ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.100 ರಷ್ಟು ಎನುಮರೇಷನ್  ಫಾರಂ ಗಣಕೀಕರಣ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.100 ರಷ್ಟು ಎನುಮರೇಷನ್ ಫಾರಂ ಗಣಕೀಕರಣ..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿ-2026 ಪ್ರಕ್ರಿಯೆಯಂತೆ ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಪ್ರತಿಯೊಬ್ಬ ಮತದಾರರರಿಗೂ ಎನುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದ್ದು, ಈ ವಿತರಣೆಯಾಗಿ ಹಿಂದಿರುಗಿಸಿದ ಎಲ್ಲಾ ಫಾರಂಗಳನ್ನು ಗಣಕೀಕರಣಗೊಳಿಸಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಶೇ.100 ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಒಟ್ಟು 1,07,385 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ ಗೈರು 5002, ಶಾಶ್ವತ ವಲಸೆ 45,878 ಮರಣ ಹೊಂದಿದ ಪ್ರಕರಣಗಳು 44,006 , ದ್ವಿಪ್ರತಿಗಳು 12,463 ಮತ್ತು ಇತರೆ 36 ಸೇರಿವೆ. ಹಳಿಯಾಳ ವಿಧಾನಸಭಾ ಕ್ಷೇತ್ರ..! ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 1,87,543 ಮತದಾರರಿದ್ದು, ಬಿ.ಎಲ್.ಓ ರವರು 1,87,543 ಎನುಮರೇಷನ್ ಫಾರಂಗಳನ್ನು ವಿತರಿಸಿದ್ದು, ಇದರಲ್ಲಿ 1,67,592 ಮಂದಿಯ ಫಾರಂಗಳನ್ನು ಗಣಕೀರಣಗೊಳಿಸಿದ್ದು, ಗುರುತಿಸಲಾದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ, ಸಂಗ್ರಹವಾಗದ /ಗೈರು ಮತ್ತು ಇತರೆ ಪ್ರಕರಣಗಳು 19951 ಆಗಿವೆ. ಕಾರವಾರ ವಿಧಾನಸಭಾ ಕ್ಷೇತ್ರ..! ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 2,23,390 ಮತದಾರರಿದ್ದು, ಬಿ.ಎಲ್.ಓ...

ಶುಕ್ರವಾರ ದಿ.7 ರಂದು ಮುಂಡಗೋಡಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ, ಅಧಿಕಾರಿಗಳೊಂದಿಗೆ ಸಭೆ, ಮಳೆ ಹಾನಿ ಪ್ರದೇಶಗಳ ಪರಿಶೀಲನೆ..!

ಶುಕ್ರವಾರ ದಿ.7 ರಂದು ಮುಂಡಗೋಡಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ, ಅಧಿಕಾರಿಗಳೊಂದಿಗೆ ಸಭೆ, ಮಳೆ ಹಾನಿ ಪ್ರದೇಶಗಳ ಪರಿಶೀಲನೆ..!

ಮುಂಡಗೋಡ ನೂತನ ಸಚಿವ ಲಕ್ಷ್ಮಣ ಸವದಿ ಅವರು ಆಗಸ್ಟ್‌ 7 ರಂದು ಮುಂಡಗೋಡ ತಾಲ್ಲೂಕಿಗೆ ಭೇಟಿ ನೀಡಲಿದ್ದು, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ. ಸಚಿವರ ಪ್ರವಾಸ ಕಾರ್ಯಕ್ರಮದ ಪ್ರಕಾರ, ಆಗಸ್ಟ್‌ 7 ರಂದು ಮಧ್ಯಾಹ್ನ 3 ಗಂಟೆಗೆ ಸಚಿವರು ಮುಂಡಗೋಡಕ್ಕೆ ಆಗಮಿಸಲಿದ್ದು, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಅತಿವೃಷ್ಟಿಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಭೆಯು ಮುಂಡಗೋಡ ಲೋಕೋಪಯೋಗಿ ಇಲಾಖೆಯ ಐಬಿಯಲ್ಲಿ ನಡೆಯಲಿದ್ದು, ಸಾರ್ವಜನಿಕರ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಅಲ್ಲದೇ ಅನಾವೃಷ್ಟಿಯ ಕುರಿತಾದ ಹಾನಿಯ ಬಗ್ಗೆಯೂ, ಅಧಿಕಾರಿಗಳಿಂದ ಸಂಪೂರ್ಣ ವರದಿ ಪಡೆಯಲಿರುವ ಸಚಿವರು, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಮುಂಡಗೋಡದಿಂದ ನಿರ್ಗಮಿಸಲಿರುವ ಸಚಿವರು, ನಂತರ ಹಳಿಯಾಳ ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನೂ ಅವಲೋಕಿಸಲಿದ್ದಾರೆ.

