ಮುಂಡಗೋಡ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮೇಲೆ ಶಿರಸಿಯಿಂದ ಆಗಮಿಸಿದ ಅಧಿಕಾರಿಗಳ ವಿಶೇಷ ತಂಡ ದಾಳಿ ನಡೆಸಿ, ನಿಷೇಧಿತ ಗುಟ್ಕಾ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ. ಸುಮಾರು 5 ರಿಂದ 6 ಮಂದಿ ಅಧಿಕಾರಿಗಳ ತಂಡ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮೇಲೆ ಏಕಕಾಲದಲ್ಲಿ ಪರಿಶೀಲನೆ ನಡೆಸಿತು. ಪರಿಶೀಲನೆ ವೇಳೆ ಗುಟ್ಕಾ, ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆಯ ಶಂಕೆ ಹಿನ್ನೆಲೆಯಲ್ಲಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ದಾಳಿ ವೇಳೆ ಅಧಿಕಾರಿಗಳು ಅಂಗಡಿಗಳಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೆ ಅಂಗಡಿ ಮಾಲೀಕರಿಗೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಸೂಚನೆ ನೀಡಿದರು. ಅಧಿಕಾರಿಗಳ ದಾಳಿಯಿಂದ ಬಸ್ ನಿಲ್ದಾಣದ ವ್ಯಾಪಾರಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ವಶಪಡಿಸಿಕೊಂಡಿರೊ ತಂಬಾಕು ಉತ್ಪನ್ನಗಳ ಪ್ರಮಾಣ ಹಾಗೂ ಸಂಬಂಧಿಸಿದವರ ವಿರುದ್ಧ ಕೈಗೊಳ್ಳಲಿರುವ ಕಾನೂನು ಕ್ರಮದ ಕುರಿತು ಅಧಿಕಾರಿಗಳು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.
Top Stories
ನಂದಿಕಟ್ಟಾದಲ್ಲಿ ಕೆರೆಗೆ ಬಿದ್ದು ಅಂಗನವಾಡಿ ಸಹಾಯಕಿ ಆತ್ಮಹತ್ಯೆ..!
ಅಕ್ರಮ ಜಿಂಕೆ ಮಾಂಸ ಪ್ರಕರಣ: ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ವಸಂತ ಕೊರವರ್ ಅರಣ್ಯಾಧಿಕಾರಿಗಳ ಬಲೆಗೆ..!
ಸಾಲಬಾಧೆ ತಾಳಲಾರದೆ ಚೌಡಳ್ಳಿಯಲ್ಲಿ ಯುವ ರೈತ ಆತ್ಮಹತ್ಯೆ, ಕ್ರಿಮಿನಾಶಕ ಸೇವಿಸಿದ್ದವ ಕಿಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು..!
ಮಕ್ಕಳ ಪ್ರಾಣದ ಜೊತೆ ಆಟವಾಡಬೇಡಿ..! ನಿಯಮ ಮೀರಿ ಓಡುತ್ತಿದ್ದ ಶಾಲಾ ವಾಹನಗಳ ವಿರುದ್ಧ ಮುಂಡಗೋಡ ಪೊಲೀಸ್ರ ಖಡಕ್ ಸಮರ..!
ಮುಂಡಗೋಡ ACF ರವಿ ಹುಲಕೋಟಿ ಸಾಹೇಬ್ರು ಕುಂದಾಪುರಕ್ಕೆ ಎತ್ತಂಗಡಿ..! ಈರೇಶ್ ಎಂ. ಕಬ್ಬಿನ್ ನೂತನ ACF..!!
ಮುಂಡಗೋಡ; ನಂದಿಕಟ್ಟಾದಲ್ಲಿ ಅಕ್ರಮ ಜಿಂಕೆ ಮಾಂಸ ವಶ, ಓರ್ವ ಆರೋಪಿಯ ಬಂಧನ, ಮತ್ತೊಬ್ಬನಿಗಾಗಿ ತಲಾಷ್..!!
ರಾಜ್ಯದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ; ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯ ಮುನ್ಸೂಚನೆ
ಮುಂಡಗೋಡಿನಲ್ಲಿ ಮಾದಕ ವಸ್ತು ಪತ್ತೆಗೆ ಶ್ವಾನ ದಳದ ಕಾರ್ಯಾಚರಣೆ..! ಮಗ್ಗಲು ಬದಲಿಸಿತಾ “ನಶೆ”ಯ ದಂಧೆ..!?
ರಾಜ್ಯದಲ್ಲಿ ಹೆಚ್ಚಿದ ಸೆಕೆ ಮತ್ತು ಬಿಸಿ ಗಾಳಿ: ಹವಾಮಾನ ಇಲಾಖೆಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆ..! ಮಳೆಗಾಲದಲ್ಲಿ ಇದೇಂತ ಪರಿಸ್ಥಿತಿ..?
ಬರದ ಛಾಯೆಗೆ ಬಲಿ..!? ಮುಂಡಗೋಡಿನ ಹುನಗುಂದದಲ್ಲಿ ಸಾಲಬಾಧೆ ತಾಳದೆ, ವಿಷ ಸೇವಿಸಿ ರೈತ ಆತ್ಮಹತ್ಯೆ..!
ಮುಂಡಗೋಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ “ರೌಡಿಸಂ”..? ಹಲವರ ವಿರುದ್ಧ ಕೇಸು ದಾಖಲು..!
ಕಾವಲಕೊಪ್ಪ ಬಳಿ ಭೀಕರ ರಸ್ತೆ ಅಪಘಾತ, KSRTC ಬಸ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರೂ ಚಾಲಕರಿಗೆ ಗಂಭೀರ..! 10 ಕ್ಕೂ ಹೆಚ್ಚು ಜನರಿಗೆ ಗಾಯ..!
ಕಾರವಾರದಲ್ಲಿ ಎಸ್.ಐ.ಆರ್. ಕಪ್ ಕ್ರಿಕೆಟ್ ಪಂದ್ಯ: ಎಮ್ಯೂನರೇಷನ್ ಫಾರಂ ಹಿಂದಿರುಗಿಸುವಂತೆ ಜಾಗೃತಿ ಮೂಡಿಸಿದ ಡಾ.ದಿಲೀಷ್ ಶಶಿ
ಅತ್ತಿವೇರಿ ಕಾಡಲ್ಲಿ ಮರಗಳ ಮಾರಣಹೋಮ ಕೇಸ್, ಆರೋಪಿ ಬಂಧನ..! ಅಷ್ಟಕ್ಕೂ 34 ಮರಗಳನ್ನು ಕಡಿಯುವಾಗ ಅರಣ್ಯ ಸಿಬ್ಬಂದಿಗಳು ಎಲ್ಲಿ ಹೋಗಿದ್ರು..? ಕ್ರಮವೇನು..?
ಯಲ್ಲಾಪುರ ರಸ್ತೆ ದುರಂತ; ಅಪಘಾತ ಸ್ಥಳಕ್ಕೆ ಡಿಸಿ ಲಕ್ಷ್ಮೀಪ್ರಿಯಾ, ಎಸ್ಪಿ ದೀಪನ್ ಎಂ.ಎನ್ ಸೇರಿದಂತೆ ಉನ್ನತಾಧಿಕಾರಿಗಳ ತಂಡ ಭೇಟಿ..!
ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ಭೀಕರ ರಸ್ತೆ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ..!
ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ; 272 ಗ್ರಾಂ ಗಾಂಜಾ ವಶ..!
ಮುಂಡಗೋಡ ತಾಲೂಕಿನಲ್ಲಿ ಮತದಾರರ ಸಹಾಯ ಕೇಂದ್ರಗಳ ಸ್ಥಾಪನೆ: ತಹಶೀಲ್ದಾರ್ ಮಾಹಿತಿ
ಜಿಲ್ಲೆಯಾದ್ಯಂತ ಒಟ್ಟು 12,22,484 ಎನ್ಯುಮರೇಷನ್ ಫಾರ್ಮ್ ವಿತರಣೆ : ಜಿಲ್ಲಾಧಿಕಾರಿ ಮಾಹಿತಿ..!
ನಂದಿಕಟ್ಟಾದಲ್ಲಿ ಕೆರೆಗೆ ಬಿದ್ದು ಅಂಗನವಾಡಿ ಸಹಾಯಕಿ ಆತ್ಮಹತ್ಯೆ..!
ಮುಂಡಗೋಡ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗವ್ವಾ ಮಹೇಶ ತೇರೆಗಾಂವ(38) ಮೃತಪಟ್ಟ ದುರ್ದೈವಿ. ಮೃತ ಗಂಗವ್ವಾ ಅವರಿಗೆ ಮದುವೆಯಾಗಿ 10 ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಇದಲ್ಲದೆ, ಇತ್ತೀಚೆಗೆ ಅವರ ಪತಿ ಮಹೇಶ ಕೂಡ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದರು. ಗಂಡನ ಅಗಲಿಕೆ ಹಾಗೂ ಮಕ್ಕಳಿಲ್ಲದ ಚಿಂತೆ ಗಂಗವ್ವಾ ಅವರನ್ನು ತೀವ್ರವಾಗಿ ಕಾಡುತ್ತಿತ್ತು. ಇದರಿಂದಾಗಿ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಅವರ ಮಾನಸಿಕ ಸ್ಥಿತಿ ಸುಧಾರಿಸಿರಲಿಲ್ಲ. ಜೀವನದ ಮೇಲಿನ ಜಿಗುಪ್ಸೆಯಿಂದ ಗಂಗವ್ವಾ ನಂದಿಕಟ್ಟಾ ಗ್ರಾಮದ ದೊಡ್ಡ ಕೆರೆಯ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರ ದೊಡ್ಡಪ್ಪನ ಮಗನಾದ ಬಾಬು ಶೇಷಪ್ಪ ಪಾಟೀಲ (73) ನೀಡಿದ ದೂರಿನನ್ವಯ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಜಿಂಕೆ ಮಾಂಸ ಪ್ರಕರಣ: ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ವಸಂತ ಕೊರವರ್ ಅರಣ್ಯಾಧಿಕಾರಿಗಳ ಬಲೆಗೆ..!
ಮುಂಡಗೋಡ ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ನಡೆದಿದ್ದ ಅಕ್ರಮ ಜಿಂಕೆ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಅರಣ್ಯಾಧಿಕಾರಿಗಳು ಚಾಣಾಕ್ಷ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ, ಮುಂಡಗೋಡಿನ ಗಾಂಧಿನಗರ ನಿವಾಸಿ ವಸಂತ್ ಕೊರವರ್ ಬಂಧಿತ ಆರೋಪಿ. ಆಗಿದ್ದೇನು..? ಜುಲೈ 17 ರಂದು ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಜಿಂಕೆ ಮಾಂಸ ಇಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಯಲ್ಲಾಪುರ DCF ಅಜೀಜ್ ಶೇಕ್ ಹಾಗೂ ಮುಂಡಗೋಡ ACF ಈರೇಶ್ ಕಬ್ಬಿನ ಅವರ ಮಾರ್ಗದರ್ಶನದಲ್ಲಿ, ಮುಂಡಗೋಡ RFO ಅಪ್ಪಾರಾವ್ ಕಲಶೆಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, 9 ಕೆಜಿ ಜಿಂಕೆ ಮಾಂಸದೊಂದಿಗೆ ರಮೇಶ್ ಚವ್ವಾಣ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಆದರೆ, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ವಸಂತ್ ಕೊರವರ್ ತಲೆಮರೆಸಿಕೊಂಡಿದ್ದನು. ಮೊಬೈಲ್ ಲೊಕೇಶನ್..! ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ...
ಸಾಲಬಾಧೆ ತಾಳಲಾರದೆ ಚೌಡಳ್ಳಿಯಲ್ಲಿ ಯುವ ರೈತ ಆತ್ಮಹತ್ಯೆ, ಕ್ರಿಮಿನಾಶಕ ಸೇವಿಸಿದ್ದವ ಕಿಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು..!
ಸಾಲಬಾಧೆಗೆ ಮನನೊಂದು ಯುವ ರೈತನೊಬ್ಬ ಗದ್ದೆಯಲ್ಲೇ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತನನ್ನು ಮುಂಡಗೋಡ ತಾಲೂಕಿನ ಚೌಡಳ್ಳಿಯ ನಿವಾಸಿ ಹನ್ಮಂತ ಯಲ್ಲಪ್ಪ ಬದ್ರಾಪುರ (29) ಎಂದು ಗುರುತಿಸಲಾಗಿದೆ. ಘಟನೆಯ ಹಿನ್ನೆಲೆ..! ಮೃತ ಹನ್ಮಂತ ಅವರು ಕರವಳ್ಳಿಯ ಸರ್ವೇ ನಂಬರ್ 14 ರಲ್ಲಿರುವ ತಮ್ಮ 5 ಎಕರೆ ಜಮೀನಿನಲ್ಲಿ ಅಡಿಕೆ, ಮೆಕ್ಕೆಜೋಳ ಹಾಗೂ ಶುಂಠಿ ಬೆಳೆ ಬೆಳೆದಿದ್ದರು. ಕೃಷಿ ಚಟುವಟಿಕೆಗಾಗಿ ವಿವಿಧೆಡೆ ಸುಮಾರು ಒಂದೂವರೆ ಲಕ್ಷ (₹1,50,000) ರೂಪಾಯಿ ಸಾಲ ಮಾಡಿಕೊಂಡಿದ್ದರು. ಆದ್ರೆ, ಪ್ರಸಕ್ತ ವರ್ಷದ ಬರ ಪರಿಸ್ಥಿತಿಯ ಭಯದಲ್ಲಿ, ಕೃಷಿಯಲ್ಲಿ ನಿರೀಕ್ಷಿತ ಆದಾಯ ಬಾರದೆ, ಮಾಡಿದ ಸಾಲವನ್ನು ತೀರಿಸಲಾಗದೆ ತೀವ್ರ ಮನನೊಂದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವು..! ಸಾಲದ ಹೊರೆಯಿಂದ ಕಂಗಾಲಾಗಿದ್ದ ಹನ್ಮಂತ ಅವರು ಕಳೆದ ಜುಲೈ 18 ರಂದು ತಮ್ಮ ಗದ್ದೆಯಲ್ಲೇ ಕಳೆನಾಶಕ (ವಿಷ) ಸೇವಿಸಿದ್ದರು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ...
ಮಕ್ಕಳ ಪ್ರಾಣದ ಜೊತೆ ಆಟವಾಡಬೇಡಿ..! ನಿಯಮ ಮೀರಿ ಓಡುತ್ತಿದ್ದ ಶಾಲಾ ವಾಹನಗಳ ವಿರುದ್ಧ ಮುಂಡಗೋಡ ಪೊಲೀಸ್ರ ಖಡಕ್ ಸಮರ..!
ಮುಂಡಗೋಡ ತಾಲೂಕಿನ ಶಾಲಾ ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಅಂತಾ ಖಡಕ್ ಸಂದೇಶ ರವಾನಿಸಿರೋ ಮುಂಡಗೋಡ ಪೊಲೀಸ್ರು, ನಿಯಮ ಮೀರಿ ವಿದ್ಯಾರ್ಥಿಗಳನ್ನು ಬೇಕಾಬಿಟ್ಟಿಯಾಗಿ ತುಂಬಿಕೊಂಡು ಹೋಗುತ್ತಿದ್ದ ಶಾಲಾ ವಾಹನಗಳ ವಿರುದ್ಧ ಸಮರ ಸಾರಿದ್ದಾರೆ. ತಡವಾಗಿಯಾದರೂ ಸರಿ, ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನಿನ್ನೆಯಿಂದಲೇ..! ನಿನ್ನೆಯಷ್ಟೇ ರಸ್ತೆಗಿಳಿದು ಅಂತಹ ವಾಹನಗಳನ್ನು ತಡೆದು ತಪಾಸಣೆ ನಡೆಸಿ ಎಚ್ಚರಿಕೆ ನೀಡಿದ್ದ ಪೊಲೀಸರು, “ಡೋಂಟ್ ಕೇರ್” ಅನ್ನೋ ಹಾಗೆ ಇದ್ದವರ ಲಿಸ್ಟ್ ಮಾಡಿಕೊಂಡಿದ್ದರು. ಇಂದು ಒಂದು ಹೆಜ್ಜೆ ಮುಂದೆ ಹೋಗಿ ನಿಯಮ ಉಲ್ಲಂಘಿಸುವ ವಾಹನ ಮಾಲೀಕರು ಹಾಗೂ ಚಾಲಕರಿಗೆ ಸರಿಯಾದ ಬಿಸಿ ಮುಟ್ಟಿಸಿದ್ದಾರೆ. ಠಾಣೆಗೆ ಬಂದ ಚಾಲಕರು..! ಅಸಲು, ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ, ಶಾಲಾ ಮಕ್ಕಳನ್ನು ಕುರಿ ತುಂಬಿದಂತೆ ತುಂಬಿಕೊಂಡು ಬರುತ್ತಿರುವ ವಾಹನಗಳ ಮಾಲೀಕರು ಮತ್ತು ಚಾಲಕರನ್ನು ಇಂದು ಮುಂಡಗೋಡ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಠಾಣೆಯಲ್ಲಿ ವಿಶೇಷ ಸಭೆ ನಡೆಸಿದ ಪೊಲೀಸರು, ನಿಯಮಬಾಹಿರವಾಗಿ ಮಕ್ಕಳನ್ನು ಸಾಗಿಸುವುದರಿಂದಾಗುವ ಅಪಾಯಗಳ ಬಗ್ಗೆ ಕಠಿಣ ಎಚ್ಚರಿಕೆ ನೀಡಿದರು. ಪೊಲೀಸರ...
ಮುಂಡಗೋಡ ACF ರವಿ ಹುಲಕೋಟಿ ಸಾಹೇಬ್ರು ಕುಂದಾಪುರಕ್ಕೆ ಎತ್ತಂಗಡಿ..! ಈರೇಶ್ ಎಂ. ಕಬ್ಬಿನ್ ನೂತನ ACF..!!
ರಾಜ್ಯ ಸರ್ಕಾರವು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಅರಣ್ಯ ಸೇವೆಗೆ ಸೇರಿದ 18 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು (ACF) ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಜುಲೈ 17, 2026ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮುಂಡಗೋಡಿನ ACF ರವಿ ಹುಲಕೋಟಿ ಸಾಹೇಬ್ರಿಗೆ ಮುಂಡಗೋಡ ಉಪ ವಿಭಾಗದಿಂದ, ಕುಂದಾಪುರದ ಕರಾವಳಿ ಮತ್ತು ಕಡಲ ಪರಿಸರ ವ್ಯವಸ್ಥೆ ಕೋಶಕ್ಕೆ (Coastal & Marine Eco System Cell) ಎತ್ತಂಗಡಿ ಮಾಡಲಾಗಿದೆ. ಇನ್ನು, ಅವ್ರ ಜಾಗಕ್ಕೆ ಈರೇಶ್ ಎಂ. ಕಬ್ಬಿನ್ ಅವರನ್ನು ಯಲ್ಲಾಪುರದ ಕಿರವತ್ತಿ ಸರಕಾರಿ ಮರಮುಟ್ಟು ಸಂಗ್ರಹಾಲಯದಿಂದ ಮುಂಡಗೋಡಿಗೆ ವರ್ಗಾಯಿಸಲಾಗಿದೆ. ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ ಅವರು ರಾಜ್ಯಪಾಲರ ಆದೇಶದ ಮೇರೆಗೆ ಈ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದ್ದಾರೆ. ಮುಖ್ಯ ವರ್ಗಾವಣೆಗಳ ಲಿಸ್ಟ್..! ವಿಜಯಕುಮಾರ್ ಕಾಳಪ್ಪನವರ: ಶಿವಮೊಗ್ಗದ ವನ್ಯಜೀವಿ ಉಪ ವಿಭಾಗದಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಉಪವಿಭಾಗದ ಖಾಲಿ ಹುದ್ದೆಗೆ....
ಮುಂಡಗೋಡ; ನಂದಿಕಟ್ಟಾದಲ್ಲಿ ಅಕ್ರಮ ಜಿಂಕೆ ಮಾಂಸ ವಶ, ಓರ್ವ ಆರೋಪಿಯ ಬಂಧನ, ಮತ್ತೊಬ್ಬನಿಗಾಗಿ ತಲಾಷ್..!!
ಮುಂಡಗೋಡ ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ 9 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಇವನೇ ಆರೋಪಿ..! ನಂದಿಕಟ್ಟ ಗ್ರಾಮದ ನಿವಾಸಿ ರಮೇಶ್ ಚವ್ವಾಣ್ ಬಂಧಿತ ಆರೋಪಿ. ಮುಂಡಗೋಡಿನ ವಸಂತ್ ಕೊರವರ್ ಎಂಬಾತ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯಾಗಿದ್ದು, ಆತನ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ..! ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಜಿಂಕೆ ಮಾಂಸವನ್ನು ಇಟ್ಟುಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಡಗೋಡ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಯ ತಂಡವು ರಮೇಶ್ ಚವ್ವಾಣ್ ಮನೆಯ ಮೇಲೆ ದಾಳಿ ನಡೆಸಿದೆ. 9 ಕೆಜಿ ತೂಗುವ ಮಾಂಸ..! ದಾಳಿಯ ಸಂದರ್ಭದಲ್ಲಿ ಮನೆಯಲ್ಲಿದ್ದ 9 ಕೆಜಿ ತೂಕದ ಜಿಂಕೆ ಮಾಂಸವನ್ನು ಪತ್ತೆ ಹಚ್ಚಿ,...
ರಾಜ್ಯದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ; ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯ ಮುನ್ಸೂಚನೆ
ಬೆಂಗಳೂರು; ರಾಜ್ಯದಲ್ಲಿ ಮುಂದಿನ ಐದು ದಿನಗಳವರೆಗೆ ಯಾವುದೇ ಯೆಲ್ಲೋ, ಆರೆಂಜ್ ಅಥವಾ ರೆಡ್ ಅಲರ್ಟ್ ಘೋಷಿಸಲಾಗಿಲ್ಲ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. ಆದರೆ ಕರಾವಳಿ ಭಾಗದ ಕೆಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಹಾಗೂ ಗಂಟೆಗೆ 30–40 ಕಿ.ಮೀ. ವೇಗದ ಗಾಳಿಯೊಂದಿಗೆ ಸ್ಥಳೀಯವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯು ಜುಲೈ 16ರಂದು ಸಂಜೆ 5 ಗಂಟೆಗೆ ಹೊರಡಿಸಿರುವ 3 ಗಂಟೆಗಳ ನೌಕಾಸ್ಟ್ (Nowcast) ಎಚ್ಚರಿಕೆಯ ಪ್ರಕಾರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಂಜೆ 8.14 ಗಂಟೆಯವರೆಗೆ ಗುಡುಗು-ಮಿಂಚು, ಸಾಧಾರಣ ಮಳೆ ಹಾಗೂ 30–40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ, ಸಂಚಾರ ದಟ್ಟಣೆ, ದುರ್ಬಲ ಮರದ ಕೊಂಬೆಗಳು ಮುರಿಯುವ ಸಾಧ್ಯತೆ, ತಾತ್ಕಾಲಿಕ ಕಟ್ಟಡಗಳಿಗೆ ಹಾನಿ ಹಾಗೂ ಹೊಲಗಳಲ್ಲಿ ತೆರೆದಿಟ್ಟ ಬೆಳೆಗಳಿಗೆ ಹಾನಿ ಉಂಟಾಗುವ...
ಮುಂಡಗೋಡಿನಲ್ಲಿ ಮಾದಕ ವಸ್ತು ಪತ್ತೆಗೆ ಶ್ವಾನ ದಳದ ಕಾರ್ಯಾಚರಣೆ..! ಮಗ್ಗಲು ಬದಲಿಸಿತಾ “ನಶೆ”ಯ ದಂಧೆ..!?
ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರಿಮಿನಲ್ ಚಟುವಟಿಕೆಗಳು ಹಾಗೂ ಡ್ರಗ್ಸ್ ಜಾಲಕ್ಕೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಅವರು ಭರ್ಜರಿ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ. ಇದರ ಭಾಗವಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಮಾದಕ ವಸ್ತುಗಳ ಕಳ್ಳದಂಧೆಯನ್ನು ಬೇಧಿಸಲು ಶ್ವಾನ ದಳದೊಂದಿಗೆ ಪೊಲೀಸರು ದಿಢೀರ್ ಜಂಟಿ ಕಾರ್ಯಾಚರಣೆ ನಡೆಸಿದ್ರು. ಹೊಸ ರೂಪ ಪಡೆದ “ನಶೆ”ಯ ಜಾಲ..! ಮುಂಡಗೋಡ ಸುತ್ತಮುತ್ತ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳ ಮಾರಾಟ ಜಾಲ ಸದ್ದಿಲ್ಲದೆ ಸಕ್ರಿಯವಾಗಿದೆ. ಈ ಹಿಂದೆ ಮುಂಡಗೋಡಿನ ಕ್ರೈಂ ಟೀಮ್ ಆವಾಗೊಮ್ಮೆ ಇವಾಗೊಮ್ಮೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಮಾಲು ಸಮೇತ ಹೆಡೆಮುರಿ ಕಟ್ಟುತ್ತಿತ್ತು. ಪೊಲೀಸರ ಈ ನಿರಂತರ ಕಣ್ಗಾವಲಿನಿಂದ ಬೆದರಿರುವ ಡ್ರಗ್ಸ್ ದಂಧೆಕೋರರು, ಈಗ ತಮ್ಮ ಜಾಲದ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಕೋರಿಯರ್ ಮೂಲಕ ದಂಧೆ..!? ಗಾಂಜಾ ಸೇರಿ ಮಾದಕ ವಸ್ತುಗಳ ದಂಧೆಕೋರ ಅಕ್ರಮಿಗಳು, ಈಗ ನೇರವಾಗಿ ಕೈಯಿಂದ ಕೈಗೆ ಡ್ರಗ್ಸ್ ತಲುಪಿಸುವ ಬದಲು, ಪೊಲೀಸರ ಕಣ್ಣು ತಪ್ಪಿಸಲು ಕೋರಿಯರ್ ಹಾಗೂ...
ರಾಜ್ಯದಲ್ಲಿ ಹೆಚ್ಚಿದ ಸೆಕೆ ಮತ್ತು ಬಿಸಿ ಗಾಳಿ: ಹವಾಮಾನ ಇಲಾಖೆಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆ..! ಮಳೆಗಾಲದಲ್ಲಿ ಇದೇಂತ ಪರಿಸ್ಥಿತಿ..?
ಕಾರವಾರ; ಉತ್ತರ ಕನ್ನಡ ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಗಾಳಿ (Heat Wave) ಹಾಗೂ ತೇವಾಂಶಯುಕ್ತ (Hot & Humid) ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ (Yellow Alert) ಘೋಷಿಸಿದೆ. ಹವಾಮಾನ ಇಲಾಖೆಯು ಜುಲೈ 14ರಂದು ಬಿಡುಗಡೆ ಮಾಡಿದ ಮುನ್ಸೂಚನೆಯ ಪ್ರಕಾರ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಇನ್ನೊಂದೆಡೆ, ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಂಟೆಗೆ 30–40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಸಾರ್ವಜನಿಕರಿಗೆ ಮಧ್ಯಾಹ್ನದ ವೇಳೆಯಲ್ಲಿ ಅನಗತ್ಯವಾಗಿ ಹೊರಗೆ ಓಡಾಡದಂತೆ, ಸಾಕಷ್ಟು ನೀರು ಸೇವಿಸುವಂತೆ ಹಾಗೂ ಬಿಸಿಗಾಳಿಯಿಂದ ಆರೋಗ್ಯ...









