ಮುಂಡಗೋಡ ತಾಲೂಕಿನ ಕುಸೂರು ಗ್ರಾಮದ ಕಿರಣ್ ಇಂದ್ರಜಿತ್ ರಾಠೋಡ್ (29) ಎಂಬ ಯುವಕ ಕಳೆದ ಜೂನ್ 8 ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಏನಾಯ್ತು..? ನಾಪತ್ತೆಯಾದ ಕಿರಣ್ ರಾಠೋಡ್ 2019 ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಸೂಕ್ತ ಸಂಬಳ ಸಿಗದ ಕಾರಣ ಕಳೆದ ಮೂರು ತಿಂಗಳ ಹಿಂದೆ ಕೆಲಸ ಬಿಟ್ಟು ಸ್ವಗ್ರಾಮ ಕುಸೂರಿಗೆ ಮರಳಿದ್ದ. ಇತ್ತೀಚೆಗೆ ಮನೆಯಲ್ಲೇ ಇದ್ದ ಆತ, ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡು ಯಲ್ಲಾಪುರದ ಮ್ಯೂಸಿಕ್ ಅಕಾಡೆಮಿಯೊಂದರಲ್ಲಿ ಗಿಟಾರ್ ನುಡಿಸುವುದನ್ನು ಕಲಿಯುತ್ತಿದ್ದನು. ಅವತ್ತು ಜೂನ್ 8..! ಆದ್ರೆ,ಕಳೆದ ಜೂನ್ 8ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಯಲ್ಲಾಪುರಕ್ಕೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದ ಕಿರಣ್, ಸಂಜೆಯಾದರೂ ಮನೆಗೆ ಮರಳಿ ಬಂದಿಲ್ಲ. ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಂದೆ ಇಂದ್ರಜಿತ್...
Top Stories
ಮುಂಡಗೋಡಿನಲ್ಲಿ ಇಂದು ಶಾಸಕ ಭೀಮಣ್ಣ ನಾಯ್ಕ್ ನೇತೃತ್ವದಲ್ಲಿ, ಕಾಂಗ್ರೆಸ್ನಿಂದ ಎಸ್ಐಆರ್ (SIR) ಕುರಿತು ವಿಶೇಷ ಸಭೆ..!
ಮುಂದಿನ 6 ದಿನಗಳ ಕಾಲ ಉತ್ತರ ಕನ್ನಡ ಸೇರಿ, ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ..!
ಜೋಗೇಶ್ವರಹಳ್ಳ ಶಾಲೆ ಆವರಣದಲ್ಲಿ ಯುವಕನ ಸಾವು ಕೇಸ್; ಸ್ಥಳಕ್ಕೆ BEO ಭೇಟಿ, ಕಟ್ಟು ನಿಟ್ಟಿನ ಕ್ರಮ..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!!
ಮುಂಡಗೋಡಿನ ಇಬ್ಬರಿಗೆ 6 ತಿಂಗಳು ಗಡಿಪಾರು ಮಾಡಿ ಎಸ್ಪಿ ಆದೇಶ, ಓರ್ವ ಕೆಜಿಎಫ್ ಜಿಲ್ಲೆಗೆ, ಮತ್ತೋರ್ವ ಮಂಡ್ಯ ಜಿಲ್ಲೆಗೆ..! ಅಷ್ಟಕ್ಕೂ ಯಾರ್ಯಾರು ಗಡಿಪಾರು..? ಯಾಕೆ..?
ಮುಂಡಗೋಡ ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಬಲಿ..? ದೇವರಿಗಂತ ಹೂವು ಕೀಳಲು ಹೋದ ಪೂಜಾರಿ ಹೆಣವಾದ..! ಶಾಲಾ ಆವರಣದ ಬೇಲಿಯಲ್ಲೇ ವಿದ್ಯುತ್..!
ಉತ್ತರ ಕನ್ನಡ ಸೇರಿ ರಾಜ್ಯದ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಗಾಳಿ-ಮಳೆ ಮುನ್ಸೂಚನೆ: ಹವಾಮಾನ ಇಲಾಖೆ ಎಚ್ಚರಿಕೆ..!