ಮುಂಡಗೋಡ ಪೊಲೀಸ್ರ ಚಾಣಾಕ್ಷ ಕಾರ್ಯ, ಕೊನೆಗೂ ಸಿಕ್ಕಿಬಿದ್ದ “ಇರಾನಿ ಗ್ಯಾಂಗ್” ನ ಓರ್ವ ಕಳ್ಳ “ಮೊಹಮ್ಮದ್”..! ಮತ್ತೋರ್ವ ಪರಾರಿ, “ಥ್ಯಾಂಕ್ಯೂ ಪೊಲೀಸ್ರೇ” ಅಂದ್ರು ಜನ..!

ಮುಂಡಗೋಡ ಪೊಲೀಸ್ರ ಚಾಣಾಕ್ಷ ಕಾರ್ಯ, ಕೊನೆಗೂ ಸಿಕ್ಕಿಬಿದ್ದ “ಇರಾನಿ ಗ್ಯಾಂಗ್” ನ ಓರ್ವ ಕಳ್ಳ “ಮೊಹಮ್ಮದ್”..! ಮತ್ತೋರ್ವ ಪರಾರಿ, “ಥ್ಯಾಂಕ್ಯೂ ಪೊಲೀಸ್ರೇ” ಅಂದ್ರು ಜನ..!

ಮುಂಡಗೋಡ ಪೊಲೀಸ್ರು ಚಾಣಾಕ್ಷ ಕಾರ್ಯಾಚರಣೆ ಮಾಡಿದ್ದಾರೆ. ಪರಿಣಾಮ ಇರಾನಿ ಗ್ಯಾಂಗ್ ನ ಇಬ್ಬರು ಖದೀಮರ ಪೈಕಿ ಓರ್ವನನ್ನ ಧಾರವಾಡದಿಂದ ಎಳೆದು ತಂದಿದ್ದಾರೆ‌. ಇಲ್ಲಿನ ಕ್ರೈಂ ಟೀಂ ಹುಡುಗ್ರ ಈ ಕಾರ್ಯಕ್ಕೆ ಸಾರ್ವಜನಿಕ್ರು ಫುಲ್ ಫಿದಾ ಆಗಿದ್ದಾರೆ‌. ಜೊತೆಗೆ ಪಿಐ ರಮೇಶ್ ಹನಾಪುರ ಸಾಹೇಬ್ರ ತಕ್ಷಣದ ಕ್ರಮಕ್ಕೆ ಜನ ಶಹಬ್ಬಾಶ್ ಅಂದಿದ್ದಾರೆ. ಅಂದಹಾಗೆ, ಸದ್ಯ ಪೊಲೀಸ್ರ ಕೈಗೆ ತಗಲಾಕ್ಕೊಂಡ ಖದೀಮನ ಹೆಸ್ರು ಮೊಹಮ್ಮದ್, ಪಬ್ಲಿಕ್ ಫಸ್ಟ್ ನ್ಯೂಸ್ ಮೊದಲೇ ತಿಳಿಸಿರೋ ಹಾಗೆ ಆತ ಪಕ್ಕಾ “ಇರಾನಿ ಗ್ಯಾಂಗ್” ನ ಸಕ್ರೀಯ ಸದಸ್ಯ..! ಹಾಡಹಗಲೇ..! ಅಂದಹಾಗೆ, ಮೊನ್ನೆ ಶನಿವಾರ ಪಟ್ಟಣದ ಬಂಕಾಪುರ ರಸ್ತೆಯ ಸಿಮೆಂಟ್, ಕಬ್ಬಿಣದ ಅಂಗಡಿಯೊಂದರಲ್ಲಿ ಚಿಲ್ಲರೆ ಕೊಟ್ಟು ನೋಟು ಪಡಿಯೋ ನೆಪದಲ್ಲಿ, ಏಕಾಏಕಿ ನುಗ್ಗಿ ವ್ಯಾಪಾರಿಯ ಗಮನ ಬೇರೆಡೆ ಸೆಳೆದಿದ್ದ ಕಿರಾತಕರು, ಗಲ್ಲೆಯಲ್ಲಿನ 13 ಸಾವಿರ ಹಣ ದೋಚಿಕೊಂಡು ಬೈಕ್ ಮೇಲೆ ಪರಾರಿಯಾಗಿದ್ರು. ಹೀಗಾಗಿ, ತಕ್ಷಣವೇ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದ ಅಂಗಡಿ ಮಾಲೀಕ ಮುಂದಿನ ಕ್ರಮಕ್ಕಾಗಿ ಮನವಿ ಮಾಡಿದ್ದರು. ಅಷ್ಟೆ.....

ಲಂಚ ಪ್ರಕರಣ: ಶಿರಸಿಯ ಈ ಹಿಂದಿನ ಎಸಿ, ಹುಣಸೂರಿನ ಹಾಲಿ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ..!

ಲಂಚ ಪ್ರಕರಣ: ಶಿರಸಿಯ ಈ ಹಿಂದಿನ ಎಸಿ, ಹುಣಸೂರಿನ ಹಾಲಿ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ..!

ಹುಣಸೂರು ಉಪ ವಿಭಾಗಾಧಿಕಾರಿಯಾಗಿರೋ ಹಾಗೂ ಈ ಹಿಂದೆ ಶಿರಸಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕಾವ್ಯಾರಾಣಿ ಮತ್ತು ಅವರ ಆಪ್ತ ಸಹಾಯಕ ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ನಡೆಸಿದ ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ. ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೆ ನಂ. 17/26ರಲ್ಲಿರುವ 4 ಎಕರೆ 20 ಗುಂಟೆ ಜಮೀನಿಗೆ ಸಂಬಂಧಿಸಿದ ಪ್ರಕರಣ ಕಳೆದ ಒಂದು ವರ್ಷದಿಂದ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಈ ಪ್ರಕರಣದಲ್ಲಿ ಅನುಕೂಲಕರ ತೀರ್ಪು ನೀಡುವ ಸಲುವಾಗಿ ಬೆಂಗಳೂರಿನ ನಿವಾಸಿ ಡಾ. ರೂಪಾ ಅವರಿಂದ ಒಟ್ಟು ₹10.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಆರೋಪದ ಪ್ರಕಾರ, ಮೊದಲ ಹಂತದಲ್ಲಿ ₹5 ಲಕ್ಷವನ್ನು ಈಗಾಗಲೇ ಸ್ವೀಕರಿಸಲಾಗಿತ್ತು. ಉಳಿದ ₹5.50 ಲಕ್ಷ ಹಣವನ್ನು ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ...

ಮುಂಡಗೋಡಿಗೆ ಬಂದಿದ್ದು ಖತರ್ನಾಕ “ಇರಾನಿ ಗ್ಯಾಂಗ್” ನ ಕಳ್ಳರಾ..?  ಈ ಖದೀಮರ ದರೋಡೇ ಸ್ಟೈಲ್ ಹೇಗಿದೆ ಗೊತ್ತಾ‌..? ಅಸಲು, ಇವ್ರನ್ನ ಹಿಡಿದು ತರ್ತಾರಾ ನಮ್ ಪೊಲೀಸ್ರು..?

