ಬಿರು ಬೇಸಿಗೆಯಲ್ಲಿ ನೀರಿಗಾಗಿ ಕಾಡು ಪ್ರಾಣಿಗಳ ಪರದಾಟ, ಕೃತಕ ತೊಟ್ಟಿಗಳಲ್ಲಿ  ನೀರು ಉಣಿಸ್ತಿದೆ ಮುಂಡಗೋಡ ಅರಣ್ಯ ಇಲಾಖೆ..!

ಬಿರು ಬೇಸಿಗೆಯಲ್ಲಿ ನೀರಿಗಾಗಿ ಕಾಡು ಪ್ರಾಣಿಗಳ ಪರದಾಟ, ಕೃತಕ ತೊಟ್ಟಿಗಳಲ್ಲಿ ನೀರು ಉಣಿಸ್ತಿದೆ ಮುಂಡಗೋಡ ಅರಣ್ಯ ಇಲಾಖೆ..!

ಅಸಲು ಬೇಸಿಗೆ ಇನ್ನೂ ಭರ್ತಿಯಾಗಿ ಶುರುವಾಗೇ ಇಲ್ಲ, ಆದ್ರೂ ಕೂಡ ಬಿಸಿಲಿನ ತಾಪ‌ ಅನ್ನೋದು ಜೀವ ಸಂಕುಲವನ್ನೇಲ್ಲ‌ ಬೆವರಾಗಿಸಿ ಬೇಯುವಂತೆ ಮಾಡಿದೆ. ಮುಂಡಗೋಡ ತಾಲೂಕಿನ ಅದೇಷ್ಟೋ ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿಗೆ “ಬರ” ಬಂದೊದಗಿದೆ. ಎಪ್ರಿಲ್ ತಿಂಗಳು ಬಂದ್ರೆ ಇನ್ನೂ ಏನೇನ್ ಕತೆಯಿದೆಯೊ ಗೊತ್ತಿಲ್ಲ, ಪ್ರಸಕ್ತ ವರ್ಷದ ಬೇಸಿಗೆ ಬಹುತೇಕ ಜೀವಜಗತ್ತಿಗೆ ಬವಣೆ ತಂದಿಡುವ ಸಾಧ್ಯತೆಯಿದೆ. ಅದ್ರಲ್ಲೂ, ಕಾಡುಪ್ರಾಣಿ, ಪಕ್ಷಿಗಳ ಗೋಳು ದೇವರಿಗೇ ಪ್ರೀತಿ..! ಭೀಕರ ಬೇಸಿಗೆ, ಜೀವಜಲಕ್ಕಾಗಿ ಪ್ರಾಣಿಗಳ ಪರದಾಟ..! ಸದ್ಯ ನಾಡಿನಲ್ಲಿ ಭೀಕರ ಬೇಸಿಗೆಯಿದೆ. ಪ್ರತೀ ವರ್ಷದ ಬೇಸಿಗೆಯಲ್ಲೂ ಕಾಡು ಪ್ರಾಣಿಗಳು ಜೀವಜಲಕ್ಕಾಗಿ ಪರಿತಪಿಸ್ತವೆ. ಹಾಗೆ ನೋಡಿದ್ರೆ, ಮುಂಡಗೋಡ ತಾಲೂಕಿನ ಬಹುತೇಕ‌ ಕಾಡು ಸದ್ಯ ಒಣ ಒಣ ಒಣಗಿದೆ. ಇಲ್ಲಿ ಕಾಡಿನ ಮದ್ಯೆ ಹಲವು ಕೆರೆಗಳಿವೆ.‌ ಆದ್ರೆ ಅಂತಹ ಕೆರೆಗಳು ಅದ್ಯಾವ ಕಾರಣಕ್ಕೋ ಗೊತ್ತಿಲ್ಲ‌. ಮಳೆಗಾಲ ಮುಗಿದ ಕೆಲವೇ ದಿನಗಳಲ್ಲಿ ಬತ್ತಿ ಹೋಗ್ತಿವೆ. ಹೀಗಾಗಿ, ಕಾಡಿನ ಪ್ರಾಣಿಗಳಿಗೆ ಕುಡಿಯಲು ನೀರು ಅನ್ನೋದು ಸಿಗೋದೇ ಕಷ್ಟಕಷ್ಟವಾಗ್ತಿದೆ. ಈ ಕಾರಣಕ್ಕಾಗಿ ಅದೇಷ್ಟೋ...

ಶಿರಸಿಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಿರಸಿಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಿರಸಿ: ಪರೀಕ್ಷೆಯ ಸಮಯದಲ್ಲಿ ಮೊಬೈಲ್ ವ್ಯಾಮೋಹ ಬಿಟ್ಟು ಓದಿನ ಕಡೆ ಗಮನಹರಿಸುವಂತೆ ಪೋಷಕರು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಿರಸಿ ನಗರದ ಗಣೇಶನಗರದ 15 ವರ್ಷದ ಶುಭಂ ನಾಯ್ಕ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಹೇಳಲಾಗಿದೆ. ವಾರ್ಷಿಕ ಪರೀಕ್ಷೆ ಸನಿಹ ಬಂದರೂ ಬಾಲಕ ಓದಿನತ್ತ ಗಮನಹರಿಸದೆ, ಅತಿಯಾಗಿ ಮೊಬೈಲ್ ಮತ್ತು ಟಿವಿ ನೋಡುತ್ತಿದ್ದ ಎನ್ನಲಾಗಿದೆ. ಗುರುವಾರ ಈತ ಓದುವುದನ್ನು ಬಿಟ್ಟು ಮೊಬೈಲ್ ನೋಡುತ್ತಿರುವುದನ್ನು ಗಮನಿಸಿದ ತಾಯಿ, ಮಗನ ಹಿತದೃಷ್ಟಿಯಿಂದ ಬುದ್ಧಿವಾದ ಹೇಳಿದ್ದರು. ಈ ವೇಳೆ ತಾಯಿ-ಮಗನ ನಡುವೆ ವಾಗ್ವಾದ ನಡೆದಿದ್ದು, ಆತನಿಗೆ ಮೊಬೈಲ್‌ ನೋಡದಂತೆ ನಿರ್ಬಂಧ ಹೇರಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ಬಾಲಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಮಗನ ಅಕಾಲಿಕ ಮರಣದಿಂದ ಪೋಷಕರ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ HPV ಲಸಿಕಾ ಅಭಿಯಾನ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ HPV ಲಸಿಕಾ ಅಭಿಯಾನ..!

ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂದು ಪರಿಗಣಿಸಲಾಗಿದ್ದು, 2022 ವರ್ಷದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ 79,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 34,800 ಸಾವುಗಳು ಇದರಿಂದ ಸಂಭವಿಸುತ್ತಿವೆ. ಗರ್ಭಕಂಠದ ಕ್ಯಾನ್ಸರ್ ಗೆ ಒಳಗಾಗುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ವತಿಯಿದ ಮುನ್ನೆಚ್ಚರಿಕ ಕ್ರಮವಾಗಿ 14 ರಿಂದ 15 ವರ್ಷದೊಳಗಿನ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಹೆಚ್.ಪಿ.ವಿ. ಲಸಿಕೆ ನೀಡುವ (3 ತಿಂಗಳ) ಅಭಿಯಾನವನ್ನು ಆರಂಭಿಸಲು ಸಿದ್ದತೆ ಮಾಡಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ 14 ರಿಂದ 15 ವರ್ಷದೊಳಗಿನ 14,835 ಹೆಣ್ಣುಮಕ್ಕಳಿಗೆ ಉಚಿತವಾಗಿ ಹೆಚ್.ಪಿ.ವಿ. ಲಸಿಕೆ ನೀಡಲು ಗುರಿ ಹೊಂದಲಾಗಿದ್ದು, ಈಗಾಗಲೇ ಜಿಲ್ಲೆಗೆ ಮೊದಲ ಹಂತದಲ್ಲಿ 5,300 ಲಸಿಕೆಗಳು ಆಗಮಿಸಿದ್ದು, ಜಿಲ್ಲೆಗೆ ಅಗತ್ಯವಿರುವಷ್ಟು, ಸಂಖ್ಯೆಯಲ್ಲಿ ಲಸಿಕೆಯನ್ನು ಪೂರೈಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ದವಾಗಿದೆ, ಈ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ...

ಬೊಮ್ಮಾಯಿಯವ್ರೇ ಸಿಎಂ ಆಗಿದ್ರೂ, ಶಿಶುನಾಳ ಶರೀಫರ ಪ್ರಾಧಿಕಾರ ಯಾಕೆ‌ ಮಾಡಲಿಲ್ಲ ನೀವು..? ಶಿಗ್ಗಾವಿಯಲ್ಲಿ ಯಾಸಿರಖಾನ್ ಪಠಾಣ್ ವಾಗ್ದಾಳಿ..!

ಬೊಮ್ಮಾಯಿಯವ್ರೇ ಸಿಎಂ ಆಗಿದ್ರೂ, ಶಿಶುನಾಳ ಶರೀಫರ ಪ್ರಾಧಿಕಾರ ಯಾಕೆ‌ ಮಾಡಲಿಲ್ಲ ನೀವು..? ಶಿಗ್ಗಾವಿಯಲ್ಲಿ ಯಾಸಿರಖಾನ್ ಪಠಾಣ್ ವಾಗ್ದಾಳಿ..!

ಶಿಗ್ಗಾವಿ; ಬಜೆಟ್ ನಲ್ಲಿ ಶಿಶುನಾಳ ಶರೀಫರ ಪ್ರಾಧಿಕಾರ ಘೋಷಣೆ ಹಿನ್ನೆಲೆ, ಶಿಗ್ಗಾವಿಯಲ್ಲಿ ಕೈ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿತ್ತು. ಶಾಸಕ ಯಾಸೀರ್ ಖಾನ್ ಪಠಾಣ್ ನೇತೃತ್ವದಲ್ಲಿ ಪಟ್ಟಣದ ಚನ್ನಮ್ಮ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ರು. ಇದೇ ವೇಳೆ ಮಾತನಾಡಿದ ಶಾಸಕ ಯಾಸಿರಖಾನ್ ಫಠಾಣ, ಬೊಮ್ಮಾಯಿಗೆ ಸವಾಲು ಹಾಕಿದ್ರು, ಬೊಮ್ಮಾಯಿಯವ್ರೇ, ಶಿಶುನಾಳ ಶರೀಫರ ಪ್ರಾಧಿಕಾರ ಯಾಕೆ ಮಾಡಲಿಲ್ಲ ನೀವು..? ನಿಮಗೆ ಕೆಲಸ ಮಾಡಲು ಯಾರಾದರೂ ಕೈ ಹಿಡಿದಿದ್ರಾ..? ನಾನು ಏನಾದರೂ ತರಬೇಕು ಅಂದ್ರೆ 10 ಮಂದಿ ಕಾಲು ಹಿಡಿಬೇಕು.. ಆದ್ರೆ, ನಿಮ್ದು ಹಾಗಲ್ಲ, ನೀವು ದೊಡ್ಡ ಸ್ಥಾನದಲ್ಲಿ ಇದ್ದಿರಲ್ವಾ, ಒಂದು ಸಹಿ ಮಾಡಿದ್ರೆ ಆಗತ್ತಿತ್ತು.. ಹಾಗಿದ್ರೆ ಯಾಕೆ ಮಾಡಲಿಲ್ಲ..? ಬಸವರಾಜ್ ಬೊಮ್ಮಾಯಿ ವೇದಿಕೆಯಲ್ಲಿ ಚರ್ಚೆಗೆ ಬರಲಿ..ನಾನು ದಾಖಲೆಗಳನ್ನ ಕೊಡ್ತೀನಿ,ಅವರು ದಾಖಲೆಗಳನ್ನ ಕೊಡ್ಲಿ.. ನನ್ನ ಕಾಲಾವಧಿಯಲ್ಲಿ ಸಾಮಾನ್ಯ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಆಗಿದೆ. ಚನ್ನಮ್ಮ ಸರ್ಕಲ್ ನಲ್ಲಿ ಅವರು ಬಹಿರಂಗವಾಗಿ ಚರ್ಚೆ ಬರಲಿ. ತಾವು ಅಧಿಕಾರದಲ್ಲಿದ್ದಾಗ ಯಾಕೆ ಬಸ್...

