ಮುಂಡಗೋಡ ತಾಲೂಕಿನಲ್ಲಿ ಒಂದರ ಹಿಂದೆ ಒಂದರಂತೆ ನಡೆಯುತ್ತಿರೋ ಕಳ್ಳತನ ಪ್ರಕರಣಗಳಿಂದ ಮುಂಡಗೋಡ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ. ಮನೆ, ಅಂಗಡಿ, ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರಿಗೆ ಇದೀಗ ಮುಂಡಗೋಡ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.“ಖದೀಮರು ಇನ್ಮುಂದೆ ಮುಂಡಗೋಡದ ಗಡಿಗೆ ಕಾಲಿಡಬೇಕಾದ್ರೂ ಯೋಚಿಸ್ಬೇಕು..!” ಅನ್ನೋ ರೀತಿಯಲ್ಲಿ ಪೊಲೀಸ್ರು ಅಲರ್ಟ್ ಆಗಿದ್ದು, ತಾಲೂಕಿನಾದ್ಯಂತ ಭದ್ರತೆ ಬಿಗಿಗೊಳಿಸಿದ್ದಾರೆ. ಸರಣಿ ಕಳ್ಳತನ ಪ್ರಕರಣಗಳ ಬೆನ್ನಲ್ಲೇ ಮುಂಡಗೋಡ ಪೊಲೀಸರ ಆಪರೇಷನ್ ಖಾಕಿ ಕಣ್ಗಾವಲು ಶುರುವಾಗಿದೆ. ಪಟ್ಟಣ ಮಾತ್ರವಲ್ಲ, ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ರಾತ್ರಿ ಗಸ್ತು ಹೆಚ್ಚಿಸಲಾಗಿದ್ದು, ಪ್ರಮುಖ ಪ್ರವೇಶ-ನಿರ್ಗಮನ ಮಾರ್ಗಗಳಲ್ಲಿ ನಾಕಾಬಂದಿ ಹಾಕಲಾಗಿದೆ. ನಾಲ್ಕೂ ದಿಕ್ಕುಗಳಲ್ಲಿ ಖಾಕಿ ಕಣ್ಣು..! ಹುಬ್ಬಳ್ಳಿ ರಸ್ತೆಯ ವಡಗಟ್ಟಾ ನಾಕಾ, ಬಂಕಾಪುರ ರಸ್ತೆಯ ಸನವಳ್ಳಿ ನಾಕಾ, ಯಲ್ಲಾಪುರ ರಸ್ತೆಯ ಪ್ರಮುಖ ನಾಕಾ ಹಾಗೂ ಶಿರಸಿ ರಸ್ತೆಯಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. ಕಳ್ಳರು ಒಂದು ಕಡೆಯಿಂದ ಬಂದು ಮತ್ತೊಂದು ಕಡೆಯಿಂದ ಪರಾರಿಯಾಗುವ ಸಾಧ್ಯತೆಗೂ ಬ್ರೇಕ್ ಹಾಕಲು...
Top Stories
ಅಯ್ಯೋ ದೇವ್ರೇ, ಇವತ್ತು ಮುಂಡಗೋಡ ತಾಲೂಕಿನಲ್ಲಿ ಕಳ್ಳತನವಾಗಿದ್ದು ಎರಡಲ್ಲ, ಮೂರು ಕೇಸ್..! ಕರಗಿನಕೊಪ್ಪದ ಸೇವಾಲಾಲ್ ಮಂದಿರದ ಹುಂಡಿ ಕಳ್ಳತನ..!
ಮುಂಡಗೋಡ ತಾಲೂಕಿನಲ್ಲಿ ಮತ್ತೇ ಎರಡು ಕಳ್ಳತನ..! ಬಾಚಣಕಿ ದೇವಸ್ಥಾನ ಹಾಗೂ ನಂದಿಪುರದಲ್ಲಿ ಅಂಗಡಿ ದೋಚಿದ ಕಳ್ಳರು..! ದೇವ್ರೇ ನೀನೇ ಕಾಪಾಡು..!
ಮುಂದಿನ ಎರಡು ದಿನಗಳ ಕಾಲ ಉತ್ತರ ಕನ್ನಡ ಸೇರಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಅಬ್ಬರ; ಆರೆಂಜ್ ಅಲರ್ಟ್ ಘೋಷಣೆ..!
ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು; 3 ಅಂತರ್ರಾಜ್ಯ ಕಳ್ಳರ ಬಂಧನ, 52.70 ಲಕ್ಷ ರೂ. ಮೌಲ್ಯದ ಬೆಳ್ಳಿ ವಶ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.100 ರಷ್ಟು ಎನುಮರೇಷನ್ ಫಾರಂ ಗಣಕೀಕರಣ..!
ಶುಕ್ರವಾರ ದಿ.7 ರಂದು ಮುಂಡಗೋಡಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ, ಅಧಿಕಾರಿಗಳೊಂದಿಗೆ ಸಭೆ, ಮಳೆ ಹಾನಿ ಪ್ರದೇಶಗಳ ಪರಿಶೀಲನೆ..!
ಮುಂಡಗೋಡ ಪೊಲೀಸ್ರ ಚಾಣಾಕ್ಷ ಕಾರ್ಯ, ಕೊನೆಗೂ ಸಿಕ್ಕಿಬಿದ್ದ “ಇರಾನಿ ಗ್ಯಾಂಗ್” ನ ಓರ್ವ ಕಳ್ಳ “ಮೊಹಮ್ಮದ್”..! ಮತ್ತೋರ್ವ ಪರಾರಿ, “ಥ್ಯಾಂಕ್ಯೂ ಪೊಲೀಸ್ರೇ” ಅಂದ್ರು ಜನ..!
ಲಂಚ ಪ್ರಕರಣ: ಶಿರಸಿಯ ಈ ಹಿಂದಿನ ಎಸಿ, ಹುಣಸೂರಿನ ಹಾಲಿ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ..!
ಮುಂಡಗೋಡಿಗೆ ಬಂದಿದ್ದು ಖತರ್ನಾಕ “ಇರಾನಿ ಗ್ಯಾಂಗ್” ನ ಕಳ್ಳರಾ..? ಈ ಖದೀಮರ ದರೋಡೇ ಸ್ಟೈಲ್ ಹೇಗಿದೆ ಗೊತ್ತಾ..? ಅಸಲು, ಇವ್ರನ್ನ ಹಿಡಿದು ತರ್ತಾರಾ ನಮ್ ಪೊಲೀಸ್ರು..?
ಮುಂಡಗೋಡಿನಲ್ಲಿ ಕಳ್ಳರ ಹೊಸ ಗ್ಯಾಂಗ್ ಆ್ಯಕ್ಟಿವ್..! ಚಿಲ್ಲರೇ ಕೊಟ್ಟು ನೋಟು ಪಡೆಯೊ “ಕಳ್ಳಾಟ”..! ಇವ್ರೇ ನೋಡಿ ಖದೀಮರು, ಇವ್ರು ಕಂಡ್ರೆ ಮಾಹಿತಿ ನೀಡಿ..!
ಮುಂಡಗೋಡ ಪಟ್ಟಣದಲ್ಲಿ ಹಾಡಹಗಲೇ ಮತ್ತೊಂದು ಕಳ್ಳತನ..! ಎಸ್ಪಿ ಸಾಹೇಬ್ರೇ ಈ ಕಡೆ ಒಂದಿಷ್ಟು ಗಮನ ಕೊಡಿ, ಆತಂಕದಲ್ಲಿದೆ ತಾಲೂಕಿನ ಜನತೆ..!
ಮುಂಡಗೋಡ ಮಾರಿಕಾಂಬಾ ನಗರದಲ್ಲಿ ಕಳ್ಳರ ಕೈಚಳಕ..! ಒಂದು ಮನೆ ಕಳ್ಳತನ ಇನ್ನೊಂದು ಅಂಗಡಿಗೆ ಬೀಗ ಮುರಿಯಲು ಯತ್ನ..!
ಮುಂಡಗೋಡ ಸಮೀಪದ ಲಕ್ಕೊಳ್ಳಿ ಕ್ರಾಸ್ ಬಳಿ ಬೈಕ್-ಕಾರು ನಡುವೆ ಭೀಕರ ಅಪಘಾತ; ಓರ್ವನ ಸ್ಥಿತಿ ಗಂಭೀರ..!
ಉತ್ತರ ಕನ್ನಡ ಜಿಲ್ಲೆಯಲ್ಲಿ “ಡಾಕ್ಟರ್ ಯಮದೂತಾಸ್” ವಿರುದ್ಧ ವಾರ್ನಿಂಗ್..! ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡೀಸಿ ಸೂಚನೆ..!
ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್, ಹಲವೆಡೆ ಭಾರೀ ಮಳೆಯ ಮುನ್ಸೂಚನೆ..!
ಮುಂಡಗೋಡ ಬಸ್ ನಿಲ್ದಾಣದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ವಶ..!
ನಂದಿಕಟ್ಟಾದಲ್ಲಿ ಕೆರೆಗೆ ಬಿದ್ದು ಅಂಗನವಾಡಿ ಸಹಾಯಕಿ ಆತ್ಮಹತ್ಯೆ..!
ಅಕ್ರಮ ಜಿಂಕೆ ಮಾಂಸ ಪ್ರಕರಣ: ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ವಸಂತ ಕೊರವರ್ ಅರಣ್ಯಾಧಿಕಾರಿಗಳ ಬಲೆಗೆ..!
ಸಾಲಬಾಧೆ ತಾಳಲಾರದೆ ಚೌಡಳ್ಳಿಯಲ್ಲಿ ಯುವ ರೈತ ಆತ್ಮಹತ್ಯೆ, ಕ್ರಿಮಿನಾಶಕ ಸೇವಿಸಿದ್ದವ ಕಿಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು..!
ಅಯ್ಯೋ ದೇವ್ರೇ, ಇವತ್ತು ಮುಂಡಗೋಡ ತಾಲೂಕಿನಲ್ಲಿ ಕಳ್ಳತನವಾಗಿದ್ದು ಎರಡಲ್ಲ, ಮೂರು ಕೇಸ್..! ಕರಗಿನಕೊಪ್ಪದ ಸೇವಾಲಾಲ್ ಮಂದಿರದ ಹುಂಡಿ ಕಳ್ಳತನ..!
ಮುಂಡಗೋಡ ತಾಲೂಕಿನಲ್ಲಿ ಕಳ್ಳಕಾಕರ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಬದಲಾಗಿ ನಿರಾತಂಕವಾಗಿ ಸರಣೀ ಕಳ್ಳತನ ಮಾಡುತ್ತ ಹೊರಟಿದ್ದಾರೆ ಖದೀಮರು. ಅಂದಹಾಗೆ, ಇವತ್ತು ನಡೆದಿರೋ ಕಳ್ಳತನಗಳು ಕೇವಲ ಎರಡೇ ಅಲ್ಲ. ಬದಲಾಗಿ ಮೂರು. ಪಟ್ಟಣಕ್ಕೆ ಹೊಂದಿಕೊಂಡೇ ಇರೋ ಕರಗಿನಕೊಪ್ಪದ ಸೇವಾಲಾಲ್ ದೇವಸ್ಥಾನದ ಹುಂಡಿಯನ್ನೇ ಎತ್ತಾಕೊಂಡು ಹೋಗಿದ್ದಾರೆ ಕಳ್ಳರು..! ಸೇವಾಲಾಲರ ದೇವಸ್ಥಾನ..! ಅಂದಹಾಗೆ, ನಿನ್ನೆ ರಾತ್ರಿ ನಂದಿಪುರದ ಶ್ರೀನಿವಾಸರ ಅಂಗಡಿ ಹಾಗೂ ಬಾಚಣಕಿಯ ಕರಿಯಮ್ಮ ದೇವಿ ದೇವಸ್ಥಾನದ ಜೊತೆ ಜೊತೆಗೇ ಕರಗಿನಕೊಪ್ಪ ತಾಂಡಾದಲ್ಲಿ ಅಲ್ಲಿನ ಜನರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲರ ದೇವಸ್ಥಾನದ ಹುಂಡಿಯನ್ನೂ ದೋಚಿದ್ದಾರೆ ಕಳ್ಳರು. ದೇವಸ್ಥಾನದ ಬೀಗ ಮುರಿದು ಒಳ ಹೊಕ್ಕಿರೋ ಖದೀಮರು, ದೇವರ ರೊಕ್ಕವನ್ನೇ ಎಗರಿಸಿದ್ದಾರೆ. ಏನಿಲ್ಲವೆಂದರೂ ಒಂದೂವರೇ ಲಕ್ಷ..! ಅಸಲು, ಇಡೀ ಕರಗಿನಕೊಪ್ಪ ತಾಂಡಾ ಜನರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲರ ಕಾಣಿಕೆ ಹುಂಡಿಯನ್ನು ಕಳ್ಳರು ಕಂತ್ರಿ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ ಏನಿಲ್ಲವೆಂದರೂ ಒಂದೂವರೇ ಲಕ್ಷ ರೂ. ದೇವರ ರೊಕ್ಕ ಕಳ್ಳತನವಾಗಿದೆ ಅಂತೆ....
ಮುಂಡಗೋಡ ತಾಲೂಕಿನಲ್ಲಿ ಮತ್ತೇ ಎರಡು ಕಳ್ಳತನ..! ಬಾಚಣಕಿ ದೇವಸ್ಥಾನ ಹಾಗೂ ನಂದಿಪುರದಲ್ಲಿ ಅಂಗಡಿ ದೋಚಿದ ಕಳ್ಳರು..! ದೇವ್ರೇ ನೀನೇ ಕಾಪಾಡು..!
ಮುಂಡಗೋಡ ತಾಲೂಕಿನಲ್ಲಿ ಮತ್ತೆ ಎರಡು ಕಡೆ ಕಳ್ಳತನವಾಗಿದೆ. ತಾಲೂಕಿನ ಬಾಚಣಕಿ ದೇವಸ್ಥಾನ ಹಾಗೂ ನಂದಿಪುರ ಗ್ರಾಮದಲ್ಲಿ ಕಳ್ಳರು ಮತ್ತೆ ಕೈಚಳಕ ತೋರಿಸಿ ಹೋಗಿದ್ದಾರೆ. ಹೀಗಾಗಿ, ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ನಿಲ್ಲುವ ಯಾವುದೇ ಸೂಚನೆಗಳು ಸದ್ಯಕ್ಕೆ ಕಾಣುತ್ತಿಲ್ಲ. ದೇವಸ್ಥಾನದ ಹುಂಡಿ ಕದ್ದರು..! ಬಾಚಣಕಿ ಗ್ರಾಮದಲ್ಲಿ ಮರಿಯಮ್ಮ ದೇವಸ್ಥಾನದ ಬೀಗ ಮುರಿದು ಒಳನುಗ್ಗಿರೋ ಕಳ್ಳರು, ಕಾಣಿಕೆ ಪೆಟ್ಟಿಗೆಯನ್ನೇ ಹೊತ್ತುಕೊಂಡು ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಆ ಕಾಣಿಕೆ ಡಬ್ಬಿಯನ್ನ ತೆಗೆದಿರಲೇ ಇಲ್ಲ. ಹೀಗಾಗಿ, ಹಣ ಸ್ವಲ್ಪ ಜಾಸ್ತಿನೇ ಹೋಗಿರಬಹುದು ಅನ್ನೋ ಅನುಮಾನ ಇದೆ. ನಂದಿಪುರದಲ್ಲಿ..! ಇನ್ನು ನಂದಿಪುರ ಗ್ರಾಮದ ಶ್ರೀನಿವಾಸ್ ಎಂಬುವವರ ಅಂಗಡಿಯೊಂದಕ್ಕೆ ಬೀಗ ಮುರಿದು ಕಳ್ಳರು ನುಗ್ಗಿದ್ದಾರೆ. ಅಂಗಡಿಯೊಳಗೆ ಎನೇನು ಕದ್ದು ಹೋಗಿದ್ದಾರೆ ಅನ್ನೋದು ಪೊಲೀಸ್ರು ಬಂದು ನೋಡಿದಾಗಲಷ್ಟೇ ಬಹಿರಂಗವಾಗಲಿದೆ. ಅಸಲು, ಇವತ್ತು ರಾತ್ರಿಯೊಂದರಲ್ಲೇ ಈ ಎರಡು ಪ್ರಕರಣಗಳು ನಡೆದಿವೆ. ಎಂದಿನಂತೆ ಪೊಲೀಸ್ರು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಆದ್ರೆ, ಘಟನೆಗಳು ಮಾತ್ರ ಖುಲ್ಲಂ ಖುಲ್ಲಾ..! ಇರಾನಿ “ಮೊಹಮ್ಮದ್” ಎಲ್ಲಿ ಹೋದ..?...
ಮುಂದಿನ ಎರಡು ದಿನಗಳ ಕಾಲ ಉತ್ತರ ಕನ್ನಡ ಸೇರಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಅಬ್ಬರ; ಆರೆಂಜ್ ಅಲರ್ಟ್ ಘೋಷಣೆ..!
ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರವು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ವಾತಾವರಣ ತೀವ್ರಗೊಳ್ಳಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಆರೆಂಜ್ ಅಲರ್ಟ್ ಜಿಲ್ಲೆಗಳು..! ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಈ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಸಾರ್ವಜನಿಕರು ಹಾಗೂ ಆಡಳಿತಯಂತ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಯೆಲ್ಲೋ ಅಲರ್ಟ್..! ಬೆಳಗಾವಿ, ಚಿಕ್ಕಮಗಳೂರು ಸೇರಿದಂತೆ ಇತರೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಗಾಳಿ ಹಾಗೂ ಗುಡುಗು ಸಹಿತ ಮಳೆ: ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಬಿರುಗಾಳಿ ಸಹಿತ (ಗಂಟೆಗೆ 30-50 ಕಿ.ಮೀ ವೇಗದಲ್ಲಿ) ಮಳೆ ಬೀಳುವ ಸಾಧ್ಯತೆಯಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ...
ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು; 3 ಅಂತರ್ರಾಜ್ಯ ಕಳ್ಳರ ಬಂಧನ, 52.70 ಲಕ್ಷ ರೂ. ಮೌಲ್ಯದ ಬೆಳ್ಳಿ ವಶ..!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಸರಕೋಡ ಗ್ರಾಮದಲ್ಲಿ ನಡೆದಿದ್ದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಗುಜರಾತ್ ಹಾಗೂ ರಾಜಸ್ಥಾನ ಮೂಲದ ಮೂವರು ಅಂತರ್ರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು, ಅಂದಾಜು 52.70 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಹಿನ್ನೆಲೆ..! ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಜುಲೈ 05ರ ರಾತ್ರಿ 9.00 ಗಂಟೆಯಿಂದ ಜುಲೈ 06ರ ನಸುಕಿನ 4.30 ಗಂಟೆಯ ಮಧ್ಯಾವಧಿಯಲ್ಲಿ ದುಷ್ಕರ್ಮಿಗಳು ಕೃತ್ಯವೆಸಗಿದ್ದರು. ದೇವಸ್ಥಾನದ ಎರಡು ಕಬ್ಬಿಣದ ಬಾಗಿಲುಗಳ ಕೀಲಿಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಗರ್ಭಗುಡಿಯ ಗದ್ದುಗೆಯ ಮೇಲಿದ್ದ ಸುಮಾರು 32 ಕೆ.ಜಿ. ತೂಕದ, ಅಂದಾಜು 51,20,000 ರೂ. ಬೆಲೆಬಾಳುವ ಬೆಳ್ಳಿಯ ದೇವರ ಮೂರ್ತಿಯನ್ನು ಕಳವು ಮಾಡಿಕೊಂಡು ಹೋಗಿದ್ದರು. ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಕರನಂದೆಪ್ಪ ಯಮನಪ್ಪ ಬಿರಾದಾರ ಅವರು ನೀಡಿದ ದೂರಿನ ಮೇರೆಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದಿದ್ದ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.100 ರಷ್ಟು ಎನುಮರೇಷನ್ ಫಾರಂ ಗಣಕೀಕರಣ..!