ಮುಂಡಗೋಡಿಗೆ ಬಂದಿದ್ದು ಖತರ್ನಾಕ “ಇರಾನಿ ಗ್ಯಾಂಗ್” ನ ಕಳ್ಳರಾ..? ಈ ಖದೀಮರ ದರೋಡೇ ಸ್ಟೈಲ್ ಹೇಗಿದೆ ಗೊತ್ತಾ‌..? ಅಸಲು, ಇವ್ರನ್ನ ಹಿಡಿದು ತರ್ತಾರಾ ನಮ್ ಪೊಲೀಸ್ರು..?

ಮುಂಡಗೋಡ ತಾಲೂಕಿನಲ್ಲಿ ಆಗಾಗ್ಗೆ ಬಂದು ಹೋಗ್ತಿದೆಯಾ ಖತರ್ನಾಕ ಇರಾನಿ ಗ್ಯಾಂಗ್..? ಈ ಪ್ರಶ್ನೆ ಸದ್ಯ ಸದ್ದು ಮಾಡ್ತಿದೆ. ಅಸಲು, ನಮ್ಮ ಮುಂಡಗೋಡಿನಲ್ಲಿ ಹಾಡಹಗಲೇ ಅಂಗಡಿಗಳಿಗೆ ನುಗ್ಗಿ ಚಿಲ್ಲರೇ ಕೊಟ್ಟು ನೋಟು ಪಡೆಯುವ ನೆಪದಲ್ಲಿ, ಕೈಗೆ ಸಿಕ್ಕಷ್ಟು ದೋಚಿಕೊಂಡು ಹೋಗುವ “ಕ್ಯೂಟ್” ಮುಖಗಳು ಥೇಟು ಇರಾನಿ ಗ್ಯಾಂಗ್ ಅನ್ನೇ ಹೋಲುತ್ತಿದೆ. ಅದು ಸತ್ಯವಾದ್ರೆ, ನಮ್ಮ‌ ಪೊಲೀಸ್ರು ಆ ಗ್ಯಾಂಗ್ ನ್ನ ಬೆನ್ನತ್ತಿ ಹಿಡಿದು ತರ್ತಾರಾ ಅನ್ನೋದೇ ಈಗ ಬಿಡಿಸಲಾರದ ಪ್ರಶ್ನೆ..! ಅದು ಖತರ್ನಾಕ ಗ್ಯಾಂಗ್..! ಇರಾನಿ ಗ್ಯಾಂಗ್, ಈ ಹೆಸ್ರು ಬಹುಶಃ ಖಾಕಿ ವಲಯದಲ್ಲಿ ಎಲ್ಲರಿಗೂ ಗೊತ್ತಿರತ್ತೆ‌. ನಮ್ಮ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಹಾರಾಷ್ಟ್ರ, ಗೋವಾ, ಮದ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಆ್ಯಕ್ಟಿವ್ ಆಗಿರೋ ಈ ಗ್ಯಾಂಗ್ ನಾಜೂಕಾಗೇ ಯಾರ ಭಯವಿಲ್ಲದೇ, ಸರಗಳ್ಳತನ ಸೇರಿ ದರೋಡೆ ಮಾಡೋದನ್ನೇ ಕಾಯಕ ಮಾಡಿಕೊಂಡಿದೆ. ಬಹುತೇಕ ಇವ್ರು ಹಾಡಹಗಲಲ್ಲೇ ಸ್ಕೆಚ್ ಹಾಕಿ ಸಿಕ್ಕಷ್ಟು ಎಗರಿಸಿಕೊಂಡು ಹೋಗ್ತಾರೆ. ಇವ್ರು “ಶೋಕಿ” ವೀರರು.‌.! ಅಸಲು, ಇರಾನಿ ಗ್ಯಾಂಗ್ ಅನ್ನೋದು...

ಮುಂಡಗೋಡಿನಲ್ಲಿ ಕಳ್ಳರ ಹೊಸ ಗ್ಯಾಂಗ್ ಆ್ಯಕ್ಟಿವ್..! ಚಿಲ್ಲರೇ ಕೊಟ್ಟು ನೋಟು ಪಡೆಯೊ “ಕಳ್ಳಾಟ”..! ಇವ್ರೇ ನೋಡಿ ಖದೀಮರು, ಇವ್ರು ಕಂಡ್ರೆ ಮಾಹಿತಿ ನೀಡಿ..!

ಮುಂಡಗೋಡಿನಲ್ಲಿ ಕಳ್ಳರ ಹೊಸ ಗ್ಯಾಂಗ್ ಆ್ಯಕ್ಟಿವ್..! ಚಿಲ್ಲರೇ ಕೊಟ್ಟು ನೋಟು ಪಡೆಯೊ “ಕಳ್ಳಾಟ”..! ಇವ್ರೇ ನೋಡಿ ಖದೀಮರು, ಇವ್ರು ಕಂಡ್ರೆ ಮಾಹಿತಿ ನೀಡಿ..!

 ಮುಂಡಗೋಡ ಪೊಲೀಸ್ರು ಅಲರ್ಟ್ ಆಗಿದ್ದಾರೆ. ಪಟ್ಟಣದಲ್ಲಿ ಅಂಗಡಿಗಳಿಗೆ ಬಂದು ನಾಣ್ಯಗಳನ್ನು ನೀಡಿ ನೋಟುಗಳನ್ನು ಬದಲಾಯಿಸಿಕೊಳ್ಳುವ ನೆಪದಲ್ಲಿ ಅಥವಾ ಹೊಸ ಅಂಗಡಿ ಆರಂಭಿಸುತ್ತಿದ್ದೇವೆ ಎಂದು ನಂಬಿಸಿ ಮಾಲೀಕರ ಗಮನ ಬೇರೆಡೆ ಸೆಳೆದು ನಗದು ಹಾಗೂ ಒಡವೆಗಳನ್ನು ಕಳ್ಳತನ ಮಾಡುತ್ತಿರೋ ವಂಚಕರ ಗ್ಯಾಂಗ್ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಲ್ ಆ್ಯಕ್ಟಿವ್ ಆಗಿದೆ. ಹೀಗಾಗಿ, ಸಾರ್ವಜನಿಕರು ಮತ್ತು ವರ್ತಕರು ತೀವ್ರ ಎಚ್ಚರಿಕೆ ವಹಿಸುವಂತೆ ಪೊಲೀಸ್ರು ಮನವಿ ಮಾಡಿದ್ದಾರೆ. ​ವಂಚಕರ ವಂಚನಾ ಸ್ಟೈಲ್ ಇದು..! ​ಈ ಖದೀಮರು ಸಾಮಾನ್ಯವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಾರೆ. ಅಂಗಡಿಯವರ ಬಳಿ ಚಿಲ್ಲರೆ ನಾಣ್ಯಗಳನ್ನು ನೀಡಿ ದೊಡ್ಡ ಮುಖಬೆಲೆಯ ನೋಟುಗಳನ್ನು ಕೇಳುವುದು, ಅಥವಾ ‘DL’ ಸೀರೀಸ್‌ನ ನೋಟುಗಳನ್ನು ಕೇಳುವುದು ಹಾಗೂ ಹೊಸ ಅಂಗಡಿ ಓಪನ್ ಮಾಡುತ್ತಿದ್ದೇವೆ ಎಂದು ಹರಟೆ ಹೊಡೆಯುವುದು ಇವರ ತಂತ್ರ. ಈ ನಡುವೆ ಮಾಲೀಕರ ಗಮನ ಬೇರೆಡೆಗೆ ತಿರುಗಿ ಕಣ್ಣು ತಪ್ಪಿಸಿ ಅಂಗಡಿಯಲ್ಲಿರುವ ಹಣ, ಚಿನ್ನಾಭರಣ ಹಾಗೂ ಇತ್ಯಾದಿ ಬೆಲೆಬಾಳುವ...