ನಾಳೆ ಶುಕ್ರವಾರ ರಾಜ್ಯ ಬಜೆಟ್, ರಾಜ್ಯದ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ..!

ನಾಳೆ ಶುಕ್ರವಾರ ರಾಜ್ಯ ಬಜೆಟ್, ರಾಜ್ಯದ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ..!

ಬೆಂಗಳೂರು; ಕರ್ನಾಟಕ ಸರ್ಕಾರದ 2026-27 ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮಾರ್ಚ್ 6 ಶುಕ್ರವಾರದಂದು ಮಂಡಿಸಲಿದ್ದಾರೆ. 17ನೇ ಬಾರಿ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಸೃಷ್ಟಿಸಿದ್ದು, ಈ ಬಜೆಟ್ ಮಂಡನೆಯ ನೇರಪ್ರಸಾರವನ್ನು ರಾಜ್ಯದ ಆಯ್ದ ಬಸ್ ನಿಲ್ದಾಣದ ಟಿವಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಿದೆ. ಕರ್ನಾಟಕ ರಾಜ್ಯದ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನಾಂಕ 06 ಮಾರ್ಚ್ 2026ರಂದು ವಿಧಾನಸೌಧದಲ್ಲಿ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ. ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಾದ್ಯಂತ ಇರುವ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇರುವ ತನ್ನ ಡಿಜಿಟಲ್ ಡಿಸ್ಪ್ಲೇ (LED) ಪರದೆಗಳ ಮೂಲಕ ನೇರ ಪ್ರಸಾರ ಮಾಡಲು ಮುಂದಾಗಿದೆ. ವಿಧಾನಸೌಧದಲ್ಲಿ...

ಕೊಳಗಿ ಕಾಡಲ್ಲಿ ಮಳಗಿ ವೃದ್ದೆಯ ಭಯಾನಕ ಮರ್ಡರ್, ಆರೋಪಿ ಹಂತಕ ಆರೆಸ್ಟ್..! ಸಿಕ್ಕೇ ಬಿಡ್ತು ರುಂಡ, ಆರೋಪಿ ಇವನೇ ನೋಡಿ..!

ಕೊಳಗಿ ಕಾಡಲ್ಲಿ ಮಳಗಿ ವೃದ್ದೆಯ ಭಯಾನಕ ಮರ್ಡರ್, ಆರೋಪಿ ಹಂತಕ ಆರೆಸ್ಟ್..! ಸಿಕ್ಕೇ ಬಿಡ್ತು ರುಂಡ, ಆರೋಪಿ ಇವನೇ ನೋಡಿ..!

