ಮುಂಡಗೋಡ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿ ಆಯ್ಕೆಯಾಗಿದ್ದಾರೆ. ಅಚ್ಚರಿಯೆಂಬಂತೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ್ ನಿರಾಯಾಸವಾಗಿ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ, ಮುಂಡಗೋಡ ಪಟ್ಟಣ ಪಂಚಾಯತಿ ಕಾಂಗ್ರೆಸ್ ನೆರಳಲ್ಲಿ, ಶಿವರಾಮ್ ಹೆಬ್ಬಾರ್ ಬೆಂಬಲಿಗರ ಪಾಲಾಗಿದೆ.

ಅಸಲು, ಅಧ್ಯಕ್ಷ ಸ್ಥಾನ ಜಯಸುಧಾ ಭೋವಿಯವರಿಗೆ ದಕ್ಕಿದ್ದೇ ರೋಚಕ ಎಂಬಂತಾಗಿದೆ. ಮೊನ್ನೆ ಯಿಂದಲೂ ಆಯ್ಕೆ ಕಸರತ್ತು ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿತ್ತು. ಇವತ್ತು ಬೆಳಗಿನವರೆಗೂ ಕಸುಮಾ ನಾಗಭೂಷಣ ಹಾವಣಗಿಯವ್ರೇ ಕೈ ಪಡೆಯ ಅಧ್ಯಕ್ಷ ಅಭ್ಯರ್ಥಿಯಾಗೋದು ಅನ್ನೊ ಮಾತಿತ್ತು. ಆದ್ರೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಎರಡನೇ ಬಾರಿಗೆ ಜಯಸುಧಾ ಭೋವಿ ಕೈ ಪಡೆಯ ಅಂಗಳದಿಂದಲೇ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಕಳೆದ ಹಲವು ದಿನಗಳಿಂದ ಏನೇಲ್ಲ ಗುದುಮರಗಿ ಬಿದ್ದಿತ್ತೊ ಅದಕ್ಕೇಲ್ಲ ಸ್ಪಷ್ಟ ತಿರುವು ಸಿಕ್ಕಿದೆ. ಯಾರೂ ನಿರೀಕ್ಷಿಸಿರದ ಮಹಿಳೆ ಮತ್ತೊಮ್ಮೆ ಗದ್ದುಗೆ ಹಿಡಿದಿದ್ದಾರೆ. ಇದ್ರೊಂದಿಗೆ, ಒಳಗೊಳಗೇ ನಡೆದಿದ್ದ ಲೆಕ್ಕಾಚಾರಗಳು ಕೆಲಸ ಮಾಡಿವೆ. ಕೆಲವರ ಜಿದ್ದು, ಜಟಾಪಟಿ ಕೊನೆಗೂ ರೋಚಕ ಅಂತ್ಯ ಕಂಡಿವೆ.


error: Content is protected !!