NMD ಹತ್ಯೆ ಕೇಸ್| ಯುಪಿಗೆ ಹೋಗಿ ಪಿಸ್ತೂಲ್ ತಂದಿದ್ದ ಆರೋಪಿಗಳ ಮನೆಗಳ ಮೇಲೆ ಪೊಲೀಸ್ರ ದಾಳಿ..! 7 ತಂಡಗಳಲ್ಲಿ ಪೊಲೀಸ್ರ ಖಡಕ್ ಸರ್ಚಿಂಗ್..!

NMD ಹತ್ಯೆ ಕೇಸ್| ಯುಪಿಗೆ ಹೋಗಿ ಪಿಸ್ತೂಲ್ ತಂದಿದ್ದ ಆರೋಪಿಗಳ ಮನೆಗಳ ಮೇಲೆ ಪೊಲೀಸ್ರ ದಾಳಿ..! 7 ತಂಡಗಳಲ್ಲಿ ಪೊಲೀಸ್ರ ಖಡಕ್ ಸರ್ಚಿಂಗ್..!

 ಮುಂಡಗೋಡಿನ NMD ಜಮೀರ್ ಅಹ್ಮದ್ ದರ್ಗಾವಾಲೆ ಭೀಕರ ಹತ್ಯೆ ಪ್ರಕರಣದಲ್ಲಿ ಸದ್ಯ 11 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಅದ್ರಂತೆ, ಈ ಹತ್ಯೆ ಕೇಸನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸ್ರು, ಬಹುತೇಕ ಮುಂಡಗೋಡಿನಲ್ಲಿ ಇನ್ಮುಂದೆ ಕ್ರಿಮಿನಲ್ ಗಳಿಗೆ ಜಾಗವಿಲ್ಲ ಅಂತಾ ಖಡಕ್ ಎಚ್ಚರಿಕೆ ಕೊಡಲು ತಯಾರಾದ್ರಾ ಅಂತಾ ಅನಿಸ್ತಿದೆ. ಯಾಕಂದ್ರೆ, ಸದ್ಯ ಅರೆಸ್ಟ್ ಆಗಿರೋ ಆರೋಪಿಗಳ ಮನೆಗಳ‌ಮೇಲೆ ಇಂದು 7 ತಂಡಗಳಾಗಿ ಪೊಲೀಸ್ರು ದಾಳಿ ಮಾಡಿ ಮನೆ ಸರ್ಚ್ ಮಾಡಿದ್ದಾರೆ. ಬಂಧಿತರ ಮನೆ ಮೇಲೆ ದಾಳಿ..! ಅಂದಹಾಗೆ, ಮುಂಡಗೋಡ ಬಡ್ಡಿ ಮಾಫಿಯಾದ ಕಿಂಗ್ ಪಿನ್ NMD ಜಮೀರನ ಹತ್ಯೆ ಕೇಸಲ್ಲಿ, ನಿನ್ನೆಯಷ್ಟೇ ಪೊಲೀಸರು ದಾಳಿ ನಡೆಸಿ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಹತ್ಯೆಯಲ್ಲಿ ಕಂಟ್ರಿಮೇಡ್ ಪಿಸ್ತೂಲ್ ಬಳಸಲಾಗಿತ್ತು. ಅಲ್ದೆ ಈಗಾಗಲೇ 3 ಪಿಸ್ತೂಲ್ ಗಳನ್ನು, 6 ಸಜೀವ ಗುಂಡುಗಳನ್ನು ಪೊಲೀಸ್ರು ಆರೋಪಿಗಳಿಂದ ಜಪ್ತಿ ಮಾಡಿದ್ದರು. ಅಸಲು, ಎರಡು ವರ್ಷದ ಹಿಂದೆಯೇ ಹತ್ಯೆಗೆ ಪ್ಲ್ಯಾನ್ ರಚಿಸಿದ್ದ ಹಂತಕರು, ಅದಕ್ಕಾಗೇ ಅವತ್ತೇ ಕಂಟ್ರಿಮೇಡ್ ಪಿಸ್ತೂಲ್...

NMD ಜಮೀರ್ ಹತ್ಯೆ ಕೇಸ್, ಮತ್ತೆ ನಾಲ್ವರು ಆರೋಪಿಗಳು ಅಂದರ್..! 11 ಕ್ಕೆ ಏರಿದ ಆರೋಪಿಗಳ‌ ಸಂಖ್ಯೆ..!