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿ-2026 ಪ್ರಕ್ರಿಯೆಯಂತೆ ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಪ್ರತಿಯೊಬ್ಬ ಮತದಾರರರಿಗೂ ಎನುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದ್ದು, ಈ ವಿತರಣೆಯಾಗಿ ಹಿಂದಿರುಗಿಸಿದ ಎಲ್ಲಾ ಫಾರಂಗಳನ್ನು ಗಣಕೀಕರಣಗೊಳಿಸಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಶೇ.100 ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಒಟ್ಟು 1,07,385 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ ಗೈರು 5002, ಶಾಶ್ವತ ವಲಸೆ 45,878 ಮರಣ ಹೊಂದಿದ ಪ್ರಕರಣಗಳು 44,006 , ದ್ವಿಪ್ರತಿಗಳು 12,463 ಮತ್ತು ಇತರೆ 36 ಸೇರಿವೆ. ಹಳಿಯಾಳ ವಿಧಾನಸಭಾ ಕ್ಷೇತ್ರ..! ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 1,87,543 ಮತದಾರರಿದ್ದು, ಬಿ.ಎಲ್.ಓ ರವರು 1,87,543 ಎನುಮರೇಷನ್ ಫಾರಂಗಳನ್ನು ವಿತರಿಸಿದ್ದು, ಇದರಲ್ಲಿ 1,67,592 ಮಂದಿಯ ಫಾರಂಗಳನ್ನು ಗಣಕೀರಣಗೊಳಿಸಿದ್ದು, ಗುರುತಿಸಲಾದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ, ಸಂಗ್ರಹವಾಗದ /ಗೈರು ಮತ್ತು ಇತರೆ ಪ್ರಕರಣಗಳು 19951 ಆಗಿವೆ. ಕಾರವಾರ ವಿಧಾನಸಭಾ ಕ್ಷೇತ್ರ..! ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 2,23,390 ಮತದಾರರಿದ್ದು, ಬಿ.ಎಲ್.ಓ...
ಶುಕ್ರವಾರ ದಿ.7 ರಂದು ಮುಂಡಗೋಡಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ, ಅಧಿಕಾರಿಗಳೊಂದಿಗೆ ಸಭೆ, ಮಳೆ ಹಾನಿ ಪ್ರದೇಶಗಳ ಪರಿಶೀಲನೆ..!
ಮುಂಡಗೋಡ ನೂತನ ಸಚಿವ ಲಕ್ಷ್ಮಣ ಸವದಿ ಅವರು ಆಗಸ್ಟ್ 7 ರಂದು ಮುಂಡಗೋಡ ತಾಲ್ಲೂಕಿಗೆ ಭೇಟಿ ನೀಡಲಿದ್ದು, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ. ಸಚಿವರ ಪ್ರವಾಸ ಕಾರ್ಯಕ್ರಮದ ಪ್ರಕಾರ, ಆಗಸ್ಟ್ 7 ರಂದು ಮಧ್ಯಾಹ್ನ 3 ಗಂಟೆಗೆ ಸಚಿವರು ಮುಂಡಗೋಡಕ್ಕೆ ಆಗಮಿಸಲಿದ್ದು, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಅತಿವೃಷ್ಟಿಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಭೆಯು ಮುಂಡಗೋಡ ಲೋಕೋಪಯೋಗಿ ಇಲಾಖೆಯ ಐಬಿಯಲ್ಲಿ ನಡೆಯಲಿದ್ದು, ಸಾರ್ವಜನಿಕರ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಅಲ್ಲದೇ ಅನಾವೃಷ್ಟಿಯ ಕುರಿತಾದ ಹಾನಿಯ ಬಗ್ಗೆಯೂ, ಅಧಿಕಾರಿಗಳಿಂದ ಸಂಪೂರ್ಣ ವರದಿ ಪಡೆಯಲಿರುವ ಸಚಿವರು, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಮುಂಡಗೋಡದಿಂದ ನಿರ್ಗಮಿಸಲಿರುವ ಸಚಿವರು, ನಂತರ ಹಳಿಯಾಳ ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನೂ ಅವಲೋಕಿಸಲಿದ್ದಾರೆ.
ಮುಂಡಗೋಡ ಪೊಲೀಸ್ರ ಚಾಣಾಕ್ಷ ಕಾರ್ಯ, ಕೊನೆಗೂ ಸಿಕ್ಕಿಬಿದ್ದ “ಇರಾನಿ ಗ್ಯಾಂಗ್” ನ ಓರ್ವ ಕಳ್ಳ “ಮೊಹಮ್ಮದ್”..! ಮತ್ತೋರ್ವ ಪರಾರಿ, “ಥ್ಯಾಂಕ್ಯೂ ಪೊಲೀಸ್ರೇ” ಅಂದ್ರು ಜನ..!
