ಇದೇನಿದು ಲೋಯೊಲಾ ಶಿಕ್ಷಣ ಸಂಸ್ಥೆಯ ದುರಹಂಕಾರ..? ವಿದ್ಯಾರ್ಥಿಗಳ ರಕ್ಷಾಬಂಧನ ಕಿತ್ತೊಗೆದದ್ದು ಸರಿನಾ..? ಹಿಂದುಪರ ಸಂಘಟನೆಗಳ ಪ್ರೊಟೆಸ್ಟ್..!

ಇದೇನಿದು ಲೋಯೊಲಾ ಶಿಕ್ಷಣ ಸಂಸ್ಥೆಯ ದುರಹಂಕಾರ..? ವಿದ್ಯಾರ್ಥಿಗಳ ರಕ್ಷಾಬಂಧನ ಕಿತ್ತೊಗೆದದ್ದು ಸರಿನಾ..? ಹಿಂದುಪರ ಸಂಘಟನೆಗಳ ಪ್ರೊಟೆಸ್ಟ್..!

 ಮುಂಡಗೋಡಿನ ಲೋಯೊಲಾ ಶಿಕ್ಷಣ ಸಂಸ್ಥೆ ವಿರುದ್ಧ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿವೆ. ಹಿಂದು ವಿದ್ಯಾರ್ಥಿಗಳು ಕೈಗೆ ಕಟ್ಟಿಸಿಕೊಂಡಿದ್ದ ರಕ್ಷಾಬಂಧನದ ರಾಖಿಗಳನ್ನು ಈ ಶಾಲೆಯಲ್ಲಿ ಕಿತ್ತೊಗೆಯಲಾಗ್ತಿದೆಯಂತೆ, ಹಿಂದು ವಿದ್ಯಾರ್ಥಿಗಳು ಹಣೆಗೆ ಕುಂಕುಮ ಹಚ್ಚಿಕೊಳ್ಳುವ ಹಾಗಿಲ್ಲವಂತೆ, ಅಲ್ಲದೇ ಕೈಯಲ್ಲಿ ಯಾವುದೇ ತರಹದ ಧಾರ್ಮಿಕ ಭಾವನೆ ಸಾರುವ ದಾರಗಳನ್ನು ಕಟ್ಟಿಕೊಳ್ಳುವ ಹಾಗಿಲ್ಲವಂತೆ, ಹೀಗಾಗಿ ಇದ್ಯಾವ ನ್ಯಾಯ ಅಂತಾ ಪೋಷಕರು ಹಾಗು ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ರಾಖಿಗಿಲ್ಲ “ರಕ್ಷೆ” ಇತ್ತೀಚೆಗೆ ನಡೆದ ರಕ್ಷಾಬಂಧನದಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳು ತಮ್ಮ‌ ಕೈಗಳಿಗೆ ರಾಖಿ ಕಟ್ಟಿಕೊಂಡು ಬಂದಿದ್ರು. ಆದ್ರೆ, ಹಾಗೆ ರಾಖಿ ಕಟ್ಟಿಕೊಳ್ಳಬೇಡಿ ಅಂತ ಇಲ್ಲಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಗಳನ್ನು ಕಿತ್ತೆಸೆದಿದೆ ಅನ್ನೊ ಆರೋಪ ಕೇಳಿಬಂದಿದೆ. ಹೀಗಾಗಿ, ಈ ಶಾಲೆಯಲ್ಲಿ ಯಾಕೆ ಅಂತಹ ರೂಲ್ಸ್..? ಅಂತಾ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ. ಅವ್ಯವಸ್ಥೆ ಇದೆಯಾ.‌? ಇನ್ನು ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ಮಕ್ಕಳಿಗೆ ತುಂಬಾ ಕೀಳು ಮಟ್ಟದಲ್ಲಿ...

ಮೂಡಸಾಲಿಯಲ್ಲಿ ಕುಸಿದು ಬಿದ್ದ ಶಾಲಾ ಕಟ್ಟಡ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ, ಛೇ..ಬಿಇಓ ಸಾಹೇಬನ ನಿರ್ಲಕ್ಷಕ್ಕೆ ಏನೇನ್ನಬೇಕು..?

ಮೂಡಸಾಲಿಯಲ್ಲಿ ಕುಸಿದು ಬಿದ್ದ ಶಾಲಾ ಕಟ್ಟಡ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ, ಛೇ..ಬಿಇಓ ಸಾಹೇಬನ ನಿರ್ಲಕ್ಷಕ್ಕೆ ಏನೇನ್ನಬೇಕು..?

 ಮುಂಡಗೋಡ: ತಾಲೂಕಿನ ಮೂಡಸಾಲಿಯಲ್ಲಿ ಭಾರೀ ಅನಾಹುತವೊಂದು ಜಸ್ಟ್ ಮಿಸ್ ಆಗಿದೆ. ನಿರಂತರ ಮಳೆಯಿಂದ ನೆನೆದಿದ್ದ ಶಾಲಾ ಕೊಠಡಿ ಕುಸಿದು ಬಿದ್ದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಹೀಗಾಗಿನೇ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮೊದಲೇ ಸಂಶಯವಿತ್ತು..! ಅಂದಹಾಗೆ, ಮೂಡಸಾಲಿಯ ಸರ್ಕಾರಿ ಶಾಲೆಯ ಕಟ್ಟಡದ ದುಸ್ಥಿತಿ ಮೊದಲೇ ಅರಿವಿತ್ತು, ಸಂಶಯವಿತ್ತು. ಯಾಕಂದ್ರೆ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದ್ರೆ, ಅಂತಹ ಆತಂಕದ ನಡುವೆಯೇ ಅದೇ ಕೊಠಡಿಯಲ್ಲೇ ವಿದ್ಯಾರ್ಥಿಗಳು ನಿತ್ಯ ಪಾಠ ಕೇಳುತ್ತಿದ್ದರು. ಹಾಗೊಂದು ವೇಳೆ ರಾತ್ರಿ ನಡೆದಿರೋ ಘಟನೆ ಹಗಲಲ್ಲಿ ನಡೆದಿದ್ದರೇ ಅದೇಂತಹ ದುರಂತ ಸಂಭವಿಸುತ್ತಿತ್ತು..? ನೀವೇ ಯೋಚಿಸಿ. ಕೊಠಡಿ ಸಮಸ್ಯೆ..! ಅಂದಹಾಗೆ, ಮೂಡಸಾಲಿ ಶಾಲೆಯಲ್ಲಿ ಒಟ್ಟೂ 103 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದಾರೆ. ಅದ್ರಲ್ಲಿ 4 ಮತ್ತು 5 ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಇದೇ ಶಿಥಿಲವಾದ ಕೊಠಡಿಯಲ್ಲೇ ಕುಳಿತು ಪಾಠ ಕೇಳುತ್ತಿದ್ದರು‌. ಅಸಲಿಗೆ, ಕೊಠಡಿ ತುಂಬ ಬಿರುಕು ಬಿಟ್ಟು ಇನ್ನೇನು ಬೀಳುವ...

ಗಾಂಜಾ ಬೆಳೆದಿದ್ದ ಚಾಲಾಕಿ ಟಿಬೇಟಿಗನ ಬಂಧನ, ಹಸಿ ಹಸಿ ಗಾಂಜಾ ವಶಕ್ಕೆ ಪಡೆದ ಮುಂಡಗೋಡ ಪೊಲೀಸ್ರು..!

ಗಾಂಜಾ ಬೆಳೆದಿದ್ದ ಚಾಲಾಕಿ ಟಿಬೇಟಿಗನ ಬಂಧನ, ಹಸಿ ಹಸಿ ಗಾಂಜಾ ವಶಕ್ಕೆ ಪಡೆದ ಮುಂಡಗೋಡ ಪೊಲೀಸ್ರು..!

ಮುಂಡಗೋಡ: ಪೊಲೀಸರು ಸ್ವಾತಂತ್ರೋತ್ಸವದ ದಿನವೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಟಿಬೇಟಿಯನ್‌ ಕಾಲೋನಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಸಮೇತ ಆರೋಪಿಯನ್ನು ಎಳೆದು ತಂದಿದ್ದಾರೆ‌. ಅಂದಹಾಗೆ, ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 4 ರ ನ್ಯಾಮಗೆಲ್ ಚೋಟೆನ್ ಎಂಬುವ ವ್ಯಕ್ತಿಯೇ ಆರೋಪಿಯಾಗಿದ್ದು ಸದ್ಯ ಅಂದರ್ ಆಗಿದ್ದಾನೆ. ಹಸಿ ಹಸಿಯಾದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು ಬರೋಬ್ಬರಿ 6 ಕೆಜಿ 900 ಗ್ರಾಂ ತೂಕ ತೂಗಿದೆ. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು, ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಕೃಷಿ ಇಲಾಖೆ ಕಛೇರಿ ಎದುರು ಧ್ವಜಾರೋಹಣ ಮಾಡೇ ಇಲ್ಲ..! ಏನ್ರಿ ಕುಲಕರ್ಣಿ ಸಾಹೇಬಾ ಇದೇನಾ ನಿಮ್ಮ ಜವಾಬ್ದಾರಿ..?

ಕೃಷಿ ಇಲಾಖೆ ಕಛೇರಿ ಎದುರು ಧ್ವಜಾರೋಹಣ ಮಾಡೇ ಇಲ್ಲ..! ಏನ್ರಿ ಕುಲಕರ್ಣಿ ಸಾಹೇಬಾ ಇದೇನಾ ನಿಮ್ಮ ಜವಾಬ್ದಾರಿ..?

 ಮುಂಡಗೋಡ: ಇಲ್ಲಿನ ಕೃಷಿ ಅಧಿಕಾರಿಗಳು ಅದೆಲ್ಲಿಗೆ ಹೋಗಿ ನಿದ್ದೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅಸಲು “ಹರ್ ಘರ್ ತಿರಂಗಾ” ಕಾರ್ಯಕ್ರಮ ಇವ್ರಿಗೆ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ಈ ಬೇಜವಾಬ್ದಾರಿ ಅಪರಾವತಾರಿ ಅಧಿಕಾರಿಗಳು ಕೃಷಿ ಇಲಾಖೆ ಎದುರು ಧ್ವಜಾರೋಹಣವನ್ನೇ ಮಾಡಿಲ್ಲ. ಹೀಗಾಗಿ, ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಕ್ಯಾರೇ ಅಂದಿಲ್ಲ. ಎಲ್ಲಿದ್ದಿರಾ ಕುಲಕರ್ಣಿ ಸಾಹೇಬ್ರೆ..? ಅಸಲು, ಮುಂಡಗೋಡಿನ ಕೃಷಿ ಇಲಾಖೆಯ ಅಂಗಳಕ್ಕೆ ಬಂದ್ರೆ ಬರೀ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವ ಪರಿಸರವಿದೆ. ಕುಲಕರ್ಣಿ ಅನ್ನೋ ಆ ಯಪ್ಪಾ ಬರೀ ಮಾತಾಡುವುದಕ್ಕಷ್ಟೇ ಸೀಮಿತ ಅನ್ನುವಂತಾಗಿದೆ. ಹೀಗಾಗಿ, ತಾಲೂಕಿನ ಅದೇಷ್ಟೋ ರೈತರು ನಿತ್ಯವೂ “ಅಡಿಕೆ ಎಲೆ” ತಿಂದು ನೇರವಾಗಿ ಕೃಷಿ ಇಲಾಖೆ ಆಫೀಸಿನೆಡೆಗೇ ಬರುವಂತಾಗಿದೆ ಅನ್ನೋದು ಬೇರೆ ಮಾತು. ಆದ್ರೆ ಈ ಅಧಿಕಾರಿಗೆ ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮದ ಅರಿವೂ ಇಲ್ಲದೇ ಹೊಯ್ತಲ್ಲ ಅನ್ನೋದೇ ಈಗಿರೋ ಮೂಲ ಆಕ್ರೋಶ. ಬಣ ಬಣಗುಡುತ್ತಿದೆ ಧ್ವಜ ಸ್ತಂಭ..! ಅಸಲು, ನಿನ್ನೆಯಿಂದ ಅಂದ್ರೆ ಆಗಷ್ಟ 13 ರಿಂದ ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ...

ಶೂ ಧರಿಸಿಯೆ ಧ್ವಜ ಸ್ತಂಭ ಏರಿದ ಗುಂಜಾವತಿ ಅರಣ್ಯಾಧಿಕಾರಿ, ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಅಲ್ವಾ ಸಾಹೇಬ್ರೆ..?

ಶೂ ಧರಿಸಿಯೆ ಧ್ವಜ ಸ್ತಂಭ ಏರಿದ ಗುಂಜಾವತಿ ಅರಣ್ಯಾಧಿಕಾರಿ, ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಅಲ್ವಾ ಸಾಹೇಬ್ರೆ..?

ಮುಂಡಗೋಡ: ಸದ್ಯ, ರಾಷ್ಟ್ರಾಧ್ಯಂತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರ ಸಂಭ್ರಮ ಜೋರಾಗಿದೆ. ಅಗಷ್ಟ 13 ರಿಂದಲೇ “ಹರ್ ಘರ್ ತಿರಂಗಾ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ದೇಶಾಧ್ಯಂತ ಅಮೃತ ಮಹೋತ್ಸವದ ಸಂಭ್ರಮ ಮನೆ, ಮನೆ ಮಾತಾಗಿದೆ‌. ಈ ಹೊತ್ತಲ್ಲೇ ಅವರೊಬ್ಬ ಅಧಿಕಾರಿ ಹೀಗೆ ಮಾಡಿದ್ದು ಸರಿನಾ ಅನ್ನೋ ಪ್ರಶ್ನೆ ಕೂಡ ತಾಲೂಕಿನಾಧ್ಯಂತ ಚರ್ಚೆಯಾಗ್ತಿದೆ. ತಾಲೂಕಿನ ಗುಂಜಾವತಿ ಭಾಗದ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ರಾ..? ಈ ಪೋಟೋ ನೋಡಿದ್ರೆ ಎಂಥವರಿಗೂ ಹಾಗೆ ಅನ್ನಿಸದೇ ಇರಲ್ಲ. ಶ್ರೀಶೈಲ್ ಐನಾಪುರ..! ಅವ್ರ ಹೆಸ್ರು ಶ್ರೀಶೈಲ್ ಐನಾಪುರ ಸದ್ಯ ಗುಂಜಾವತಿ ಅರಣ್ಯ ಭಾಗದ ಉಪ ವಲಯ ಅರಣ್ಯಾಧಿಕಾರಿ. “ಹರ್ ಘರ್ ತಿರಂಗಾ” ಕಾರ್ಯಕ್ರಮಕ್ಕೆ ಪೂರಕವಾಗಿ ಇವತ್ತು ಗುಂಜಾವತಿಯ ತಮ್ಮ ಕಚೇರಿಯ ಎದುರು ಈ ಫಾರೆಸ್ಟರ್ ಕೂಡ ಧ್ವಜಾರೋಹಣ ಮಾಡಿದ್ದಾರೆ. ಆದ್ರೆ, ದ್ವಜಾರೋಹಣ ಮಾಡುವಾಗ ಶೂ ಧರಿಸಿಯೇ ಧ್ವಜಸ್ತಂಭದ ಮೇಲೆ ನಿಂತಿದ್ದಾರೆ‌. ಹೀಗಾಗಿ, ಇವರ ಈ ರೀತಿಯ ವರ್ತನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಅಪಮಾನ...

ಹಿರಿಯ ಸಹಕಾರಿ ಧುರೀಣ ಎಂ.ಬಿ.ಕುಟ್ರಿ ವಿಧಿವಶ..!

ಹಿರಿಯ ಸಹಕಾರಿ ಧುರೀಣ ಎಂ.ಬಿ.ಕುಟ್ರಿ ವಿಧಿವಶ..!

ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಮುಖಂಡ, ಹಿರಿಯ ರಾಜಕಾರಣಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಕುಟ್ರಿ ವಿಧಿವಶರಾಗಿದ್ದಾರೆ‌‌. ಹುಬ್ಬಳ್ಳಿಯ SDM ನಲ್ಲಿ ಎಂ.ಬಿ.ಕುಟ್ರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೀಡಾಗಿದ್ದ ಎಂ.ಬಿ.ಕುಟ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ. APMC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಬಿ.ಕುಟ್ರಿ ಜನಾನುರಾಗಿಯಾಗಿದ್ದರು. ಶ್ರೀಯುತರ ನಿಧನಕ್ಕೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

ಉಗ್ರ ಸ್ವರೂಪಕ್ಕಿಳಿದ ವಿದ್ಯಾರ್ಥಿಗಳ ಹೋರಾಟ, ಮುಂಡಗೋಡಿನಲ್ಲೇ ರಸ್ತೆ ತಡೆದ ನಂದಿಕಟ್ಟಾ ಗ್ರಾಮಸ್ಥರು..!

ಉಗ್ರ ಸ್ವರೂಪಕ್ಕಿಳಿದ ವಿದ್ಯಾರ್ಥಿಗಳ ಹೋರಾಟ, ಮುಂಡಗೋಡಿನಲ್ಲೇ ರಸ್ತೆ ತಡೆದ ನಂದಿಕಟ್ಟಾ ಗ್ರಾಮಸ್ಥರು..!

 ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಸ್ಥರ ಆಕ್ರೋಶ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ವಿದ್ಯಾರ್ಥಿಗಳಿಗೆ ನಿತ್ಯವೂ ಉಂಟಾಗ್ತಿರೊ ಬಸ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲೇ ಬೇಕು. ನಮಗೆ ಬಸ್ ಬೇಕೆ ಬೇಕು ಅಂತಾ ಸತತವಾಗಿ ಪ್ರತಿಭಟನೆ ಕೈಗೊಂಡಿರೋ ನಂದಿಕಟ್ಟ ಭಾಗದ ವಿದ್ಯಾರ್ಥಿಗಳು, ಪೋಷಕರು ಇವತ್ತು ಮುಂಡಗೋಡಿನಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡ್ರು. ನಾಲಾಯಕ ಸಾರಿಗೆ ಅಧಿಕಾರಿಗಳೇ..! ಅಸಲು, ನಿನ್ನೆ ಸಂಜೆ 4.30 ರಿಂದ ಇಂದೂರಿನ ಸಮೀಪ ಪ್ರೌಢಶಾಲೆಯ ಹತ್ತಿರ ಬಸ್ ತಡೆದು ಪ್ರತಿಭಟಿಸಿದ್ದ ವಿದ್ಯಾರ್ಥಿಗಳಿಗೆ ಯಾರೂ ಕ್ಯಾರೇ ಅಂದಿರಲಿಲ್ಲ. ಸುರಿವ ಮಳೆಯಲ್ಲಿ ಪುಟ್ಟ ಕಂದಮ್ಮಗಳು ಬರೋಬ್ಬರಿ 6 ತಾಸು ಪ್ರತಿಭಟನೆ ಕೈಗೊಂಡಿದ್ದರು. ಬಸ್ ತಡೆದು ನಿಲ್ಲಿಸಿದ್ದರು. ಆದ್ರೆ ಕೆಎಸ್ಆರ್ಟಿಸಿ ಯ ಯಾವೊಬ್ಬ ಅಧಿಕಾರಿಯೂ ಅತ್ತ ಕಡೆ ಸುಳಿದಿರಲೇ ಇಲ್ಲ. ತಮ್ಮ ಮನೆಯ ಮಕ್ಕಳಿಗೆ ಅಂತಹ ಪರಿಸ್ಥಿತಿ ಬಂದು, ಮನೆಗೆ ಹೋಗದೇ ಮಳೆಯಲ್ಲಿ ನೆನೆದುಕೊಂಡು ಪ್ರತಿಭಟನೆ ನಡೆಸುತ್ತಿದ್ದರೆ ಈ ನಾಲಾಯಕ ಅಧಿಕಾರಿಗಳು ಸುಮ್ಮನೆ ಇರ್ತಿದ್ರಾ..? ಇಂತಹ ಪ್ರಶ್ನೆ ಪೋಷಕರು ಕೇಳ್ತಿದಾರೆ.  ಹೆಚ್ಚಾಯ್ತು ಆಕ್ರೋಶ..!...

ನಮಗೆ ಬಸ್ ಬೇಕೇ ಬೇಕು..!  ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!

ನಮಗೆ ಬಸ್ ಬೇಕೇ ಬೇಕು..! ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!

 ಮುಂಡಗೋಡ: ತಾಲೂಕಿನ ಇಂದೂರು ಪ್ರೌಢಶಾಲೆ ಹತ್ತಿರ ಸುರಿವ ಮಳೆಯಲ್ಲೇ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ರು. ಅಸಲು, ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಕೆಂದಲಗೇರಿ, ಹುಲಿಹೊಂಡ, ಬಸಾಪುರ ಗ್ರಾಮದ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ಪ್ರತಿಭಟಿಸಿದ್ದಾರೆ.  ಇಂದೂರುಹೈಸ್ಕೂಲ್ ಹತ್ತಿರ.. ಅಂದಹಾಗೆ, ಇಂದು ಸಂಜೆ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಸುಮಾರು 40 ವಿದ್ಯಾರ್ಥಿಗಳು ಬಸ್ ಹತ್ತಲು ರೆಡಿಯಾಗಿದ್ದಾರೆ. ಆದ್ರೆ, ಆದಾಗಲೇ ಬಸ್ ಸಂಪೂರ್ಣ ಭರ್ತಿಯಾಗಿತ್ತು. ಹೀಗಾಗಿ, ಬಸ್ ನಲ್ಲಿ ಜಾಗವಿಲ್ಲ ಅಂತಾ ನಿರ್ವಾಹಕ ಹೇಳಿದ್ದಾನೆ. ಸುರಿವ ಮಳೆಯಲ್ಲಿ ವಿದ್ಯಾರ್ಥಿಗಳು ಮನೆಗೆ ಹೋಗುವುದಾದರೂ ಹೇಗೆ ಅಂತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಕ್ಷಣವೇ ಬಸ್ ತಡೆದು ಪ್ರತಿಭಟನೆಗಿಳಿದಿದ್ದಾರೆ‌. ಮಳೆಯಲ್ಲೇ ಪ್ರತಿಭಟನೆ..! ನೂರಾರು ವಿದ್ಯಾರ್ಥಿಗಳು ಬಸ್ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ಶುರು ಮಾಡಿದ್ದಾರೆ. ನಿಜ ಅಂದ್ರೆ ಪುಟ್ಟ ಪುಟ್ಟ...

ಸನವಳ್ಳಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಮೂಲಕ ಹೊರಟ ಭವ್ಯ ಮೂರ್ತಿ..!

ಸನವಳ್ಳಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಮೂಲಕ ಹೊರಟ ಭವ್ಯ ಮೂರ್ತಿ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹೀಗಾಗಿ, ಇಂದು ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಆವರಣಕ್ಕೆ ಆಗಮಿಸಿದ್ದ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಭವ್ಯ ಸ್ವಾಗತ ಕೋರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಯಣ್ಣನ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು. ಇನ್ನು ಮೆರವಣಿಗೆ ನಂತರ ಸನವಳ್ಳಿ ಗ್ರಾಮಕ್ಕೆ ಕೊಂಡೊಯ್ಯಲಾಗುವ ರಾಯಣ್ಣನ ಮೂರ್ತಿಗೆ ವಿಶೇಷ ಗೌರವಗಳೊಂದಿಗೆ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ.

ಮುಂಡಗೋಡ ತಾಲೂಕಿನಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಸಂಭ್ರಮ..!

ಮುಂಡಗೋಡ ತಾಲೂಕಿನಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಸಂಭ್ರಮ..!

 ಮುಂಡಗೋಡ: ತಾಲೂಕಿನಾಧ್ಯಂತ ಮೊಹರಂ ಹಬ್ಬದ ಕೊನೆಯ ದಿನದ ಸಂಭ್ರಮ ಜೋರಾಗಿದೆ. ಕಳೆದ ಐದು ದಿನಗಳಿಂದ ತಾಲೂಕಿನಾಧ್ಯಂತ ಹಿಂದು ಮುಸ್ಲಿಂ ಬಾಂಧವರು ಭಾವೈಕ್ಯತೆಯ ಮೊಹರಂ ಆಚರಿಸುತ್ತಿದ್ದಾರೆ. ಬುಧವಾರ ಮೊಹರಂ ಕೊನೆಯ ದಿನದ ಆಚರಣೆಯಾಗಿದೆ.  ಅಗ್ನಿ ಕುಂಡ..! ತಾಲೂಕಿನೆಲ್ಲೆಡೆ ಮೊಹರಂ ಪಂಜಾಗಳನ್ನು ಪ್ರತಿಷ್ಟಾಪಿಸಿ ಇಂದು ವಿಸರ್ಜನೆ ನಡೆಯುತ್ತಿದೆ. ಹೀಗಾಗಿ, ಇಂದು ಬೆಳಿಗಿನ ಜಾವ ಅಗ್ನಿ ಕುಂಡ ರಚಿಸಿ ಪಂಜಾಗಳನ್ನು ಹೊತ್ತು ಕೆಂಡ ತುಳಿಯಲಾಯಿತು. ಆ ನಂತರದಲ್ಲಿ ಪಂಜಾಗಳ‌ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಂಜಾಗಳಿಗೆ ಗ್ರಾಮಸ್ಥರು ಸಕ್ಕರೆ ಬೆಲ್ಲ ನೀಡಿ, ದರ್ಶನ ಪಡೆದ್ರು. ಅಲ್ಲಾವಿ ಕುಣಿತ..! ಇ‌ನ್ನು ಸಾಂಪ್ರದಾಯಿಕವಾಗಿ ವಿಶೇಷ ಅಲ್ಲಾವಿ ಹೆಜ್ಜೆ ಕುಣಿತ ಆಕರ್ಷಕವಾಗಿತ್ತು. ಅಂದಹಾಗೆ ಹಿಂದೂ‌ ಮುಸ್ಲಿಂ ಭಾವೈಕ್ಯತೆಗೆ ಕೊಂಡಿಯಾಗಿರೋ ಮೊಹರಂ ಹಬ್ಬ ಹಿಂದುಗಳ ಪಾಲಿಗೆ “ಅಲ್ಲಬ್ಬ” ಅಂತಲೇ ಆಚರಣೆಯಾಗತ್ತೆ. ಐದು ದಿನಗಳ ಕಾಲ ಸಂಭ್ರಮ ಜೋರಾಗಿರತ್ತೆ. ಕೊನೆಯ ದಿನದ ಹಬ್ಬಕ್ಕೆ ಇಂದು ಹಿಂದುಗಳು ವಿಶೇಷ ಖಾದ್ಯವಾದ ಚ್ಯೊಂಗ್ಯಾ ಮಾಡಿ ನೈವೇದ್ಯ ಅರ್ಪಿಸುವ ಪದ್ದತಿಯಿದೆ.

error: Content is protected !!