ಆರೋಗ್ಯ ಸಚಿವ ಯು.ಟಿ.ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಸವಾರ ಗಂಭೀರ..!

ಆರೋಗ್ಯ ಸಚಿವ ಯು.ಟಿ.ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಸವಾರ ಗಂಭೀರ..!

ಅಂಕೋಲಾ: ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಾಲೂಕಿನ ವರದರಾಜ್ ಹೋಟೆಲ್ ಸಮೀಪ ನಡೆದಿದೆ. ಕಾರವಾರದಿಂದ ಉಡುಪಿ ಕಡೆಗೆ ಆರೋಗ್ಯ ಸಚಿವರನ್ನು ಎಸ್ಕಾರ್ಟ್ ಮಾಡಿಕೊಂಡು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟಿ ಸವಾರ, ಅಲಗೇರಿ ಮೂಲದ ಸಂದೀಪ್ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಸಚಿವ ಯು.ಟಿ. ಖಾದರ್ ಅವರು ವಾಹನ ನಿಲ್ಲಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ, ಅವರನ್ನು ತಕ್ಷಣ ಅಂಕೋಲ ಪಟ್ಟಣದ ಆರ್ಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿದರು. ಗಾಯಾಳುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನೆ: ಸಚಿವ ಯು. ಟಿ. ಖಾದರ್ ಅಧ್ಯಕ್ಷತೆಯಲ್ಲಿ ಸಭೆ..! ಏನೇಲ್ಲಾ ಚರ್ಚೆ ಆಯ್ತು ಗೊತ್ತಾ..?

ಉತ್ತರ ಕನ್ನಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನೆ: ಸಚಿವ ಯು. ಟಿ. ಖಾದರ್ ಅಧ್ಯಕ್ಷತೆಯಲ್ಲಿ ಸಭೆ..! ಏನೇಲ್ಲಾ ಚರ್ಚೆ ಆಯ್ತು ಗೊತ್ತಾ..?

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವಸಿದ್ಧತೆಗಳು ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಹತ್ವದ ಪರಿಶೀಲನಾ ಸಭೆ ಜರುಗಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವ ಯು. ಟಿ ಖಾದರ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ​ಸಭೆಯಲ್ಲಿ ಜಿಲ್ಲೆಯ ಮಳೆ ಪ್ರಮಾಣ, ಜಲಾಶಯಗಳ ನೀರಿನ ಮಟ್ಟ, ಕುಡಿಯುವ ನೀರಿನ ಸ್ಥಿತಿ ಹಾಗೂ ವಿಪತ್ತು ಎದುರಿಸಲು ಕೈಗೊಳ್ಳಲಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ​ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ..! ​ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ವರದಿಯ ಪ್ರಕಾರ, ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆ ಕಂಡುಬಂದಿದೆ. ಜೂನ್ 1ರಿಂದ ಜುಲೈ 3ರ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 499.1 ಮಿ.ಮೀ ಮಳೆಯಾಗಿದ್ದು, ಇದು ವಾಡಿಕೆ ಮಳೆಗಿಂತ (796.7 ಮಿ.ಮೀ) ಶೇಕಡಾ 37ರಷ್ಟು ಕಡಿಮೆಯಾಗಿದೆ. ಅದೇ ರೀತಿ ಜನವರಿ 1ರಿಂದ ಜುಲೈ...

ಕುಮಟಾ ತಾಲೂಕು ಆಸ್ಪತ್ರೆಗೆ ಆರೋಗ್ಯ ಸಚಿವ ಯು. ಟಿ. ಖಾದರ್ ಭೇಟಿ: ವ್ಯವಸ್ಥೆಗಳ ಸಮಗ್ರ ಪರಿಶೀಲನೆ

ಕುಮಟಾ ತಾಲೂಕು ಆಸ್ಪತ್ರೆಗೆ ಆರೋಗ್ಯ ಸಚಿವ ಯು. ಟಿ. ಖಾದರ್ ಭೇಟಿ: ವ್ಯವಸ್ಥೆಗಳ ಸಮಗ್ರ ಪರಿಶೀಲನೆ