NMD ಜಮೀರ್ ಹತ್ಯೆ ಕೇಸ್, ಮತ್ತೆ ನಾಲ್ವರು ಆರೋಪಿಗಳು ಅಂದರ್..! 11 ಕ್ಕೆ ಏರಿದ ಆರೋಪಿಗಳ‌ ಸಂಖ್ಯೆ..!

ಮುಂಡಗೋಡಿನ NMD ಜಮೀರ್ ಹತ್ಯೆ ಕೇಸಲ್ಲಿ ಮತ್ತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಖಡಕ್ ತನಿಖೆಗೆ ಇಳಿದಿರೋ ತಂಡ, ಮತ್ತೆ ನಾಲ್ವರನ್ನು ಬಂಧಿಸಿದೆ. ಈ ಮೂಲಕ NMD ಹತ್ಯೆ ಕೇಸಲ್ಲಿ ಇದುವರೆಗೂ ಒಟ್ಟೂ 11ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ. ಇವರೇ ಆರೋಪಿಗಳು..! ಮುಂಡಗೋಡ ಕಿಲ್ಲೆ ಓಣಿಯ ಮಲ್ಲಿಕಜಹಾನ @ ಜಹೀರ ತಂದೆ ಶಬ್ಬೀರ ಶೇಖ್, ಮಹಮ್ಮದ ಸಾಧೀಕ ತಂದೆ ಅಬ್ದುಲ್ ರಜಾಕ ದರ್ಗಾವಾಲೆ ಮುಂಡಗೋಡ ಮಾರಿಕಾಂಬಾ ನಗರದ ಅಸಗರ ಅಲಿ ತಂದೆ ಮಕ್ತುಮ ಅಲಿ ದೊಡ್ಮನಿ , ಹಾಗೂ ಸಾಹೀಲ್ ತಂದೆ ಬಾಬಾಬುಡನ್ ಶೇಖ @ ನಂದಿಕಟ್ಟಿ ಎಂಬುವವರನ್ನು ಪೊಲೀಸ್ರು ಬಂಧಿಸಿದ್ದಾರೆ. ಪಿಸ್ತೂಲ್ ತರೋಕೆ ಹೋದವರಿವರು..! ಅಂದಹಾಗೆ, ಜಮೀರ್ ಹತ್ಯೆ ಕೇಸಲ್ಲಿ ಸದ್ಯ ಏ1 ಆರೋಪಿ ಮಂಜುನಾಥ್ ಕಾಜಗಾರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಇವ್ರು, NMD ಜಮೀರ್ ಹತ್ಯೆ ಕೇಸಲ್ಲಿ ಫಿಟ್ ಆಗಿದ್ದಾರೆ. ಅಲ್ದೆ, ಹತ್ಯೆ ಕೇಸಲ್ಲಿ ಬಳಸಲಾಗಿದ್ದ ಎರಡು ಪಿಸ್ತೂಲ್ ಗಳನ್ನು ಇವ್ರೇ ತರೋಕೆ...

ಮುಂಡಗೋಡಿನ ಯರೈಬೈಲ್ DyRFO,  ಉಗ್ನಿಕೇರಿ ಬೀಟ್ ಫಾರೇಸ್ಟ್ ಗಾರ್ಡ್ ವಿರುದ್ಧ ಲೋಕಾಯುಕ್ತ ಕೇಸ್,  FIR ದಾಖಲು..! ಅನ್ನದಾತನ ಹತ್ರ ಲಂಚ ಕೇಳಿದ್ನಾ ಆ ಅರಣ್ಯ ಅಧಿಕಾರಿ..?

ಮುಂಡಗೋಡಿನ ಯರೈಬೈಲ್ DyRFO, ಉಗ್ನಿಕೇರಿ ಬೀಟ್ ಫಾರೇಸ್ಟ್ ಗಾರ್ಡ್ ವಿರುದ್ಧ ಲೋಕಾಯುಕ್ತ ಕೇಸ್, FIR ದಾಖಲು..! ಅನ್ನದಾತನ ಹತ್ರ ಲಂಚ ಕೇಳಿದ್ನಾ ಆ ಅರಣ್ಯ ಅಧಿಕಾರಿ..?

