ಶಿಗ್ಗಾವಿ ಯೋಧ ಪಂಜಾಬಿನಲ್ಲಿ ಹುತಾತ್ಮ, ಶೀಲವಂತರ ಸೋಮಾಪುರದಲ್ಲಿ ಮಡುಗಟ್ಟಿದ ಶೋಕ..!

ಶಿಗ್ಗಾವಿ; ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಯೋಧ ಪಂಜಾಬಿನಲ್ಲಿ ಹುತಾತ್ಮರಾಗಿದ್ದಾರೆ‌. ಶಿವರಾಜ್ ಗದಿಗೆಪ್ಪ ಗಂಗಮ್ಮನವರ್ (23) ಎಂಬುವ ಯೋಧ ಹುತಾತ್ಮರಾಗಿದ್ದಾರೆ.

ಪಂಜಾಬಿನ ಬಟಿಂಡಾ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತವಾಗಿ ಮರಣ ಹೊಂದಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಯೋಧ ಶಿವರಾಜ್, 2016ರಲ್ಲಿ ಇಂಡಿಯನ್ ಆರ್ಮಿಗೆ ಆಯ್ಕೆಯಾಗಿದ್ದರು.
ಇನ್ನು ಶಿಗ್ಗಾವಿ ತಾಲೂಕಿನ ಶೀಲವಂತ ಸೋಮಪುರ ಗ್ರಾಮದಲ್ಲಿ ಮೃತನ ಮನೆಯಲ್ಲಿ ತಂದೆ ಗದಿಗೆಪ್ಪ, ತಾಯಿ ಗೌರಮ್ಮ, 02 ಜನ ಹಿರಿಯ ಸಹೋದರರು (ಒಬ್ಬ ಶಿಕ್ಷಕ,ಇನ್ನೊಬ್ಬರು ವ್ಯವಸಾಯ ಮಾಡುತ್ತಿರುತ್ತಾರೆ) ಹಾಗೂ ಓರ್ವ ಸಹೋದರಿಯಿದ್ದಾರೆ.

ಮೃತ ಸೈನಿಕ ಕೊನೆಯದಾಗಿ ಆಗಸ್ಟ್ ತಿಂಗಳಲ್ಲಿ ತಮ್ಮ ಗ್ರಾಮಕ್ಕೆ 30 ದಿನ ರಜೆ ಬಂದು ವಾಪಸ್ ಕರ್ತವ್ಯಕ್ಕೆ ಹೋಗಿರುತ್ತಾರೆ. ಹುತಾತ್ಮ ಯೋಧನ ಪಾರ್ಥೀವ ಶರೀರ ಇಂದು ರಾತ್ರಿ ಅಥವಾ ಬೆಳಿಗ್ಗೆ ಸ್ವಗ್ರಾಮಕ್ಕೆ ಆಗಮಿಸೋ ಸಾಧ್ಯತೆಯಿದೆ ಎನ್ನಲಾಗಿದೆ.

ಸದ್ಯ ಯೋಧನ ಸಾವಿನ ಸುದ್ದಿ ತಿಳಿದು ಶೀಲವಂತರ ಸೋಮಾಪುರದಲ್ಲಿ ನೀರವ ಮೌನ ಆವರಿಸಿದೆ.

error: Content is protected !!