ಮುಂಡಗೋಡ ಪಟ್ಟಣದಲ್ಲಿ ಹಾಡಹಗಲೇ ಮತ್ತೊಂದು ಕಳ್ಳತನ..! ಎಸ್ಪಿ ಸಾಹೇಬ್ರೇ ಈ ಕಡೆ ಒಂದಿಷ್ಟು ಗಮನ ಕೊಡಿ, ಆತಂಕದಲ್ಲಿದೆ ತಾಲೂಕಿನ ಜನತೆ..!

ಮುಂಡಗೋಡ ಪಟ್ಟಣದಲ್ಲಿ ಹಾಡಹಗಲೇ ಮತ್ತೊಂದು ಕಳ್ಳತನ..! ಎಸ್ಪಿ ಸಾಹೇಬ್ರೇ ಈ ಕಡೆ ಒಂದಿಷ್ಟು ಗಮನ ಕೊಡಿ, ಆತಂಕದಲ್ಲಿದೆ ತಾಲೂಕಿನ ಜನತೆ..!

 ಮುಂಡಗೋಡ ಪಟ್ಟಣದಲ್ಲಿ ಶನಿವಾರ ಹಾಡಹಗಲೇ ಮತ್ತೊಂದು ಕಳ್ಳತನವಾಗಿದೆ. ಬಹುತೇಕ ಪೊಲೀಸ ಠಾಣೆಯ ರೂಟ್ ನಲ್ಲೇ ಅಂದ್ರೆ ಪಟ್ಟಣದ ಬಂಕಾಪುರ ರಸ್ತೆಯ ಜನನೀಬೀಡ ಪ್ರದೇಶದಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ. ಸಿಮೆಂಟ್, ಕಬ್ಬಿಣದ ಅಂಗಡಿಗೆ ನುಗ್ಗಿರೋ ಕಳ್ಳರು 13 ಸಾವಿರಕ್ಕೂ ಹೆಚ್ಚು ಹಣ ಎಗರಿಸಿದ್ದಾರೆ. ಇದ್ರೊಂದಿಗೆ ತಾಲೂಕಿನಲ್ಲಿನ ಸರಣೀ ಕಳ್ಳತನ ಕೇಸುಗಳು ನಿರಂತರ ಎನ್ನುವಂತಾಗಿದೆ. ಎಂದಿನಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಅದು, ಇದು ಅಂತಾ ಗೆಬರಾಡಿ ಹೋಗಿದ್ದಾರೆ, ಅಷ್ಟೆ, ಆದ್ರೆ ಆ ಕಳ್ಳರು ಮಾತ್ರ ಈ ನಮ್ಮ‌ಪೊಲೀಸ್ರಿಗೆ ಯಾವಾಗ ಸಿಗ್ತಾರೋ ಗೊತ್ತಿಲ್ಲ.. ಇದೇಲ್ಲ ಸಿರೀಯಸ್ ಅಲ್ವಾ..? ನಿಜವೆಂದ್ರೆ, ಮುಂಡಗೋಡ ತಾಲೂಕಿನ ಜನತೆ ಅಕ್ಷರಶಃ ಆತಂಕದಲ್ಲಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಂತೂ ಮಹಿಳೆಯರು ರಾತ್ರಿಯಾದಂತೆ ಏನಾಗತ್ತೊ ಅನ್ನೋ ಭಯದಲ್ಲಿದ್ದಾರೆ. ಯಾಕಂದ್ರೆ, ಮುಂಡಗೋಡ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಸದ್ಯ ಕಳ್ಳರ ಹಾವಳಿ ಜನರ ನಿದ್ದೆಗೆಡಿಸಿದೆ. ಅದ್ರೆ ಮುಂಡಗೋಡ ಪೊಲೀಸ್ ಅಧಿಕಾರಿಗಳು ಮಾತ್ರ ಈ ಬಗ್ಗೆ ಬಹುಶಃ ಇನ್ನೂ ಸಿರಿಯಸ್ ಆಗಿ ತಕ್ಕೊಂಡೇ ಇಲ್ಲವಾ..? ಅಥವಾ...

