ಲಾರಿಗೆ ಕ್ಯಾಂಟರ್ ಡಿಕ್ಕಿ: ಲಾರಿಯಡಿ ಕಾಲು ಸಿಲುಕಿ ನರಳಾಡಿದ ಚಾಲಕನ ಸ್ಥಿತಿ ಕರುಣಾಜನಕ..!

ಲಾರಿಗೆ ಕ್ಯಾಂಟರ್ ಡಿಕ್ಕಿ: ಲಾರಿಯಡಿ ಕಾಲು ಸಿಲುಕಿ ನರಳಾಡಿದ ಚಾಲಕನ ಸ್ಥಿತಿ ಕರುಣಾಜನಕ..!

ಹಾವೇರಿ: ನಗರದ ಹೊರವಲಯದಲ್ಲೊಂದು ಮನಕಲಕುವ ಘಟನೆ ನಡೆದಿದೆ‌. ಅಪಘಾತವಾದ ಲಾರಿಯಲ್ಲಿ ಚಾಲಕ ಸಿಲುಕಿಕೊಂಡು ಒಂ ದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ. ಹೌದು,ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಪೆಟ್ರೋಲ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಟ್ಯಾಂಕರ್ ಡಿಕ್ಕಿಯಾಗಿದೆ. ಪರಿಣಾಮ ಚಾಲಕನ ಎಡಗಾಲು ಸಂಪೂರ್ಣ ನುಜ್ಜು ಗುಜ್ಜಾಗಿದ್ದ ಲಾರಿಯಡಿಯೇ ಸಿಲುಕಿಕೊಂಡಿದೆ. ಹೀಗಾಗಿ ಚಾಲಕ ನೋವಿನಿಂದ ಚೀರಾಡಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ. ಈ ವೇಳೆ ಹಾವೇರಿ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಚಾಲಕನ್ನು ರಕ್ಷಿಸಿದ್ದಾರೆ. ಲಾರಿಯಿಂದ ಹೊರತೆಗೆದಾಗ ಚಾಲಕ ನೋವಿನಿಂದ ನರಳಾಡಿದ್ದಾನೆ. ತಕ್ಷಣವೇ ಗಾಯಗೊಂಡಿರೋ ಚಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, ಎರಡು ವಾಹನಗಳು ಹುಬ್ಬಳಿಯಿಂದ ಬೆಂಗಳೂರು ಕಡೆ ಹೊರಟಾಗ ಅಪಘಾತವಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೆ ಘಟನೆಗೆ ಕಾರಣ ಎನ್ನಲಾಗಿದೆ. ಹಾವೇರಿ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ನಾನೇ: ಚಂದ್ರಕಾಂತ್ ಬೆಲ್ಲದ್ ಸ್ಪೋಟಕ ನುಡಿ..!

ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ನಾನೇ: ಚಂದ್ರಕಾಂತ್ ಬೆಲ್ಲದ್ ಸ್ಪೋಟಕ ನುಡಿ..!

