Home ಉತ್ತರ ಕನ್ನಡ

Category: ಉತ್ತರ ಕನ್ನಡ

Post

LVK ಯಿಂದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಕ ಕಿಟ್, ದಿನಸಿ ಕಿಟ್ ವಿತರಣೆ..!

ಮುಂಡಗೋಡ- ತಾಲೂಕಿನ ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ LVK ಮುಂಡಗೋಡ ವತಿಯಿಂದ ಆಶಾ ಕರ್ಯಕರ್ತೆಯರಿಗೆ ಸ್ಯಾನಿಟೈಸ್, ಮಾಸ್ಕ್ ಸೇರಿ ಆರೋಗ್ಯ ರಕ್ಷಕ ಕಿಟ್ ವಿತರಣೆ ಮಾಡಲಾಯಿತು. ಹಾಗೇ ಆಶಾ ಕರ್ಯಕರ್ತರಿಗೆ ದಿನಸಿ ಸಾಮಗ್ರಿಗಳ ಕಿಟ್ ನೀಡಲಾಯಿತು. ಮುಂಡಗೋಡ ತಾಲೂಕಿನಲ್ಲಿ ಸಾಮಾಜಿಕ ಜವಾಬ್ದಾರಿಯ ಕಾರ್ಯಗಳನ್ನು ಮಾಡುತ್ತಿರೋ LVK ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಇಂತಹದ್ದೊಂದು ಸೇವೆ ಮಾಡುತ್ತಿದೆ. ಇನ್ನು ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಸ್‌.ವಿ‌. ಸುಳ್ಳದ, LVK ಸಂಚಾಲಕರು, ಆರೋಗ್ಯ ಸಿಬ್ಬಂದಿಗಳು...

Post
ಮುಂಡಗೋಡ ತಾಲೂಕಿನಲ್ಲಿಂದು 53 ಕೊರೋನಾ ಪಾಸಿಟಿವ್, 18 ಗುಣಮುಖ, ಓರ್ವ ಸಾವು..!

ಮುಂಡಗೋಡ ತಾಲೂಕಿನಲ್ಲಿಂದು 53 ಕೊರೋನಾ ಪಾಸಿಟಿವ್, 18 ಗುಣಮುಖ, ಓರ್ವ ಸಾವು..!

ಮುಂಡಗೋಡ ತಾಲೂಕಿನಲ್ಲಿ ಇಂದು 53 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟೂ 18 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ, ಹಾಗೇ 68 ವರ್ಷದ ಇಂದೂರಿನ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಅಂತಾ ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್ ಇಂಗಳೆ ಮಾಹಿತಿ ನೀಡಿದ್ದಾರೆ. ಇನ್ನು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಡಿಶ್ಚಾರ್ಜ್ ಆದವರಿಗೆ ಕೋವಿಡ್ ಕೇರ್ ಸೆಂಟರ್ ನ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಶುಭ ಹಾರೈಸಿ ಬಿಳ್ಕೊಟ್ಟರು..

Post
ಅಕ್ರಮ ಮದ್ಯ ಕುಡಿಯಲು ಅವಕಾಶ, ಚಹಾ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ..!

ಅಕ್ರಮ ಮದ್ಯ ಕುಡಿಯಲು ಅವಕಾಶ, ಚಹಾ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ..!

ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ನ್ಯಾಸರ್ಗಿ ಕ್ರಾಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ, ತನ್ನ ಅಂಗಡಿಯಲ್ಲೆ ಮದ್ಯ ಕುಡಿಯಲು ಅನುವು ಮಾಡಿಕೊಟ್ಟು ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಚಣಕಿ ಗ್ರಾಮದ ನಾಗರಾಜ್ ದೊಡ್ಡ ಹನ್ಮಂತಪ್ಪ ವಡ್ಡರ ಎಂಬುವವನೇ ಆರೋಪಿಯಾಗಿದ್ದಾನೆ.. ಈತ ತನ್ನ ಚಹಾ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ, ಅಲ್ಲದೇ ಅಲ್ಲಿಯೇ ಮಧ್ಯ ಕುಡಿಯಲು ಜನರಿಗೆ ಅವಕಾಶ ನೀಡುತ್ತಿದ್ದ. ಹೀಗಾಗಿ ಮುಂಡಗೋಡ ಕ್ರೈಂ ಪಿಎಸ್...

