ಲಂಚ ಪ್ರಕರಣ: ಶಿರಸಿಯ ಈ ಹಿಂದಿನ ಎಸಿ, ಹುಣಸೂರಿನ ಹಾಲಿ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ..!

ಲಂಚ ಪ್ರಕರಣ: ಶಿರಸಿಯ ಈ ಹಿಂದಿನ ಎಸಿ, ಹುಣಸೂರಿನ ಹಾಲಿ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ..!

ಹುಣಸೂರು ಉಪ ವಿಭಾಗಾಧಿಕಾರಿಯಾಗಿರೋ ಹಾಗೂ ಈ ಹಿಂದೆ ಶಿರಸಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕಾವ್ಯಾರಾಣಿ ಮತ್ತು ಅವರ ಆಪ್ತ ಸಹಾಯಕ ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ನಡೆಸಿದ ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ. ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೆ ನಂ. 17/26ರಲ್ಲಿರುವ 4 ಎಕರೆ 20 ಗುಂಟೆ ಜಮೀನಿಗೆ ಸಂಬಂಧಿಸಿದ ಪ್ರಕರಣ ಕಳೆದ ಒಂದು ವರ್ಷದಿಂದ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಈ ಪ್ರಕರಣದಲ್ಲಿ ಅನುಕೂಲಕರ ತೀರ್ಪು ನೀಡುವ ಸಲುವಾಗಿ ಬೆಂಗಳೂರಿನ ನಿವಾಸಿ ಡಾ. ರೂಪಾ ಅವರಿಂದ ಒಟ್ಟು ₹10.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಆರೋಪದ ಪ್ರಕಾರ, ಮೊದಲ ಹಂತದಲ್ಲಿ ₹5 ಲಕ್ಷವನ್ನು ಈಗಾಗಲೇ ಸ್ವೀಕರಿಸಲಾಗಿತ್ತು. ಉಳಿದ ₹5.50 ಲಕ್ಷ ಹಣವನ್ನು ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ...

ಮುಂಡಗೋಡಿಗೆ ಬಂದಿದ್ದು ಖತರ್ನಾಕ “ಇರಾನಿ ಗ್ಯಾಂಗ್” ನ ಕಳ್ಳರಾ..?  ಈ ಖದೀಮರ ದರೋಡೇ ಸ್ಟೈಲ್ ಹೇಗಿದೆ ಗೊತ್ತಾ‌..? ಅಸಲು, ಇವ್ರನ್ನ ಹಿಡಿದು ತರ್ತಾರಾ ನಮ್ ಪೊಲೀಸ್ರು..?

ಮುಂಡಗೋಡಿಗೆ ಬಂದಿದ್ದು ಖತರ್ನಾಕ “ಇರಾನಿ ಗ್ಯಾಂಗ್” ನ ಕಳ್ಳರಾ..? ಈ ಖದೀಮರ ದರೋಡೇ ಸ್ಟೈಲ್ ಹೇಗಿದೆ ಗೊತ್ತಾ‌..? ಅಸಲು, ಇವ್ರನ್ನ ಹಿಡಿದು ತರ್ತಾರಾ ನಮ್ ಪೊಲೀಸ್ರು..?