ಮುಂಡಗೋಡ ಮಾರಿಕಾಂಬಾ ನಗರದಲ್ಲಿ ಕಳ್ಳರ ಕೈಚಳಕ..! ಒಂದು ಮನೆ ಕಳ್ಳತನ ಇನ್ನೊಂದು ಅಂಗಡಿಗೆ ಬೀಗ ಮುರಿಯಲು ಯತ್ನ..!

ಮುಂಡಗೋಡ ಮಾರಿಕಾಂಬಾ ನಗರದಲ್ಲಿ ಕಳ್ಳರ ಕೈಚಳಕ..! ಒಂದು ಮನೆ ಕಳ್ಳತನ ಇನ್ನೊಂದು ಅಂಗಡಿಗೆ ಬೀಗ ಮುರಿಯಲು ಯತ್ನ..!

ಮುಂಡಗೋಡ ಪಟ್ಟಣದ ಹಳೂರಿನ ಮಾರಿಕಾಂಬಾ ನಗರದಲ್ಲಿ ಕಳೆದ ಹತ್ತು ದಿನಗಳಲ್ಲಿ ಮೂರು ಮನೆಗಳ ಮನೆಗಳ್ಳತನವಾಗಿದೆ. ಅದ್ರಲ್ಲೂ ಸೋಮವಾರ ರಾತ್ರಿ ಹಾಗೂ ನಿನ್ನೆ ಮಂಗಳವಾರ ರಾತ್ರಿ ಎರಡು ಮನೆಯ ಕಳ್ಳತನ ಯತ್ನ ಮಾಡಿದ್ದು, ಒಂದು ಮನೆಯಲ್ಲಿ ಒಂದಿಷ್ಟು ಬಂಗಾರ ಹಾಗೂ ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಅಲ್ದೇ ಆ ಕಳ್ಳರಿಗೆ ಅದೇಷ್ಟರ ಮಟ್ಟಿಗೆ ಮುಂಡಗೋಡಿನಲ್ಲಿ ನಿರ್ಭೀತಿ ಇದೆ ಅಂದ್ರೆ ಕಳ್ಳತನ ಮಾಡಿರೊ ಮನೆಯಲ್ಲೇ ಟೀ ಮಾಡಿಕೊಂಡು ಕುಡಿದು ಹೋಗಿದ್ದಾರೆ.. ಇನ್ನು, ಹಳೂರು ಮಾರಿಕಾಂಬಾ ನಗರದ ಬಾಷಾ ಮರಗಡಿ ಎಂಬುವವರ ಮನೆ ಹಾಗೂ ಶಂಕರ ಕುರುಬರ ಎಂಬುವವರ ಅಂಗಡಿ ಕೀಲಿ ಮುರಿದಿದ್ದಾರೆ. ಇನ್ನು ಬಾಷಾ ಎಂಬುವವರ ಮನೆಯಲ್ಲಿದ್ದ 2.5 ಗ್ರಾಂ ಚಿನ್ನ ಹಾಗೂ 3 ಸಾವಿರ ನಗದು, ಅಲ್ದೇ ಮನೆಯ ಮಹಿಳೆ ಕುಡಿಕೆಯಲ್ಲಿ ಕೂಡಿಟ್ಟಿದ್ದ ಹಣವನ್ನೇಲ್ಲ ದೋಚಿಕೊಂಡು ಹೋಗಿದ್ದಾರೆ. ಯತಾಪ್ರಕಾರ, ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಶ್ವಾನದಳವೂ ಬಂದು ಕಳ್ಳನ ವಾಸನೆ ಹಿಡಿಯಲು ಯತ್ನಿಸಿದೆ ಅನ್ನೊ ಮಾಹಿತಿ ಇದೆ.....

