿ ಸಮಸ್ಯೆ..! ಅಂದಹಾಗೆ, ಮೂಡಸಾಲಿ ಶಾಲೆಯಲ್ಲಿ ಒಟ್ಟೂ 103 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದಾರೆ. ಅದ್ರಲ್ಲಿ 4 ಮತ್ತು 5 ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಇದೇ ಶಿಥಿಲವಾದ ಕೊಠಡಿಯಲ್ಲೇ ಕುಳಿತು ಪಾಠ ಕೇಳುತ್ತಿದ್ದರು. ಅಸಲಿಗೆ, ಕೊಠಡಿ ತುಂಬ ಬಿರುಕು ಬಿಟ್ಟು ಇನ್ನೇನು ಬೀಳುವ...
ಗಾಂಜಾ ಬೆಳೆದಿದ್ದ ಚಾಲಾಕಿ ಟಿಬೇಟಿಗನ ಬಂಧನ, ಹಸಿ ಹಸಿ ಗಾಂಜಾ ವಶಕ್ಕೆ ಪಡೆದ ಮುಂಡಗೋಡ ಪೊಲೀಸ್ರು..!
ಮುಂಡಗೋಡ: ಪೊಲೀಸರು ಸ್ವಾತಂತ್ರೋತ್ಸವದ ದಿನವೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಟಿಬೇಟಿಯನ್ ಕಾಲೋನಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಸಮೇತ ಆರೋಪಿಯನ್ನು ಎಳೆದು ತಂದಿದ್ದಾರೆ. ಅಂದಹಾಗೆ, ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 4 ರ ನ್ಯಾಮಗೆಲ್ ಚೋಟೆನ್ ಎಂಬುವ ವ್ಯಕ್ತಿಯೇ ಆರೋಪಿಯಾಗಿದ್ದು ಸದ್ಯ ಅಂದರ್ ಆಗಿದ್ದಾನೆ. ಹಸಿ ಹಸಿಯಾದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು ಬರೋಬ್ಬರಿ 6 ಕೆಜಿ 900 ಗ್ರಾಂ ತೂಕ ತೂಗಿದೆ. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು, ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಕೃಷಿ ಇಲಾಖೆ ಕಛೇರಿ ಎದುರು ಧ್ವಜಾರೋಹಣ ಮಾಡೇ ಇಲ್ಲ..! ಏನ್ರಿ ಕುಲಕರ್ಣಿ ಸಾಹೇಬಾ ಇದೇನಾ ನಿಮ್ಮ ಜವಾಬ್ದಾರಿ..?
ಮುಂಡಗೋಡ: ಇಲ್ಲಿನ ಕೃಷಿ ಅಧಿಕಾರಿಗಳು ಅದೆಲ್ಲಿಗೆ ಹೋಗಿ ನಿದ್ದೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅಸಲು “ಹರ್ ಘರ್ ತಿರಂಗಾ” ಕಾರ್ಯಕ್ರಮ ಇವ್ರಿಗೆ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ಈ ಬೇಜವಾಬ್ದಾರಿ ಅಪರಾವತಾರಿ ಅಧಿಕಾರಿಗಳು ಕೃಷಿ ಇಲಾಖೆ ಎದುರು ಧ್ವಜಾರೋಹಣವನ್ನೇ ಮಾಡಿಲ್ಲ. ಹೀಗಾಗಿ, ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಕ್ಯಾರೇ ಅಂದಿಲ್ಲ. ಎಲ್ಲಿದ್ದಿರಾ ಕುಲಕರ್ಣಿ ಸಾಹೇಬ್ರೆ..? ಅಸಲು, ಮುಂಡಗೋಡಿನ ಕೃಷಿ ಇಲಾಖೆಯ ಅಂಗಳಕ್ಕೆ ಬಂದ್ರೆ ಬರೀ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವ ಪರಿಸರವಿದೆ. ಕುಲಕರ್ಣಿ ಅನ್ನೋ ಆ ಯಪ್ಪಾ ಬರೀ ಮಾತಾಡುವುದಕ್ಕಷ್ಟೇ ಸೀಮಿತ ಅನ್ನುವಂತಾಗಿದೆ. ಹೀಗಾಗಿ, ತಾಲೂಕಿನ ಅದೇಷ್ಟೋ ರೈತರು ನಿತ್ಯವೂ “ಅಡಿಕೆ ಎಲೆ” ತಿಂದು ನೇರವಾಗಿ ಕೃಷಿ ಇಲಾಖೆ ಆಫೀಸಿನೆಡೆಗೇ ಬರುವಂತಾಗಿದೆ ಅನ್ನೋದು ಬೇರೆ ಮಾತು. ಆದ್ರೆ ಈ ಅಧಿಕಾರಿಗೆ ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮದ ಅರಿವೂ ಇಲ್ಲದೇ ಹೊಯ್ತಲ್ಲ ಅನ್ನೋದೇ ಈಗಿರೋ ಮೂಲ ಆಕ್ರೋಶ. ಬಣ ಬಣಗುಡುತ್ತಿದೆ ಧ್ವಜ ಸ್ತಂಭ..! ಅಸಲು, ನಿನ್ನೆಯಿಂದ ಅಂದ್ರೆ ಆಗಷ್ಟ 13 ರಿಂದ ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ...