ಮುಂಡಗೋಡದಲ್ಲಿ ರಾಯಣ್ಣ ಮೂರ್ತಿ–ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿವಾದ; ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ..!

ಮುಂಡಗೋಡದಲ್ಲಿ ರಾಯಣ್ಣ ಮೂರ್ತಿ–ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿವಾದ; ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ..!

ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಆಂಜನೇಯ ದೇವಸ್ಥಾನದ ಸಮೀಪ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ವಿವಾದಿತ ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆಯ ರಸ್ತೆಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇದೇ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲು ಕೆಲವರು ಮುಂದಾಗಿರುವುದೇ ಇದೀಗ ಜಾಗದ ವಿವಾದಕ್ಕೆ ಕಾರಣವಾಗಿದೆ. ಒಂದೇ ಜಾಗ.. ಎರಡು ವಾದ..! ರಾಯಣ್ಣನ ಮೂರ್ತಿ ಇದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿದರೆ ಗಣೇಶೋತ್ಸವ ಸಂದರ್ಭದಲ್ಲಿ ಜಾಗದ ಕೊರತೆ ಉಂಟಾಗಲಿದೆ. ಹೀಗಾಗಿ ರಾಯಣ್ಣನ ಮೂರ್ತಿಗೆ ಬದಲಿ ಜಾಗ ಕಲ್ಪಿಸಿದರೆ ಹಿಂದೂ ಮಹಾಗಣಪತಿ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂಬುದು ಸಮಿತಿ ಸದಸ್ಯರ ವಾದ. ಇನ್ನು ಮೂರ್ತಿ ಪ್ರತಿಷ್ಠಾಪಕರ ಪ್ರಕಾರ, ಇದೇ ಸ್ಥಳದಲ್ಲಿ ಈ ಹಿಂದೆ ಧ್ವಜ ಕಟ್ಟೆ...

ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ದಾರುಣ ಸಾವು..! ಎರಡು ತಿಂಗಳಲ್ಲಿ ಎರಡು ಹೆಣ..! ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ..!

ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ದಾರುಣ ಸಾವು..! ಎರಡು ತಿಂಗಳಲ್ಲಿ ಎರಡು ಹೆಣ..! ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ..!

ಮುಂಡಗೋಡ: ತಾಲೂಕಿನ ಟಿಬೇಟನ್ ಕಾಲೋನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಬಿದ್ದು ಯುವ ಕಟ್ಟಡ ಕಾರ್ಮಿಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಬಸಾಪುರ ಗ್ರಾಮದ ಸಂದೇಶ ನಾಗರಾಜ ಚಲವಾದಿ (23) ಎಂದು ಗುರುತಿಸಲಾಗಿದೆ. ಲಾಮಾ ಕ್ಯಾಂಪ್ ನಂಬರ್-1ರಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಎರಡು ತಿಂಗಳಲ್ಲಿ ಎರಡು ಹೆಣ..! ಟಿಬೇಟನ್ ಕಾಲೋನಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ನಿತ್ಯವೂ ನೂರಾರು ಕಟ್ಟಡ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಎದುರಾಗಿದೆ. ಇದೇ ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವುದು...

NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್  ಸಪ್ಲೈ ಮಾಡಿದ್ದವ ಅಂದರ್..!

NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್ ಸಪ್ಲೈ ಮಾಡಿದ್ದವ ಅಂದರ್..!

ಮುಂಡಗೋಡಿನ NMD ಜಮೀರ್ ಭೀಕರ ಹತ್ಯೆ ಕೇಸಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ‌. ಆ ಬರ್ಬರ ಹತ್ಯೆಯಲ್ಲಿ ಬಳಸಲಾಗಿದ್ದ ಎರಡು ಕಂಟ್ರಿ ಮೇಡ್ ಪಿಸ್ತೂಲು ಪೂರೈಸಿದ್ದವ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಆರೋಪಿಯನ್ನು ಉತ್ತರ ಪ್ರದೇಶ ಗೋರಖಪುರ‌ದಿಂದ ಬಂಧಿಸಿ ಕರೆತಂದಿದ್ದಾರೆ ಪೊಲೀಸ್ರು. ಅಂದಹಾಗೆ, ಸದ್ಯ NMD ಹತ್ಯೆ ಕೇಸಲ್ಲಿ ಅರೆಸ್ಟ್ ಆಗಿರೋ ಆರೋಪಿಗಳ ಸಂಖ್ಯೆ 12 ಕ್ಕೆ ಏರಿದೆ. ಅದು ಏಪ್ರಿಲ್ 24 ರ ಮಿಡ್ ನೈಟ್..! ಯಸ್, ಅವತ್ತು ಶುಕ್ರವಾರ ಏಪ್ರಿಲ್ 24 ರ ರಾತ್ರಿ ಸರಿ ಸುಮಾರು 11 ಗಂಟೆಯ ಹೊತ್ತು. ಮುಂಡಗೋಡಿನ ಬಸ್ ಸ್ಟ್ಯಾಂಡ್ ಎದುರಿನ ಸಾವಜಿ ಹೊಟೆಲ್ ನಲ್ಲಿ ಮಟನ್ ಕೈಮಾ ಸವಿಯಲು ಹೋಗಿದ್ದ NMD ಜಮೀರ್ ಬರ್ಬರವಾಗಿ ಹತ್ಯೆಯಾಗಿದ್ದ. ಊಟಕ್ಕೆ ಅಂತಾ ಕುಳಿತಿದ್ದವನ ಕಣ್ಣಿಗೆ ಖಾರದ ಪುಡಿ ಎರಚಿ ಕೊಚ್ಚಿ ಹಾಕಲಾಗಿತ್ತು. ಆ ಹೊತ್ತಲ್ಲಿ ಗುಂಡಿನ ಸದ್ದೂ ಕೂಡ ಕೇಳಿತ್ತು. ನಂತ್ರ ಪೊಲೀಸ್ರು ಬಂಧಿಸಿರೋ ಆರೋಪಿಗಳ ಜೊತೆ ಜೊತೆಗೆ ಎರಡು ಕಂಟ್ರಿಮೇಡ್ ಪಿಸ್ತೂಲು ಹಾಗೂ...

ಮುಂಡಗೋಡ ​ಹಿಂದೂ ಮಹಾಗಣಪತಿ 2026: ಅಧಿಕೃತ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ..!

ಮುಂಡಗೋಡ ​ಹಿಂದೂ ಮಹಾಗಣಪತಿ 2026: ಅಧಿಕೃತ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ..!

ಮುಂಡಗೋಡಿನ ಪ್ರತಿಷ್ಠಿತ ಹಿಂದೂ ಮಹಾಗಣಪತಿ ಕಾರ್ಯಕ್ರಮದ 2026 ನೇ ವರ್ಷದ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡಿವೆ. ಮಂಗಳವಾರ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಎರಡನೇ ಪೂರ್ವಭಾವಿ ಸಭೆಯಲ್ಲಿ ನೂತನ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಸಂಘಟನೆಯಲ್ಲಿ ಹೊಸ ಉತ್ಸಾಹ ಮೂಡಿದೆ. ​ನೂತನ ಪದಾಧಿಕಾರಿಗಳು..! ​ಸಭೆಯ ಪ್ರಮುಖ ಘಟ್ಟದಲ್ಲಿ ಮುಂಬರುವ ಕಾರ್ಯಕ್ರಮದ ನಿರ್ವಹಣೆಗಾಗಿ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ​2026 ನೇ ಹಿಂದು ಮಹಾ ಗಣಪತಿ ಉತ್ಸವದ ಅಧ್ಯಕ್ಷರಾಗಿ, ತಂಗಂ ಚಿನ್ನಣ್ಣ ಆಯ್ಕೆಯಾಗಿದ್ದಾರೆ, ಅದ್ರಂತೆ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗೌಳಿ, ​ಕಾರ್ಯದರ್ಶಿಯಾಗಿ ಬಾಬಣ್ಣ ವಾಲ್ಮೀಕಿ, ಸಹ ಕಾರ್ಯದರ್ಶಿಯಾಗಿ ನಾಗರಾಜ್ ಚಿಗಳ್ಳಿ ಹಾಗೂ ಚಿದಾನಂದ್ ಬಡಿಗೇರ್, ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ಓಣಿಕೇರಿ ಹಾಗೂ ಗಣೇಶ್ ಶಿರಾಲಿ, ​ಖಜಾಂಚಿಯಾಗಿ ಸುರೇಶ್ ಕಲ್ಲೊಳ್ಳಿ ಹಾಗೂ ​ಸಹ ಖಜಾಂಚಿಯಾಗಿ ಬಸವರಾಜ್ ತಣಕೇದಾರ್ ಆಯ್ಕೆಯಾಗಿದ್ದಾರೆ.  

ಎತ್ತಂಗಡಿಯಾಗಿದ್ದ ACF ರವಿ ಹುಲಕೋಟಿ ಕೇಸು ಕೋರ್ಟಲ್ಲಿ ವಜಾ ಆಯ್ತಂತೆ..! ನೂತನ ACF ಈರೇಶ್ ಎಂ. ಕಬ್ಬಿನ್ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ..!

ಎತ್ತಂಗಡಿಯಾಗಿದ್ದ ACF ರವಿ ಹುಲಕೋಟಿ ಕೇಸು ಕೋರ್ಟಲ್ಲಿ ವಜಾ ಆಯ್ತಂತೆ..! ನೂತನ ACF ಈರೇಶ್ ಎಂ. ಕಬ್ಬಿನ್ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ..!

ಮುಂಡಗೋಡ ACF ಈರೇಶ್ ಎಂ. ಕಬ್ಬಿನ್ ಮತ್ತೆ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದಾರೆ. ಕಳೆದ ತಿಂಗಳು 17 ರಂದೇ ವರ್ಗಾವಣೆಗೊಂಡು ಬಂದಿದ್ದ ಕಬ್ಬಿನ್ ರವರಿಗೆ, ಇಲ್ಲಿಂದ ವರ್ಗಾವಣೆಗೊಂಡಿದ್ದ ACF ರವಿ ಹುಲಕೋಟಿ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ, ಕಬ್ಬಿನ್ ರವರು ತಾಲೂಕಿಗೆ ಬರಲು ಕೊಂಚ ತಡೆಯಾಗಿತ್ತು. ಆದ್ರೆ, ಕೋರ್ಟ್ ಸಮಗ್ರ ವಿಚಾರಣೆ ಬಳಿಕ ಹಳೆಯ ಸಾಹೇಬ್ರು ಹಾಕಿದ್ದ ಕೇಸನ್ನು ವಜಾ ಮಾಡಿದೆ. ಜೊತೆಗೆ ಅವತ್ತು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ, ಹೀಗಾಗಿ, ಮತ್ತೀಗ ಈರೇಶ್ ಕಬ್ಬಿನ್ ಮುಂಡಗೋಡ ACF ಆಗಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಂದ ದಿನವೇ ಭರ್ಜರಿ ಕಾರ್ಯ..! ಅಸಲು, ಈರೇಶ್ ಕಬ್ಬಿನ ACF ಆಗಿ ಮುಂಡಗೋಡಿಗೆ ಬಂದಿದ್ದ ದಿನವೇ ನಂದಿಕಟ್ಟಾ ಗ್ರಾಮದಲ್ಲಿ ಜಿಂಕೆ ಮಾಂಸದ ಕೇಸ್ ಬೇಧಿಸಿದ್ದರು. ಅವತ್ತು, ಇದೇ ACF ರವರ ನಿರ್ಬೀಡೆಯ ಖಡಕ್ ನಿರ್ಧಾರದಿಂದಲೇ, ಆ ಕೇಸಿನ ಪ್ರಮುಖ ಆರೋಪಿಯನ್ನು ಬೆನ್ನು ಬಿದ್ದು, ಬಿಟ್ಟು ಬಿಡದೇ ಎಳೆದು ತರಲಾಗಿತ್ತು. ಗಬ್ಬೆದ್ದು ಹೋಗಿತ್ತು..! ನಿಜ ಅಂದ್ರೆ,...

ಮುಂಡಗೋಡ ತಾಲೂಕಿನ ಕೊಪ್ಪದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ..! ಸೊಸೈಟಿ ಗೋಡೌನ್‌ನ ಧ್ವಜಾರೋಹಣದಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ..!

ಮುಂಡಗೋಡ ತಾಲೂಕಿನ ಕೊಪ್ಪದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ..! ಸೊಸೈಟಿ ಗೋಡೌನ್‌ನ ಧ್ವಜಾರೋಹಣದಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ..!

ಮುಂಡಗೋಡ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಪ್ಪ ಗ್ರಾಮದ ಸೊಸೈಟಿ ಗೋಡೌನ್ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದಾರೆ. ಇದು ಒಂದು ಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಆತಂಕಕ್ಕೂ ಕಾರಣವಾಗಿತ್ತು. ಇಂದೂರು ಸೊಸೈಟಿ ಮುಂದಾಳತ್ವದಲ್ಲಿ..! ಅಂದಹಾಗೆ, ಇಂದೂರು ಸೊಸೈಟಿ ಆಡಳಿತದ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಕೇಸರಿ ಬಣ್ಣ ಕೆಳಭಾಗದಲ್ಲಿದ್ದು, ಹಸಿರು ಬಣ್ಣ ಮೇಲ್ಭಾಗದಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ನಿರ್ಲಕ್ಷವಲ್ಲವಾ..? ಸ್ವಾತಂತ್ರ್ಯೋತ್ಸವದಂತಹ ಮಹತ್ವದ ರಾಷ್ಟ್ರೀಯ ದಿನದಂದು ರಾಷ್ಟ್ರಧ್ವಜಕ್ಕೆ ಸೂಕ್ತ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಸೊಸೈಟಿ ಆಡಳಿತದ ನೇತೃತ್ವದಲ್ಲೇ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಸರಿಯಾದ ರೀತಿಯಲ್ಲಿ ಹಾರಿಸದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧ್ವಜಾರೋಹಣಕ್ಕೂ ಮುನ್ನ ರಾಷ್ಟ್ರಧ್ವಜದ ಸರಿಯಾದ ಅಳವಡಿಕೆ ಹಾಗೂ ಧ್ವಜ ಸಂಹಿತೆ ಪರಿಶೀಲಿಸಬೇಕಾಗಿತ್ತು. ಈ ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪು ಹೇಗೆ ಸಂಭವಿಸಿತು ಎಂಬುದನ್ನು ಸ್ಪಷ್ಟಪಡಿಸಬೇಕು ಅಂತಾ...

ಕಾತೂರಿನಲ್ಲಿ ನೇಣಿಗೆ ಶರಣಾದ್ನಾ ನಂದಿಪುರದ ಯುವಕ..? ಖುಷಿಖುಷಿಯಾಗಿ ಚಿಕನ್ ತರ್ತಿನಿ ಅಂತಾ ಹೋಗಿದ್ದವ ಸಾವು ಕಂಡ..!

ಕಾತೂರಿನಲ್ಲಿ ನೇಣಿಗೆ ಶರಣಾದ್ನಾ ನಂದಿಪುರದ ಯುವಕ..? ಖುಷಿಖುಷಿಯಾಗಿ ಚಿಕನ್ ತರ್ತಿನಿ ಅಂತಾ ಹೋಗಿದ್ದವ ಸಾವು ಕಂಡ..!

ಮುಂಡಗೋಡ ತಾಲೂಕು ಕಾತೂರಿನ ಆಲಳ್ಳಿ ರಸ್ತೆ ಪಕ್ಕದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನನ್ನು ನಂದಿಪುರ ಗ್ರಾಮದ ಮಾರುತಿ ಕರಿಯಪ್ಪ ತಳವಾರ (26) ಎಂದು ಗುರುತಿಸಲಾಗಿದೆ. ಘಟನೆ ನಿನ್ನೆ ಸಂಜೆ ನಡೆದಿದ್ದು, ಮಾರುತಿ ಕಾತೂರಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ‘ಕಾತೂರಿಗೆ ಹೋಗಿ ಬರ್ತೀನಿ’ ಎಂದು ಮನೆಯಿಂದ ಹೊರಟಿದ್ದ ಮಾರುತಿ, ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. ಮಾರುತಿ ಉಡುಪಿಯ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ನಿನ್ನೆಯಷ್ಟೇ ಊರಿಗೆ ಬಂದಿದ್ದ ಎನ್ನಲಾಗಿದೆ. ಬೆಳಗ್ಗೆಯಿಂದ ಪತ್ನಿಯೊಂದಿಗೆ ಮಳಗಿ ಜಲಾಶಯಕ್ಕೆ ತೆರಳಿ ಸಮಯ ಕಳೆದಿದ್ದ ಮಾರುತಿ, ಬಳಿಕ ಖುಷಿಖುಷಿಯಾಗಿಯೇ ‘ಚಿಕನ್ ತರ್ತೀನಿ’ ಎಂದು ಹೇಳಿ ಕಾತೂರಿಗೆ ತೆರಳಿದ್ದ ಎನ್ನಲಾಗಿದೆ. ಆದರೆ ಕೆಲವೇ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆಯು ಮುಂಡಗೋಡ ಪೊಲೀಸ್ ಠಾಣಾ...

ಕಳ್ಳತನಕ್ಕೆ ಕಡಿವಾಣ ಹಾಕಲು ಮುಂಡಗೋಡ ಖಾಕಿ ಆಕ್ಷನ್..! ಖುದ್ದು ಇನ್ಸ್‌ಪೆಕ್ಟರ್ ರಮೇಶ್ ಹನಾಪುರ ನೇತೃತ್ವದಲ್ಲಿ ನೈಟ್ ಪೆಟ್ರೋಲಿಂಗ್..!

ಕಳ್ಳತನಕ್ಕೆ ಕಡಿವಾಣ ಹಾಕಲು ಮುಂಡಗೋಡ ಖಾಕಿ ಆಕ್ಷನ್..! ಖುದ್ದು ಇನ್ಸ್‌ಪೆಕ್ಟರ್ ರಮೇಶ್ ಹನಾಪುರ ನೇತೃತ್ವದಲ್ಲಿ ನೈಟ್ ಪೆಟ್ರೋಲಿಂಗ್..!

ಮುಂಡಗೋಡ ತಾಲೂಕಿನಲ್ಲಿ ಸರಣಿ ಕಳ್ಳತನ ಪ್ರಕರಣಗಳ ಆತಂಕದ ನಡುವೆ ಮುಂಡಗೋಡ ಪೊಲೀಸ್ರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹಾಗೂ ತಪಾಸಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇಲ್ಲಿನ ಪಿಐ ರಮೇಶ ಹನಾಪುರ ನೇರವಾಗಿ ಫಿಲ್ಡಿಗೆ ಇಳಿದು ಜನರೊಟ್ಟಿಗೆ ಬೆರೆತಿದ್ದಾರೆ. ಜನರ ನೋವಿಗೆ ಸ್ಪಂಧಿಸಿದ್ದಾರೆ. ನಿಮ್ಮೊಂದಿಗೆ ನಾನಿದ್ದಿನಿ, ಭಯ ಬೇಡ ಅನ್ನೋ “ಅಭಯ” ನೀಡಿದ್ದಾರೆ. ಯಸ್, ಮುಂಡಗೋಡ ತಾಲೂಕಿನ ಕೋಡಂಬಿ, ಓಣಿಕೇರಿ ಹಾಗೂ ಚೌಡಳ್ಳಿ ಗ್ರಾಮಗಳಲ್ಲಿ ಖುದ್ದು ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಹನಾಪುರ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಸಾರ್ವಜನಿಕರೊಂದಿಗೆ ಗಸ್ತು ಸಂಚರಿಸುತ್ತಿದ್ದಾರೆ. ಗ್ರಾಮಗಳ ಪ್ರಮುಖ ರಸ್ತೆಗಳು, ಸಂಪರ್ಕ ಮಾರ್ಗಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ವಿಶೇಷ ನಿಗಾ ವಹಿಸುತ್ತಿದ್ದಾರೆ. ರಾತ್ರಿ ವೇಳೆ ಖಾಕಿ ಪಡೆ ಫೀಲ್ಡ್‌ಗೆ..! ಕಳ್ಳತನದಂತಹ ಅಪರಾಧಗಳನ್ನು ತಡೆಯಲು ರಾತ್ರಿ ವೇಳೆಯೇ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಚಲನವಲನದ ಮೇಲೆ ಪೊಲೀಸರು...

ಮುಂಡಗೋಡಕ್ಕೆ ಕಳ್ಳರ ಎಂಟ್ರಿಗೆ ಬ್ರೇಕ್..! ಸರಣಿ ಕಳ್ಳತನ ಕಂಡು ರೊಚ್ಚಿಗೆದ್ದ ಖಾಕಿ; ತಾಲೂಕಿಗೆ ಅಷ್ಟ ದಿಗ್ಬಂಧನ, ನಾಲ್ಕೂ ದಿಕ್ಕುಗಳಲ್ಲಿ ನಾಕಾಬಂದಿ..! ಸಾರ್ವಜನಿಕರೂ ಸಾಥ್..!

ಮುಂಡಗೋಡಕ್ಕೆ ಕಳ್ಳರ ಎಂಟ್ರಿಗೆ ಬ್ರೇಕ್..! ಸರಣಿ ಕಳ್ಳತನ ಕಂಡು ರೊಚ್ಚಿಗೆದ್ದ ಖಾಕಿ; ತಾಲೂಕಿಗೆ ಅಷ್ಟ ದಿಗ್ಬಂಧನ, ನಾಲ್ಕೂ ದಿಕ್ಕುಗಳಲ್ಲಿ ನಾಕಾಬಂದಿ..! ಸಾರ್ವಜನಿಕರೂ ಸಾಥ್..!

ಮುಂಡಗೋಡ ತಾಲೂಕಿನಲ್ಲಿ ಒಂದರ ಹಿಂದೆ ಒಂದರಂತೆ ನಡೆಯುತ್ತಿರೋ ಕಳ್ಳತನ ಪ್ರಕರಣಗಳಿಂದ ಮುಂಡಗೋಡ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ. ಮನೆ, ಅಂಗಡಿ, ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರಿಗೆ ಇದೀಗ ಮುಂಡಗೋಡ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.“ಖದೀಮರು ಇನ್ಮುಂದೆ ಮುಂಡಗೋಡದ ಗಡಿಗೆ ಕಾಲಿಡಬೇಕಾದ್ರೂ ಯೋಚಿಸ್ಬೇಕು..!” ಅನ್ನೋ ರೀತಿಯಲ್ಲಿ ಪೊಲೀಸ್ರು ಅಲರ್ಟ್ ಆಗಿದ್ದು, ತಾಲೂಕಿನಾದ್ಯಂತ ಭದ್ರತೆ ಬಿಗಿಗೊಳಿಸಿದ್ದಾರೆ. ಸರಣಿ ಕಳ್ಳತನ ಪ್ರಕರಣಗಳ ಬೆನ್ನಲ್ಲೇ ಮುಂಡಗೋಡ ಪೊಲೀಸರ “ಆಪರೇಷನ್ ಖಾಕಿ” ಕಣ್ಗಾವಲು ಶುರುವಾಗಿದೆ. ಪಟ್ಟಣ ಮಾತ್ರವಲ್ಲ, ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ರಾತ್ರಿ ಗಸ್ತು ಹೆಚ್ಚಿಸಲಾಗಿದ್ದು, ಪ್ರಮುಖ ಪ್ರವೇಶ-ನಿರ್ಗಮನ ಮಾರ್ಗಗಳಲ್ಲಿ ನಾಕಾಬಂದಿ ಹಾಕಲಾಗಿದೆ. ನಾಲ್ಕೂ ದಿಕ್ಕುಗಳಲ್ಲಿ ಖಾಕಿ ಕಣ್ಣು..! ಹುಬ್ಬಳ್ಳಿ ರಸ್ತೆಯ ವಡಗಟ್ಟಾ ನಾಕಾ, ಬಂಕಾಪುರ ರಸ್ತೆಯ ಸನವಳ್ಳಿ ನಾಕಾ, ಯಲ್ಲಾಪುರ ರಸ್ತೆಯ ಪ್ರಮುಖ ನಾಕಾ ಹಾಗೂ ಶಿರಸಿ ರಸ್ತೆಯಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. ಕಳ್ಳರು ಒಂದು ಕಡೆಯಿಂದ ಬಂದು ಮತ್ತೊಂದು ಕಡೆಯಿಂದ ಪರಾರಿಯಾಗುವ ಸಾಧ್ಯತೆಗೂ ಬ್ರೇಕ್ ಹಾಕಲು...

ಅಯ್ಯೋ ದೇವ್ರೇ, ಇವತ್ತು ಮುಂಡಗೋಡ ತಾಲೂಕಿನಲ್ಲಿ ಕಳ್ಳತನವಾಗಿದ್ದು ಎರಡಲ್ಲ, ಮೂರು ಕೇಸ್..! ಕರಗಿನಕೊಪ್ಪದ ಸೇವಾಲಾಲ್ ಮಂದಿರದ ಹುಂಡಿ ಕಳ್ಳತನ..!

ಅಯ್ಯೋ ದೇವ್ರೇ, ಇವತ್ತು ಮುಂಡಗೋಡ ತಾಲೂಕಿನಲ್ಲಿ ಕಳ್ಳತನವಾಗಿದ್ದು ಎರಡಲ್ಲ, ಮೂರು ಕೇಸ್..! ಕರಗಿನಕೊಪ್ಪದ ಸೇವಾಲಾಲ್ ಮಂದಿರದ ಹುಂಡಿ ಕಳ್ಳತನ..!

ಮುಂಡಗೋಡ ತಾಲೂಕಿನಲ್ಲಿ ಕಳ್ಳಕಾಕರ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಬದಲಾಗಿ ನಿರಾತಂಕವಾಗಿ ಸರಣೀ ಕಳ್ಳತನ ಮಾಡುತ್ತ ಹೊರಟಿದ್ದಾರೆ ಖದೀಮರು. ಅಂದಹಾಗೆ, ಇವತ್ತು ನಡೆದಿರೋ ಕಳ್ಳತನಗಳು ಕೇವಲ ಎರಡೇ ಅಲ್ಲ. ಬದಲಾಗಿ ಮೂರು. ಪಟ್ಟಣಕ್ಕೆ ಹೊಂದಿಕೊಂಡೇ ಇರೋ ಕರಗಿನಕೊಪ್ಪದ ಸೇವಾಲಾಲ್ ದೇವಸ್ಥಾನದ ಹುಂಡಿಯನ್ನೇ ಎತ್ತಾಕೊಂಡು ಹೋಗಿದ್ದಾರೆ ಕಳ್ಳರು..! ಸೇವಾಲಾಲರ ದೇವಸ್ಥಾನ..! ಅಂದಹಾಗೆ, ನಿನ್ನೆ ರಾತ್ರಿ ನಂದಿಪುರದ ಶ್ರೀನಿವಾಸರ ಅಂಗಡಿ ಹಾಗೂ ಬಾಚಣಕಿಯ ಕರಿಯಮ್ಮ ದೇವಿ ದೇವಸ್ಥಾನದ ಜೊತೆ ಜೊತೆಗೇ ಕರಗಿನಕೊಪ್ಪ ತಾಂಡಾದಲ್ಲಿ ಅಲ್ಲಿನ ಜನರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲರ ದೇವಸ್ಥಾನದ ಹುಂಡಿಯನ್ನೂ ದೋಚಿದ್ದಾರೆ ಕಳ್ಳರು. ದೇವಸ್ಥಾನದ ಬೀಗ ಮುರಿದು ಒಳ ಹೊಕ್ಕಿರೋ ಖದೀಮರು, ದೇವರ ರೊಕ್ಕವನ್ನೇ ಎಗರಿಸಿದ್ದಾರೆ. ಏನಿಲ್ಲವೆಂದರೂ ಒಂದೂವರೇ ಲಕ್ಷ..! ಅಸಲು, ಇಡೀ ಕರಗಿನಕೊಪ್ಪ ತಾಂಡಾ ಜನರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲರ ಕಾಣಿಕೆ ಹುಂಡಿಯನ್ನು ಕಳ್ಳರು ಕಂತ್ರಿ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ ಏನಿಲ್ಲವೆಂದರೂ ಒಂದೂವರೇ ಲಕ್ಷ ರೂ. ದೇವರ ರೊಕ್ಕ ಕಳ್ಳತನವಾಗಿದೆ ಅಂತೆ....