ಮುಂಡಗೋಡ ಸಮೀಪದ ಲಕ್ಕೊಳ್ಳಿ ಕ್ರಾಸ್ ಬಳಿ ಬೈಕ್-ಕಾರು ನಡುವೆ ಭೀಕರ ಅಪಘಾತ; ಓರ್ವನ ಸ್ಥಿತಿ ಗಂಭೀರ..!

ಮುಂಡಗೋಡ ಸಮೀಪದ ಲಕ್ಕೊಳ್ಳಿ ಕ್ರಾಸ್ ಬಳಿ ಬೈಕ್-ಕಾರು ನಡುವೆ ಭೀಕರ ಅಪಘಾತ; ಓರ್ವನ ಸ್ಥಿತಿ ಗಂಭೀರ..!

​ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಕ್ರಾಸ್ ಸಮೀಪ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ​ಹಾನಗಲ್ ತಾಲೂಕಿನ ಅಕ್ಕಿಆಲೂರು ಮೂಲದ ಮಹ್ಮದಗೌಸ್ ಇಸ್ಮಾಯಿಲ್ ಸಾಬ್ ಸವಣೂರು ಹಾಗೂ ಹಿಂಬದಿ ಸವಾರ ಮುಜರಮಿಲ್ ಗಾಯಗೊಂಡ ದುರ್ದೈವಿಗಳು. ಇವರಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಮುಜರಮಿಲ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹೇಗಾಯ್ತು..? ಶಿರಸಿ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಮುಂಡಗೋಡ ಕಡೆಯಿಂದ ಲಕ್ಕೊಳ್ಳಿ ಕಡೆಗೆ ತೆರಳುತ್ತಿದ್ದ ವ್ಯಾಗನಾರ್ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮುಜರಮಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ. ​ಈ ಕುರಿತು ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ...

ಉತ್ತರ ಕನ್ನಡ ಜಿಲ್ಲೆಯಲ್ಲಿ “ಡಾಕ್ಟರ್ ಯಮದೂತಾಸ್” ವಿರುದ್ಧ ವಾರ್ನಿಂಗ್..! ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡೀಸಿ ಸೂಚನೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ “ಡಾಕ್ಟರ್ ಯಮದೂತಾಸ್” ವಿರುದ್ಧ ವಾರ್ನಿಂಗ್..! ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡೀಸಿ ಸೂಚನೆ..!

ಕಾರವಾರ; ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ದ ಬರುವ ದೂರುಗಳ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸಿ , ಅವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಖಡಕ್ ಸೂಚನೆ ನೀಡಿದ್ರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ,ಕೆಪಿಎಂಇ ನೊಂದಣಿ ಮತ್ತು ಕುಂದುಕೊರೆತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಕಲಿಗಳ‌ ವಿರುದ್ಧ ಕೇಸ್..! ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ದ ವಿಚಾರಣೆ ನಡೆಸಿ ಕಾನೂನಿನ ನಿಬಂದನೆಗಳ ಅನುಸಾರ ಕ್ರಮ ಜರುಗಿಸಲು ಜಿಲ್ಲಾ ಮಟ್ಟದ ವಿಶೇಷ ಪಡೆ ರಚನೆ ಮಾಡಿದ ಜಿಲ್ಲಾಧಿಕಾರಿಗಳು, ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳ ವಿರುದ್ದ ಗರಿಷ್ಠ ಪ್ರಮಾಣದ ದಂಡ ವಿಧಿಸಿ, ಕ್ಲಿನಿಕ್ ಗಳನ್ನು ಬಂದ್ ಮಾಡುವ ಜೊತೆಗೆ ಇಂತಹ ಪ್ರಕರಣಗನ್ನು ಮತ್ತೂ ಮುಂದುವರೆಸುವವರ ವಿರುದ್ದ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದರು. ದಾಳಿ ನಡೆಸಿ..! ಅರ್ಹತೆಗನುಗುಣವಾಗಿ ಅನುಮತಿ ಪಡೆದ ವೈದ್ಯಕೀಯ ಪದ್ದತಿಯಲ್ಲಿ ಮಾತ್ರ...