Post
ಮೃತಪಟ್ಟ ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಫರ್ಧಾ ಹೋರಿ..!

ಮೃತಪಟ್ಟ ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಫರ್ಧಾ ಹೋರಿ..!

ಮುಂಡಗೋಡ-ತಾಲೂಕಿನ ಹೆಮ್ಮೆಯ ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಪರ್ಧಾ ಹೋರಿ ಅನಾರೋಗ್ಯದ ಹಿನ್ನೆಲೆ ನಿನ್ನೆ ತಡರಾತ್ರಿ ಮೃತಪಟ್ಟಿದೆ. ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಪರ್ಧಾ ಹೋರಿ ಎಂದೇ ಖ್ಯಾತಿಯಾಗಿರುವ ಹೋರಿ, ತೀವ್ರ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದೆ. ರಾಜ್ಯದ ನಾನಾ ಭಾಗಗಳಲ್ಲಿ ನಡೆದಿದ್ದ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿತ್ತು. ಅದ್ರಲ್ಲೂ ಹಾನಗಲ್, ಬೆಟ್ಟದಕುರ್ಲಿ ಹಾಗೂ ಖಚವಿ ಹೀಗೆ ಅನೇಕ ಗ್ರಾಮಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ಯಲ್ಲಿ ಪಾಲ್ಗೊಂಡು ಭಾರೀ ಬಹುಮಾನಗಳನ್ನು ಬಾಚಿ ಕೊಂಡಿತ್ತು.....

Post

ಮುಂಡಗೋಡ ಪಿಡ್ಬ್ಲೂಡಿ ಇಂಜಿನೀಯರ್ ಸುಭಾಸ್ ವಡ್ಡತ್ತಿ ನಿಧನ..!

ಮುಂಡಗೋಡ- ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಭಾಸ್ ವಡ್ಡತ್ತಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವ್ರು ಇಂದು ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ರವಿವಾರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೃತರ ಸ್ವಗ್ರಾಮದಲ್ಲಿ ನಡೆಯಲಿದೆ ಅಂತಾ ಕುಟುಂಬ ಮೂಲಗಳು ತಿಳಿಸಿವೆ. ಇನ್ನು, ಸುಭಾಸ್ ವಡ್ಡತ್ತಿ ನಿಧನಕ್ಕೆ ತಾಲೂಕಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Post

ಮುಂಡಗೋಡ ತಾಲೂಕಿನಲ್ಲಿ ಝಂಡೂ ಮೆಣಸಿನಕಾಯಿ ಬೆಳೆದ ರೈತರಿಗೆ ಸಂಕಷ್ಟ..!

ಮುಂಡಗೋಡ-ತಾಲೂಕಿನಲ್ಲಿ ಲಾಕ್ ಡೌನ್ ತಂದಿರೋ ಸಂಕಷ್ಟ ಒಂದಾ ಎರಡಾ.. ಬಡ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಗೋಳು ಒಂದೆಡೆಯಾದ್ರೆ, ಕೃಷಿಯನ್ನೇ ನಂಬಿ ಬದುಕುತ್ತಿರೊ ರೈತರ ಗೋಳು ಮತ್ತೊಂದೆಡೆಯಾಗಿದೆ‌. ಹೌದು, ಮುಂಡಗೋಡ ತಾಲೂಕಿನಲ್ಲಿ ಬೇಸಿಗೆ ಬೆಳೆಯಾಗಿ ಬೆಳೆಯಲಾಗಿರೊ ಝಂಡೂ ಮೆಣಸಿನಕಾಯಿ ಬರಪೂರ ಬೆಳೆದಿದ್ದರೂ ಸೂಕ್ತ ಬೆಲೆ ಸಿಗದೆ ರೈತನ ಕನಸಿಗೆ ಕೊಳ್ಳೆ ಇಟ್ಟಿದೆ. ಲಾಕ್ ಡೌನ್ ಆಗುವ ಮುನ್ನ ಪ್ರತೀ ಕ್ವಿಂಟಲ್ ಗೆ 4 ಸಾವಿರದ ವರೆಗೂ ಇದ್ದ ಝಂಡೂ ಮೆಣಸಿನಕಾಯಿ ಬೆಲೆ, ಈಗ 2 ಸಾವಿರ ರೂ. ಆಸುಪಾಸಿಗೆ...

Post

ಕೊರೋನಾ ಕುರಿತು ಕುಂಚಗಳಲ್ಲೇ ಜಾಗ್ರತಿ ಮುಡಿಸುತ್ತಿರೊ ಕಲಾವಿದ

ವಿಶೇಷ ವರದಿ: ಮುಂಡಗೋಡ: ಆತ ಓರ್ವ ಚಿತ್ರ ಕಲಾವಿದ, ಪೇಂಟಿಂಗ್ ಮಾಡಿಕೊಂಡು ತನ್ನ ಬದುಕು ಕಟ್ಟಿಕೊಂಡಿದ್ದವ, ಆದ್ರೆ ಸದ್ಯ ಕೊರೋನಾ ಮಹಾಮಾರಿ ಜನರ ಜೀವ ಹಿಂಡುತ್ತಿರೋ ಸಂದರ್ಭದಲ್ಲಿ ಆತನೂ ಬಸವಳಿದು ಹೋಗಿದ್ದ.. ಕೊರೋನಾ ಮಹಾಮಾರಿಯಿಂದ ಅದೇಷ್ಟೋ ಸ್ನೇಹಿತರಿಗೆ ಆಗುತ್ತಿರೋ ತೊಂದರೆ, ಸಂಕಷ್ಟಗಳನ್ನು ಕಣ್ಣಾರೆ ಕಂಡಿದ್ದ, ಹೀಗಾಗಿ ಕೊರೋನಾ ವಿರುದ್ಧ ತಾನೂ ಯುದ್ಧ ಸಾರಬೇಕು ಅಂತಾ ನಿರ್ಧಾರ ಮಾಡಿದ್ದ.. ಯಸ್, ಹೀಗೆ ಕೊರೋನಾ ಹಿಮ್ಮೆಟ್ಟಿಸಲು ಆ ಕಲಾವಿದನಿಗೆ ಹೊಳೆದದ್ದು ಬೇರೆ ಏನೂ ಅಲ್ಲ.. ಜನ್ರಿಗೆ ಜಾಗ್ರತಿ ಮೂಡಿಸುವ ಮಹತ್ಕಾರ್ಯ.....

Post

ಸನವಳ್ಳಿ ಗ್ರಾಮದಲ್ಲಿ ಗಟಾರದ ಕೊಳಚೆ ನೀರು ರಸ್ತೆ ಮೇಲೆ: ಕಣ್ಣಿದ್ದು ಕುರುಡಾದ ಅಧಿಕಾರಿಗಳು..!

ಮುಂಡಗೋಡ- ತಾಲೂಕಿನ ಸಾಲಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸನವಳ್ಳಿ ಗ್ರಾಮದಲ್ಲಿ ಇದುವರೆಗೂ ಗ್ರಾಮದ ಮುಖ್ಯರಸ್ತೆಯಲ್ಲಿ ಪಕ್ಕಾಗಟಾರ ಇಲ್ಲದೆ ಚರಂಡಿ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ಇನ್ನಿಲ್ಲದ ಪಜೀತಿ ತಂದಿಡುತ್ತಿದೆ..! ಗಟಾರದ ಕಲುಷಿತ ನೀರು ಸಂಪೂರ್ಣವಾಗಿ ಮುಖ್ಯ ರಸ್ತೆಯ ಮೇಲೆ ಬಂದು ಸಾರ್ವಜನಿಕರ ಓಡಾಟಕ್ಕೆ, ವಾಹನ ಸವಾರರಿಗೆ ತೊಂದರೆಯಾಗಿದೆ. ವಾಹನ ಸವಾರರು ಪ್ರತಿದಿನವೂ ಈ ರಸ್ತೆಯಲ್ಲಿ ಜಾರಿಬಿದ್ದು ಗಾಯಗೊಂಡಿರೋ ಸಾಕಷ್ಟು ಪ್ರಕರಣಗಳಿವೆ. ನಿತ್ಯವೂ ಹೀಗೆ ಈ ರಸ್ತೆಯಲ್ಲಿ ಎದ್ದು ಬಿದ್ದು ಅಂಗೈಯಲ್ಲಿ ಜೀವ ಹಿಡಿದು ಓಡಾಡುವುದು ಅನಿವಾರ್ಯ...

Post

ಮುಂಡಗೋಡ ತಾಲೂಕಾಸ್ಪತ್ರೆಗೆ, ಅಂಬ್ಯುಲೆನ್ಸ್, ಕೋವಿಡ್ ಕೇರ್ ಕಿಟ್ ವಿತರಿಸಿದ ಹೆಬ್ಬಾರ್..!

ಮುಂಡಗೋಡ- ತಾಲೂಕಾಸ್ಪತ್ರೆಯ ಆವರಣದಲ್ಲಿ ಇಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮುಂಡಗೋಡ ತಾಲೂಕಾ ಆಸ್ಪತ್ರೆಗೆ 2 ಹೊಸ ಅಂಬ್ಯುಲೆನ್ಸ್ ಹಸ್ತಾಂತರ ಹಾಗೂ ಕೋವಿಡ್ ಶಂಕಿತರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ನಿಶಾನೆ ತೋರಿಸುವ ಮೂಲಕ ಅಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್, ಕೋವಿಡ್ ಶಂಕಿತರಿಗೆ ನೀಡಲಾಗುವ ಕೋವಿಡ್ ಕೇರ್ ಕಿಟ್ ಬಿಡುಗಡೆಗೊಳಿಸಿದ್ರು. ಈ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಉತ್ತರ ಕನ್ನಡ ಜಿಲ್ಲಾಧಿಕಾರಿ...

Post
ಸಿಎಂ ಬದಲಾವಣೆ ಯಾವ ಕಾರಣಕ್ಕೂ ಇಲ್ಲ: ಸಿ.ಪಿ.ಯೋಗೀಶ್ವರ್ ಗೆ ಸಚಿವ ಹೆಬ್ಬಾರ್ ಟಾಂಗ್..!

ಸಿಎಂ ಬದಲಾವಣೆ ಯಾವ ಕಾರಣಕ್ಕೂ ಇಲ್ಲ: ಸಿ.ಪಿ.ಯೋಗೀಶ್ವರ್ ಗೆ ಸಚಿವ ಹೆಬ್ಬಾರ್ ಟಾಂಗ್..!

ಯಲ್ಲಾಪುರ: ಮುಖ್ಯಮಂತ್ರಿ ಬದಲಾವಣೆ ಯಾವ ಕಾರಣಕ್ಕೂ ಇಲ್ಲ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಸಿಎಂ ಬದಲಾವಣೆ ವಿಚಾರವಾಗಿ, ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆಗೆ ನನ್ನ ಸಹಮತ ಇಲ್ಲ ಅಂತಾ ಖಡಕ್ಕಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ರು. ಸರಕಾರದಲ್ಲಿ ಇದ್ದುಕೊಂಡು ಈ ರೀತಿಯ ಹೇಳಿಕೆ ನೀಡುವುದು ಯೋಗೀಶ್ವರಗೆ ಶೋಭೆ ತರುವುದಿಲ್ಲ ಅಂತಾ ಹೆಬ್ಬಾರ್ ಕಿಡಿ ಕಾರಿದ್ರು. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದಿದ್ದಾಗಿ ಸಚಿವ ಅಶೋಕ್ ಹೇಳಿದ್ದು ನಿಜ, ಆದ್ರೆ ಮುಖ್ಯಮಂತ್ರಿ ಬದಲಾವಣೆ...

error: Content is protected !!