ಮಳಗಿಯ ಕೊಳಗಿ ಕಾಡಲ್ಲಿ ನಡೆದ ಭಯಾನಕ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ರಾಕ್ಷಸೀ ಹಂತಕನ ಅರೆಸ್ಟ್ ಆಗಿದೆ. ಮುಂಡಗೋಡ ಪೊಲೀಸರ ಜಬರ್ದಸ್ತ್ ಕಾರ್ಯಾಚರಣೆಯಲ್ಲಿ ಆರೋಪಿ ಹಂತಕನ ಹೆಡೆಮುರಿ ಕಟ್ಟಲಾಗಿದೆ‌. ಅಂದಹಾಗೆ, ಆರೋಪಿ ಹಂತಕನ ಹೆಸರು ಕೃಷ್ಣ. ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವನು. ಸದ್ಯ ಮಳಗಿಯ ತನ್ನ ಹೆಂಡತಿ ಮನೆಯಲ್ಲೇ ವಾಸವಿದ್ದವನು. ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಆರೋಪಿಯ ಎಕ್ಸಕ್ಲೂಸಿವ್ ಪೋಟೋ ದೊರೆತಿದೆ. ಆರೋಪಿ ಹಂತಕ ಸಿಕ್ಕಿದ್ದೇ ತಡ, ಹತ್ಯೆಯ ಅಷ್ಟೂ ಹಕೀಕತ್ತುಗಳನ್ನು ಬಾಯಿ ಬಿಟ್ಟಿದ್ದಾನಂತೆ ಹಂತಕ. ಹೀಗಾಗಿ, ರುಂಡ ಕಡಿದು ಅರ್ದಮರ್ದ ಸುಟ್ಟು ಹಾಕಿದ್ದ, ಅದ್ರಲ್ಲಿ ರುಂಡ ಹಾಗೆ ಉಳಿದಿತ್ತು, ಅದನ್ನ ಹಾನಗಲ್ ತಾಲೂಕಿನ ಶಿವಪುರ ಸಮೀಪದ ಕೆರೆಯ ಬಳಿ ಹಾಕಿದ್ದ, ಅದೀಗ ಅಲ್ಲಿನ ಗದ್ದೆಯಲ್ಲಿ ಹತ್ಯೆಗೀಡಾದ ಮಹಿಳೆಯ ತಲೆಬುರುಡೆ ಪತ್ತೆಯಾಗಿದೆ‌. ಆರೋಪಿಯ ಜೊತೆ ಸ್ಥಳ ಪರಿಶೀಲನೆ ವೇಳೆ, ಕೃತ್ಯಕ್ಕೆ ಬಳಸಿರೋ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು, ಆರೋಪಿ ಹಂತಕ ಹತ್ಯೆಗೂ ಮುಂಚೆ ಮೃತ ಶಿವಕ್ಕಳನ್ನು ಬೈಕ್‌ಮೇಲೆ ಸವಾರಿ ಮಾಡಿಸಿದ್ದ...

“ಕೊಳಗಿ”ಯ ಕಾಡಲ್ಲಿ ಹಾಗೆ ಶಿವಕ್ಕನ ರುಂಡ ಕಡಿದಿದ್ದವನು “ಮಳಗಿ”ಯ ಮನೆ ಅಳಿಯ..! ಅವತ್ತು ಮಟಮಟ ಮದ್ಯಾನವೇ ಆಕೆಯನ್ನ ಕೊಚ್ಚಿ ಹಾಕಿದ್ದ ಹಂತಕ..!!

“ಕೊಳಗಿ”ಯ ಕಾಡಲ್ಲಿ ಹಾಗೆ ಶಿವಕ್ಕನ ರುಂಡ ಕಡಿದಿದ್ದವನು “ಮಳಗಿ”ಯ ಮನೆ ಅಳಿಯ..! ಅವತ್ತು ಮಟಮಟ ಮದ್ಯಾನವೇ ಆಕೆಯನ್ನ ಕೊಚ್ಚಿ ಹಾಕಿದ್ದ ಹಂತಕ..!!

ಪ್ರಿಯ ಓದುಗ ದೊರೆಗಳೇ, ಕೊಳಗಿ ಕಾಡಲ್ಲಿ ಸಿಕ್ಕಿದ್ದ ರುಂಡವಿಲ್ಲದ ಬೆತ್ತಲೆ ಶವದ ಕೇಸನ್ನು ಬಯಲು ಮಾಡಿದ್ದಾರೆ ಪೊಲೀಸ್ರು, ಬರೋಬ್ಬರಿ 12 ದಿನಗಳ ನಂತ್ರ ರಾಕ್ಷಸೀ ಹಂತಕನ ಸುಳಿವು ಸಿಕ್ಕಿದೆ. ಹೀಗಾಗಿ, ಬೆನ್ನು ಬಿದ್ದಿರೋ ಖಾಕಿಗಳ ಖಡಕ್ ಏಟಿನಲ್ಲಿ ಇಡೀ ಕೇಸಿನ ರೋಚಕ, ಅಷ್ಟೇ ಭಯಾನಕ ಕೃತ್ಯದ ಅಸಲೀ ರೂಪ ಬಯಲಾಗಿದೆ.  ಅಂದಹಾಗೆ, ಭಯಾನಕ ಹತ್ಯೆ ಕತೆಯ ಮುಂದುವರಿದ ಭಾಗ ಇದು..! ಅಷ್ಟಕ್ಕೂ ಏನದು ಸುಳಿವಿನ “ಮಾತು”..? ಅಸಲು, ಕೊಳಗಿಯಲ್ಲಿ ಮಹಿಳೆಯ ಮರ್ಡರ್ ಕೇಸಿನಲ್ಲಿ ಸಣ್ಣದೊಂದು ಸುಳಿವೂ ಸಿಕ್ಕದೇ, ಇಡೀ ಪೊಲೀಸ್ ಟೀಂ ಹಗಲೂ ರಾತ್ರಿ ಶೋಧ ಕಾರ್ಯದಲ್ಲಿತ್ತು. ಆದ್ರೆ, ಅದೇಷ್ಟೇ ಗುದುಮುರುಗಿ ಹಾಕಿದ್ರೂ ಸಿಗದ ಕ್ಲೂ ಪಾಳಾ ಕ್ರಾಸ್ ನಲ್ಲಿ ಸಿಕ್ಕ ಅದೊಂದು ಮಾತು, ಇಡೀ ಕೇಸಿನ ದಿಕ್ಕನ್ನೇ ಬದಲಾಯಿಸಿತ್ತು. ಅವತ್ತು ಅದೊಂದು “ಬೈಕ್ ನಲ್ಲಿ ಆಯಮ್ಮ ಅದ್ಯಾವನೋ ದಡೀಯನ ಜೊತೆ ಪಾಳಾ ಕಡೆ ಹೋದ್ರು” ಅಂತಾ ನೋಡಿದ್ದವರೊಬ್ಬರು ಪೊಲೀಸ್ರಿಗೆ ಹೇಳ್ತಾರೆ. ಫಿನಿಷ್..! ಮುಂಡಗೋಡ ಪೊಲೀಸ್ರು ಆ ಮಾತಿನಗುಂಟ ಹೆಜ್ಜೆ ಹಾಕ್ತಾರೆ....

ಬಾಚಣಕಿ ಬಳಿ ಟಿಪ್ಪರ್, ಬೈಕ್ ಮುಖಾಮುಕಿ ಡಿಕ್ಕಿ, ಜೇನಮುರಿಯ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಬಾಚಣಕಿ ಬಳಿ ಟಿಪ್ಪರ್, ಬೈಕ್ ಮುಖಾಮುಕಿ ಡಿಕ್ಕಿ, ಜೇನಮುರಿಯ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಹುಬ್ಬಳ್ಳಿ ರಸ್ತೆಯಲ್ಲಿ ಭೀಕರ ಅಫಘಾತವಾಗಿದೆ. ಟಿಪ್ಪರ್ ಹಾಗೂ ಬೈಕ್‌ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಮುಂಡಗೋಡ ತಾಲೂಕಿನ ಜೇನಮುರಿ ಗೌಳಿದಡ್ಡಿಯ ಬಾಬು(50) ಎಂಬುವವನೇ ಅಪಘಾತದಲ್ಲಿ ಸಾವು ಕಂಡಿದ್ದಾನೆ. ಈತ ತನ್ನ ಬೈಕ್ ನಲ್ಲಿ ಬರುತ್ತಿರುವಾಗ, ಟಿಪ್ಪರ್ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊನೆಗೂ ಸಿಕ್ತು ಕೊಳಗಿ ಮರ್ಡರ್ ಕೇಸ್ ಹಂತಕನ ಸುಳಿವು..! ರುಂಡವಿಲ್ಲದ ಬೆತ್ತಲೆ ಶವದ ಭಯಾನಕ ಹತ್ಯೆಯ ಅಸಲೀ ಕಹಾನಿ ಏನ್ ಗೊತ್ತಾ..?

ಕೊನೆಗೂ ಸಿಕ್ತು ಕೊಳಗಿ ಮರ್ಡರ್ ಕೇಸ್ ಹಂತಕನ ಸುಳಿವು..! ರುಂಡವಿಲ್ಲದ ಬೆತ್ತಲೆ ಶವದ ಭಯಾನಕ ಹತ್ಯೆಯ ಅಸಲೀ ಕಹಾನಿ ಏನ್ ಗೊತ್ತಾ..?

ಮಳಗಿ ಸಮೀಪದ ಕೊಳಗಿ ಕಾಡಲ್ಲಿ ಸಿಕ್ಕ ಶಿವಕ್ಕಳ ಭಯಾನಕ ಮರ್ಡರ್ ಕೇಸ್ ಬಹುತೇಕ ಖುಲ್ಲಂ ಖುಲ್ಲಾ ಆಗಿದೆ. ನರರೂಪದ ರಾಕ್ಷಸನೊಬ್ಬನ ರಾಕ್ಷಸೀ‌ಕೃತ್ಯವನ್ನ ಮುಂಡಗೋಡಿನ ಚಾಣಾಕ್ಷ ಪೊಲೀಸರ ಟೀಂ ಅಕ್ಷರಶಃ ಬಯಲು ಮಾಡಿದೆ. ಅಸಲು, ಈ ಮರ್ಡರ್ ಕೇಸ್ ಬೆನ್ನತ್ತಿ ಹೋದ ಪೊಲೀಸರೇ ಬೆಕ್ಕಸ ಬೆರಗಾಗಿ ಬೆವರಿದ್ದಾರೆ.. ಯಾಕಂದ್ರೆ, ಈಗ ಮಳಗಿಯ ಶಿವಕ್ಕಳನ್ನು ಕೊಂದ ರಾಕ್ಷಸನ ಹಿಸ್ಟರಿಯೇ ಹಾಗಿದೆ. ಭೀಕರ ಹತ್ಯೆ ಮಾಡಿ ಏನೂ ನಡದೇ ಇಲ್ಲವೆಂಬಂತೆ ಓಡಾಡಿಕೊಂಡಿದ್ದ ಫ್ರೋಪೆಶನಲ್ ಕಿಲ್ಲರ್ ಆಗಿದ್ದ ಆತನ ಹಿಸ್ಟರಿಯೇ ಭಯಾನಕವಂತೆ.. ನಿಜ ಮುಂಡಗೋಡಿನ ಪಿಐ ರಂಗನಾಥ್ ನೀಲಮ್ಮನವರ್ ಟೀಂ ಇಲ್ಲಿ ಭರ್ಜರಿ ಕಾರ್ಯ ಮಾಡಿದೆ. ಅಂದಹಾಗೆ,ಅವಳ ಹೆಸರು ಶಿವಕ್ಕ..! ಅದು ಫೆ.20 ನೇ ತಾರೀಖು ಶುಕ್ರವಾರ ಸಂಜೆ ಮಳಗಿ ಸಮೀಪದ ಕೊಳಗಿ ಕಾಡಲ್ಲಿ, ರುಂಡವಿಲ್ಲದ ಮಹಿಳೆಯ ಬೆತ್ತಲೆ ಶವ ಪತ್ತೆಯಾಗಿತ್ತು. ಆ ಹೊತ್ತಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಮುಂಡಗೋಡ ಪೊಲೀಸ್ರು, ಅದೊಂದು “ಭಯಾನಕ ಮರ್ಡರ್” ಅಂತಲೇ ಕೇಸು ದಾಖಲಿಸಿಕೊಂಡು, ತನಿಖೆಗಿಳಿದಿದ್ರು. ಅವತ್ತು ಪೊಲೀಸ್ರಿಗೆ ಕೊಲೆಗಾರನ ಪತ್ತೆ...

ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಆಹಾರ ವಿತರಣೆ: ಅಧಿಕಾರಿಗಳನ್ನು ತೀವ್ರ ತರಾಟೆಗೆ ಪಡೆದ ಡಾ.ಹೆಚ್.ಕೃಷ್ಣ

ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಆಹಾರ ವಿತರಣೆ: ಅಧಿಕಾರಿಗಳನ್ನು ತೀವ್ರ ತರಾಟೆಗೆ ಪಡೆದ ಡಾ.ಹೆಚ್.ಕೃಷ್ಣ

ಕಾರವಾರ; ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಪ್ರತಿದಿನದ ಮೆನು ಪ್ರಕಾರ ಗುಣಮಟ್ಟದ ಮತ್ತು ಶುಚಿಯಾದ ಆಹಾರ ವಿತರಿಸುವಂತೆ ಮತ್ತು ಕಳಪೆ ಆಹಾರವನ್ನು ಸರಬರಾಜು ಮಾಡುವ ಗುತ್ತಿಗೆದಾರರನ್ನು ಬದಲಾಯಿಸುವಂತೆ ಕ್ರಿಮ್ಸ್ ನ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್. ಕೃಷ್ಣ ಸೂಚನೆ ನೀಡಿದರು. ಅವರು ಮಂಗಳವಾರ ಕ್ರಿಮ್ಸ್ ಗೆ ಭೇಟಿ ನೀಡಿ ರೋಗಿಗಳಿಗೆ ವಿತರಿಸುವ ಆಹಾರದ ಪರಿಶೀಲನೆ ನಡೆಸಿ ಮಾತನಾಡಿದರು. ಕ್ರಿಮ್ಸ್ ನ ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿದ ಅವರು ರೋಗಿಗಳಿಗೆ ಮೆನು ಪ್ರಕಾರ ಇಂದು ಮೊಟ್ಟೆ ವಿತರಿಸಬೇಕಾಗಿದ್ದು, ಮೊಟ್ಟೆ ವಿತರಿಸದ ಕುರಿತು ಗರಂ ಆದ ಅವರು, ಅತ್ಯಂತ ಚಿಕ್ಕ ಕೊಠಡಿಯಲ್ಲಿ ಆಹಾರವನ್ನು ಸಿದ್ದಪಡಿಸುತ್ತಿದ್ದು, ಈ ಪ್ರದೇಶದಲ್ಲಿ ಸ್ವಚ್ಚತೆಯ ಕೊರತೆಯೂ ಇರುವುದನ್ನು ಗಮನಿಸಿದ ಅವರು ಆಹಾರ ತಯಾರಿಕಾ ಸ್ಥಳವನ್ನು ಆದಷ್ಟು ಶೀಘ್ರದಲ್ಲಿ ಸ್ಥಳಾಂತರಿಸುವಂತೆ ಮತ್ತು ಆಹಾರ ತಯಾರಿಕಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆಯನ್ನು ಒದಗಿಸುವಂತೆ ಸೂಚಿಸಿದರು. ಚಪಾತಿ ತಿನ್ನಲು ಯೋಗ್ಯವಿಲ್ಲ..! ನಂತರ ಆಸ್ಪತ್ರೆಯ ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿದ ಅವರು,...