ಮುಂಡಗೋಡ ತಾಲೂಕಿನಲ್ಲಿ ಆಗಾಗ್ಗೆ ಬಂದು ಹೋಗ್ತಿದೆಯಾ ಖತರ್ನಾಕ ಇರಾನಿ ಗ್ಯಾಂಗ್..? ಈ ಪ್ರಶ್ನೆ ಸದ್ಯ ಸದ್ದು ಮಾಡ್ತಿದೆ. ಅಸಲು, ನಮ್ಮ ಮುಂಡಗೋಡಿನಲ್ಲಿ ಹಾಡಹಗಲೇ ಅಂಗಡಿಗಳಿಗೆ ನುಗ್ಗಿ ಚಿಲ್ಲರೇ ಕೊಟ್ಟು ನೋಟು ಪಡೆಯುವ ನೆಪದಲ್ಲಿ, ಕೈಗೆ ಸಿಕ್ಕಷ್ಟು ದೋಚಿಕೊಂಡು ಹೋಗುವ “ಕ್ಯೂಟ್” ಮುಖಗಳು ಥೇಟು ಇರಾನಿ ಗ್ಯಾಂಗ್ ಅನ್ನೇ ಹೋಲುತ್ತಿದೆ. ಅದು ಸತ್ಯವಾದ್ರೆ, ನಮ್ಮ‌ ಪೊಲೀಸ್ರು ಆ ಗ್ಯಾಂಗ್ ನ್ನ ಬೆನ್ನತ್ತಿ ಹಿಡಿದು ತರ್ತಾರಾ ಅನ್ನೋದೇ ಈಗ ಬಿಡಿಸಲಾರದ ಪ್ರಶ್ನೆ..! ಅದು ಖತರ್ನಾಕ ಗ್ಯಾಂಗ್..! ಇರಾನಿ ಗ್ಯಾಂಗ್, ಈ ಹೆಸ್ರು ಬಹುಶಃ ಖಾಕಿ ವಲಯದಲ್ಲಿ ಎಲ್ಲರಿಗೂ ಗೊತ್ತಿರತ್ತೆ‌. ನಮ್ಮ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಹಾರಾಷ್ಟ್ರ, ಗೋವಾ, ಮದ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಆ್ಯಕ್ಟಿವ್ ಆಗಿರೋ ಈ ಗ್ಯಾಂಗ್ ನಾಜೂಕಾಗೇ ಯಾರ ಭಯವಿಲ್ಲದೇ, ಸರಗಳ್ಳತನ ಸೇರಿ ದರೋಡೆ ಮಾಡೋದನ್ನೇ ಕಾಯಕ ಮಾಡಿಕೊಂಡಿದೆ. ಬಹುತೇಕ ಇವ್ರು ಹಾಡಹಗಲಲ್ಲೇ ಸ್ಕೆಚ್ ಹಾಕಿ ಸಿಕ್ಕಷ್ಟು ಎಗರಿಸಿಕೊಂಡು ಹೋಗ್ತಾರೆ. ಇವ್ರು “ಶೋಕಿ” ವೀರರು.‌.! ಅಸಲು, ಇರಾನಿ ಗ್ಯಾಂಗ್ ಅನ್ನೋದು...

ಮುಂಡಗೋಡಿನಲ್ಲಿ ಕಳ್ಳರ ಹೊಸ ಗ್ಯಾಂಗ್ ಆ್ಯಕ್ಟಿವ್..! ಚಿಲ್ಲರೇ ಕೊಟ್ಟು ನೋಟು ಪಡೆಯೊ “ಕಳ್ಳಾಟ”..! ಇವ್ರೇ ನೋಡಿ ಖದೀಮರು, ಇವ್ರು ಕಂಡ್ರೆ ಮಾಹಿತಿ ನೀಡಿ..!

ಮುಂಡಗೋಡಿನಲ್ಲಿ ಕಳ್ಳರ ಹೊಸ ಗ್ಯಾಂಗ್ ಆ್ಯಕ್ಟಿವ್..! ಚಿಲ್ಲರೇ ಕೊಟ್ಟು ನೋಟು ಪಡೆಯೊ “ಕಳ್ಳಾಟ”..! ಇವ್ರೇ ನೋಡಿ ಖದೀಮರು, ಇವ್ರು ಕಂಡ್ರೆ ಮಾಹಿತಿ ನೀಡಿ..!