ಕುಮಟಾ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಹಾಲಿ ವ್ಯವಸ್ಥೆ ಹಾಗೂ ಪ್ರಗತಿ ಕಾರ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು. ​ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಸಚಿವರು, ರೋಗಿಗಳಿಗೆ ಸಿಗುತ್ತಿರುವ ಚಿಕಿತ್ಸೆ, ಔಷಧಗಳ ಲಭ್ಯತೆ ಮತ್ತು ಆಸ್ಪತ್ರೆಯ ಸ್ವಚ್ಛತೆಯನ್ನು ಖುದ್ದಾಗಿ ವೀಕ್ಷಿಸಿದರು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು ಮತ್ತು ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ​ಪ್ರಮುಖರ ಉಪಸ್ಥಿತಿ..! ಸಚಿವರ ಈ ಭೇಟಿಯ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ್ ಶೆಟ್ಟಿ, ಭಟ್ಕಳ ಶಾಸಕ ಮಂಕಾಳ ವೈದ್ಯ ಹಾಗೂ ಕುಮಟಾದ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರು ಉಪಸ್ಥಿತರಿದ್ದು, ಆಸ್ಪತ್ರೆಯ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಸಿಬ್ಬಂದಿ ಕೊರತೆಯ ಕುರಿತು ಸಚಿವರ ಗಮನ ಸೆಳೆದರು. ​ಸ್ಥಳೀಯ...

ಭಾರಿ ಮಳೆ ಹಿನ್ನೆಲೆ ಉತ್ತರ ಕನ್ನಡದ ಈ ತಾಲೂಕಿನಲ್ಲಿ ಇಂದು, ಶಾಲೆಗಳಿಗೆ ರಜೆ ಘೋಷಣೆ..!

ಭಾರಿ ಮಳೆ ಹಿನ್ನೆಲೆ ಉತ್ತರ ಕನ್ನಡದ ಈ ತಾಲೂಕಿನಲ್ಲಿ ಇಂದು, ಶಾಲೆಗಳಿಗೆ ರಜೆ ಘೋಷಣೆ..!

ಕಾರವಾರ: ತಾಲೂಕಿನಾದ್ಯಂತ ಇಂದು (ಜುಲೈ 2, 2026) ಬೆಳಗ್ಗಿನಿಂದಲೇ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರವಾರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಆದೇಶ ಹೊರಡಿಸಿದ್ದಾರೆ. ​ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ತುರ್ತು ನಿರ್ಧಾರ ಕೈಗೊಳ್ಳಲಾಗಿದೆ. ​ಕಲಿಕಾ ದಿನಗಳ ಸರಿದೂಗಿಸಲು ಸೂಚನೆ..! ಇಂದು ನೀಡಲಾಗಿರುವ ರಜಾವಧಿಯಿಂದಾಗಿ ಉಂಟಾಗುವ ಪಠ್ಯಪ್ರವಚನಗಳ ಕೊರತೆಯನ್ನು ನೀಗಿಸಲು, ಮುಂದಿನ ದಿನಗಳಲ್ಲಿ (ಶನಿವಾರ ಪೂರ್ಣ ದಿನ ಅಥವಾ ಇತರೆ ರಜಾ ದಿನಗಳಂದು) ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಕಲಿಕಾ ದಿನಗಳನ್ನು ಸರಿದೂಗಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣ ಕಟ್ಟಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳೇ ಗಮನಿಸಿ..! ಕಟ್ಟಿದ ಹಣ ವಾಪಸ್ ಬೇಕಾ..? ಹೀಗೆ ಮಾಡಿ..!

ಹಣ ಕಟ್ಟಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳೇ ಗಮನಿಸಿ..! ಕಟ್ಟಿದ ಹಣ ವಾಪಸ್ ಬೇಕಾ..? ಹೀಗೆ ಮಾಡಿ..!

ಕಾರವಾರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಆದೇಶಿಸಿರುವ ಸರ್ಕಾರ, ಈಗಾಗಲೇ ಹಣ ಪಾವತಿಸಿ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಆ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲು ಹಸಿರು ನಿಶಾನೆ ನೀಡಿದೆ. ಈಗಾಗಲೇ ಸೇವಾಸಿಂಧು ಪೋರ್ಟಲ್ ಮೂಲಕ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳು, ತಮ್ಮ ಹಣವನ್ನು ವಾಪಸ್ ಪಡೆಯಲು ಯಾವುದೇ ಸಾರಿಗೆ ಕಚೇರಿ ಅಥವಾ ಕೌಂಟರ್‌ಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ಬದಲಿಗೆ, ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಹಣವನ್ನು ಮರುಪಾವತಿ ಮಾಡಿಕೊಳ್ಳಬಹುದು. ಹಣ ವಾಪಸ್ ಪಡೆಯುವುದು ಹೇಗೆ..? ವಿದ್ಯಾರ್ಥಿಗಳು ಸರ್ಕಾರದ ಅಧಿಕೃತ ಸೇವಾಸಿಂಧು ಪೋರ್ಟಲ್ ಲಿಂಕ್ https://sevasindhuservices.karnataka.gov.in/buspassservices/ ಗೆ ಭೇಟಿ ನೀಡಿ, ಅಲ್ಲಿ ನೀಡಿರುವ ಲಿಂಕ್ ಮೂಲಕ ತಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ (OTP) ನಮೂದಿಸಿ ಅರ್ಜಿ...

ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಿಗೆ ಮುಂದಿನ 2 ದಿನ ಭಾರೀ ಮಳೆ, ‘ರೆಡ್ ಅಲರ್ಟ್’ ಘೋಷಣೆ..!

ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಿಗೆ ಮುಂದಿನ 2 ದಿನ ಭಾರೀ ಮಳೆ, ‘ರೆಡ್ ಅಲರ್ಟ್’ ಘೋಷಣೆ..!

ಬೆಂಗಳೂರು ಹವಾಮಾನ ಕೇಂದ್ರದ ಅಧಿಕೃತ ವರದಿಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಅತ್ಯಂತ ಜಾಗರೂಕರಾಗಿರಲು ಸೂಚಿಸಲಾಗಿದೆ. ಕರಾವಳಿಗೆ ರೆಡ್ ಅಲರ್ಟ್..! ​ಮುಂದಿನ 2 ದಿನಗಳ ಕಾಲ ಕರಾವಳಿಯ ಉತ್ತರ ಕನ್ನಡ, ​ಉಡುಪಿ ಹಾಗೂ ​ದಕ್ಷಿಣ ಕನ್ನಡ ಸೇರಿ ಮೂರು ಪ್ರಮುಖ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಭಾಗಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ (>204.5mm) ಸಾಧ್ಯತೆ ಇದೆ. ​ಉತ್ತರ ಕನ್ನಡ, ​ಉಡುಪಿ ಹಾಗೂ ​ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಯಲ್ಲೋ ಅಲರ್ಟ್..! ಬೆಳಗಾವಿ, ಧಾರವಾಡ, ಹಾವೇರಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಸೇರಿದಂತೆ ​ಮಲೆನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಜಾಗೃತರಾಗಿರಲು ತಿಳಿಸಲಾಗಿದೆ. ಭಾರೀ ಗಾಳಿ ಮಳೆ..! ಭಾರಿ ಮಳೆಯ ಜೊತೆಗೆ ಕರಾವಳಿ ತೀರದಲ್ಲಿ ಗಂಟೆಗೆ 40 ರಿಂದ 60 ಕಿಮೀ ವೇಗದಲ್ಲಿ ಬಲವಾದ ಗಾಳಿ...

ಮುಂಡಗೋಡ ಠಾಣೆಗೆ ಪಿಎಸ್ಐ ಬಸವರಾಜ್ ಮಬನೂರು ರೀ ಎಂಟ್ರಿಯಂತೆ..? ಕ್ರೈಂ ಪಿಎಸ್ಐ ಆಗಿ ಮತ್ತೆ ಬರ್ತಿದ್ದಾರಂತೆ ಹೌದಾ..?

ಮುಂಡಗೋಡ ಠಾಣೆಗೆ ಪಿಎಸ್ಐ ಬಸವರಾಜ್ ಮಬನೂರು ರೀ ಎಂಟ್ರಿಯಂತೆ..? ಕ್ರೈಂ ಪಿಎಸ್ಐ ಆಗಿ ಮತ್ತೆ ಬರ್ತಿದ್ದಾರಂತೆ ಹೌದಾ..?