ಶಿರಸಿ ನಗರ ಠಾಣೆ ಪೊಲೀಸ್ರ ಭರ್ಜರಿ ಕಾರ್ಯಾಚರಣೆ; ಸೆಂಟ್ರಲ್ ಬಸ್ಸ್ಟ್ಯಾಂಡ್ನಲ್ಲಿ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಖತರ್ನಾಕ ಕಳ್ಳಿ ಅಂದರ್..!
ಮುಂಡಗೋಡಲ್ಲಿ ಶಿರಸಿ DySp ನೇತೃತ್ವದಲ್ಲಿ ಕಾರ್ಯಾಚರಣೆ| ಮೀಟರ್ ಬಡ್ಡಿ ಕುಳಗಳು, ರೌಡಿ ಶೀಟರಗಳ ಮನೆ ಸರ್ಚಿಂಗ್..! ಅಸಲು ಏನಾಗಿದೆ ಮುಂಡಗೋಡಿಗೆ..?
ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಮತ್ತೊಂದು ಲೋಕಾ ದಾಳಿ, ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ (RI)ಲೋಕಾ ಬಲೆಗೆ..!
ಮುಂಡಗೋಡ ಹೆಸ್ಕಾಂ AEE ಧರ್ಮರಾಜ್ ಬೆಡಸಗಾಂವ್ ಲೋಕಾಯುಕ್ತ ಬಲೆಗೆ..! 65 ಸಾವಿರ ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕ ಅಧಿಕಾರಿ..!!
ವಿದ್ಯಾರ್ಥಿಗಳಿಗೆ ಭಾರೀ ಶುಭಸುದ್ದಿ ನೀಡಿದ ನೂತನ ಸಿಎಂ ಡಿಕೆಶಿ..! ಇನ್ಮುಂದೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪ್ರೀ..!
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!
ಅಳ್ವೇಕೋಡಿ ಕಡಲ ತೀರದಲ್ಲಿ ಭೀಕರ ದುರಂತ: ಚಿಪ್ಪೆಕಲ್ಲು ತರಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ
ವಡಗಟ್ಟಾ ಗಾವಠಾಣ ಒತ್ತುವರಿ ತೆರವು ಕಾರ್ಯ ಶುರು..! ಬೇಕಾಬಿಟ್ಟಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ಶಾಕ್
ಪಿಐ ರಂಗನಾಥ್ ನೀಲಮ್ಮನವರ್ ಟ್ರಾನ್ಸಫರ್, ರಮೇಶ್ ಹನಾಪುರ ಮುಂಡಗೋಡಿನ ನೂತನ ಪಿಐ..!
ಹುನಗುಂದದಲ್ಲಿ ಮಳೆಗಾಳಿಗೆ ಹಾರಿಹೋದ ಮನೆಯ ಮೇಲ್ಚಾವಣಿಗಳು..! ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು..!
ಧರ್ಮಾ ಜಲಾಶಯದ ಕಾಲುವೆಯಲ್ಲಿ ಇಬ್ಬರು ಸಹೋದರ ಬಾಲಕರು ನೀರುಪಾಲು..! ರಜೆಗೆ ಬಂದಿದ್ದವರು ಹೆಣವಾದರು..!
ಮುಂಡಗೋಡ, ಕುಸೂರಿನ 29 ವರ್ಷದ ಸಿವಿಲ್ ಇಂಜಿನಿಯರಿಂಗ್ ಪದವೀಧರ ಯುವಕ ನಾಪತ್ತೆ, ದೂರು ದಾಖಲು..!
ಮುಂಡಗೋಡಿನಲ್ಲಿ ಇಂದು ಶಾಸಕ ಭೀಮಣ್ಣ ನಾಯ್ಕ್ ನೇತೃತ್ವದಲ್ಲಿ, ಕಾಂಗ್ರೆಸ್ನಿಂದ ಎಸ್ಐಆರ್ (SIR) ಕುರಿತು ವಿಶೇಷ ಸಭೆ..!
