ವಿಶೇಷ ವರದಿ ಕಾಳ ಸರ್ಪ ದೋಷ, ನಾಗದೋಷಗಳ ಪರಿಹಾರಕ್ಕಾಗಿ ಸಾಕಷ್ಟು ಜನ ಕುಕ್ಕೆ ಸುಬ್ರಮ್ಮಣ್ಯ ಕ್ಷೇತ್ರಕ್ಕೆ ಹೋಗ್ತಾರೆ.. ಆದ್ರೆ ಕುಕ್ಕೆ ಶ್ರೀ ಕ್ಷೇತ್ರದ ದಿವ್ಯ ಸನ್ನಿಧಾನದಂತೆಯೇ ಮತ್ತೊಂದು ಸನ್ನಿಧಾನ ನಮ್ಮ ಸಮೀಪದಲ್ಲೇ ಇದೆ.. ಹೌದು, ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಲದ ಆವರಣದಲ್ಲಿ ಶ್ರೀ ಸುಬ್ರಮ್ಮಣ್ಯ ಸ್ವಾಮಿ ನೆಲೆ ನಿಂತಿದ್ದಾರೆ.. ಭವ್ಯವಾದ ಆಲದ ಮರದ ಕೆಳಗೆ ವಿರಾಜಮಾನವಾಗಿರೋ ಸುಭ್ರಮ್ಮಣ್ಯ ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಂಡೇ ಹರಿದು ಬರತ್ತೆ.. ಇನ್ನು ಸರ್ಪದೋಷ, ಕಾಳಸರ್ಪದೋಷ ಮುಂತಾದ ದೋಷಗಳಿಂದ ಮುಕ್ತಿ ಪಡೆಯಲು ಇಲ್ಲಿ ಪ್ರತೀ ಗುರುವಾರ ಹಾಗೂ ಅಮವಾಸ್ಯೆ ದಿನಗಳಲ್ಲಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ.. ಸುಬ್ರಮ್ಮಣ್ಯ ಶ್ರೀ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದೇ ಇರೋ ಬಹುತೇಕರು ಅರಟಾಳದ ದಿವ್ಯ ಸನ್ನಿಧಾನದಲ್ಲೇ ತಮ್ಮ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಳ್ತಾರೆ. ಅಲ್ದೇ ಇಲ್ಲಿಯೇ ತಮ್ಮ ದೋಷ ನಿವಾರಣೆಯ ವೃತಗಳನ್ನು ಮಾಡ್ತಾರೆ.. ಅರಟಾಳಕ್ಕೆ ಹೋಗೋದು ಹೇಗೆ..? ನೀವು ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ, ಹಾನಗಲ್ ಗೆ ಹೊರಟಿರುವಿರಿ...
Top Stories
ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್….: 9 ಮಂದಿ ‘ಪಾಕಿಸ್ತಾನ ಗೂಢಚಾರರ’ ಬಂಧನ..! ಗದ್ದಾರ್ ಗಳು ಅಂದ್ರೆ ಇವ್ರೇ ಅಲ್ವಾ..?
ಪ್ಲೇಆಪ್ ತಲುಪಿರೋ RCB ತಂಡಕ್ಕೆ ಮತ್ತೊಂದು ಶುಭಸುದ್ದಿ..! ಇದನ್ನ ಲಾಟರಿ ಅಂದ್ರೂ ಓಕೆ.!!
ಲೋಕಾಯುಕ್ತ ಅಧಿಕಾರಿಗಳ ನಾಳೆಯ (ಮೇ 20 ರ) ಮುಂಡಗೋಡ ಕಾರ್ಯಕ್ರಮ ಮೇ. 28ಕ್ಕೆ ಮುಂದೂಡಿಕೆ..!
Rain Alert News: ಭಾರಿ ಮಳೆಯ ಮುನ್ಸೂಚನೆ, ಉತ್ತರ ಕನ್ನಡದಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ: ಎಚ್ಚರಿಕೆ ವಹಿಸಿ; ಡಿಸಿ ಲಕ್ಷ್ಮೀಪ್ರಿಯ
Death News: ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ದಾರುಣ ಸಾವು..!