ಮುಂಡಗೋಡ ಪೊಲೀಸ್ರು ಚಾಣಾಕ್ಷ ಕಾರ್ಯಾಚರಣೆ ಮಾಡಿದ್ದಾರೆ. ಪರಿಣಾಮ ಇರಾನಿ ಗ್ಯಾಂಗ್ ನ ಇಬ್ಬರು ಖದೀಮರ ಪೈಕಿ ಓರ್ವನನ್ನ ಧಾರವಾಡದಿಂದ ಎಳೆದು ತಂದಿದ್ದಾರೆ. ಇಲ್ಲಿನ ಕ್ರೈಂ ಟೀಂ ಹುಡುಗ್ರ ಈ ಕಾರ್ಯಕ್ಕೆ ಸಾರ್ವಜನಿಕ್ರು ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಪಿಐ ರಮೇಶ್ ಹನಾಪುರ ಸಾಹೇಬ್ರ ತಕ್ಷಣದ ಕ್ರಮಕ್ಕೆ ಜನ ಶಹಬ್ಬಾಶ್ ಅಂದಿದ್ದಾರೆ. ಅಂದಹಾಗೆ, ಸದ್ಯ ಪೊಲೀಸ್ರ ಕೈಗೆ ತಗಲಾಕ್ಕೊಂಡ ಖದೀಮನ ಹೆಸ್ರು ಮೊಹಮ್ಮದ್, ಪಬ್ಲಿಕ್ ಫಸ್ಟ್ ನ್ಯೂಸ್ ಮೊದಲೇ ತಿಳಿಸಿರೋ ಹಾಗೆ ಆತ ಪಕ್ಕಾ “ಇರಾನಿ ಗ್ಯಾಂಗ್” ನ ಸಕ್ರೀಯ ಸದಸ್ಯ..! ಹಾಡಹಗಲೇ..! ಅಂದಹಾಗೆ, ಮೊನ್ನೆ ಶನಿವಾರ ಪಟ್ಟಣದ ಬಂಕಾಪುರ ರಸ್ತೆಯ ಸಿಮೆಂಟ್, ಕಬ್ಬಿಣದ ಅಂಗಡಿಯೊಂದರಲ್ಲಿ ಚಿಲ್ಲರೆ ಕೊಟ್ಟು ನೋಟು ಪಡಿಯೋ ನೆಪದಲ್ಲಿ, ಏಕಾಏಕಿ ನುಗ್ಗಿ ವ್ಯಾಪಾರಿಯ ಗಮನ ಬೇರೆಡೆ ಸೆಳೆದಿದ್ದ ಕಿರಾತಕರು, ಗಲ್ಲೆಯಲ್ಲಿನ 13 ಸಾವಿರ ಹಣ ದೋಚಿಕೊಂಡು ಬೈಕ್ ಮೇಲೆ ಪರಾರಿಯಾಗಿದ್ರು. ಹೀಗಾಗಿ, ತಕ್ಷಣವೇ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದ ಅಂಗಡಿ ಮಾಲೀಕ ಮುಂದಿನ ಕ್ರಮಕ್ಕಾಗಿ ಮನವಿ ಮಾಡಿದ್ದರು. ಅಷ್ಟೆ.....
ಲಂಚ ಪ್ರಕರಣ: ಶಿರಸಿಯ ಈ ಹಿಂದಿನ ಎಸಿ, ಹುಣಸೂರಿನ ಹಾಲಿ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ..!
ಹುಣಸೂರು ಉಪ ವಿಭಾಗಾಧಿಕಾರಿಯಾಗಿರೋ ಹಾಗೂ ಈ ಹಿಂದೆ ಶಿರಸಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕಾವ್ಯಾರಾಣಿ ಮತ್ತು ಅವರ ಆಪ್ತ ಸಹಾಯಕ ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ನಡೆಸಿದ ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ. ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೆ ನಂ. 17/26ರಲ್ಲಿರುವ 4 ಎಕರೆ 20 ಗುಂಟೆ ಜಮೀನಿಗೆ ಸಂಬಂಧಿಸಿದ ಪ್ರಕರಣ ಕಳೆದ ಒಂದು ವರ್ಷದಿಂದ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಈ ಪ್ರಕರಣದಲ್ಲಿ ಅನುಕೂಲಕರ ತೀರ್ಪು ನೀಡುವ ಸಲುವಾಗಿ ಬೆಂಗಳೂರಿನ ನಿವಾಸಿ ಡಾ. ರೂಪಾ ಅವರಿಂದ ಒಟ್ಟು ₹10.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಆರೋಪದ ಪ್ರಕಾರ, ಮೊದಲ ಹಂತದಲ್ಲಿ ₹5 ಲಕ್ಷವನ್ನು ಈಗಾಗಲೇ ಸ್ವೀಕರಿಸಲಾಗಿತ್ತು. ಉಳಿದ ₹5.50 ಲಕ್ಷ ಹಣವನ್ನು ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ...
ಮುಂಡಗೋಡಿಗೆ ಬಂದಿದ್ದು ಖತರ್ನಾಕ “ಇರಾನಿ ಗ್ಯಾಂಗ್” ನ ಕಳ್ಳರಾ..? ಈ ಖದೀಮರ ದರೋಡೇ ಸ್ಟೈಲ್ ಹೇಗಿದೆ ಗೊತ್ತಾ..? ಅಸಲು, ಇವ್ರನ್ನ ಹಿಡಿದು ತರ್ತಾರಾ ನಮ್ ಪೊಲೀಸ್ರು..?
ಮುಂಡಗೋಡ ತಾಲೂಕಿನಲ್ಲಿ ಆಗಾಗ್ಗೆ ಬಂದು ಹೋಗ್ತಿದೆಯಾ ಖತರ್ನಾಕ ಇರಾನಿ ಗ್ಯಾಂಗ್..? ಈ ಪ್ರಶ್ನೆ ಸದ್ಯ ಸದ್ದು ಮಾಡ್ತಿದೆ. ಅಸಲು, ನಮ್ಮ ಮುಂಡಗೋಡಿನಲ್ಲಿ ಹಾಡಹಗಲೇ ಅಂಗಡಿಗಳಿಗೆ ನುಗ್ಗಿ ಚಿಲ್ಲರೇ ಕೊಟ್ಟು ನೋಟು ಪಡೆಯುವ ನೆಪದಲ್ಲಿ, ಕೈಗೆ ಸಿಕ್ಕಷ್ಟು ದೋಚಿಕೊಂಡು ಹೋಗುವ “ಕ್ಯೂಟ್” ಮುಖಗಳು ಥೇಟು ಇರಾನಿ ಗ್ಯಾಂಗ್ ಅನ್ನೇ ಹೋಲುತ್ತಿದೆ. ಅದು ಸತ್ಯವಾದ್ರೆ, ನಮ್ಮ ಪೊಲೀಸ್ರು ಆ ಗ್ಯಾಂಗ್ ನ್ನ ಬೆನ್ನತ್ತಿ ಹಿಡಿದು ತರ್ತಾರಾ ಅನ್ನೋದೇ ಈಗ ಬಿಡಿಸಲಾರದ ಪ್ರಶ್ನೆ..! ಅದು ಖತರ್ನಾಕ ಗ್ಯಾಂಗ್..! ಇರಾನಿ ಗ್ಯಾಂಗ್, ಈ ಹೆಸ್ರು ಬಹುಶಃ ಖಾಕಿ ವಲಯದಲ್ಲಿ ಎಲ್ಲರಿಗೂ ಗೊತ್ತಿರತ್ತೆ. ನಮ್ಮ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಹಾರಾಷ್ಟ್ರ, ಗೋವಾ, ಮದ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಆ್ಯಕ್ಟಿವ್ ಆಗಿರೋ ಈ ಗ್ಯಾಂಗ್ ನಾಜೂಕಾಗೇ ಯಾರ ಭಯವಿಲ್ಲದೇ, ಸರಗಳ್ಳತನ ಸೇರಿ ದರೋಡೆ ಮಾಡೋದನ್ನೇ ಕಾಯಕ ಮಾಡಿಕೊಂಡಿದೆ. ಬಹುತೇಕ ಇವ್ರು ಹಾಡಹಗಲಲ್ಲೇ ಸ್ಕೆಚ್ ಹಾಕಿ ಸಿಕ್ಕಷ್ಟು ಎಗರಿಸಿಕೊಂಡು ಹೋಗ್ತಾರೆ. ಇವ್ರು “ಶೋಕಿ” ವೀರರು..! ಅಸಲು, ಇರಾನಿ ಗ್ಯಾಂಗ್ ಅನ್ನೋದು...