  ಮುಂಡಗೋಡ ಅರಣ್ಯ ಇಲಾಖೆಯಲ್ಲಿರೋ ಕೆಲ ತಿಮಿಂಗಿಲುಗಳಿಗೆ ಓರ್ವ ರೈತ ಸರಿಯಾದ ಶಾಸ್ತಿ ಮಾಡಿಸ್ತಿದಾನೆ. ತಾಲೂಕಿನ ಉಗ್ನಿಕೇರಿಯ ರೈತನೋರ್ವನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ DyRFO ಹಾಗೂ ಬೀಟ್ ಫಾರೆಸ್ಟ್ ಗಾರ್ಡ್ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಪರಿಣಾಮ ಹಳೆಯ ಮನೆಯಲ್ಲಿದ್ದ ಕಟ್ಟಿಗೆಗಳಿಗೆ ಪಾಸ್ ನೀಡಲು 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ಮೇಲೆ FIR ದಾಖಲಾಗಿದೆ. DyRFO ಬಸವರಾಜ್ ಮೊದಲನೇ ಆರೋಪಿ..! ಅಂದಹಾಗೆ, ಮುಂಡಗೋಡ ತಾಲೂಕಿನ ಯರೇಬೈಲ್ ಉಪವಲಯ ಅರಣ್ಯಾಧಿಕಾರಿ ಬಸವರಾಜ್ ಯಾದವಾಡ ಹಾಗೂ ಉಗ್ನಿಕೇರಿ ಬೀಟ್ ಫಾರೆಸ್ಟ್ ಗಾರ್ಡ್ ನಿಸಾರ್ ಪಾಶಾ ಇಬ್ಬರೂ ಸೇರಿ, ರೈತನಿಂದ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಹೊತ್ತಿದ್ದಾರೆ. ಹೀಗಾಗಿ ಇವರೀರ್ವರ ಮೇಲೆ ಈಗ ಲೋಕಾಯುಕ್ತ ಕಚೇರಿಯಲ್ಲಿ FIR ದಾಖಲಾಗಿದೆ. ಅಷ್ಟಕ್ಕೂ ದೂರಿನಲ್ಲಿ ಏನಿದೆ..? ಮುಂಡಗೋಡ ತಾಲೂಕಿನ ಉಗ್ನಿಕೇರಿ ಗ್ರಾಮದ ನಿವಾಸಿ ರಮೇಶ್ ವಾಲ್ಮೀಕಿ ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಹೀಗೇ ಆರೋಪಿಸಿದ್ದಾರೆ. ಮುಂಡಗೋಡ...

ಟಿಬೇಟಿಗ ಲಾಮಾನ ಹತ್ಯೆ ಕೇಸ್, ಮೂವರು ಆರೋಪಿಗಳು ಅಂದರ್..! ಕಬ್ಬು ಕಟಾವ್ ಮಾಡೋ ಗ್ಯಾಂಗ್ ಈ ಹತ್ಯೆ ಮಾಡಿದ್ದು ಯಾಕೆ..?

ಟಿಬೇಟಿಗ ಲಾಮಾನ ಹತ್ಯೆ ಕೇಸ್, ಮೂವರು ಆರೋಪಿಗಳು ಅಂದರ್..! ಕಬ್ಬು ಕಟಾವ್ ಮಾಡೋ ಗ್ಯಾಂಗ್ ಈ ಹತ್ಯೆ ಮಾಡಿದ್ದು ಯಾಕೆ..?