ಬಂಗಾರದ ಬೆಲೆ ಮತ್ತೆ ₹380 ಹೆಚ್ಚಳ; ಬೆಳ್ಳಿ ₹1000 ತುಟ್ಟಿ, ಈ ದರ ಏರಿಕೆಗೆ ಕಾರಣಗಳೇನು ಗೊತ್ತಾ..?
ಸತತ 2ನೇ ದಿನ ಕುಸಿದ ಷೇರುಪೇಟೆ : ಸೆನ್ಸೆಕ್ಸ್ 270 ಪಾಯಿಂಟ್ಸ್ ಇಳಿಕೆ, ಟಾಪ್ ಗೇನರ್ ಮತ್ತು ಲೂಸರ್ಸ್ ಇಲ್ಲಿವೆ
Lokayukta Raid News :ಅಡ್ಮಿಶನ್ ಮಾಡಿಕೊಳ್ಳಲು ಲಂಚ ಸ್ವೀಕಾರ, ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕನ ಬಂಧನ..!
Accident News: ಕಾರ್ ಅಪಘಾತ, ಪ್ರವಾಸಕ್ಕೆ ತೆರಳಿದ್ದ BJP ತಾಲೂಕಾ ಮಾಜಿ ಅಧ್ಯಕ್ಷ ಸೇರಿ ಮೂವರು ದುರಂತ ಸಾವು..!
FIRE MISHAP News: ಹೈದರಾಬಾದ್ ಬೆಂಕಿ ಅವಘಡ, ಒಂದೇ ಕುಟುಂಬದ 17 ಜನರ ಸಾವು..!
Terrorist Death News: ಬೆಂಗಳೂರಿನ IISC ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ಡೇಂಜರಸ್ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ..!
Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..!
Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!
IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್
‘ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ..!
ರಾಜ್ಯದ 200 ಪೊಲೀಸ್ರಿಗೆ “ಡಿಜಿ & ಐಜಿಪಿ ಪ್ರಶಂಸಾ ಡಿಸ್ಕ್ 2024-25” ಪುರಸ್ಕಾರ ಘೋಷಣೆ..!
ಶೇಂಗಾ ಬೆಳೆದ ತಾಲೂಕಿನ ರೈತನ ಬದುಕು ಮೂರಾಬಟ್ಟೆ; ಇದೇಲ್ಲ ತೌಕ್ತೆ ಚಂಡ ಮಾರುತದ ಎಫೆಕ್ಟ್ ಕಣ್ರಿ..!
ಮುಂಡಗೋಡ- ತಾಲೂಕಿನ ಅನ್ನದಾತ ಅಕ್ಷರಶಃ ಸಂಕಷ್ಟದಲ್ಲಿದ್ದಾನೆ. ಬೇಸಿಗೆ ಬೆಳೆಯಾಗಿ ಸಾವಿರಾರು ರೂ. ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತನ ಬದುಕು ಈಗ ಮೂರಾಬಟ್ಟೆಯಾಗಿದೆ. ತೌಕ್ತೆ ಚಂಡ ಮಾರುತದ ಎಫೆಕ್ಟ್ ನಿಂದಾಗಿ ಶೇಂಗಾ ಬೆಳೆದಿದ್ದ ರೈತನಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಯಸ್, ಬಂದಷ್ಟು ಬರಲಿ ಅಂತಾ ತನ್ನ ಗದ್ದೆಯಲ್ಲಿ ಬೆಳೆದು ಮಳೆಯ ನೀರಲ್ಲಿ ಕೊಳೆತು ಹೋಗಿರೋ ಶೇಂಗಾ ಬೆಳೆಯನ್ನು ಒಕ್ಕಲು ಮಾಡುತ್ತಿರೋ ರೈತನ ಮನಸಲ್ಲಿ ಅಕ್ಷರಶಃ ಆತಂಕವಿದೆ.. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಯೇಲ್ಲ ಬರ್ಬಾದಾಗಿ ಹೋಗಿ, ಇನ್ನು ಹೇಗಪ್ಪಾ ಸಾಲ ತೀರಿಸೋದು ಅಂತಾ ಅನ್ನದಾತ ಚಿಂತೆಗೀಡಾಗಿದ್ದಾನೆ.. ಅಂದಹಾಗೆ, ಇದು ಮುಂಡಗೋಡ ತಾಲೂಕಿನ ಹುನಗುಂದ, ಇಂದೂರು, ಕೊಪ್ಪ, ನಂದಿಕಟ್ಟಾ, ಅರಶಿಣಗೇರಿ, ಬಾಚಣಕಿ ಗ್ರಾಮಗಳ ರೈತರ ಗೋಳು. ಈ ವರ್ಷ ಬೇಸಿಗೆ ಬೆಳೆಯಾಗಿ ಶೇಂಗಾ ಬೆಳೆದಿದ್ದ ರೈತರು ಕಣ್ಣೀರು ಹಾಕುತ್ತಿದ್ದಾರೆ.. ಇತ್ತೀಚೆಗೆ ಸುರಿದ ಭಾರೀ ಮಳೆ ಈ ರೈತರ ಬದುಕನ್ನೇ ಕಿತ್ತುಕೊಂಡಿದೆ.. ಹುಲುಸಾಗಿ ಬೆಳೆದಿದ್ದ ಶೇಂಗಾ ಬೆಳೆಯೇಲ್ಲ, ಅಕಾಲಿಕ ಮಳೆಯ...
ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣ ದೇವಾಲಯ ಈಗ ನವನವೀನ..!
ವಿಶೇಷ ವರದಿ.. ಮುಂಡಗೋಡ ತಾಲೂಕು ಅಂದ್ರೆ ಪುಟ್ಟದೊಂದು ಪ್ರಪಂಚ ಇದ್ದಂಗೆ.. ಒಮ್ಮೆ ನೀವು ಮುಂಡಗೋಡ ತಾಲೂಕನ್ನು ಸುತ್ತಿ ಬಂದ್ರೆ ಸಾಕು ಇಡೀ ವಿಶ್ವವನ್ನೇ ಸುತ್ತಿ ಬಂದಷ್ಟು ಜ್ಙಾನ ಸಿಗೋದು ಗ್ಯಾರಂಟಿ.. ಇಲ್ಲಿನ ವೈವಿದ್ಯತೆ ಅನ್ನೋದೇ ಹಾಗಿದೆ.. ಯಾಕಂದ್ರೆ ಇಲ್ಲಿ ಜಗತ್ತಿನಾದ್ಯಂತ ಇರೋ ಬಹುತೇಕ ಜನಾಂಗಗಳು ನೆಲೆ ನಿಂತಿವೆ.. ಟಿಬೇಟಿಗರು, ಸಿದ್ದಿಗಳು, ಲಂಬಾಣಿಗರು, ಗೌಳಿಗರು ಹೀಗೆ ವಿವಿಧ ಜನಾಂಗಗಳು ಇಲ್ಲಿ ನೆಲೆ ನಿಂತಿವೆ.. ಹೀಗಾಗಿ ವಿಶ್ವದ ಬಹುತೇಕ ಜನಾಂಗಗಳನ್ನು ಮುಂಡಗೋಡ ತಾಲೂಕಿನಲ್ಲಿ ಕಾಣಬಹುದು… ಇದು ನಮ್ಮೇಲ್ಲರ ಹೆಮ್ಮೆ.. ಇನ್ನು ಇಲ್ಲಿನ ಜನಾಂಗಗಳ ವಿವಿಧ ಪ್ರಕಾರದ ಪಾರಂಪರಿಕ ಸೊಗಡು ಒಂದೆಡೆಯಾದ್ರೆ, ಮತ್ತೊಂದೆಡೆ ಐತಿಹಾಸಿಕ ತಾಣಗಳ ಸೊಬಗೂ ಕಣ್ಮನ ಸೆಳೆಯುತ್ತವೆ.. ಅದ್ರಲ್ಲೂ ತಾಲೂಕಿನ ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣನ ದೇವಾಲಯ ಕಣ್ಮನ ಸೆಳೆಯುತ್ತಿದೆ.. ಇನ್ನು ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣನ ದೇವಾಲಯಕ್ಕೆ ರಾಜ್ಯಾದೆಲ್ಲೆಡೆಯಿಂದ ನಿತ್ಯವೂ ನೂರಾರು ಭಕ್ತರು ಬಂದು ದರ್ಶನ ಪಡಿತಾರೆ.. ಇನ್ನು ಈ ದೇವಾಲಯದ ಗೋಡೆಯ ಮೇಲೆ ವಿಶೇಷ ಮೀನಿನ ಉಬ್ಬು ಶಿಲ್ಪವಿದ್ದು ದೇವಸ್ಥಾನಕ್ಕೆ...
ಲಾಕ್ ಡೌನ್ ಎಫೆಕ್ಟ್- ಶುಂಠಿ ಬೆಳೆದ ರೈತನ ಬದುಕೇ ಕಗ್ಗಂಟು..!
ಮುಂಡಗೋಡ- ತಾಲೂಕಿನಲ್ಲಿ ಶುಂಠಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಶುಂಠಿ ಬೆಲೆ ದಿಢೀರನೆ ಕುಸಿದ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿದ್ದ ರೈತನಿಗೆ ಸದ್ಯ ಲಾಕ್ ಡೌನ್ ಇರೋ ಕಾರಣಕ್ಕೆ, ಶುಂಠಿ ಖರೀದಿಸುವ ವ್ಯಾಪಾರಸ್ಥರು ಬರುತ್ತಿಲ್ಲ.. ಹೀಗಾಗಿ ಇಲ್ಲಿನ ಕೆಲವು ಸ್ಥಳೀಯ ವ್ಯಾಪಾರಿಗಳು 60 ಕೆಜಿಯ ಶುಂಠಿ ಚೀಲಕ್ಕೆ 600 ರಿಂದ 700 ರೂಪಾಯಿ ದರಕ್ಕೆ ಕೇಳುತ್ತಿದ್ದಾರೆ. ಹೀಗಾಗಿ, ಶುಂಠಿ ಬೆಳೆಯಲು ಮಾಡಿದ್ದ ಖರ್ಚೂ ಸಹ ಬರದಾಗಿದೆ ಅಂತಾ ರೈತರು ಚಿಂತೆಗೀಡಾಗಿದ್ದಾರೆ. ಲಕ್ಷಾಂತರ ರುಇಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿರೊ ರೈತರು ಈಗ ಕೈ ಚೆಲ್ಲಿ ಕುಳಿತಿದ್ದಾರೆ. ಹೀಗಾಗಿ ಶುಂಠಿ ಖರೀಧಿಗಾಗಿ ಸರ್ಕಾರ ವ್ಯವಸ್ಥೆ ಮಾಡಬೇಕು ಅಂತಾ ರೈತರು ಆಗ್ರಹಿಸ್ತಿದಾರೆ..
ಲಾಕ್ ಡೌನ್ ಹಿನ್ನೆಲೆ- ಮುಂಡಗೋಡ ಸಂಪೂರ್ಣ ಸ್ತಬ್ದ; ಫಿಲ್ಡಿಗಿಳಿದ ಪೊಲೀಸ್ರು..!
ಮುಂಡಗೋಡ-ತಾಲೂಕಿನಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಜಾರಿಯಾದ ಎರಡನೇ ದಿನದ ಹಿನ್ನೆಲೆಯಲ್ಲಿ ಪೊಲೀಸ್ರು ಫಿಲ್ಡಿಗಿಳಿದಿದ್ರು. ಮುಂಡಗೋಡ ಪಟ್ಟಣದ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಪಟ್ಟಣದ ಒಳಗೆ ಅಥವಾ ಹೊರ ಹೋಗುವ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.. ಈ ಮೂಲಕ ಅನಗತ್ಯವಾಗಿ ತಿರುಗಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.. ಮುಂಡಗೋಡ ಪಟ್ಟಣಕ್ಕೆ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲೂ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿರೋ ಪೊಲೀಸ್ರು, ಅನಗತ್ಯ ಸಂಚರಿಸೊ ವಾಹನಗಳು ಬಂದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.. ವಾಹನ ಸವಾರರ ಜೊತೆ ಕೂಲಂಕುಶವಾಗಿ ಚರ್ಚಿಸಿ ಒಂದುವೇಳೆ ಅಗತ್ಯವಿದ್ದಲ್ಲಿ ಮಾತ್ರ ಬಿಡುತ್ತಿದ್ದಾರೆ.. ಹೀಗಾಗಿ ಪಟ್ಟಣದಲ್ಲಿ ಅನಗತ್ಯ ಓಡಾಡುವವರ ಹಾವಳಿ ಕೊಂಚ ತಣ್ಣಗಾಗಿದೆ.