 ಮುಂಡಗೋಡ ಪೊಲೀಸ್ರು ಅಲರ್ಟ್ ಆಗಿದ್ದಾರೆ. ಪಟ್ಟಣದಲ್ಲಿ ಅಂಗಡಿಗಳಿಗೆ ಬಂದು ನಾಣ್ಯಗಳನ್ನು ನೀಡಿ ನೋಟುಗಳನ್ನು ಬದಲಾಯಿಸಿಕೊಳ್ಳುವ ನೆಪದಲ್ಲಿ ಅಥವಾ ಹೊಸ ಅಂಗಡಿ ಆರಂಭಿಸುತ್ತಿದ್ದೇವೆ ಎಂದು ನಂಬಿಸಿ ಮಾಲೀಕರ ಗಮನ ಬೇರೆಡೆ ಸೆಳೆದು ನಗದು ಹಾಗೂ ಒಡವೆಗಳನ್ನು ಕಳ್ಳತನ ಮಾಡುತ್ತಿರೋ ವಂಚಕರ ಗ್ಯಾಂಗ್ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಲ್ ಆ್ಯಕ್ಟಿವ್ ಆಗಿದೆ. ಹೀಗಾಗಿ, ಸಾರ್ವಜನಿಕರು ಮತ್ತು ವರ್ತಕರು ತೀವ್ರ ಎಚ್ಚರಿಕೆ ವಹಿಸುವಂತೆ ಪೊಲೀಸ್ರು ಮನವಿ ಮಾಡಿದ್ದಾರೆ. ​ವಂಚಕರ ವಂಚನಾ ಸ್ಟೈಲ್ ಇದು..! ​ಈ ಖದೀಮರು ಸಾಮಾನ್ಯವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಾರೆ. ಅಂಗಡಿಯವರ ಬಳಿ ಚಿಲ್ಲರೆ ನಾಣ್ಯಗಳನ್ನು ನೀಡಿ ದೊಡ್ಡ ಮುಖಬೆಲೆಯ ನೋಟುಗಳನ್ನು ಕೇಳುವುದು, ಅಥವಾ ‘DL’ ಸೀರೀಸ್‌ನ ನೋಟುಗಳನ್ನು ಕೇಳುವುದು ಹಾಗೂ ಹೊಸ ಅಂಗಡಿ ಓಪನ್ ಮಾಡುತ್ತಿದ್ದೇವೆ ಎಂದು ಹರಟೆ ಹೊಡೆಯುವುದು ಇವರ ತಂತ್ರ. ಈ ನಡುವೆ ಮಾಲೀಕರ ಗಮನ ಬೇರೆಡೆಗೆ ತಿರುಗಿ ಕಣ್ಣು ತಪ್ಪಿಸಿ ಅಂಗಡಿಯಲ್ಲಿರುವ ಹಣ, ಚಿನ್ನಾಭರಣ ಹಾಗೂ ಇತ್ಯಾದಿ ಬೆಲೆಬಾಳುವ...

ಮುಂಡಗೋಡ ಪಟ್ಟಣದಲ್ಲಿ ಹಾಡಹಗಲೇ ಮತ್ತೊಂದು ಕಳ್ಳತನ..! ಎಸ್ಪಿ ಸಾಹೇಬ್ರೇ ಈ ಕಡೆ ಒಂದಿಷ್ಟು ಗಮನ ಕೊಡಿ, ಆತಂಕದಲ್ಲಿದೆ ತಾಲೂಕಿನ ಜನತೆ..!

ಮುಂಡಗೋಡ ಪಟ್ಟಣದಲ್ಲಿ ಹಾಡಹಗಲೇ ಮತ್ತೊಂದು ಕಳ್ಳತನ..! ಎಸ್ಪಿ ಸಾಹೇಬ್ರೇ ಈ ಕಡೆ ಒಂದಿಷ್ಟು ಗಮನ ಕೊಡಿ, ಆತಂಕದಲ್ಲಿದೆ ತಾಲೂಕಿನ ಜನತೆ..!

