ಅವ್ರೊಬ್ಬ DyRFO ಸಾಹೇಬ್ರು..! ಅವ್ರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್..! ಅರಣ್ಯಾಧಿಕಾರಿಗಳೇ ಯಾರಿಗಾಗಿ ಈ ದೌಲತ್ತು..?

ಅವ್ರೊಬ್ಬ DyRFO ಸಾಹೇಬ್ರು..! ಅವ್ರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್..! ಅರಣ್ಯಾಧಿಕಾರಿಗಳೇ ಯಾರಿಗಾಗಿ ಈ ದೌಲತ್ತು..?

ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ DyRFO ಒಬ್ರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಫೋಟೊಗೆ ಫೋಸ್ ನೀಡಿದ್ದಾರೆ. ಹಾಗಂತ ಸಾಕಷ್ಟು ಚರ್ಚೆಗಳು ಖುದ್ದು ಇಲಾಖೆಯ ಅಂಗಳದಲ್ಲೇ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದೆ. ಅಲ್ದೇ ಸಾಮಾಜಿಕ ಜಾಲತಾಣಗಳಲ್ಲಿ ಆ ಪೋಟೋಗಳೂ ಹರಿದಾಡ್ತಿವೆ. ಇಲಾಖೆಯ ಅಧಿಕಾರಿಗಳೇ ಹೀಗೆ ಮಾಡಿದ್ರೆ, ಸಾರ್ವಜನಿಕರ ಪಾಡೇನು ಅನ್ನೋ ಪ್ರಶ್ನೆ ನೆಟ್ಟಿಗರು ಕೇಳ್ತಿದಾರಂತೆ. ಅವರು ಹಾಗಾ..? ಅಸಲು, ಅವ್ರು ಇಡೀ ಕೆನರಾ ವಲಯದಲ್ಲೇ ಜಬರ್ದಸ್ತ್ ಪ್ರಭಾವಿಯಂತೆ. ಇಡೀ ಇಲಾಖೆಯೇ ಇವರ ಇಶಾರೆಯಲ್ಲಿ ಬದ್ರವಾಗಿದೆ ಅನ್ನೋ ಪುಕಾರು ಇದೆ. ಅಂತಹದ್ದೊಂದು ಹವಾ ಮೆಂಟೇನ್ ಮಾಡಿರೋ ಅವರ ವಿರುದ್ಧ ತುಟಿ ಬಿಚ್ಚಲು ಅಲ್ಲಿನ ಹಿರಿಯ ಅಧಿಕಾರಿಗಳೇ ಒಂದುಕ್ಷಣ ಬೆವರಿ ಬಿಡ್ತಾರೆ ಅನ್ನೋ ವಾತಾವರಣ ಇದೆಯಂತೆ. ಅದಕ್ಕಾಗೇ ನಾವೂ ಕೂಡ ಅವ್ರಿಗೆ “ಅವನು ಇವನು” ಅನ್ನದೇ ಫುಲ್ಲಿಲೋಡೇಡ್ ಗೌರವ ನೀಡುತ್ತಿದ್ದೆವೆ.. ಯಾಕಂದ್ರೆ, ಅದು ನಮ್ಮ ಪುಣ್ಯ ಅಂದುಕೊಂಡಿದ್ದಿವಿ. ನಮಗೂ ಬೆವರು ಕಣ್ರಿ..! ಅಲ್ದೇ ಅವರ ಹವಾ, ಬಲಿಷ್ಟ ಬಿರುಗಾಳಿಯ ಬಗ್ಗೆ ಹತ್ತಾರು ಜನ ಇಲಾಖೆಯ...

ಶಂಕರ್ ಫಕೀರಪ್ಪ ಗೆ ಪಿಹೆಚ್ ಡಿ ಪದವಿ ಪ್ರಧಾನ, ಸಿಹಿ ತಿನ್ನಿಸಿ ಸಂಭ್ರಮ..!

ಶಂಕರ್ ಫಕೀರಪ್ಪ ಗೆ ಪಿಹೆಚ್ ಡಿ ಪದವಿ ಪ್ರಧಾನ, ಸಿಹಿ ತಿನ್ನಿಸಿ ಸಂಭ್ರಮ..!

ಧಾರವಾಡ: ಶಂಕರ್ ಫಕೀರಪ್ಪ ಅವರು, ಧಾರವಾಡ ವಿಶ್ವ ವಿದ್ಯಾಲಯದಿಂದ ಗಣಿತ ಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ನಿನ್ನೆ ಸೋಮವಾರ ಧಾರವಾಡ ವಿಶ್ವವಿದ್ಯಾಲಯ ದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ ಗೆಹ್ಲೊಟ್ ಪದವಿ ಪ್ರಧಾನ ಮಾಡಿದ್ರು. ಅಂದಹಾಗೆ, ಶಂಕರ್ ಫಕೀರಪ್ಪ ಇವ್ರು ಪಿಹೆಚ್ ಡಿ ಪದವಿ ಪಡೆದಿದ್ದಕ್ಕೆ, ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ಸೇರಿದಂತೆ ಸಮಾಜದ ಹಲವು ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ಶಾಕ್, RFO ಗಳ‌ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ..!

ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ಶಾಕ್, RFO ಗಳ‌ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ..!

 ಹಾವೇರಿಯಲ್ಲಿ ಬೆಳ್ಳಂ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಇಬ್ಬರು RFO ಗಳ ಮನೆ, ಸೇರಿದಂತೆ 9 ಕಡೆ ಲೋಕಾ ದಾಳಿಯಾಗಿದೆ. RFO ಪರಮೇಶ್ವರ ಪೇರಲನವರ, RFO ಮಾಲತೇಶ ನ್ಯಾಮತಿ ಗೆ ಸೇರಿದ ಮನೆ ಹಾಗೂ ಫಾರ್ಮ್ ಹೌಸ್ ಸೇರಿ 9 ಕಡೆ ದಾಳಿ ನಡೆಸಲಾಗಿದೆ. ಹಾವೇರಿ ನಗರ ಹಾಗೂ ಕುರಬಗೊಂಡ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. RFO ಪರಮೇಶ್ವರ ಪೇರಲನವರಗೆ ಸೇರಿದ ಎರಡು ಮನೆ ಸೇರಿದಂತೆ 6 ಕಡೆ ದಾಳಿ ನಡೆದಿದೆ. ಇನ್ನು ಮತ್ತೋರ್ವ RFO ಮಾಲತೇಶ್ ನ್ಯಾಮತಿಯವರ ಮನೆ ಸೇರಿ ಮೂರು ಕಡೆ ದಾಳಿ ನಡೆದಿದೆ. ಹಾವೇರಿಯ ಶಿವಾಜಿನಗರ, ವರದಾನೇಶ್ವರಿ ನಗರ, ಕುರುಬಗೊಂಡ ಗ್ರಾಮದ ಮನೆ, ಫಾಮ್೯ ಹೌಸ್ ಗಳ ಮೇಲೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಏನೇನು ಸಿಕ್ಕಿದೆ ಅನ್ನೋ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ.

ಕಾರವಾರದ ಯುವಕ ಆತ್ಮಹತ್ಯೆ ಕೇಸ್, ಪಿಐ, ಪಿಎಸ್ಐ ಸೇರಿ ಮೂವರು ಪೊಲೀಸರು ಸಸ್ಪೆಂಡ್..!

ಕಾರವಾರದ ಯುವಕ ಆತ್ಮಹತ್ಯೆ ಕೇಸ್, ಪಿಐ, ಪಿಎಸ್ಐ ಸೇರಿ ಮೂವರು ಪೊಲೀಸರು ಸಸ್ಪೆಂಡ್..!

ಪೊಲೀಸರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಕೇಸ್ ಗೆ ಮೂವರು ಪೊಲೀಸರ ಅಮಾನತ್ತಾಗಿದೆ‌. ಕಾರವಾರದಲ್ಲಿ ಮಾರುತಿ ನಾಯ್ಕ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ, ಪಿಎಸ್ಐ ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಿ ಎಸ್ಪಿ ವಿಷ್ಣುವರ್ಧನ್ ಆದೇಶಿಸಿದ್ದಾರೆ. CPI ಕುಸುಮಾಧರ ಕೆ, PSI ಶಾಂತಿನಾಥ ಹಾಗೂ ಕಾನಸ್ಟೆಬಲ್ ದೇವರಾಜ್ ಸಸ್ಪೆಂಡ್ ಆಗಿದ್ದಾರೆ. ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಸೈಡ್ ನೋಟ್ ಬರೆದು ವಿಡಿಯೋ ರೆಕಾರ್ಡ್ (video record)ಮಾಡಿದ್ದ. ತನ್ನ ಆತ್ಮಹತ್ಯೆಗೆ ಪೊಲೀಸರು, ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಮತ್ತಿತರರ ಹೆಸರು ಬರೆದಿಟ್ಟಿದ್ದ. ಹೀಗಾಗಿ, ಪ್ರಕರಣದ ಗಂಭೀರತೆ ಬಯಲಾದ ಹಿನ್ನೆಲೆ ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನ ಮಾರುತಿ ನಾಯ್ಕ್ ರೆಕಾರ್ಡ್ ಮಾಡಿದ್ದ. ಬಳಿಕ ಎಲಿಷ ಎಲಕಪಾಟಿ ಕುಟುಂಬಸ್ಥರು ಮಾರುತಿ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದರು. ಎಲಿಷಾ ಕುಟುಂಬಕ್ಕೆ ಪೊಲೀಸರು ಬೆಂಬಲವಾಗಿ...

ಭ.ಶಂಭವನಾಥ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ..!

ಭ.ಶಂಭವನಾಥ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ..!

ಮುಂಡಗೋಡಿನ ಭ.ಶಂಭವನಾಥ ತೀರ್ಥಂಕರರ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜಿನಮಂದರದಲ್ಲಿ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ಜೈನ ಶ್ರಾವಕರು ಹಮ್ಮಿಕೊಂಡಿದ್ದರು. ಪದ್ಮಾವತಿ ಅಮ್ಮನವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಸುಮಂಗಲೆಯರು ಜಿನಭಕ್ತಿಗೀತೆಗಳೊಂದಿಗೆ ಅಮ್ಮನವರಿಗೆ ವಿಶೇಷ ಅರ್ಚನೆ ಮಾಡಿದ್ರು. ಈ ವೇಳೆ ಪಟ್ಟಣದ ಹಲವು ಜೈನ ಮುಖಂಡರು, ಶ್ರಾವಕ ಶ್ರಾವಕಿಯರು ಭಾಗಿಯಾಗಿದ್ರು.

ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!

ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!

ಮುಂಡಗೋಡಿನ ಅಕ್ರಮ ದಂಧೆಗಳ ಪೈಕಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಲೂ,ಹಣ್ಣು, ತುಪ್ಪ ಸುರಿದು ಸಲುಹುತ್ತಿರೋ ಅದೊಬ್ಬ ಸರ್ಕಾರಿ ಶೂರ ಯಡವಟ್ಟು ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾನ್ಯ ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿರೋ ಆ ಕಿಲಾಡಿಯ ಮಂಕು ಬುದ್ದಿಗೆ, ಅಸಲೀ ಆರೋಪಿಗಳು ಯಾರೂ ಅಂತಾನೇ ಅರ್ಥ ಆಗಿಲ್ಲ. ಹೀಗಾಗಿ, ತನ್ನ ದಂಧೆಯ ಕೊಂಡಿಯೊಬ್ಬ ನೀಡಿರೋ ಹೆಸರನ್ನೇ ಬರೆದುಕೊಂಡು ಕೇಸು ದಾಖಲಿಸಿರೋ ಆ ಅಡ್ನಾಡಿಗೆ ಇವಾಗ ಬಿಸಿ ಮುಟ್ಟುವ ಎಲ್ಲಾ ಸೂಚನೆ ಇದೆ. ಸದ್ಯ ಮೀಟಿಂಗ್ ನಡೀತಿದೆ.. ಅಲ್ಲಿ ಆತ ಬಹುತೇಕ ಕಾಲು ಬಿದ್ದು ತಪ್ಪಾಯ್ತು ಅಂತಾ ಹೇಳಿ ಇಡಿ ಇಡಿಯಾಗಿ ಕೇಸನ್ನೇ ತಿಪ್ಪೆ ಸಾರಿಸುವ ಯತ್ನ ಮಾಡಿಸ್ತಿದಾನೆ.. ಆದ್ರೆ, ಏನೂ ಅರಿಯದ ದಲಿತ ಹುಡುಗನೊಬ್ಬ ಆ ನಾಲಾಯಕನ ದುಡ್ಡಿನ ತೀಟೆಗೆ ಬಲಿಯಾಗುವ ಹಂತದಲ್ಲಿದ್ದಾನೆ. ದೊಡ್ಡವನ ದಡ್ಡತನ..! ದುರಂತ ಅಂದ್ರೆ, ಹೊಸತಾಗಿ ಬಂದಾಗ ಅದೇಂತದ್ದೋ ಪುರಾಣ ಪುಣ್ಯ ಕತೆ, ಶಿಸ್ತು ಅಂತೇಲ್ಲ ಹೇಳಿಕೊಂಡು ಬುರುಡೆ ಬಿಟ್ಟಿದ್ದ ದೊಡ್ಡವನು ನಮ್ಮನ್ನೇಲ್ಲ ದಡ್ಡರನ್ನಾಗಿಸಿದ್ದಾನೆ. ಕೈಯಿಂದ ಬಾಚಿಕೊಂಡರೆ ಉಳಿಯಬಹುದು...

ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!

ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!

ಮುಂಡಗೋಡ ಪಟ್ಟಣದ ಮೂರು ಸ್ಥಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸ್ತಿದ್ದ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗ್ತಿದೆಯಾ..? ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರೋ ಶಿಶು ಪಾಲನ ಕೇಂದ್ರಗಳನ್ನು  ಸದ್ಯ ಮುಚ್ಚಲಾಗ್ತಿದೆ ಅನ್ನೋ ಸುದ್ದಿ ತಿಳಿದು ಅಲ್ಲಿನ ಪೋಷಕರು ಆತಂಕಗೊಂಡಿದ್ದಾರೆ. ಹೀಗಾಗಿ, ಪೋಷಕರು ಶಿಶು ಪಾಲನ ಕೇಂದ್ರ ಮುಚ್ಚದಂತೆ ತಹಶೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ. ಜಿಲ್ಲೆ ಸೇರಿದಂತ ರಾಜ್ಯದ ಕೆಲವೆಡೆ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗುತ್ತಿದ್ದು, ಅದೇ ಭಯ ಇದೀಗ ಮುಂಡಗೋಡಿನ ಸುಭಾಷನಗರ, ಲಂಬಾಣಿ ತಾಂಡಾ ನಂ.3 ಹಾಗೂ ಗಣೇಶನಗರದ ಮಕ್ಕಳ ಪಾಲಕರಲ್ಲಿ ಶುರುವಾಗಿದೆ. ಕಾರಣ ಈ ಮೂರೂ ಶಿಶು ಪಾಲನ ಕೇಂದ್ರಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಜೊತೆಗೆ ಉತ್ತಮ ಶಿಕ್ಷಣ ದೊರಕುತ್ತಿದೆ. ಇದನ್ನು ಮುಚ್ಚಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಅನ್ನೋದು ಪೋಷಕರ ಅಳಲು. ಅಂದಹಾಗೆ, ಇಲ್ಲಿ ಇವಾಗ ನೂರಾರು ಪುಟ್ಟ ಪುಟ್ಟ ಮಕ್ಕಳು ಶಿಶು ಕೇಂದ್ರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ ಅಂತಾ ಆತಂಕದಲ್ಲಿರೋ ಇಲ್ಲಿನ...

ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?

ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?

  ಅತ್ತಿವೇರಿ ಪಕ್ಷಿಧಾಮದಲ್ಲಿ ಶ್ರೀಗಂಧದ ಮರ ಕಳ್ಳತನ ಪ್ರಕರಣ ನಾವೇಲ್ಲ ಅಂದುಕೊಂಡಷ್ಟು ಸುಲಭವಾಗಿಲ್ಲ ಅನಿಸ್ತಿದೆ. ಮೇಲ್ನೋಟಕ್ಕೆ ಹೇಳೋದಾದ್ರೆ ಇಲ್ಲಿನ ಅಧಿಕಾರಿಗಳೇ ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದು ಬಹುತೇಕ ನಿಚ್ಚಳವಾದಂತಾಗಿದೆ. ಯಾಕಂದ್ರೆ, ನಾವು ನಿನ್ನೆ ತಮ್ಮೇದುರು ಬಯಲು ಮಾಡಿದ್ದ ಶ್ರೀಗಂಧದ ಮರಗಳ್ಳತನ ಕೇಸಿನಲ್ಲಿ ನಮಗೆ ಕೆವಲ ಎರಡೇ ಶ್ರೀಗಂಧದ ಮರ ದೋಚಿದ್ದಾರೆ ಅನ್ನೋ ಮಾಹಿತಿಯಿತ್ತು. ಆದ್ರೆ, ಅಲ್ಲಿನ ಅಸಲೀಯತ್ತೇ ಬೇರೆಯದ್ದಿದೆ. ಎರಡಲ್ಲ, ಬರೋಬ್ಬರಿ ಐದು..? ಅಸಲು, ಕರ್ನಾಟಕದ ವಿಖ್ಯಾತ ಅತ್ತಿವೇರಿ ಪಕ್ಷಿಧಾಮದಲ್ಲಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಬಲಿಯಾಗಿದ್ದು ಕೇವಲ ಎರಡು ಶ್ರೀಗಂಧದ ಮರವಲ್ಲ ಬದಲಾಗಿ ಬರೋಬ್ಬರಿ 5 ಮರಗಳು ಕಳ್ಳತನವಾಗಿರೋ ಮಾತುಗಳು ಕೇಳಿಬಂದಿವೆ. ಜೊತೆಗೆ ಮತ್ತೊಂದು ಮರ ಅರ್ದಕ್ಕರ್ದ ಕಟ್ ಆಗಿ ಅರೆಜೀವವಾಗಿದೆ. ದುರಂತ ಅಂದ್ರೆ ಇಲ್ಲಿನ ಅಧಿಕಾರಿಗಳು ಘಟನೆ ನಡೆದ ದಿನ ಕಳ್ಳತನವಾಗಿದ್ದ ಐದು ಮರಗಳ ಪೈಕಿ ಕೇವಲ ಎರಡು ಮರಗಳಿಗಷ್ಟೇ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನುಳಿದ ಮೂರು ಮರಗಳ ಬಗ್ಗೆ ಹೊರಜಗತ್ತಿಗೆ ಮಾಹಿತಿ ನೀಡದೇ ಮುಚ್ಚಿಹಾಕಲು ಮಾಡಬಾರದ ಎಲ್ಲಾ ಕುತಂತ್ರಗಳನ್ನೂ ಮಾಡಿ...

ಮುಂಡಗೋಡ ತಾಲೂಕಾಸ್ಪತ್ರೆಯ ಪಕ್ಕದಲ್ಲೇ ಶ್ರೀಗಂಧದ ಮರ ಕಳುವು, ಮತ್ತೆ ಆ್ಯಕ್ಟಿವ್ ಆಯ್ತಾ “ಗಂಧ” ಕಳ್ಳರ ಗ್ಯಾಂಗ್..?

ಮುಂಡಗೋಡ ತಾಲೂಕಾಸ್ಪತ್ರೆಯ ಪಕ್ಕದಲ್ಲೇ ಶ್ರೀಗಂಧದ ಮರ ಕಳುವು, ಮತ್ತೆ ಆ್ಯಕ್ಟಿವ್ ಆಯ್ತಾ “ಗಂಧ” ಕಳ್ಳರ ಗ್ಯಾಂಗ್..?

 ಮುಂಡಗೋಡ: ತಾಲೂಕಾಸ್ಪತ್ರೆಯ ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲೇ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಬೆಲೆಬಾಳುವ ಎರಡು ಶ್ರೀಗಂಧದ ಮರಗಳನ್ನು ಅನಾಮತ್ತಾಗಿ ಎಗರಿಸಿಕೊಂಡು ಹೋಗಿದ್ದಾರೆ ಕಳ್ಳರು. ಕೋಟೆ ಕೊಳ್ಳೆ ಹೊಡೆದ ಮೇಲೆ ಅದೇಂತದ್ದೋ ಬಾಗಿಲು ಹಾಕಿದ್ರು ಅಂತಾರಲ್ಲ ಹಾಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮುಗಿದ ಮೇಲೆ ಓಡೋಡಿ ಬಂದಿದ್ದಾರೆ. ಮತ್ತದೇ ತನಿಖೆಗಿಳಿದಿದ್ದಾರೆ. ಅದು ಜನವಸತಿ ಏರಿಯಾ..! ಅಸಲು, ಇವಾಗ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಹೋಗಿರೋ ಜಾಗ ಇದೆಯಲ್ಲ, ಅದು ಬಹುತೇಕ ಜನವಸತಿಯ ಜಾಗವೇ, ಹೀಗಿದ್ದಾಗಲೂ ಯಾರಿಗೂ ಒಂಚೂರು ಗೊತ್ತಾಗದ ಹಾಗೆ ಮರ ಕಡಿದು ಎಗರಿಸಿಕೊಂಡು ಹೋಗೋದು ಅಂದ್ರೆ ಹೇಗೆ..? ಅಷ್ಟಕ್ಕೂ, ಇಲ್ಲಿ ಪ್ರೊಫೇಶನಲ್ ಕಳ್ಳರದ್ದೇ ಗ್ಯಾಂಗ್ ಕೃತ್ಯ ಮಾಡಿದೆಯಾ..? ಅಥವಾ ಗೊತ್ತಿದ್ದವರೇ ಕಡಿದು ಸಾಗಿಸಿದ್ರಾ..? ಅಧಿಕಾರಿಗಳು ತಿಳಿಸಬೇಕಿದೆ. ಹಿಂದೆಯೂ ನಡೆದಿತ್ತು..! ಹಾಗೆ ನೋಡಿದ್ರೆ, ತಾಲೂಕಿನಲ್ಲಿ ಹಿಂದೆಯೂ ಇಂತಹ ಶ್ರೀಗಂಧದ ಮರಗಳ್ಳತನ ಪ್ರಕರಣಗಳು ಸಾಕಷ್ಟು ನಡೆದಿವೆ. ಮನೆ ಪಕ್ಕದಲ್ಲೇ ಇದ್ದ ಮರಗಳನ್ನು ಕಣ್ಣು ಮುಚ್ಚಿ ತೆಗೆಯೋದ್ರಲ್ಲಿ ಎತ್ತಂಗಡಿ ಮಾಡಿದ್ದ ಅದೇಷ್ಟೋ ಘಟನೆಗಳೂ ನಡೆದಿವೆ....

ರಾಹುಲ್ ಗಾಂಧಿಗೆ ಬಿಜೆಪಿಯಿಂದ ಅವಮಾನ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ನಿಂದ ಮುಂಡಗೋಡಿನಲ್ಲಿ ಪ್ರತಿಭಟನೆ, ಆಕ್ರೋಶ..!

ರಾಹುಲ್ ಗಾಂಧಿಗೆ ಬಿಜೆಪಿಯಿಂದ ಅವಮಾನ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ನಿಂದ ಮುಂಡಗೋಡಿನಲ್ಲಿ ಪ್ರತಿಭಟನೆ, ಆಕ್ರೋಶ..!

 ಮುಂಡಗೋಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ಐಟಿ ವಿಭಾಗದಿಂದ ಅವಮಾನ ಆಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮುಂಡಗೋಡಿನಲ್ಲಿಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಬಿಜೆಪಿ ವಿರುದ್ಧ ಗುಡುಗಿದ್ರು.10 ತಲೆಗಳಿರುವ ರಾಹುಲ್ ಗಾಂಧಿ ಪೋಸ್ಟರ್ ಅನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದೆ. ಈ ಪೋಸ್ಟ್ ಅನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ, ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿಯವರನ್ನು ಅವಹೇಳನ ಮಾಡಿದ್ದಕ್ಕಾಗಿ ಅವ್ರು ಆಕ್ರೋಶ ವ್ಯಕ್ತ ಪಡಿಸಿದ್ರು. “ಇಂಡಿಯಾ” ಒಕ್ಕೂಟ ರಚನೆಯಾದಾಗಿನಿಂದ ಬಿಜೆಪಿಯವರು ಭಯಭೀತರಾಗಿದ್ದಾರೆ. ರಾಹುಲ್‌ ಗಾಂಧಿಯವರನ್ನು ರಾವಣ ಎಂದು ಕರೆಯುವುದು ಅವರ ಹತಾಶೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಏನೆಂಬುದು ದೇಶದ ಜನರಿಗೆ ಗೊತ್ತಿದೆ, ಜನರ ನೋವು ಅವರಿಗೆ ಅರ್ಥವಾಗಿದೆ. ಅವರು ಮಣಿಪುರದ ಜನರೊಂದಿಗೆ, ತರಕಾರಿ ಮಾರಾಟಗಾರರು...

error: Content is protected !!