ಧಾರವಾಡ: ಯಡಿಯೂರಪ್ಪರನ್ನ ಸಿಎಂ ಮಾಡಿದ್ದು ನಾನೇ ಅಂತಾ ಧಾರವಾಡದಲ್ಲಿ ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ ಸ್ಪೋಟಕ ಹೇಳಿಕೆ ನೀಡಿದ್ದಾರೆ‌. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರೋ ಅವ್ರು, ಬಿಎಸ್‌ವೈ ತಮ್ಮ ಆತ್ಮ ಶೋಧನೆ ಮಾಡಿಕೊಳ್ಳಲಿ, ಅದರ ಮೂಲಕ ನ್ಯಾಯಯುತವಾಗಿ ನಡೆದುಕೊಳ್ಳಲಿ, ಬೆಳೆಸಿದ ಪಕ್ಷದೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಬೇಕು, ಪಕ್ಷ ಹೇಳಿದ್ದನ್ನು ಕೇಳಿಕೊಂಡು ಹೋಗಬೇಕು ಅಂತಾ ಎಚ್ಚರಿಸಿದ್ದಾರೆ. ನಾನು ಬಿಜೆಪಿಗೆ ಬಂದಾಗ ಬಿಎಸ್‌ವೈ ಒಬ್ಬರೇ ಶಾಸಕರಿದ್ದರು, ಹೀಗಾಗಿ, ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ನಾನೇ ಕಾರಣ, ಬಿ‌ಎಸ್‌‌ವೈರನ್ನು ಸಿಎಂ ಮಾಡಿದ್ದೂ ಕೂಡ ನಾನೇ, ಇದು ಪಕ್ಷದ ಎಲ್ಲರಿಗೂ ಗೊತ್ತು, ರಾಜ್ಯದ ಎಲ್ಲ ನಾಯಕರಿಗೂ ಗೊತ್ತಿದೆ. ಬಿಜೆಪಿ ಬೆಳೆಸಿದ್ದು ಕೂಡ ನಾನೇ ಅಂತಾ ನಾಯಕರಿಗೆ ಗೊತ್ತಿದೆ ಅಂತಾ ಬೆಲ್ಲದ್ ತಿಳಿಸಿದ್ರು. ಇನ್ನು, 1991 ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ ಆಗ ಧಾರವಾಡ ಕ್ಷೇತ್ರದಲ್ಲಿ ಒಬ್ಬ ಬಿಜೆಪಿ ಶಾಸಕನೂ ಇರಲಿಲ್ಲ, ಆಗ ಕಾಂಗ್ರೆಸ್ ವಿರುದ್ಧ 20 ಸಾವಿರ ಮತದಿಂದ ಸೋತಿದ್ದೆ ಆಗ ಕಾರ್ಯಕರ್ತರೂ ಇರಲಿಲ್ಲ ಅದು ಕೂಡ ವೈಯಕ್ತಿಕ ವ್ಯಕ್ತಿತ್ವದಿಂದ ನಾನು ಮತ...

ಮುಂಡಗೋಡಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ “ಶ್ರಮಿಕರಿಗೆ ನೆರವು”

ಮುಂಡಗೋಡಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ “ಶ್ರಮಿಕರಿಗೆ ನೆರವು”

ಮುಂಡಗೋಡ: ರಾಜ್ಯ ಬಿಜೆಪಿ ಸರಕಾರ 11 ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸಹಾಯ ಧನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ನೆರವಾಗುವ ನಿಟ್ಟಿನಲ್ಲಿ ತಾಲೂಕಾ ಬಿಜೆಪಿ ಯುವ ಮೋರ್ಚಾ “ಶ್ರಮಿಕರಿಗೆ ನೆರವು ” ಕಾರ್ಯಕ್ರಮ ಆಯೋಜಿಸಿದೆ. ಯಲ್ಲಾಪುರ ಕ್ಷೇತ್ರದ ಬಿಜೆಪಿ ಯುವ ನಾಯಕ ವಿವೇಕ್ ಹೆಬ್ಬಾರ್, ಕಾರ್ಯಕ್ರಮ ಉದ್ಘಾಟಿಸಿ, ಅಸಂಘಟಿತ ಕಾರ್ಮಿಕರು ಸರ್ಕಾರದ ಘೋಷಿಸಿರೋ ಸಹಾಯಧನ ಪಡೆದುಕೊಳ್ಳುವಂತೆ ಕರೆ ನೀಡಿದ್ರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ, ಯುವಮೋರ್ಚಾ ತಾಲೂಕಾ ಅಧ್ಯಕ್ಷ ಗಣೇಶ ಶಿರಾಲಿ, ಪಟ್ಟಣ ಪಂಚಾಯತ ಉಪಾಧ್ಯಕ್ಷ ಮಂಜುನಾಥ ಹರ್ಮಲಕರ್ , ಪಕ್ಷದ ಮುಖಂಡರಾದ ಉಮೇಶ್ ಬಿಜಾಪುರ, ರವಿ ಹಾವೇರಿ, ಹಾಗೂ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಕಾರ್ಮಿಕರು ಉಪಸ್ಥಿತರಿದ್ದರು.

ಇಂದೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ..!

ಇಂದೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ..!

ಮುಂಡಗೋಡ: ತಾಲೂಕಿನ ಇಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಆಶಾ ಕರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ 7 ಜನ ಆಶಾ ಕಾರ್ಯಕರ್ತೆಯರು ಕೊರೋನಾ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಆಶಾ ಕಾರ್ಯಕರ್ತರ ಸೇವೆ ಪರಿಗಣಿಸಿ ತಾಲೂಕಿನೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ‌. ಸನ್ಮಾನ ಸಮಾರಂಭದಲ್ಲಿ ಇಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಅರುಣ ಸಿಂಗ್ “ಪರ್ಸನಲ್” ಭೇಟಿಗೆ 28 ಶಾಸಕರು ರೆಡಿ..! ನಾಳೆ ಬೆಳಿಗ್ಗೆ ಮೂಹೂರ್ತ ಫಿಕ್ಸ್..!!

ಅರುಣ ಸಿಂಗ್ “ಪರ್ಸನಲ್” ಭೇಟಿಗೆ 28 ಶಾಸಕರು ರೆಡಿ..! ನಾಳೆ ಬೆಳಿಗ್ಗೆ ಮೂಹೂರ್ತ ಫಿಕ್ಸ್..!!

ಬೆಂಗಳೂರು: ಕೇಸರಿ ಪಡೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲು ಕಾರವಾರ ಶಾಸಕಿ ರೂಪಾಲಿ ನಾಯಕ್ ಸೇರಿ 28 ಬಿಜೆಪಿ ಶಾಸಕರು ಅವಕಾಶ ಕೇಳಿದ್ದಾರೆ. ಯಾವಾಗ ಭೇಟಿ..? ನಾಳೆ ಬೆಳಗ್ಗೆ 9 ಗಂಟೆಯಿಂದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಶಾಸಕರ ಜೊತೆಗೆ ಅರುಣ ಸಿಂಗ್ ವಯಕ್ತಿಕವಾಗಿ ಮಾತನಾಡಲಿದ್ದಾರೆ. ಬೆಳಗಾವಿಯ ಇಬ್ಬರು ಶಾಸಕರು ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಸುಮಾರು 28 ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲು ಅವಕಾಶ ಕೇಳಿದ್ದಾರೆ. ಯಾರ್ಯಾರು ಆ ಶಾಸಕರು..? ಹರತಾಳು ಹಾಲಪ್ಪ, ಸಿದ್ದು ಸವದಿ, ರಾಜೇಶ ಗೌಡ, ಅಭಯ ಪಾಟೀಲ, ಕುಮಾರ ಬಂಗಾರಪ್ಪ, ಸಿ.ಪಿ.ಯೋಗೀಶ್ವರ, ರೂಪಾಲಿ ನಾಯಕ, ಸುನೀಲ ಕುಮಾರ, ಪರಪ್ಪ ಮುನವಳ್ಳಿ, ಅಪ್ಪಚ್ಚು ರಂಜನ್, ಉದಯ ಗರುಡಾಚಾರ, ಜ್ಯೋತಿ ಗಣೇಶ, ಪ್ರೀತಂ ಗೌಡ, ಅರವಿಂದ ಬೆಲ್ಲದ್, ಮಹೇಶ ಕುಮಠಳ್ಳಿ, ಸೋಮಶೇಖರ ರೆಡ್ಡಿ, ಸಿದ್ದು ಸವದಿ, ಮಹಾದೇವಪ್ಪ ಯಾದವಾಡ ಸೇರಿದಂತೆ 28...

ಹಣ್ಣಿನ ಗಾಡಿಯಲ್ಲಿ ಗೋಮಾಂಸ ಸಾಗಾಟ: ಮೂವರು ಆರೋಪಿಗಳು ಅಂದರ್..!

ಹಣ್ಣಿನ ಗಾಡಿಯಲ್ಲಿ ಗೋಮಾಂಸ ಸಾಗಾಟ: ಮೂವರು ಆರೋಪಿಗಳು ಅಂದರ್..!