 ಮುಂಡಗೋಡ ಪಟ್ಟಣದಲ್ಲಿ ಶನಿವಾರ ಹಾಡಹಗಲೇ ಮತ್ತೊಂದು ಕಳ್ಳತನವಾಗಿದೆ. ಬಹುತೇಕ ಪೊಲೀಸ ಠಾಣೆಯ ರೂಟ್ ನಲ್ಲೇ ಅಂದ್ರೆ ಪಟ್ಟಣದ ಬಂಕಾಪುರ ರಸ್ತೆಯ ಜನನೀಬೀಡ ಪ್ರದೇಶದಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ. ಸಿಮೆಂಟ್, ಕಬ್ಬಿಣದ ಅಂಗಡಿಗೆ ನುಗ್ಗಿರೋ ಕಳ್ಳರು 13 ಸಾವಿರಕ್ಕೂ ಹೆಚ್ಚು ಹಣ ಎಗರಿಸಿದ್ದಾರೆ. ಇದ್ರೊಂದಿಗೆ ತಾಲೂಕಿನಲ್ಲಿನ ಸರಣೀ ಕಳ್ಳತನ ಕೇಸುಗಳು ನಿರಂತರ ಎನ್ನುವಂತಾಗಿದೆ. ಎಂದಿನಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಅದು, ಇದು ಅಂತಾ ಗೆಬರಾಡಿ ಹೋಗಿದ್ದಾರೆ, ಅಷ್ಟೆ, ಆದ್ರೆ ಆ ಕಳ್ಳರು ಮಾತ್ರ ಈ ನಮ್ಮ‌ಪೊಲೀಸ್ರಿಗೆ ಯಾವಾಗ ಸಿಗ್ತಾರೋ ಗೊತ್ತಿಲ್ಲ.. ಇದೇಲ್ಲ ಸಿರೀಯಸ್ ಅಲ್ವಾ..? ನಿಜವೆಂದ್ರೆ, ಮುಂಡಗೋಡ ತಾಲೂಕಿನ ಜನತೆ ಅಕ್ಷರಶಃ ಆತಂಕದಲ್ಲಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಂತೂ ಮಹಿಳೆಯರು ರಾತ್ರಿಯಾದಂತೆ ಏನಾಗತ್ತೊ ಅನ್ನೋ ಭಯದಲ್ಲಿದ್ದಾರೆ. ಯಾಕಂದ್ರೆ, ಮುಂಡಗೋಡ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಸದ್ಯ ಕಳ್ಳರ ಹಾವಳಿ ಜನರ ನಿದ್ದೆಗೆಡಿಸಿದೆ. ಅದ್ರೆ ಮುಂಡಗೋಡ ಪೊಲೀಸ್ ಅಧಿಕಾರಿಗಳು ಮಾತ್ರ ಈ ಬಗ್ಗೆ ಬಹುಶಃ ಇನ್ನೂ ಸಿರಿಯಸ್ ಆಗಿ ತಕ್ಕೊಂಡೇ ಇಲ್ಲವಾ..? ಅಥವಾ...

ಮುಂಡಗೋಡ ಮಾರಿಕಾಂಬಾ ನಗರದಲ್ಲಿ ಕಳ್ಳರ ಕೈಚಳಕ..! ಒಂದು ಮನೆ ಕಳ್ಳತನ ಇನ್ನೊಂದು ಅಂಗಡಿಗೆ ಬೀಗ ಮುರಿಯಲು ಯತ್ನ..!

ಮುಂಡಗೋಡ ಮಾರಿಕಾಂಬಾ ನಗರದಲ್ಲಿ ಕಳ್ಳರ ಕೈಚಳಕ..! ಒಂದು ಮನೆ ಕಳ್ಳತನ ಇನ್ನೊಂದು ಅಂಗಡಿಗೆ ಬೀಗ ಮುರಿಯಲು ಯತ್ನ..!

ಮುಂಡಗೋಡ ಪಟ್ಟಣದ ಹಳೂರಿನ ಮಾರಿಕಾಂಬಾ ನಗರದಲ್ಲಿ ಕಳೆದ ಹತ್ತು ದಿನಗಳಲ್ಲಿ ಮೂರು ಮನೆಗಳ ಮನೆಗಳ್ಳತನವಾಗಿದೆ. ಅದ್ರಲ್ಲೂ ಸೋಮವಾರ ರಾತ್ರಿ ಹಾಗೂ ನಿನ್ನೆ ಮಂಗಳವಾರ ರಾತ್ರಿ ಎರಡು ಮನೆಯ ಕಳ್ಳತನ ಯತ್ನ ಮಾಡಿದ್ದು, ಒಂದು ಮನೆಯಲ್ಲಿ ಒಂದಿಷ್ಟು ಬಂಗಾರ ಹಾಗೂ ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಅಲ್ದೇ ಆ ಕಳ್ಳರಿಗೆ ಅದೇಷ್ಟರ ಮಟ್ಟಿಗೆ ಮುಂಡಗೋಡಿನಲ್ಲಿ ನಿರ್ಭೀತಿ ಇದೆ ಅಂದ್ರೆ ಕಳ್ಳತನ ಮಾಡಿರೊ ಮನೆಯಲ್ಲೇ ಟೀ ಮಾಡಿಕೊಂಡು ಕುಡಿದು ಹೋಗಿದ್ದಾರೆ.. ಇನ್ನು, ಹಳೂರು ಮಾರಿಕಾಂಬಾ ನಗರದ ಬಾಷಾ ಮರಗಡಿ ಎಂಬುವವರ ಮನೆ ಹಾಗೂ ಶಂಕರ ಕುರುಬರ ಎಂಬುವವರ ಅಂಗಡಿ ಕೀಲಿ ಮುರಿದಿದ್ದಾರೆ. ಇನ್ನು ಬಾಷಾ ಎಂಬುವವರ ಮನೆಯಲ್ಲಿದ್ದ 2.5 ಗ್ರಾಂ ಚಿನ್ನ ಹಾಗೂ 3 ಸಾವಿರ ನಗದು, ಅಲ್ದೇ ಮನೆಯ ಮಹಿಳೆ ಕುಡಿಕೆಯಲ್ಲಿ ಕೂಡಿಟ್ಟಿದ್ದ ಹಣವನ್ನೇಲ್ಲ ದೋಚಿಕೊಂಡು ಹೋಗಿದ್ದಾರೆ. ಯತಾಪ್ರಕಾರ, ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಶ್ವಾನದಳವೂ ಬಂದು ಕಳ್ಳನ ವಾಸನೆ ಹಿಡಿಯಲು ಯತ್ನಿಸಿದೆ ಅನ್ನೊ ಮಾಹಿತಿ ಇದೆ.....

ಮುಂಡಗೋಡ ಸಮೀಪದ ಲಕ್ಕೊಳ್ಳಿ ಕ್ರಾಸ್ ಬಳಿ ಬೈಕ್-ಕಾರು ನಡುವೆ ಭೀಕರ ಅಪಘಾತ; ಓರ್ವನ ಸ್ಥಿತಿ ಗಂಭೀರ..!

ಮುಂಡಗೋಡ ಸಮೀಪದ ಲಕ್ಕೊಳ್ಳಿ ಕ್ರಾಸ್ ಬಳಿ ಬೈಕ್-ಕಾರು ನಡುವೆ ಭೀಕರ ಅಪಘಾತ; ಓರ್ವನ ಸ್ಥಿತಿ ಗಂಭೀರ..!

​ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಕ್ರಾಸ್ ಸಮೀಪ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ​ಹಾನಗಲ್ ತಾಲೂಕಿನ ಅಕ್ಕಿಆಲೂರು ಮೂಲದ ಮಹ್ಮದಗೌಸ್ ಇಸ್ಮಾಯಿಲ್ ಸಾಬ್ ಸವಣೂರು ಹಾಗೂ ಹಿಂಬದಿ ಸವಾರ ಮುಜರಮಿಲ್ ಗಾಯಗೊಂಡ ದುರ್ದೈವಿಗಳು. ಇವರಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಮುಜರಮಿಲ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹೇಗಾಯ್ತು..? ಶಿರಸಿ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಮುಂಡಗೋಡ ಕಡೆಯಿಂದ ಲಕ್ಕೊಳ್ಳಿ ಕಡೆಗೆ ತೆರಳುತ್ತಿದ್ದ ವ್ಯಾಗನಾರ್ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮುಜರಮಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ. ​ಈ ಕುರಿತು ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ...

ಉತ್ತರ ಕನ್ನಡ ಜಿಲ್ಲೆಯಲ್ಲಿ “ಡಾಕ್ಟರ್ ಯಮದೂತಾಸ್” ವಿರುದ್ಧ ವಾರ್ನಿಂಗ್..! ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡೀಸಿ ಸೂಚನೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ “ಡಾಕ್ಟರ್ ಯಮದೂತಾಸ್” ವಿರುದ್ಧ ವಾರ್ನಿಂಗ್..! ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡೀಸಿ ಸೂಚನೆ..!

ಕಾರವಾರ; ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ದ ಬರುವ ದೂರುಗಳ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸಿ , ಅವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಖಡಕ್ ಸೂಚನೆ ನೀಡಿದ್ರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ,ಕೆಪಿಎಂಇ ನೊಂದಣಿ ಮತ್ತು ಕುಂದುಕೊರೆತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಕಲಿಗಳ‌ ವಿರುದ್ಧ ಕೇಸ್..! ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ದ ವಿಚಾರಣೆ ನಡೆಸಿ ಕಾನೂನಿನ ನಿಬಂದನೆಗಳ ಅನುಸಾರ ಕ್ರಮ ಜರುಗಿಸಲು ಜಿಲ್ಲಾ ಮಟ್ಟದ ವಿಶೇಷ ಪಡೆ ರಚನೆ ಮಾಡಿದ ಜಿಲ್ಲಾಧಿಕಾರಿಗಳು, ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳ ವಿರುದ್ದ ಗರಿಷ್ಠ ಪ್ರಮಾಣದ ದಂಡ ವಿಧಿಸಿ, ಕ್ಲಿನಿಕ್ ಗಳನ್ನು ಬಂದ್ ಮಾಡುವ ಜೊತೆಗೆ ಇಂತಹ ಪ್ರಕರಣಗನ್ನು ಮತ್ತೂ ಮುಂದುವರೆಸುವವರ ವಿರುದ್ದ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದರು. ದಾಳಿ ನಡೆಸಿ..! ಅರ್ಹತೆಗನುಗುಣವಾಗಿ ಅನುಮತಿ ಪಡೆದ ವೈದ್ಯಕೀಯ ಪದ್ದತಿಯಲ್ಲಿ ಮಾತ್ರ...

ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್, ಹಲವೆಡೆ ಭಾರೀ ಮಳೆಯ ಮುನ್ಸೂಚನೆ..!

ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್, ಹಲವೆಡೆ ಭಾರೀ ಮಳೆಯ ಮುನ್ಸೂಚನೆ..!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರವು 2026 ಜುಲೈ 22ರ ಬೆಳಿಗ್ಗೆ 08:30 ರಿಂದ ಜುಲೈ 23ರ ಬೆಳಿಗ್ಗೆ 08:30ರವರೆಗೆ (24 ಗಂಟೆಗಳು) ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಳೆ ಹಾಗೂ ಬಿರುಗಾಳಿಯ ಮುನ್ನೆಚ್ಚರಿಕೆಯನ್ನು ನೀಡಿದೆ. ಉತ್ತರ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’..! ​ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ತೀವ್ರವಾದ ಮಳೆಯಾಗುವ (115.6 mm ನಿಂದ 204.5 mm ವರೆಗೆ) ಸಾಧ್ಯತೆ ಇದ್ದು, ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ​ಇದರೊಂದಿಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಮುನ್ಸೂಚನೆ ಇದೆ. ಸಾರ್ವಜನಿಕರು ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’..! ​ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ, ​ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ...

ಮುಂಡಗೋಡ ಬಸ್ ನಿಲ್ದಾಣದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ವಶ..!

ಮುಂಡಗೋಡ ಬಸ್ ನಿಲ್ದಾಣದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ವಶ..!

ಮುಂಡಗೋಡ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮೇಲೆ ಶಿರಸಿಯಿಂದ ಆಗಮಿಸಿದ ಅಧಿಕಾರಿಗಳ ವಿಶೇಷ ತಂಡ ದಾಳಿ ನಡೆಸಿ, ನಿಷೇಧಿತ ಗುಟ್ಕಾ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ. ಸುಮಾರು 5 ರಿಂದ 6 ಮಂದಿ ಅಧಿಕಾರಿಗಳ ತಂಡ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮೇಲೆ ಏಕಕಾಲದಲ್ಲಿ ಪರಿಶೀಲನೆ ನಡೆಸಿತು. ಪರಿಶೀಲನೆ ವೇಳೆ ಗುಟ್ಕಾ, ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆಯ ಶಂಕೆ ಹಿನ್ನೆಲೆಯಲ್ಲಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ದಾಳಿ ವೇಳೆ ಅಧಿಕಾರಿಗಳು ಅಂಗಡಿಗಳಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೆ ಅಂಗಡಿ ಮಾಲೀಕರಿಗೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಸೂಚನೆ ನೀಡಿದರು. ಅಧಿಕಾರಿಗಳ ದಾಳಿಯಿಂದ ಬಸ್ ನಿಲ್ದಾಣದ ವ್ಯಾಪಾರಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ವಶಪಡಿಸಿಕೊಂಡಿರೊ ತಂಬಾಕು ಉತ್ಪನ್ನಗಳ ಪ್ರಮಾಣ ಹಾಗೂ ಸಂಬಂಧಿಸಿದವರ ವಿರುದ್ಧ ಕೈಗೊಳ್ಳಲಿರುವ ಕಾನೂನು ಕ್ರಮದ ಕುರಿತು ಅಧಿಕಾರಿಗಳು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ನಂದಿಕಟ್ಟಾದಲ್ಲಿ ಕೆರೆಗೆ ಬಿದ್ದು ಅಂಗನವಾಡಿ ಸಹಾಯಕಿ ಆತ್ಮಹತ್ಯೆ..!

ನಂದಿಕಟ್ಟಾದಲ್ಲಿ ಕೆರೆಗೆ ಬಿದ್ದು ಅಂಗನವಾಡಿ ಸಹಾಯಕಿ ಆತ್ಮಹತ್ಯೆ..!

ಮುಂಡಗೋಡ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗವ್ವಾ ಮಹೇಶ ತೇರೆಗಾಂವ(38) ಮೃತಪಟ್ಟ ದುರ್ದೈವಿ. ​ಮೃತ ಗಂಗವ್ವಾ ಅವರಿಗೆ ಮದುವೆಯಾಗಿ 10 ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಇದಲ್ಲದೆ, ಇತ್ತೀಚೆಗೆ ಅವರ ಪತಿ ಮಹೇಶ ಕೂಡ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದರು. ಗಂಡನ ಅಗಲಿಕೆ ಹಾಗೂ ಮಕ್ಕಳಿಲ್ಲದ ಚಿಂತೆ ಗಂಗವ್ವಾ ಅವರನ್ನು ತೀವ್ರವಾಗಿ ಕಾಡುತ್ತಿತ್ತು. ಇದರಿಂದಾಗಿ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಅವರ ಮಾನಸಿಕ ಸ್ಥಿತಿ ಸುಧಾರಿಸಿರಲಿಲ್ಲ. ​ಜೀವನದ ಮೇಲಿನ ಜಿಗುಪ್ಸೆಯಿಂದ ಗಂಗವ್ವಾ ನಂದಿಕಟ್ಟಾ ಗ್ರಾಮದ ದೊಡ್ಡ ಕೆರೆಯ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ​ಮೃತರ ದೊಡ್ಡಪ್ಪನ ಮಗನಾದ ಬಾಬು ಶೇಷಪ್ಪ ಪಾಟೀಲ (73) ನೀಡಿದ ದೂರಿನನ್ವಯ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.