ಮುಂಡಗೋಡ ಕೃಷಿ ಇಲಾಖೆ ಬೇಜವಾಬ್ದಾರಿ; ಕೋವಿಡ್ ನಿಯಮ ಪಾಲಿಸದ ರೈತರು..!
ಮುಂಡಗೋಡ-ಪಟ್ಟಣದಲ್ಲಿರೋ ಕೃಷಿ ಇಲಾಖೆಯಲ್ಲಿ ರೈತರಿಗೆ ಬಿತ್ತನೆಗೆ ಬೀಜ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತಾಲೂಕಿನ ರೈತರು ಇಂದು ಬಿತ್ತನೆ ಬೀಜಗಳ ಖರೀದಿಗಾಗಿ ಮುಗಿ ಬಿದ್ದಿದ್ರು.. ಆದ್ರೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರ ಮರೆತು ಬೀಜ ಖರೀಧಿಸುತ್ತಿದ್ದ ರೈತರಿಗೆ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಮ ಪಾಲಿಸುವಂತೆ ಯಾವುದೇ ನಿರ್ದೇಶನ ನೀಡದೇ ಕಣ್ಮುಚ್ವಿ ಕುಳಿತಿದ್ರು.. ಕೃಷಿ ಇಲಾಖೆಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ರೈತರು ಯಾವುದೇ ಸಾಮಾಜಿಕ ಅಂತರ ಪಾಲಿಸಲಿಲ್ಲ. ಅಲ್ಲದೇ ಅದೇಷ್ಟೋ ರೈತರು ಮಾಸ್ಕ್ ಕೂಡ ಧರಿಸಿರಲಿಲ್ಲ. ಆದರೂ ಅಂತಹ ರೈತರಿಗೆ ತಿಳುವಳಿಕೆ ನೀಡದೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದು ಮಾತ್ರ ವಿಪರ್ಯಾಸ..
ಪುಟ್ಟ ಬಾಲಕಿಗೂ ಬಿಡಲಿಲ್ಲ ಹೆಮ್ಮಾರಿ; ಆಸ್ಪತ್ರೆಗೆ ಕರೆದೊಯ್ಯುವಾಗ ಕಣ್ಣೀರು ಹಾಕಿದ ಬಾಲಕಿ..!
