ಮುಂಡಗೋಡ-ಪಟ್ಟಣದಲ್ಲಿರೋ ಕೃಷಿ ಇಲಾಖೆಯಲ್ಲಿ ರೈತರಿಗೆ ಬಿತ್ತನೆಗೆ ಬೀಜ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತಾಲೂಕಿನ ರೈತರು ಇಂದು ಬಿತ್ತನೆ ಬೀಜಗಳ ಖರೀದಿಗಾಗಿ ಮುಗಿ ಬಿದ್ದಿದ್ರು..

ಆದ್ರೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರ ಮರೆತು ಬೀಜ ಖರೀಧಿಸುತ್ತಿದ್ದ ರೈತರಿಗೆ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಮ ಪಾಲಿಸುವಂತೆ ಯಾವುದೇ ನಿರ್ದೇಶನ ನೀಡದೇ ಕಣ್ಮುಚ್ವಿ ಕುಳಿತಿದ್ರು..

ಕೃಷಿ ಇಲಾಖೆಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ರೈತರು ಯಾವುದೇ ಸಾಮಾಜಿಕ ಅಂತರ ಪಾಲಿಸಲಿಲ್ಲ. ಅಲ್ಲದೇ ಅದೇಷ್ಟೋ ರೈತರು ಮಾಸ್ಕ್ ಕೂಡ ಧರಿಸಿರಲಿಲ್ಲ. ಆದರೂ ಅಂತಹ ರೈತರಿಗೆ ತಿಳುವಳಿಕೆ ನೀಡದೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದು ಮಾತ್ರ ವಿಪರ್ಯಾಸ..

error: Content is protected !!