 ಮುಂಡಗೋಡಿನ ಟಿಬೇಟಿಯನ್ ಕಾಲೋನಿಯ ಲಾಮಾನ ಹತ್ಯೆ ಮಾಡಿದ ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ ಪೊಲೀಸ್ರು. ಮೊನ್ನೆ ಎಪ್ರೀಲ್ 29 ರಂದು ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ತಾಶಿ ದೊಂಡುಪ ಎಂಬಾತನನ್ನು ಹತ್ಯೆ ಮಾಡಿ, ಕೈಕಾಲು ಕಟ್ಟಿ ಧಾರವಾಡ ಹೊರವಲಯದಲ್ಲಿ ಶವ ಎಸೆದು ಹೋಗಿದ್ದ ಹಂತಕರನ್ನು ಧಾರವಾಡ ಪೋಲೀಸರು ಕೊನೆಗೂ ಬಂಧಿಸಿದ್ದಾರೆ. ಹಣಕ್ಕಾಗಿ ನಡೀತು ಕೊಲೆ..! ಅಂದಹಾಗೆ, ಸಾದಾ ಸಂಪನ್ನನಾಗಿದ್ದ ತಾಸಿ ದೊಂಡುಪ್ ಸದ್ಯ ಹೆಣವಾಗಿರೋದರ ಹಿಂದೆ ಝಣ ಝಣ ಕಾಂಚಾಣದ ಕಾರಣವಿದೆ. ಲಾಮಾನ ಬಳಿ ಹಣ ಇದೆ ಅಂತಾ ಆತನನ್ನ ಕಿಡ್ನ್ಯಾಪ್ ಮಾಡಿ, ಆತನ ಬಳಿ ನಯಾಪೈಸೆಯೂ ಸಿಗಲಿಲ್ಲ‌ ಅಂದಾಗ, ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ ಹಂತಕರು. ಅವ್ರು ಕಬ್ಬು ಕಟಾವ್ ಗ್ಯಾಂಗನವ್ರು..! ಅಸಲು, ಮುಂಡಗೋಡ ತಾಲೂಕಿಗೆ ಪ್ರತೀವರ್ಷವೂ ಕಬ್ಬು ಕಟಾವ್ ಮಾಡಲು ಮಹಾರಾಷ್ಟ್ರದಿಂದ ಗ್ಯಾಂಗ್ ಗಳು ಬರತ್ತೆ ಅಲ್ವಾ..? ಅಂತದ್ದೇ ಕಬ್ಬು ಕಟಾವ್ ಮಾಡುವ ಗ್ಯಾಂಗ್ ನವರೇ ಈ‌ ಲಾಮಾನ ಹತ್ಯೆ ಮಾಡಿದ್ದಾರೆ. ಅಲ್ದೆ ಹತ್ಯೆ ಮಾಡಿ ಮಹಾರಾಷ್ಟ್ರ ಕಡೆ...

ಕೇರಳಂ ಹಾಗೂ ರಾಜ್ಯದ 2 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ..! ಮುಂಡಗೋಡ ಕೈ ಕಾರ್ಯಕರ್ತರ ಸಂಭ್ರಮ..!

ಕೇರಳಂ ಹಾಗೂ ರಾಜ್ಯದ 2 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ..! ಮುಂಡಗೋಡ ಕೈ ಕಾರ್ಯಕರ್ತರ ಸಂಭ್ರಮ..!

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಅದರ ಜೊತೆ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಹೊರಬಿದ್ದಿದೆ. ಕೇರಳಂ ರಾಜ್ಯದಲ್ಲಿ ಹಾಗೂ ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹಿನ್ನೆಲೆಯಲ್ಲಿ ಮುಂಡಗೋಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ರು‌. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯಘೋಷಗಳನ್ನು ಕೂಗಿ ಸಂಭ್ರಮಿಸಿದ್ರು.

ಪಂಚರಾಜ್ಯ ಚುನಾವಣೆ; 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮುಂಡಗೋಡಿನಲ್ಲಿ ಸಂಭ್ರಮಾಚರಣೆ..!

ಪಂಚರಾಜ್ಯ ಚುನಾವಣೆ; 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮುಂಡಗೋಡಿನಲ್ಲಿ ಸಂಭ್ರಮಾಚರಣೆ..!

ಪಶ್ಚಿಮ ಬಂಗಾಲ, ಅಸ್ಸಾಂ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಿನ್ನೆಲೆಯಲ್ಲಿ ಮುಂಡಗೋಡಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ರು‌. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಸೇರಿದ್ದ ಬಿಜೆಪಿಗರು ಚುನಾವಣಾ ಗೆಲುವಿಗೆ ಸಂಭ್ರಮಿಸಿದರು. ಜಯಘೋಷಗಳನ್ನು ಕೂಗಿ ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಮಂಡಲ ಅಧ್ಯಕ್ಷ ಮಂಜುನಾಥ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಎಲ್ ಟಿ ಪಾಟೀಲ್ ಮತ್ತು ಅಶೋಕ್ ಚಲುವಾದಿ ಅನೇಕ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಹುನಗುಂದದ ಮಹಿಳೆ ಹರಿಹರದಲ್ಲಿ ನಾಪತ್ತೆ, ಇವ್ರು ಕಂಡಲ್ಲಿ ಮಾಹಿತಿ ನೀಡಲು ಮನವಿ..!