ವೋಟರ್ ಲಿಸ್ಟ್ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚಿಸಲು ಮುಂಡಗೋಡ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು (ಮಂಗಳವಾರ, ಜೂನ್ 30) ಮಧ್ಯಾಹ್ನ 2 ಗಂಟೆಗೆ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ. ಮುಂಡಗೋಡ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರಿನ ಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಈ ಸಭೆ ನಡೆಯಲಿದೆ. ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಈ ಸಭೆಯನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್. ಪಾಟೀಲ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಡ್ಡಾಯ ಹಾಜರಾತಿಗೆ ಮನವಿ..! ವೋಟರ್ ಲಿಸ್ಟ್ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಮಾರ್ಗದರ್ಶನ ನೀಡುವ ಉದ್ದೇಶದಿಂದ ಆಯೋಜಿಸಿರುವ ಈ ಸಭೆಗೆ ಮುಂಡಗೋಡ ತಾಲೂಕಿನ 16 ಗ್ರಾಮ ಪಂಚಾಯಿತಿಗಳು ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 91 ಬೂತ್ಗಳ ಬೂತ್ ಲೆವೆಲ್ ಏಜೆಂಟರುಗಳು (BLA), ತಾಲೂಕು ಮುಖಂಡರು, ಘಟಕ ಸಮಿತಿ ಅಧ್ಯಕ್ಷರು...
ಮುಂದಿನ 6 ದಿನಗಳ ಕಾಲ ಉತ್ತರ ಕನ್ನಡ ಸೇರಿ, ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ..!
ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ (ಜೂನ್ 29 ರಿಂದ ಜುಲೈ 05, 2026 ರವರೆಗೆ) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯಲ್ಲಿ ಭಾರೀ ಮಳೆ..! ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಜೂನ್ 30 ರಿಂದ ಜುಲೈ 5 ರವರೆಗೆ ಅತಿ ಭಾರೀ ಮಳೆಯಾಗುವ (Very heavy rain) ಸಾಧ್ಯತೆಯಿದೆ. ಜೂನ್ 29 ರಂದು ಕರಾವಳಿಯ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸಲಿದೆ. ಉತ್ತರ ಒಳನಾಡು..! ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಜುಲೈ 1 ರಿಂದ ಜುಲೈ 5 ರವರೆಗೆ ಒಂದೆರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ 29 ಮತ್ತು 30 ರಂದು ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ...
ಜೋಗೇಶ್ವರಹಳ್ಳ ಶಾಲೆ ಆವರಣದಲ್ಲಿ ಯುವಕನ ಸಾವು ಕೇಸ್; ಸ್ಥಳಕ್ಕೆ BEO ಭೇಟಿ, ಕಟ್ಟು ನಿಟ್ಟಿನ ಕ್ರಮ..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!!
ಮುಂಡಗೋಡ ತಾಲೂಕಿನ ಜೋಗೇಶ್ವರಹಳ್ಳ ಗೌಳಿ ದಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿನ್ನೆ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ‘ಪಬ್ಲಿಕ್ ಫಸ್ಟ್ ನ್ಯೂಸ್’ ಪ್ರಕಟಿಸಿದ ವಿಶೇಷ ವರದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ತಕ್ಷಣವೇ ಸ್ಪಂದಿಸಿದ್ದಾರೆ. ಇಂದು ಶಾಲೆಗೆ ಖುದ್ದಾಗಿ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ವಿದ್ಯುತ್ ಟ್ರಾನ್ಸ್ಫಾರ್ಮರ್ ತೆರವುಗೊಳಿಸಲು ಸೂಚನೆ..! ಶಾಲಾ ಆವರಣದ ಪಕ್ಕದಲ್ಲೇ ಅಪಾಯಕಾರಿಯಾಗಿರುವ ಹೈಟೆನ್ಷನ್ ಟ್ರಾನ್ಸ್ಫಾರ್ಮರ್ ಇರುವುದನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅದನ್ನು ತಕ್ಷಣವೇ ಅಲ್ಲಿಂದ ತೆರವುಗೊಳಿಸಿ ಶಾಲೆಯಿಂದ ಸುರಕ್ಷಿತ ದೂರಕ್ಕೆ ವರ್ಗಾಯಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಲು ಶಾಲೆಯ ಮುಖ್ಯ ಶಿಕ್ಷಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಮಕ್ಕಳ ಸುರಕ್ಷತೆಗೆ ತ್ರಿಸೂತ್ರ ಕ್ರಮ..! ಇನ್ನು, ಜೋಗೇಶ್ವರ ಹಳ್ಳ ಗೌಳಿದಡ್ಡಿಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆಗೆ ತ್ರಿಸೂತ್ರ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಬಿಇಒ ಮೇಡಮ್ಮು ಶಿಕ್ಷಕರಿಗೆ ಸೂಚಿಸಿದ್ರು. ಮುಂದಿನ ದಿನಗಳಲ್ಲಿ...
