Lokayukta Raid News: ಹಾವೇರಿ,ಅಡ್ಮಿಶನ್ ಮಾಡಿಕೊಳ್ಳಲು ಲಂಚದ ಬೇಡಿಕೆಯಿಟ್ಟು ಪಾಲಕರ ಕಡೆಯಿಂದ ಲಂಚ ಸ್ವೀಕಾರಿಸುತ್ತಿದ್ದ ವೇಳೆ ಜಿಲ್ಲೆಯ ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕನನ್ನು ಲೋಕಾಯುಕ್ತರು ಸೋಮವಾರ ಬಂಧಿಸಿದ್ದಾರೆ.
ಸವಣೂರು ಖಾದರಭಾಗ ಓಣಿಯ
ಅಕ್ಟರ್ ಅಬ್ದುಲ್ ಹಮೀದ ಕಂದಿಲವಾಲೆ ತಮ್ಮ ಎರಡನೇ ಮಗನ ಅಡ್ಮಿಶನ್ ಮಾಡಿಸಲು ದಿನಾಂಕ 16-05-2025 ರಂದು ಆಪಾದಿತ ಸವಣೂರು ಕರ್ನಾಟಕ ಪಬ್ಲಿಕ್ ಶಾಲೆ ಪ್ರಭಾರ ಮುಖ್ಯೋಪಾದ್ಯಾಯರ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ, ಯನ್ನು ಬೇಟಿಯಾಗಿದ್ದು, ಸದರಿಯವರು ಅಡ್ಮಿಶನ್ ಮಾಡಿಕೊಳ್ಳಲು ರೂ50,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ರೂ 10,000/- ಗಳಿಗೆ ಒಪ್ಪಿಕೊಂಡಿದ್ದು, ದಿನಾಂಕ 17-05-2025 ರಂದು ರೂ 5,000/- ಗಳನ್ನು ಮುಂಗಡವಾಗಿ ಸ್ವೀಕರಿಸಿಕೊಂಡು, ದಿನಾಂಕ 19-05-2025 ರ ಸೋಮವಾರ ಬಾಕಿ ರೂ 5,000/- ಗಳ ಲಂಚದ ಹಣವನ್ನು ಪಡೆದುಕೊಳ್ಳುವಾಗ ಸವಣೂರು ನಗರದ ಹಾವಣಗಿ ಪ್ಲಾಟ್ನಲ್ಲಿರುವ ಆಪಾದಿತನ ಮನೆಯಲ್ಲಿಲೋಕಾಯುಕ್ತರು
ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ.
ಪ್ರಕರಣದ ತನಿಖೆಯನ್ನು ಶ್ರೀ ಎಮ್ ಎಸ್ ಕೌಲಾಪುರೆ, ಪೊಲೀಸ್ ಅಧೀಕ್ಷಕರು, ಕಲೋ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಕೈಗೊಂಡು, ಮಧುಸೂದನ ಸಿ, ಡಿವೈಎಸ್ಪಿ ಕರ್ನಾಟಕ ಲೋಕಾಯುಕ್ತ ರವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಮಂಜುನಾಥ ಪಂಡಿತ್ ಪಿ ಎನ್. ಶ್ರೀ ಬಸವರಾಜ ಹಳಬಣ್ಣನವರ, ಪೊಲೀಸ್ ನಿರೀಕ್ಷಕರು, ದಾದಾವಲಿ ಕೆ ಎಚ್. ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿರವರಾದ ಸಿ ಎಮ್ ಬಾರ್ಕಿ, ಎಮ್ ಕೆ ನದಾಫ್, ಬಿ ಎಮ್ ಕರ್ಜಗಿ, ಎಮ್ ಕೆ ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್ಎನ್ ಕಡಕೋಳ, ಮಂಜುನಾಥ ಬಿ ಎಲ್. ರಮೇಶ ಗೆಜ್ಜಿಹಳ್ಳಿ, ಶಿವರಾಜ ಲಿಂಗಮ್ಮನವರ, ಆನಂದ . ಎಸ್ ಸಂಕಣ್ಣನವರ, ಶ ಮಹಾಂತೇಶ ಕೊಂಬಳಿ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸದರಿ ಆರೋಪಿತ ಮುಖ್ಯೋಪಾದ್ಯಾಯ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ, ಯನ್ನು
ಬಂಧಿಸಿದ್ದು ತನಿಖೆ ಮುಂದುವರೆದಿದೆ.