ಮುಂಡಗೋಡ- ತಾಲೂಕಿನ ಅಗಡಿ ಗ್ರಾಮದಲ್ಲಿ ಪುಟ್ಟ ಕಂದಮ್ಮನಿಗೂ ಪಾಸಿಟಿವ್ ದೃಡಪಟ್ಟಿದ್ದು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ವಾಹನದ ಮೂಲಕ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಯಿತು.. ಈ ವೇಳೆ ತನ್ನ ಕುಟುಂಬವನ್ನು ಬಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಹೋಗುವಾಗ ಪುಟ್ಟ ಮಗು ಕಣ್ಣೀರು ಹಾಕಿದೆ.. ಅಂದಹಾಗೆ ಅಗಡಿ ಗ್ರಾಮದಲ್ಲಿ ಪುಟ್ಟ ಬಾಲಕಿಯೂ ಸೇರಿ ಒಂದೇ ಕುಟುಂಬದ ಮೂವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರೆಲ್ಲರನ್ನೂ ಇಂದು ಕೋವಿಡ್ ಸೆಂಟರ್ ಗೆ ದಾಖಲಿಸಲು ಅಧಿಕಾರಿಗಳ ತಂಡ ಹಾಗೂ ಹುನಗುಂದ ಗ್ರಾಮ ಪಂಚಾಯತಿ ಸಮಿತಿಯವರು ಸೋಂಕಿತರ ಮನೆಗೆ ತೆರಳಿದ್ರು.. ಈ ವೇಳೆ ಅವ್ರ ಕುಟುಂಬದವರು ಸೋಂಕಿತರನ್ನು ಒಲ್ಲದ ಮನಸ್ಸಿನಿಂದಲೇ ಕಳಿಸಿ ಕೊಟ್ರು, ಈ ವೇಳೆ ಕುಟುಂಬದ ಸದಸ್ಯರೇಲ್ಲರೂ ಕಣ್ಣೀರು ಹಾಕಿದ್ರು.. ಇನ್ನು ಪುಟ್ಟ ಸೋಂಕಿತ ಬಾಲಕಿ ವಾಹನ ಹತ್ತುವಾಗ ತೀರ ಭಯಗೊಂಡಿದ್ಲು, ಜೊತೆಗೆ ಕಣ್ಣೀರು ಹಾಕುತ್ತ ವಾಹನ ಹತ್ತಿದ್ದು ನಿಜಕ್ಕೂ ಎಲ್ಲರಿಗೂ ಒಂದು ಕ್ಷಣ ಕಣ್ಣಾಲೆಗಳು ತುಂಬಿ ಬರುವಂತೆ ಮಾಡಿತ್ತು. ಅಧಿಕಾರಿಗಳು ಕುಟುಂಬಸ್ಥರಿಗೆ ದೈರ್ಯ...
ನಂದಿಕಟ್ಟಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ರೌಡಿ ಮಂಗನ ಹಾವಳಿ..!
ಮುಂಡಗೋಡ- ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೌಡಿ ಮಂಗವೊಂದು ಹಾವಳಿ ಮಾಡುತ್ತಿದೆ.. ಕಳೆದ ಎರಡು ದಿನದ ಹಿಂದೆಯಷ್ಟೇ ಈ ರೌಡಿ ಮಂಗ ತನ್ನ ಜೊತೆಗಿದ್ದ ಎರಡು ಮಂಗಗಳನ್ನೇ ಬಲಿ ಪಡದಿತ್ತು.. ಅಲ್ಲದೇ ಮತ್ತೆ ಈಗಲೂ ತನ್ನ ಜೊತೆಗಿರೋ ಮಂಗಗಳನ್ನೇ ಅಟ್ಟಾಡಿಸಿ ಕಡಿಯುತ್ತಿದೆ.. ಹೀಗಾಗಿ, ನಿತ್ಯವೂ ಒಂದಿಲ್ಲೊಂದು ಕಿರಿಕ್ ಮಾಡುತ್ತ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.. ಇನ್ನು ಎಲ್ಲೆಂದರಲ್ಲಿ ಜಿಗಿದು ಬರುವ ರೌಡಿ ಮಂಗ, ಮನೆಯ ಒಳಗೂ ಬಂದು ದಾಂಧಲೆ ಮಾಡುತ್ತಿದೆ.. ಇನ್ನು, ಯಾರಾದ್ರೂ ಇದರ ತಂಟೆಗೆ ಹೋದ್ರೆ ಮುಗೀತು, ಒಮ್ಮೆಲೆ ಅಟ್ಯಾಕ್ ಮಾಡುತ್ತಿದೆ.. ಈ ಕಾರಣಕ್ಕಾಗಿ ಇಲ್ಲಿನ ಗ್ರಾಮಗಳಲ್ಲಿ ಪುಟ್ಟ ಮಕ್ಕಳು ಮನೆಯಿಂದ ಹೊರಗೆ ಬರುವುದೇ ಅಪಾಯ ಎನ್ನುವಂತಾಗಿದ್ದು ಎಲ್ಲರನ್ನೂ ಭಯಭೀತಗೊಳಿಸಿದೆ.. ಹೀಗಾಗಿ ಅರಣ್ಯ ಇಲಾಖೆಯವರು ಈ ರೌಡಿ ಮಂಗನಿಂದ ಗ್ರಾಮಸ್ಥರನ್ನು ರಕ್ಷಿಸಬೇಕಿದೆ..
ಹುನಗುಂದದಲ್ಲಿ ತುಂಬು ಗರ್ಭಿಣಿಗೆ ಪಾಸಿಟಿವ್..!
ಮುಂಡಗೋಡ-ತಾಲೂಕಿನ ಹುನಗುಂದ ಗ್ರಾಮದಲ್ಲಿ ತುಂಬು ಗರ್ಬಿಣಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೇನು ನಾಲ್ಕೈದು ದಿನದಲ್ಲಿ ಹೆರಿಗೆ ಆಗತ್ತೆ ಅಂತಾ ಈಗಾಗಲೇ ವೈದ್ಯರು ಡೇಟ್ ಕೂಡ ನೀಡಿದ್ದಾರೆ.. ಅಂತದ್ದರಲ್ಲಿ ಆ ಗರ್ಭಿಣಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಆತಂಕ ಸೃಷ್ಟಿಸಿದೆ. ಹೀಗಾಗಿ ಸೋಂಕಿತ ಗರ್ಭಿಣಿಗೆ ಮುಂಡಗೋಡ ಕೋವಿಡ್ ಕೇರ್ ಸಂಟರ್ ಗೆ ದಾಖಲಿಸಲು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ವಾಹನ ಇಂದು ಹುನಗುಂದ ಗ್ರಾಮಕ್ಕೆ ಆಗಮಿಸಿತ್ತು.. ಆದ್ರೆ ಈ ವೇಳೆ ಕೋವಿಡ್ ಕೇರ್ ಸೆಂಟರ್ ಗೆ ಸೋಂಕಿತೆಯನ್ನು ದಾಖಲಿಸಲು ಕುಟುಂಬಸ್ಥರು ಒಪ್ಪಲೇ ಇಲ್ಲ.. ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಗ್ರಾಮಸ್ಥರು ಕುಟುಂಬದವರ ಮನವೊಲಿಸಲು ಹರಸಾಹಸ ಪಡಬೇಕಾಯಿತು.. ನಂತರ, ಮುಂಡಗೋಡ ಕ್ರೈಂ ಪಿಎಸ್ ಐ ಎನ್.ಡಿ.ಜಕ್ಕಣ್ಣವರ್ ಸ್ಥಳಕ್ಕೆ ಆಗಮಿಸಿ ಕುಟುಂಬದವರ ಮನವೊಲಿಸಿದ್ರು.. ಹೀಗಾಗಿ ಸೋಂಕಿತ ಗರ್ಭಿಣಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ನಂತರ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಯಿತು
ಕೊರೋನಾ ಎರಡನೇ ಅಲೆ ಭೀತಿ, ಮತ್ತೆ ಟಫ್ ರೂಲ್ಸ್… 6 ರಿಂದ 9 ನೇ ತರಗತಿಗಳು ಬಂದ್.
ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕೊರೋನಾ ಹೆಚ್ಚಳದ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9ನೇ ತರಗತಿ ಸ್ಥಗಿತಗೊಳಿಸಲಾಗಿದೆ. 10, 11 ಹಾಗೂ 12ನೇ ತರಗತಿಗಳು ಪ್ರಸ್ತುತ ಇರುವಂತೆಯೇ ಮುಂದುವರೆಯುತ್ತವೆ. ಆದಾಗ್ಯೂ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಗಳಲ್ಲಿ ಮಂಡಳಿಯು, ವಿವಿ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳ್ನು ಹೊರತು ಪಡಿಸಿ, ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ವಸತಿ ಶಾಲೆಗಳು, ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರತಾಗಿ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ. ಆದ್ರೇ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಅಪಾರ್ಮೆಂಟ್ ಕಾಂಪ್ಲೆಕ್ಸ್ ಗಳಲ್ಲಿ, ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಜಿಮ್, ಪಾರ್ಟಿ ಹಾಲ್...