ಮುಂಡಗೋಡಿನ ಇಬ್ಬರಿಗೆ 6 ತಿಂಗಳು ಗಡಿಪಾರು ಮಾಡಿ ಎಸ್ಪಿ ಆದೇಶ, ಓರ್ವ ಕೆಜಿಎಫ್ ಜಿಲ್ಲೆಗೆ, ಮತ್ತೋರ್ವ ಮಂಡ್ಯ ಜಿಲ್ಲೆಗೆ..! ಅಷ್ಟಕ್ಕೂ ಯಾರ್ಯಾರು ಗಡಿಪಾರು..? ಯಾಕೆ..?
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಬ್ಬರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಮಂಜು ಅರ್ಜುನ ನವಲೆ ಹಾಗೂ ಮಧುಸಿಂಗ್ ರಜಪೂತ್ ಎಂಬುವವರನ್ನು ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. ಬರೋಬ್ಬರಿ 6 ತಿಂಗಳುಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಗಡಿಪಾರು ನಂಬರ್ 1. ಮಂಜು ನವಲೆ..! ಸಾರ್ವಜನಿಕ ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಆರೋಪದಡಿ, ಮುಂಡಗೋಡಿನ ಗಾಂಧಿನಗರದ ನಿವಾಸಿ ಮಂಜು ಅರ್ಜುನ ನವಲೆ(30) ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯಿಂದ ಕೆ.ಜಿ.ಎಫ್ ಜಿಲ್ಲೆಗೆ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಮಂಜು ನವಲೆ ವಿರುದ್ಧ ಇದ್ದ ಕೇಸ್ ಗಳು..! ವೃತ್ತಿಯಿಂದ ಡ್ರೈವರ್ ಆಗಿರುವ ಮಂಜು ನವಲೆ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದು ಅದನ್ನೇಲ್ಲ ಗಮನಿಸಿ ಸದ್ಯ ಗಡಿಪಾರಿಗೆ ಆದೇಶಿಸಲಾಗಿದೆ. ಈತನ ಮೇಲಿದ್ದ ಪ್ರಕರಣಗಳು ಈ ಕೆಳಗಿನಂತಿವೆ. 1. 2019 ರಲ್ಲಿ: ಕಲಂ 395, 397, 201...
ಮುಂಡಗೋಡ ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಬಲಿ..? ದೇವರಿಗಂತ ಹೂವು ಕೀಳಲು ಹೋದ ಪೂಜಾರಿ ಹೆಣವಾದ..! ಶಾಲಾ ಆವರಣದ ಬೇಲಿಯಲ್ಲೇ ವಿದ್ಯುತ್..!
ಮುಂಡಗೋಡ ತಾಲೂಕಿನ ಜೋಗೀಶ್ವರ ಹಳ್ಳ ಗೌಳಿದಡ್ಡಿಯಲ್ಲಿ ಮುಂಡಗೋಡ ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಬಲಿಯಾದ್ನಾ..? ಅನ್ನೋ ಪ್ರಶ್ನೆ ಮೂಡಿದೆ. ಹೂವು ಕೀಳಲು ಶಾಲಾ ಆವರಣಕ್ಕೆ ಹೋದವನು ಹೆಣವಾಗಿದ್ದಾನೆ. ಕಿರಿಯ ಪ್ರಾಥಮಿಕ ಶಾಲೆಯ ತಂತಿ ಬೇಲಿ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅಂತಾ ಗ್ರಾಮಸ್ಥರು ಹೇಳ್ತಿದಾರೆ. ಅರ್ಥಾತ್, ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲೇ ಘಟನೆ ನಡೆದಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ಜೋಗೇಶ್ವರ ಹಳ್ಳ ಗೌಳಿ ದಡ್ಡಿಯ ಈಶ್ವರ ದೇವಸ್ಥಾನದ ಪೂಜಾರಿ, ಜಾನು ಸಾವು ಕೋಕರೆ (26) ಎಂಬುವವನೇ ದುರಂತ ಅಂತ್ಯ ಕಂಡಿದ್ದು, ಈತನ ಸಾವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಶಾಲಾ ಆವರಣದಲ್ಲೇ ಘಟನೆ..! ಅಸಲು, ಈ ಗೌಳಿದಡ್ಡಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ, ಜೊತೆಗೆ ಅದರ ಪಕ್ಕದಲ್ಲೇ ಅಂಗನವಾಡಿಯೂ ಇದೆ. ನಾಳೆ ಸೋಮವಾರ ಹುಣ್ಣಿಮೆ ಇರೋ ಕಾರಣಕ್ಕೆ ದೇವರ ಪೂಜೆಗೆ ಅಂತಾ ಹೂವು ಕೀಳಲು ಹೋಗಿದ್ದ ಯುವಕ. ತಂತಿ ಬೇಲಿಯ ಮೇಲೆ ಪೊಗದಸ್ತಾಗಿ ಅರಳಿ ನಿಂತಿದ್ದ ಹೂವುಗಳನ್ನು ಕೀಳಲು ಕೈ...
ಉತ್ತರ ಕನ್ನಡ ಸೇರಿ ರಾಜ್ಯದ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಗಾಳಿ-ಮಳೆ ಮುನ್ಸೂಚನೆ: ಹವಾಮಾನ ಇಲಾಖೆ ಎಚ್ಚರಿಕೆ..!
ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಒಟ್ಟು 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಭಾರತ ಹವಾಮಾನ ಕೇಂದ್ರ (IMD) ಮುನ್ನೆಚ್ಚರಿಕೆ ನೀಡಿದೆ. ಇಂದು (ಜೂನ್ 28, 2026) ಮಧ್ಯಾಹ್ನ 1 ಗಂಟೆಗೆ ಇಲಾಖೆಯು ಈ ‘ನೌಕಾಸ್ಟ್’ (Nowcast) ತುರ್ತು ಹವಾಮಾನ ಬುಲೆಟಿನ್ ಬಿಡುಗಡೆ ಮಾಡಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ? ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮುಂದಿನ 3 ಗಂಟೆಗಳ ಅವಧಿಯಲ್ಲಿ ಈ ಕೆಳಗಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ,ಉಡುಪಿ,ದಕ್ಷಿಣ ಕನ್ನಡ,ಬೀದರ್, ಕಲಬುರಗಿ,ವಿಜಯಪುರ ಜಿಲ್ಲೆಗಳಿಗೆ ಮಳೆಯ ಎಚ್ಚರಿಕೆ ನೀಡಲಾಗಿದೆ. ಹವಾಮಾನದ ಸ್ವರೂಪ ಹೇಗಿರಲಿದೆ? ಈ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆ ಹಾಗೂ ಗುಡುಗಿನ ಜೊತೆಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಜೋರಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಶಿರಸಿ ನಗರ ಠಾಣೆ ಪೊಲೀಸ್ರ ಭರ್ಜರಿ ಕಾರ್ಯಾಚರಣೆ; ಸೆಂಟ್ರಲ್ ಬಸ್ಸ್ಟ್ಯಾಂಡ್ನಲ್ಲಿ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಖತರ್ನಾಕ ಕಳ್ಳಿ ಅಂದರ್..!
ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಹರಿಸಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನ ಶಿರಸಿ ನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತಳಿಂದ ಒಟ್ಟು 9 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೇಗಾಗಿತ್ತು ಕೇಸ್..! ಅಂದಹಾಗೆ, ದಿನಾಂಕ 03-06-2026 ರಂದು ಮಧ್ಯಾಹ್ನ ಸೊರಬ ತಾಲೂಕಿನ ಚಂದ್ರಗುತ್ತಿ ನಿವಾಸಿ ಶ್ರೀಮತಿ ಸವಿತಾ ಎಂಬುವವರು ತಮ್ಮ ಅಕ್ಕ ನಾಗರತ್ನ ಅವರಿಗೆ ಶಿರಸಿ-ಬನವಾಸಿ ಬಸ್ ಹತ್ತಿಸಲು ಶಿರಸಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಜನಜಂಗುಳಿಯ ಲಾಭ ಪಡೆದ ಕಳ್ಳರು, ಸವಿತಾ ಅವರ ವ್ಯಾನಿಟಿ ಬ್ಯಾಗ್ನ ಜಿಪ್ ತೆಗೆದು ಅದರಲ್ಲಿದ್ದ ಸ್ಟೀಲ್ ಬಾಕ್ಸ್ನಿಂದ ಅಂದಾಜು 1 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ, 50 ಸಾವಿರ ರೂ. ಮೌಲ್ಯದ ಚಿನ್ನದ ಕಿವಿ ಬೆಂಡೋಲೆ, ಸರಪಳಿ, ಮಾಟಿ ಹಾಗೂ ನಗದು ಹಣ ಸೇರಿದಂತೆ ಒಟ್ಟು 1...
ಮುಂಡಗೋಡಲ್ಲಿ ಶಿರಸಿ DySp ನೇತೃತ್ವದಲ್ಲಿ ಕಾರ್ಯಾಚರಣೆ| ಮೀಟರ್ ಬಡ್ಡಿ ಕುಳಗಳು, ರೌಡಿ ಶೀಟರಗಳ ಮನೆ ಸರ್ಚಿಂಗ್..! ಅಸಲು ಏನಾಗಿದೆ ಮುಂಡಗೋಡಿಗೆ..?
ಮುಂಡಗೋಡ ತಾಲೂಕಿನಲ್ಲಿ ಅಕ್ಷರಶಃ ಗುಜರಿಗೆ ಸೇರಿದ್ದ ಕಾನೂನು ಸುವ್ಯವಸ್ಥೆ ತಹಬದಿಗೆ ಬರತ್ತಾ..? ಇಲ್ಲಿನ ಪೊಲೀಸ್ ಠಾಣೆಯ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳೇನೋ ಮಿಂಚುತ್ತಿವೆ. ಆದ್ರೆ ಆದರಾಚೆಗೆ ಇಡೀ ತಾಲೂಕಿನಲ್ಲಿ ಸದ್ಯ ಕಾನೂನು ಸುವ್ಯವಸ್ಥೆ ಅನ್ನೋದು ಎಷ್ಟರ ಮಟ್ಟಿಗೆ ಹೊಳೆಯುತ್ತಿದೆ..? ಎಸ್ಪಿ ಸಾಹೇಬರೇ ಉತ್ತರಿಸಬೇಕು..! ಅವೇಲ್ಲ ಸ್ಮೋ”ಕಿಂಗ್” ಅಡ್ಡೆಗಳಾ..? ಅಸಲು, ಮುಂಡಗೋಡಿನಲ್ಲಿ ಹೆಜ್ಜೆಗೊಂದರಂತೆ ತಲೆ ಎತ್ತಿಕೊಂಡಿರೋ ಸಿಗರೇಟ್ ಸ್ಮೋಕಿಂಗ್ ಅಡ್ಡೆಗಳೂ ಸೇರಿದಂತೆ ಅವುಗಳಲ್ಲೆಲ್ಲ ಅದೇನೇನು ನಡೆಯುತ್ತಿದೆ..? ಅಲ್ಲಿ ನಿತ್ಯವೂ ಎಲ್ಲೆಲ್ಲಿಂದ, ಎಂತೆಂಥವರು, ಎಷ್ಟು ಜನ ಬಂದು ಏನೇನು “ಸೇದಿ” ಹೋಗ್ತಿದಾರೆ..? ಅವೇಲ್ಲ ರಾತ್ರಿ ಅದೇಷ್ಟು ಹೊತ್ತು ಎನೇನೆಲ್ಲ ಮಾಡ್ತಿವೆ..? ಯಾರಂದ್ರೆ, ಯಾರಿಗೂ ಗೊತ್ತಿಲ್ಲ…! ಬಹುಶಃ, ಇದೇಲ್ಲವನ್ನು ಅರ್ಥ ಮಾಡಿಕೊಳ್ಳೊಕೆ ನಿಜಕ್ಕೂ ಮುಂಡಗೋಡಿಗೆ ಓರ್ವ ದಕ್ಷ ಖಡಕ್ ಪೊಲೀಸ್ ಅಧಿಕಾರಿಯ ಅವಶ್ಯಕತೆ ಇದೆ ಅಂತಾ ಪ್ರಜ್ಞಾವಂತರು ಹಲಬುತ್ತಿದ್ದಾರೆ. ಆದ್ರೆ ಆ ಭಾಗ್ಯ ಯಾವಾಗ ಅನ್ನೋದೇ ಸದ್ಯದ ಪ್ರಶ್ನೆ..! ನಿಜಕ್ಕೂ ಮುಂಡಗೋಡ ಪೊಲೀಸ್ ಠಾಣೆ ಅಂದ್ರೆ ಇಡೀ ಜಿಲ್ಲೆಯಲ್ಲೇ ಕೆಟ್ಟು ಖರಾಬು ಹೆಸರಾಗಿದೆ. ಹಿರಿಯ...
ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು KSRTC ಅಧಿಕಾರಿಗಳನ್ನು ತೀವ್ರ ತರಾಟೆಗೆ ಪಡೆದಿದ್ದಾರೆ. ಇನ್ನು, ಮಳಗಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯೂಸಿ ವಿದ್ಯಾರ್ಥಿನಿ ಮಂಜುಳಾ ವಿಠ್ಠಲ ಗಾವಡೆ ಎಂಬುವವಳೆ ಗಾಯಗೊಂಡಿರೋ ವಿದ್ಯಾರ್ಥಿನಿಯಾಗಿದ್ದಾಳೆ. ಅಸಲು, ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿಗಳು ಹತ್ತುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿ ಬಸ್ ನಿಂದ ಕೆಳಗೆ ಬಿದ್ದಿದ್ದಾಳೆ. ನಂತರ ಬಸ್ ಆಕೆಯ ಕೈಗೆ ತೆರೆದಿದೆ ಎನ್ನಲಾಗಿದ್ದು, ಕೈಗೆ ಗಾಯ ಆಗಿದೆ ಅಂತಾ ತಿಳಿದು ಬಂದಿದೆ. ಸದ್ಯ ಗಾಯಗೊಂಡಿರೋ ವಿದ್ಯಾರ್ಥಿನಿಯನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿತ್ಯವೂ ಇದೇ ಗೋಳು..! ನಿಜ ಅಂದ್ರೆ, ಮಳಗಿ ಪ್ರೌಢಶಾಲೆ, ಕಾಲೇಜಿಗೆ ವರುವ ಸುತ್ತ ಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಅಕ್ಷರಶಃ ಆತಂಕದಲ್ಲಿದ್ದಾರೆ. ಈ ವಿದ್ಯಾರ್ಥಿಗಳು ನಿತ್ಯವೂ ಬಸ್ ನಲ್ಲಿ ಜೋತು ಬಿದ್ದೇ ಹೋಗುವ...