ಹಳಿಯಾಳದ ರೌಡಿಶೀಟರ್ ಮಚ್ಚ ಮಂಜನ ಲೈವ್ ಆ್ಯಂಡ್ ಲೈವ್ “ದಾದಾ”ಗಿರಿ ಕೇಸಲ್ಲಿ, ಅನಾಮತ್ತಾಗಿ ಅಮಾನತ್ತುಗೊಂಡಿದ್ದ ಪಿಎಸ್ಐ ಬಸವರಾಜ್ ಮಬನೂರು ಮರಳಿ ಮುಂಡಗೋಡ ಠಾಣೆಗೆ ಬರ್ತಿದಾರಾ..? ಇಂತಹದ್ದೊಂದು ರೂಮರ್ರು ಜಿಲ್ಲೆಯ ಖಾಕಿ ವಲಯದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡ್ತಿದೆ. ಅಸಲು, ಮುಂಡಗೋಡಿನ ಕ್ರೈಂ ಪಿಎಸ್ಐ ಆಗಿ ಹೊಸ ಜವಾಬ್ದಾರಿಯ ಜೊತೆ ಬಸವರಾಜ್ ರೀ ಎಂಟ್ರಿ ಕೊಡ್ತಿದಾರೆ ಅನ್ನೊ ಮಾತು ಕೇಳಿ ಬರ್ತಿದೆ. ಅದಕ್ಕಾಗಿ, ಏನೇಲ್ಲ‌ ವ್ಯವಸ್ತೆ ಬೇಕೊ ಅದೇಲ್ಲ ತನ್ನಷ್ಟಕ್ಕೆ ತಾನೇ ನಡೆದು ಹೋಗ್ತಿದೆಯಂತೆ. ದೊಡ್ಡವರ “ಕೈ” ಬಲದಲ್ಲಿ ಇದೇಲ್ಲ ಜಸ್ಟ್ “ಪಾಸ್” ಆಗ್ತಿದೆಯಂತೆ. ಮುಂಡಗೋಡ to ಹಳಿಯಾಳ..? ಆದ್ರೆ, ಸದ್ಯ ಮುಂಡಗೋಡ ಠಾಣೆಗೆ ಕ್ರೈಂ ಪಿಎಸ್ಐ ಆಗಿ ವಿನೋದ್ ರೆಡ್ಡಿ ಇದ್ದಾರೆ. ಅಸಲು, ರೆಡ್ಡಿಯವರು ಮುಂಡಗೋಡಿಗೆ ಕಾಲಿಟ್ಟ ಎರಡೇ ಎರಡು ತಿಂಗಳಲ್ಲಿ ಧರ್ಮಸ್ಥಳದ ಕೇಸಿನ SIT ತನಿಖಾ ತಂಡದಲ್ಲಿ ನಿಯೋಜನೆಗೊಂಡಿದ್ದರು, ಅಲ್ಲಿಂದ ಇಲ್ಲಿವರೆಗೂ ಅವ್ರು SIT ಕಾರ್ಯದಲ್ಲೇ ಇದ್ದಾರೆ. ಬಹುಶಃ ಸದ್ಯದ ರೂಮರ್ರು ನಿಜವಾದ್ರೆ ವಿನೋದ್ ರೆಡ್ಡಿ ಸಾಹೇಬ್ರು, ಮುಂಡಗೋಡಿನಿಂದ ಅದ್ಯಾವ ಠಾಣೆಗೆ ಹೋಗಿ...

ಮುಂಡಗೋಡ, ಕುಸೂರಿನ 29 ವರ್ಷದ ಸಿವಿಲ್ ಇಂಜಿನಿಯರಿಂಗ್ ಪದವೀಧರ ಯುವಕ ನಾಪತ್ತೆ, ದೂರು ದಾಖಲು..!

ಮುಂಡಗೋಡ, ಕುಸೂರಿನ 29 ವರ್ಷದ ಸಿವಿಲ್ ಇಂಜಿನಿಯರಿಂಗ್ ಪದವೀಧರ ಯುವಕ ನಾಪತ್ತೆ, ದೂರು ದಾಖಲು..!

ಮುಂಡಗೋಡ ತಾಲೂಕಿನ ಕುಸೂರು ಗ್ರಾಮದ ಕಿರಣ್ ಇಂದ್ರಜಿತ್ ರಾಠೋಡ್ (29) ಎಂಬ ಯುವಕ ಕಳೆದ ಜೂನ್ 8 ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ​ಅಷ್ಟಕ್ಕೂ ಏನಾಯ್ತು..? ನಾಪತ್ತೆಯಾದ ಕಿರಣ್ ರಾಠೋಡ್ 2019 ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಸೂಕ್ತ ಸಂಬಳ ಸಿಗದ ಕಾರಣ ಕಳೆದ ಮೂರು ತಿಂಗಳ ಹಿಂದೆ ಕೆಲಸ ಬಿಟ್ಟು ಸ್ವಗ್ರಾಮ ಕುಸೂರಿಗೆ ಮರಳಿದ್ದ. ಇತ್ತೀಚೆಗೆ ಮನೆಯಲ್ಲೇ ಇದ್ದ ಆತ, ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡು ಯಲ್ಲಾಪುರದ ಮ್ಯೂಸಿಕ್ ಅಕಾಡೆಮಿಯೊಂದರಲ್ಲಿ ಗಿಟಾರ್ ನುಡಿಸುವುದನ್ನು ಕಲಿಯುತ್ತಿದ್ದನು. ಅವತ್ತು ಜೂನ್ 8..! ಆದ್ರೆ,​ಕಳೆದ ಜೂನ್ 8ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಯಲ್ಲಾಪುರಕ್ಕೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದ ಕಿರಣ್, ಸಂಜೆಯಾದರೂ ಮನೆಗೆ ಮರಳಿ ಬಂದಿಲ್ಲ. ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಂದೆ ಇಂದ್ರಜಿತ್...

ಮುಂಡಗೋಡಿನಲ್ಲಿ ಇಂದು ಶಾಸಕ ಭೀಮಣ್ಣ ನಾಯ್ಕ್ ನೇತೃತ್ವದಲ್ಲಿ, ಕಾಂಗ್ರೆಸ್‌ನಿಂದ ಎಸ್‌ಐಆರ್ (SIR) ಕುರಿತು ವಿಶೇಷ ಸಭೆ..!

ಮುಂಡಗೋಡಿನಲ್ಲಿ ಇಂದು ಶಾಸಕ ಭೀಮಣ್ಣ ನಾಯ್ಕ್ ನೇತೃತ್ವದಲ್ಲಿ, ಕಾಂಗ್ರೆಸ್‌ನಿಂದ ಎಸ್‌ಐಆರ್ (SIR) ಕುರಿತು ವಿಶೇಷ ಸಭೆ..!

ವೋಟರ್ ಲಿಸ್ಟ್ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚಿಸಲು ಮುಂಡಗೋಡ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು (ಮಂಗಳವಾರ, ಜೂನ್ 30) ಮಧ್ಯಾಹ್ನ 2 ಗಂಟೆಗೆ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ. ಮುಂಡಗೋಡ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರಿನ ಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಈ ಸಭೆ ನಡೆಯಲಿದೆ. ಶಿರಸಿ-ಸಿದ್ದಾಪುರ ​ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಈ ಸಭೆಯನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್. ಪಾಟೀಲ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ​ಕಡ್ಡಾಯ ಹಾಜರಾತಿಗೆ ಮನವಿ..! ವೋಟರ್ ಲಿಸ್ಟ್ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಮಾರ್ಗದರ್ಶನ ನೀಡುವ ಉದ್ದೇಶದಿಂದ ಆಯೋಜಿಸಿರುವ ಈ ಸಭೆಗೆ ಮುಂಡಗೋಡ ತಾಲೂಕಿನ 16 ಗ್ರಾಮ ಪಂಚಾಯಿತಿಗಳು ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 91 ಬೂತ್‌ಗಳ ಬೂತ್ ಲೆವೆಲ್ ಏಜೆಂಟರುಗಳು (BLA), ತಾಲೂಕು ಮುಖಂಡರು, ಘಟಕ ಸಮಿತಿ ಅಧ್ಯಕ್ಷರು...

ಮುಂದಿನ 6 ದಿನಗಳ ಕಾಲ ಉತ್ತರ ಕನ್ನಡ ಸೇರಿ, ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ..!

ಮುಂದಿನ 6 ದಿನಗಳ ಕಾಲ ಉತ್ತರ ಕನ್ನಡ ಸೇರಿ, ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ..!

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ (ಜೂನ್ 29 ರಿಂದ ಜುಲೈ 05, 2026 ರವರೆಗೆ) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯಲ್ಲಿ ಭಾರೀ ಮಳೆ..! ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಜೂನ್ 30 ರಿಂದ ಜುಲೈ 5 ರವರೆಗೆ ಅತಿ ಭಾರೀ ಮಳೆಯಾಗುವ (Very heavy rain) ಸಾಧ್ಯತೆಯಿದೆ. ಜೂನ್ 29 ರಂದು ಕರಾವಳಿಯ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸಲಿದೆ. ​ಉತ್ತರ ಒಳನಾಡು..! ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಜುಲೈ 1 ರಿಂದ ಜುಲೈ 5 ರವರೆಗೆ ಒಂದೆರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ 29 ಮತ್ತು 30 ರಂದು ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ...