ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!

ಮುಂಡಗೋಡಿನ ಅಕ್ರಮ ದಂಧೆಗಳ ಪೈಕಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಲೂ,ಹಣ್ಣು, ತುಪ್ಪ ಸುರಿದು ಸಲುಹುತ್ತಿರೋ ಅದೊಬ್ಬ ಸರ್ಕಾರಿ ಶೂರ ಯಡವಟ್ಟು ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾನ್ಯ ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿರೋ ಆ ಕಿಲಾಡಿಯ ಮಂಕು ಬುದ್ದಿಗೆ, ಅಸಲೀ ಆರೋಪಿಗಳು ಯಾರೂ ಅಂತಾನೇ ಅರ್ಥ ಆಗಿಲ್ಲ. ಹೀಗಾಗಿ, ತನ್ನ ದಂಧೆಯ ಕೊಂಡಿಯೊಬ್ಬ ನೀಡಿರೋ ಹೆಸರನ್ನೇ ಬರೆದುಕೊಂಡು ಕೇಸು ದಾಖಲಿಸಿರೋ ಆ ಅಡ್ನಾಡಿಗೆ ಇವಾಗ ಬಿಸಿ ಮುಟ್ಟುವ ಎಲ್ಲಾ ಸೂಚನೆ ಇದೆ.

ಸದ್ಯ ಮೀಟಿಂಗ್ ನಡೀತಿದೆ.. ಅಲ್ಲಿ ಆತ ಬಹುತೇಕ ಕಾಲು ಬಿದ್ದು ತಪ್ಪಾಯ್ತು ಅಂತಾ ಹೇಳಿ ಇಡಿ ಇಡಿಯಾಗಿ ಕೇಸನ್ನೇ ತಿಪ್ಪೆ ಸಾರಿಸುವ ಯತ್ನ ಮಾಡಿಸ್ತಿದಾನೆ.. ಆದ್ರೆ, ಏನೂ ಅರಿಯದ ದಲಿತ ಹುಡುಗನೊಬ್ಬ ಆ ನಾಲಾಯಕನ ದುಡ್ಡಿನ ತೀಟೆಗೆ ಬಲಿಯಾಗುವ ಹಂತದಲ್ಲಿದ್ದಾನೆ.

ದೊಡ್ಡವನ ದಡ್ಡತನ..!
ದುರಂತ ಅಂದ್ರೆ, ಹೊಸತಾಗಿ ಬಂದಾಗ ಅದೇಂತದ್ದೋ ಪುರಾಣ ಪುಣ್ಯ ಕತೆ, ಶಿಸ್ತು ಅಂತೇಲ್ಲ ಹೇಳಿಕೊಂಡು ಬುರುಡೆ ಬಿಟ್ಟಿದ್ದ ದೊಡ್ಡವನು ನಮ್ಮನ್ನೇಲ್ಲ ದಡ್ಡರನ್ನಾಗಿಸಿದ್ದಾನೆ. ಕೈಯಿಂದ ಬಾಚಿಕೊಂಡರೆ ಉಳಿಯಬಹುದು ಅಂತಾ ನಾಲಿಗೆಯಿಂದಲೇ ಬಾಚಿಕೊಳ್ಳುವ ಹೀನ ಸುಳಿಯವನು ಅಂತಾ ನಂಗಂತೂ ಮೊದಲು ಗೊತ್ತಿರಲೇ ಇಲ್ಲ. ಸಾರ್ವಜನಿಕರೇ ಈತನ ಬಗ್ಗೆ ಪುಟಗಟ್ಟಲೇ ಕತೆ ಹೇಳಿದಾಗಷ್ಟೇ, ಯಾಕಾದ್ರೂ ಈತನನ್ನ ನಮ್ಮವನು ಅನಕೊಂಡ್ನೊ ಅದೇ ಬೇಜಾರಿದೆ ನಂಗೆ.. ಅಸಲು, ನಾನು ಅವನ ಇಡೀ ಹಿಸ್ಟ್ರೀಯನ್ನೇ ತಮ್ಮ ಮುಂದೆ ಇಡ್ತಿನಿ, ನಿಜ ಅಂದ್ರೆ ಅವನ ಕತೆ ರಸವತ್ತಾಗಿದೆ.. ಕೆಲ ದಿನವಷ್ಟೆ ಕಾಯಿರಿ.. ಎಲ್ಲವನ್ನೂ ನಿಮ್ಮೆದುರು ದಾಖಲಿಸ್ತಿನಿ..!

 

error: Content is protected !!