ಹುನಗುಂದದ ಮಹಿಳೆ ಹರಿಹರದಲ್ಲಿ ನಾಪತ್ತೆ, ಇವ್ರು ಕಂಡಲ್ಲಿ ಮಾಹಿತಿ ನೀಡಲು ಮನವಿ..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಮಹಿಳೆಯೋರ್ವಳು ಎರಡು ದಿನಗಳಿಂದ‌ ಕಾಣೆಯಾಗಿದ್ದಾಳೆ. ದಾವಣಗೇರೆಯಿಂದ KSRTC ಬಸ್ ನಲ್ಲಿ ಮುಂಡಗೋಡಿಗೆ ಬರುತ್ತಿದ್ದ ಮಹಿಳೆ ಹರಿಹರದಿಂದ ನಾಪತ್ತೆಯಾಗಿದ್ದಾಳೆ. ಗಾಯತ್ರಿ ಸದಾನಂದ ರಾಯ್ಕರ್ ಎಂಬುವ ಮಹಿಳೆಯೇ ನಾಪತ್ತೆಯಾಗಿದ್ದು, ಯಾರಿಗಾದ್ರೂ ಇವರು ಕಂಡುಬಂದಲ್ಲಿ ತಕ್ಷಣವೇ ಈ ಕೆಳಗಿನ ನಂಬರಿಗೆ ಕರೆ ಮಾಡಲು ವಿನಂತಿಸಲಾಗಿದೆ. Mob No:7022471180                7204299031

ಧಾರವಾಡದಲ್ಲಿ ಮುಂಡಗೋಡ ಟಿಬೇಟಿಗ ಲಾಮಾನ ಭೀಕರ ಹತ್ಯೆ..? ಕಾಲು ಕಟ್ಟಿ ಭೀಕರವಾಗಿ ಕೊಂದು ಬೀಸಾಕಿದ್ರಾ ಹಂತಕರು..?

ಧಾರವಾಡದಲ್ಲಿ ಮುಂಡಗೋಡ ಟಿಬೇಟಿಗ ಲಾಮಾನ ಭೀಕರ ಹತ್ಯೆ..? ಕಾಲು ಕಟ್ಟಿ ಭೀಕರವಾಗಿ ಕೊಂದು ಬೀಸಾಕಿದ್ರಾ ಹಂತಕರು..?

 ಧಾರವಾಡ ರೂರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಡಗೋಡಿನ ಟಿಬೇಟಿಯನ್ ಲಾಮಾ ಕ್ಯಾಂಪ್ ನಂಬರ್ 1ರ ಲಾಮಾನ(ಬೌದ್ದ ಸನ್ಯಾಸಿ) ಶವ ಪತ್ತೆಯಾಗಿದೆ. ಧಾರವಾಡದ‌ ಹೊರವಲಯದ ಹೈವೇ ಪಕ್ಕದಲ್ಲಿ ಮೃತದೇಹ ರಕ್ತ ಸಿಕ್ತವಾಗಿ ದೊರೆತಿದ್ದು, ಲಾಮಾನ ಕಾಲಿಗೆ ಹಗ್ಗದಿಂದ ಕಟ್ಟಿದ್ದು, ಮುಖಕ್ಕೆ ಚಚ್ಚಿ ಭೀಕರವಾಗಿ ಕೊಲೆ ಮಾಡಿ ಬೀಸಾಕಿರೋ ಅನುಮಾನ ವ್ಯಕ್ತವಾಗಿದೆ. ಅಂದಹಾಗೆ, ಲಾಮಾ ಕ್ಯಾಂಪ್ ನಂಬರ್ 1 ರ ತಶಿ ದುಂಡುಪ್ (38) ಎಂಬುವನದ್ದೇ ಶವ ಅಂತಾ ಗುರುತಿಸಲಾಗಿದ್ದು, ಧಾರವಾಡ ಗ್ರಾಮೀಣ ಠಾಣೆಯ ಕ್ರೈಂ ಟೀಂನ ಪೊಲೀಸರು ಮುಂಡಗೋಡಿಗೆ ಬಂದು ಮಾಹಿತಿ ಕಲೆ ಹಾಕಿದ್ದಾರೆ‌. ಅದ್ರಂತೆ ಮುಂಡಗೋಡ ಪೊಲೀಸರೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸನ್ಯಾಸಿನಾ ಕೊಲ್ಲುವಷ್ಟು ದುಷ್ಮನಿ ಏನಿತ್ತು..? ಅಷ್ಟಕ್ಕೂ, ಅಕ್ಷರಶಃ ಅಹಿಂಸಾ ಬೋಧನೆ ಮಾಡುವ ಬೌದ್ದ ಸನ್ಯಾಸಿಯನ್ನ ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿದ್ದು ಯಾಕೆ ಅನ್ನೋ ಅನುಮಾನ ಮೂಡಿದೆ. ಹಣಕ್ಕಾಗಿ ಲಾಮಾ ಹತ್ಯೆಯಾದ್ನಾ..? ಅಥವಾ ಇನ್ಯಾವುದೋ ಬೇರೆ ಕಾರಣವಿದೆಯಾ..? ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