ಭಟ್ಕಳ: ಹಣ್ಣಿನ ಗಾಡಿಯಲ್ಲಿ ಗೋ‌ಮಾಂಸ‌‌ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸ್ರು ಬಂಧಿಸಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೊಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಿ, 500 ಕೆಜಿಗೂ ಅಧಿಕ ಗೋಮಾಂಸ ವಶಕ್ಕೆ ಪಡೆಯಲಾಗಿದೆ‌. ಹಾನಗಲ್‌ ತಾಲೂಕಿನ ಮೌಲಾ‌ ಅಲಿ ಬಾಷಾ ಸಾಬ್, ಭಟ್ಕಳದವರಾದ ಜೀಲಾನಿ ಮೋಹಿದ್ದೀನ್, ಮುಝರಪ್ ಎಂಬುವ ಆರೋಪಿಗಳೆ ಬಂಧನಕ್ಕೊಳಗಾದವರು. ಈ ಕುರಿತು, ಭಟ್ಕಳ ಗ್ರಾಮೀಣ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಗೆ ನೀರಿನಲ್ಲಿ ತೇಲಿ ಬಂದ ಶವ ಯಾರದ್ದು..?

ಹಾಗೆ ನೀರಿನಲ್ಲಿ ತೇಲಿ ಬಂದ ಶವ ಯಾರದ್ದು..?

ಹುಬ್ಬಳ್ಳಿ: ಅಪರಿಚಿತ ಶವವೊಂದು ನೀರಿನಲ್ಲಿ ತೇಲಿಕೊಂಡು ಬಂದಿರುವ ಘಟನೆ ಹುಬ್ಬಳ್ಳಿಯ ಹೆಗ್ಗೇರಿಯ ನಾಲಾದಲ್ಲಿ ನಡೆದಿದೆ. ಸುಮಾರು 35 ವರ್ಷದ ಆಸುಪಾಸಿನ ವ್ಯಕ್ತಿಯ ಶವವು ನಾಲಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಯುವ ಮುಖಂಡ ಪರ್ವೀಜ್ ಕಟ್ಟಿಮನಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರು ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ವ್ಯಕ್ತಿಯ ಬಗ್ಗೆ ಹಾಗೂ ಆತನ ಸಾವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

15 ವಾರ್ಡಿನ ಜನರ ನೀರಿನ ಬವಣೆ ನೀಗಿಸಿದ ಪ ಪಂ ಅಧ್ಯಕ್ಷೆ..!

15 ವಾರ್ಡಿನ ಜನರ ನೀರಿನ ಬವಣೆ ನೀಗಿಸಿದ ಪ ಪಂ ಅಧ್ಯಕ್ಷೆ..!

ದೇವರಹಿಪ್ಪರಗಿ: ಕಳೆದ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಾರ್ಡ್ ನಂ-15 ಮತದಾರರಿಗೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದೆ ಇಂದು ಅವರ ನೀರಿನ ಬವಣೆ ನೀಗಿಸಿ ಋಣ ತೀರಿಸಿ ದಂತಾಗಿದೆ ಎಂದು ಪಟ್ಟಣ ಪಂಚಾಯತ ಅಧ್ಯಕ್ಷರ ಪ್ರತಿನಿಧಿಯಾದ ಮುನೀರ ಅಹ್ಮದ್ ಮಳಖೇಡ ಹೇಳಿದರು. ಪಟ್ಟಣದಲ್ಲಿ ಬುಧವಾರದಂದು ಪ ಪಂ 15ನೇ ಹಣಕಾಸಿನ ಯೋಜನೆಯಲ್ಲಿ ವಾರ್ಡ ನಂ-15 ರ ಕುಡಿಯುವ ನೀರಿನ ಪೈಪ್ ಲೈನ್ ಸುಮಾರು 4 ಲಕ್ಷ ರೂ ವೆಚ್ಚದ ಕಾಮಗಾರಿ ಆರಂಭಿಸಿ ಮಾತನಾಡಿದ ಅವರು ನಮ್ಮ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಮುಕ್ತವಾಗಿ ನೆರವೇರಿಸಿದ್ದು ಸಂತೋಷವಾಗಿದೆ. ಕಳೆದ ತಿಂಗಳ ಬೋರ್ವೆಲ್ ಹಾಕಿಸಿದ್ದು ಹಾಗೂ ಶೀಘ್ರದಲ್ಲಿ 3 ಲಕ್ಷ ರೂ ವೆಚ್ಚದಲ್ಲಿ ಮನೆಮನೆಗೆ ನಲ್ಲಿ ಮಾಡಿಸುವ ಕಾರ್ ವಾರ್ಡ್ ನಂಬರ್ 15,16 ರಲ್ಲಿ ಆರಂಭಿಸಲಾಗುವುದು. ಇದರಿಂದ ಸಂಪೂರ್ಣ ವಾರ್ಡಿನ ಜನರ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ, ನಮ್ಮ ವಾರ್ಡ್ನಲ್ಲಿ ಹಲವಾರು ರಸ್ತೆಗಳನ್ನು ಸಿ ಸಿ ರಸ್ತೆಯನ್ನಾಗಿ ಮಾಡಿದ್ದು ಇನ್ನೂ ಹಲವು ಸಮಸ್ಯೆಗಳಿಂದ...

ಕೊರೋನಾ 3 ನೇ ಅಲೆ ಅನ್ನೋದೇ ಶುದ್ಧ ಸುಳ್ಳು; ಅದು ಮಿಸ್ಸಿ ರೋಗ: ಸಚಿವ ಈಶ್ವರಪ್ಪ

ಕೊರೋನಾ 3 ನೇ ಅಲೆ ಅನ್ನೋದೇ ಶುದ್ಧ ಸುಳ್ಳು; ಅದು ಮಿಸ್ಸಿ ರೋಗ: ಸಚಿವ ಈಶ್ವರಪ್ಪ

ಶಿರಸಿ: ಕೊರೊನಾ 3 ನೇ ಅಲೆ ಬರುತ್ತೆ ಅನ್ನೋದು ಶುದ್ಧ ಸುಳ್ಳು. ಕೊರೊನಾ 3 ನೇ ಅಲೆ ಅಲ್ಲ ಅದು. ಅದೊಂದು ಮಿಸ್ಸಿ ಅನ್ನೋ ಕಾಯಿಲೆ. ಇದು ಉಸಿರಾಟ ಅಥವಾ ಸ್ಪರ್ಶದಿಂದಾಗಿ ಒಬ್ಬರಿಂದ ಒಬ್ಬರಿಗೆ ಹರಡೋದಿಲ್ಲ ಅಂತ ಶಿರಸಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ, ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಮಕ್ಕಳಿಗೆ 3 ನೇ ಅಲೆಯಿಂದ ತೊಂದರೆಯಾಗುತ್ತೆ, 3 ನೇ ಅಲೆ ಭೀಕರವಾಗಿರಲಿದೆ ಅನ್ನೋದೆಲ್ಲ ಊಹಾಪೋಹ. ಇದು ಮಿಸ್ಸಿ ಅನ್ನೋ ಖಾಯಿಲೆ. ಇದು ಹರಡೋದಿಲ್ಲ. ಇದಕ್ಕೆ ಮಾಸ್ಕ್, ಸಾಮಾಜಿಕ ಅಂತರ ಇವ್ಯಾವುದರ ಅವಶ್ಯಕತೆಯೂ ಇಲ್ಲ. ಮಗು ಹತ್ರ ತಾಯಿ ಹೋಗಿ ಆರೈಕೆ ಮಾಡ್ಬಹುದು. ಇದು ಟೆಸ್ಟ್ ಮಾಡುವಾಗಲೇ ವಾಸಿ ಆದ್ರೂ ಆಗ್ಬಹುದು. ಇದು ಮುಂದುವರಿದ್ರೆ ಒಂದು ಬದಿಯಲ್ಲಿ ಕಣ್ಣು ಕೆಂಪು ಆಗ್ಬಹುದು. ಬೆರಳುಗಳು ಬಿಳುಚಿಕೊಳ್ಳುತ್ತೆ. ಬಾಯಿಯಲ್ಲಿ ಹುಣ್ಣಾಗುತ್ತೆ. ಇದನ್ನ 5-6 ದಿನದಲ್ಲಿ ಗುರ್ತಿಸಿ ಅದಕ್ಕೆ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ. ತಾತ್ಕಾಲಿಕವಾಗಿ 2 ಕಂಪೆನಿಗಳಲ್ಲಿ ಲಭ್ಯವಿದ್ದು, ತರಿಸುತ್ತಿದ್ದಾರೆ. ಪರಿಹಾರ ಆಗುತ್ತೆ ಅಂತಾ ಈಶ್ವರಪ್ಪ ಹೇಳಿದ್ದಾರೆ.  

error: Content is protected !!