ಮುಂಡಗೋಡಿನಲ್ಲಿ ಸಿಲಿಂಡರಿಗಾಗಿ ಪ್ರತಿಭಟನೆ, ಬೆಳ್ಳಂ ಬೆಳಿಗ್ಗೆ HP ಗ್ಯಾಸ್ ಗೋಡೌನ‌ ಎದುರು ಸಾರ್ವಜನಿಕರ ಆಕ್ರೋಶ..!

ಮುಂಡಗೋಡಿನಲ್ಲಿ ಸಿಲಿಂಡರಿಗಾಗಿ ಪ್ರತಿಭಟನೆ, ಬೆಳ್ಳಂ ಬೆಳಿಗ್ಗೆ HP ಗ್ಯಾಸ್ ಗೋಡೌನ‌ ಎದುರು ಸಾರ್ವಜನಿಕರ ಆಕ್ರೋಶ..!

ಮುಂಡಗೋಡಿನಲ್ಲಿ ಗೃಹಬಳಕೆ ಸಿಲಿಂಡರಿಗಾಗಿ ಇಡೀ ತಾಲೂಕಿನ ಜನ ಹೈರಾಣಾಗಿದ್ದಾರೆ. ಬೆಳಿಗ್ಗೆ ಎದ್ದಕೂಡಲೇ ಮುಂಡಗೋಡಿನ HP ಗ್ಯಾಸ್ ಗೋಡೌನ ಎದುರು ಸಾಲುಗಟ್ಟಿ ನಿಲ್ಲುವ ಜನ ರೋಸಿಹೋಗಿದ್ದಾರೆ. ಹೀಗಾಗಿ, ಇವತ್ತು ಬುಧವಾರ ಬೆಳ್ಳಂಬೆಳಿಗ್ಗೆ ಮುಂಡಗೋಡಿನ HP GAS ಗೋಡೌನ್ ಎದುರು ಖಾಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದ್ರು. ಅಂದಹಾಗೆ, ಇಡೀ ಮುಂಡಗೋಡ ತಾಲೂಕಿನಾಧ್ಯಂತ ಸಿಲಿಂಡರ್ ಸಮಸ್ಯೆ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಬುಕ್ ಮಾಡಿದಾಗಲೂ ಕಾಯ್ದು ಕಾಯ್ದು ಕುಳಿತು ಸಿಲಿಂಡರ್ ಪಡೆಯಲು ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬುಕ್‌ಮಾಡಿದಾಗಲೂ ನಮಗೆ ಸಿಲಿಂಡರ್ ಸಿಗುತ್ತಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ HP GAS ನ ಬಸವರಾಜ್ ಓಸಿಮಠ ಸಾರ್ವಜನಿಕರಿಗೆ ಸಮಾಧಾನ ಪಡಿಸಲು ಯತ್ನಿಸಿದ್ರು. ಆದ್ರೆ ನಮಗೆ ತಕ್ಷಣವೇ ಸಿಲಿಂಡರ್ ಬೇಕು ಅಂತಾ ಸಾರ್ವಜನಿಕರು ಹಠ ಹಿಡಿದು ಪ್ರತಿಭಟನೆ ನಡೆಸಿದ್ರು.

ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಜಿಪಂ ಸಿಇಓ ಡಾ.ದಿಲೀಷ್ ಶಶಿ

ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಜಿಪಂ ಸಿಇಓ ಡಾ.ದಿಲೀಷ್ ಶಶಿ

ಕಾರವಾರ; ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ 41 ಗ್ರಾಮ ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, 17 ಗ್ರಾಮಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಸರಬರಾಜು ಮಾಡಲು 98 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಸಮಸ್ಯೆ ಕಂಡುಬಂದಲ್ಲಿ ತ್ವರಿತವಾಗಿ ಸ್ಪಂದಿಸಿ, ನೀರು ಒದಗಿಸುವಂತೆ ಸೂಚನೆ ನೀಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ ಪೈಪ್ ಲೈನ್ ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ...