ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!

ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!

ಮುಂಡಗೋಡ: ಕರಡಿ ದಾಳಿಯಿಂದ ಸ್ಥಳದಲ್ಲೇ ಸಾವುಕಂಡಿದ್ದ ರೈತನ ಕುಟುಂಬಕ್ಕೆ ಸರ್ಕಾರ ನೆರವಿನ ಹಸ್ತ ನೀಡಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಲ್ಲಿನ ಅರಣ್ಯ ಅಧಿಕಾರಿಗಳು ನೊಂದ ಕುಟುಂಬಕ್ಕೆ ಪರಿಹಾರದ ಆಸರೆ ಒದಗಿಸುವಲ್ಲಿ ಜವಾಬ್ದಾರಿ ಮೆರೆದಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ಹ್ಯಾಟ್ಸ್ ಅಪ್.. ಅಂದಹಾಗೆ, ಕರಡಿ ದಾಳಿಯಿಂದ ಮುಂಡಗೋಡ ತಾಲೂಕಿನ ಮರಗಡಿ ಗೌಳಿದಡ್ಡಿಯ ಜಿಮ್ಮು ವಾಘು ತೋರವತ್ ಎಂಬುವ ರೈತ ಭೀಕರ ಸಾವು ಕಂಡಿದ್ದ‌. ಹೀಗಾಗಿ, ಅಕ್ಷರಶಃ ನಲುಗಿ ಹೋಗಿದ್ದ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಪರಿಹಾರದ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ CCF ವಸಂತ ರೆಡ್ಡಿ, ಯಲ್ಲಾಪುರ ವಿಭಾಗದ DFO ಶಶಿಧರ್ ಹೆಗಡೆ, ACF ರವಿ ಹುಲಕೋಟಿ, RFO ಸುರೇಶ್ ಕುಲ್ಲೋಳ್ಳಿ, DRFO ನಾಗರಾಜ್ ಕಲಾಲ, ಮಾಜಿ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಂಚ ಪಡೆಯುತ್ತಿದ್ದ ವೇಳೆ, ಹಾವೇರಿ DDPI ಮೇಲೆ ಲೋಕಾಯುಕ್ತ ದಾಳಿ, DDPI ಅಂದಾನೆಪ್ಪ ಸೇರಿ ಇಬ್ಬರು ವಶಕ್ಕೆ..!

ಲಂಚ ಪಡೆಯುತ್ತಿದ್ದ ವೇಳೆ, ಹಾವೇರಿ DDPI ಮೇಲೆ ಲೋಕಾಯುಕ್ತ ದಾಳಿ, DDPI ಅಂದಾನೆಪ್ಪ ಸೇರಿ ಇಬ್ಬರು ವಶಕ್ಕೆ..!

ಹಾವೇರಿ: ಡಿಡಿಪಿಐ ಹಾಗೂ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಡಿಡಿಪಿಐ ಅಂದಾನೆಪ್ಪ ಒಡಿಗೇರಿ ಹಾಗೂ ಕೇಸ್ ವರ್ಕರ್ ದತ್ತಾತ್ರೆಯ್ ಕುಂಟೆಯವರನ್ನ ಲೋಕಾ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಮಹಮ್ಮದ್ ಗೌಸ್ ಎಂಬ ಶಿಕ್ಷಕ, ತಮ್ಮ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಅಗತ್ಯ ದಾಖಲಾತಿಗಳನ್ನು ನೀಡಿದ್ದರು. ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲು ಕೋರಿದ್ದರು. ಅದಕ್ಕಾಗಿ ಡಿಡಿಪಿಐ 7 ಸಾವಿರ ರು. ಲಂಚ ಕೇಳಿದ್ದರು ಎನ್ನಲಾಗಿದೆ. ಹೀಗಾಗಿ, 7 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುತ್ತಿದೆ.

ಮರಗಡಿಯಲ್ಲಿ ರೈತನ ಮೇಲೆ ಭಯಾನಕ ಕರಡಿ ದಾಳಿ, ಸ್ಥಳದಲ್ಲೇ ಭೀಕರ ಸಾವು ಕಂಡ ಅನ್ನದಾತ..!

ಮರಗಡಿಯಲ್ಲಿ ರೈತನ ಮೇಲೆ ಭಯಾನಕ ಕರಡಿ ದಾಳಿ, ಸ್ಥಳದಲ್ಲೇ ಭೀಕರ ಸಾವು ಕಂಡ ಅನ್ನದಾತ..!

ಮುಂಡಗೋಡ ತಾಲೂಕಿನ ಮರಗಡಿಯಲ್ಲಿ ಕರಡಿ ದಾಳಿಯಿಂದ ಓರ್ವ ರೈತ ಮೃತಪಟ್ಟಿದ್ದಾನೆ. ಗದ್ದೆಯಲ್ಲಿ ಕೆಲಸಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ್ದು ಭೀಕರವಾಗಿ ಕೊಂದು ಹಾಕಿದೆ. ಮರಗಡಿ ಗೌಳಿ ದಡ್ಡಿಯ ಜಿಮ್ಮು ವಾಘು ತೋರವತ್(58) ಕರಡಿ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಅಂದಹಾಗೆ, ನಿನ್ನೆ ಗುರುವಾರ ಈತ ಕೆಲಸಕ್ಕಾಗಿ ಗದ್ದೆಗೆ ಹೋಗಿದ್ದ. ಆದ್ರೆ, ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಬರಬೇಕಿದ್ದ ರೈತ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ಹುಡುಕಲು ಹೋಗಿದ್ದಾರೆ. ಈ ವೇಳೆ ಕರಡಿ ದಾಳಿಯಿಂದ ಮೃತಪಟ್ಟು ಬಿದ್ದಿರೋದು ಕಂಡು ಬಂದಿದೆ. ಕರಡಿ ದಾಳಿಯಿಂದ ಮೃತಪಟ್ಟ ಘಟನೆ ಅರಿವಾದ ತಕ್ಷಣವೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿರೋ ಕುಟುಂಬಸ್ಥರು, ಗ್ರಾಮಸ್ಥರು, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆ ಹಿನ್ನೆಲೆ, ಮೂರು ಶಾಲೆಗಳಿಗೆ ರಜೆ ಘೋಷಣೆ..! ಯಾವ್ಯಾವ ಶಾಲೆಗಳು ಗೊತ್ತಾ..?

ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆ ಹಿನ್ನೆಲೆ, ಮೂರು ಶಾಲೆಗಳಿಗೆ ರಜೆ ಘೋಷಣೆ..! ಯಾವ್ಯಾವ ಶಾಲೆಗಳು ಗೊತ್ತಾ..?

ಮುಂಡಗೋಡ ತಾಲೂಕಿನಾಧ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ತಾಲೂಕಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಪರಿಣಾಮವಾಗಿ ತಾಲೂಕಿನ ಮೂರು ಶಾಲೆಗಳಿಗೆ ರಜೆ ಘೋಷಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ಇಡೀ ಸುರಿಯುತ್ತಿರೋ ಮಳೆಯ ಕಾರಣದಿಂದ ಹಳ್ಳಗಳು, ಕಾಲುವೆಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಕೆಲವು ಕಡೆ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹೀಗಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಮ್ಮಚಗಿ, ಓಣಿಕೇರಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಶಂಕರ್ ಗೌಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ತಾಲೂಕಿನಲ್ಲಿ 3 ಶಾಲೆಗಳಿಗೆ ರಜೆ ಘೋಷಿಣೆ ಮಾಡಲಾಗಿದ್ದು, ಹೀಗೆ ಘೋಷಣೆ ಮಾಡಿರುವ ರಜೆಯ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಶಾಲೆ ನಡೆಸಿ, ಹೊಂದಿಸಿಕೊಳ್ಳಲಾಗುವುದು ಎಂದು ಬಿಇಒ ತಿಳಿಸಿದ್ದಾರೆ.  

ಬಂಧಿಸಲು ಹೋದ ಪಿಎಸ್ಐ ಪಿಸ್ತೂಲ್ ಕಸಿದುಕೊಂಡ ಕಳ್ಳ, ಪಿಸ್ತೂಲು ಹಿಡಿದು ಮರವೇರಿ ಕುಳಿತು ಕಳ್ಳ ಆಡಿದ್ದ ಆಟಕ್ಕೆ ಖಾಕಿಗಳೇ ಕಂಗಾಲು..!

ಬಂಧಿಸಲು ಹೋದ ಪಿಎಸ್ಐ ಪಿಸ್ತೂಲ್ ಕಸಿದುಕೊಂಡ ಕಳ್ಳ, ಪಿಸ್ತೂಲು ಹಿಡಿದು ಮರವೇರಿ ಕುಳಿತು ಕಳ್ಳ ಆಡಿದ್ದ ಆಟಕ್ಕೆ ಖಾಕಿಗಳೇ ಕಂಗಾಲು..!

 ಅವ್ನು ದೊಡ್ಡ ಡಾನ್ ಅಲ್ಲ. ಆದ್ರೂ ಅವನನ್ನ ಹಿಡಿಯಲು ಭರ್ಜರಿ ಟೀಂ.. ಅವನು ಭೂಗತ ಲೋಕದಲ್ಲಿ ಅಡಗಿಲ್ಲ. ಆದ್ರೂ ಅವನನ್ನ ಹಿಡಿಯಲು ಸಖತ್ ಪ್ಲಾನ್ ಕಣ್ಣೆದುರೇ ಇದ್ರೂ ಆರೋಪಿಯನ್ನ ಹಿಡಿಯಲು ಪೋಲೀಸ್ರು ಹೆಣಗಾಡಿದ್ದೇಕೆ ಅನ್ನೋದೇ ಕುತೂಹಲ. ಗಿಡದಲ್ಲಿ ಕಳ್ಳ..ಆ ಕಳ್ಳನ ಕೈಯಲ್ಲಿ ಪಿಸ್ತೂಲು.. ಕೊಡಪ್ಪ ಪ್ಲೀಸ್ ಕೊಡಪ್ಪ ಕಳ್ಳನಿಗೆ ಕೈ ಚಾಚುತ್ತಿರೋ ಪೋಲೀಸ್ ಪಡೆ.. ಇದು ಅಚ್ಚರಿ ಅನ್ನಿಸಿದ್ರೂ ಇಂಥಹದೊಂದು ಸೀನ್ ನಡೆದಿದ್ದು ಬಿಸಿಲೂರು ಕಲಬುರಗಿಯಲ್ಲಿ. ಹೌದು ಇದು ಒಂಥರ ಕಳ್ಳ&ಪೋಲೀಸ್ ಆಟ ಇದ್ದಂಗಿತ್ತು. ಅಂದಹಾಗೆ ಇಲ್ಲಿ ಗಿಡವೇರಿ ಕುಳಿತ ಕುಖ್ಯಾತ ಕಳ್ಳನ ಹೆಸರು ಖಾಜಾ. ಅಫಜಲಪುರ ತಾಲೂಕಿನ ಬಳ್ಳೂರಗಿ ನಿವಾಸಿಯಾದ ಈ ಖದೀಮನನ್ನ ಇವತ್ತು ಪಿಎಸ್ಐ ಭೀಮರಾಯ ಅಂಡ್ ಟೀಂ ಬಂಧಿಸಲು ಹೋಗಿದೆ. ಆದ್ರೆ ಕಿಲಾಡಿ ಖಾಜಾ ಪೋಲೀಸರ ಪಿಸ್ತೂಲು ಕಸಿದು ಎಸ್ಕೇಪ್ ಆಗಿ ಹೊರವಲಯದ ಮರದಲ್ಲಿ ಕುಳಿತು ಬಿಟ್ಟಿದ್ದ. ಯಾವಾಗ ಈ ವಿಷ್ಯ ಬಟಾ ಬಯಲಾಯ್ತೋ ಖುದ್ದು ಎಸ್ಪಿ ಇಷಾ ಪಂತ್ ಮೇಡಂ ಫೀಲ್ಡಿಗಿಳಿದ್ರು..50 ಕ್ಕೂ ಹೆಚ್ಚಿನ...

ಮುಂಡಗೋಡ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ,  ಶಿಕ್ಷಕಿಯ ತಾಳೀಸರ ಎಗರಿಸಿದ್ದ ಇಬ್ಬರು ಆರೋಪಿಗಳು ಅಂದರ್, ಆದ್ರೆ, ಅವ್ರಲ್ಲ ಇವ್ರು..!

ಮುಂಡಗೋಡ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ, ಶಿಕ್ಷಕಿಯ ತಾಳೀಸರ ಎಗರಿಸಿದ್ದ ಇಬ್ಬರು ಆರೋಪಿಗಳು ಅಂದರ್, ಆದ್ರೆ, ಅವ್ರಲ್ಲ ಇವ್ರು..!

ಮುಂಡಗೋಡ: ಪಟ್ಟಣದಲ್ಲಿ ಶನಿವಾರ ಮದ್ಯಾಹ್ನ ನಡೆದಿದ್ದ ದರೋಡೆ ಕೇಸ್ ಕೊನೆಗೂ ಬಟಾಬಯಲಾಗಿದೆ. ಮುಂಡಗೋಡಿನ ಯುವ ಪೊಲೀಸ್ ಪಡೆ ಘಟನೆ ನಡೆದ ಗಳಿಗೆಯಿಂದಲೇ ಕಾರ್ಯಾಚರಣೆಗಿಳಿದು ಇಬ್ಬರು ಅಸಲೀ ಆರೋಪಿಗಳನ್ನು ಎಳೆದು ತಂದಿದ್ದಾರೆ. ಇವ್ರೇ ಆರೋಪಿಗಳು..! ಅಂದಹಾಗೆ, ಶಿಕ್ಷಕಿಯ ಮಾಂಗಲ್ಯ ಸರ ಎಗರಿಸಿಕೊಂಡು ಪರಾರಿಯಾಗಿದ್ದ ಅಸಲೀ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾವೇರಿ ಜಿಲ್ಲೆ ಸವಣೂರಿನ ನಿಂಬೆಹಣ್ಣಿನ ವ್ಯಾಪಾರಿ ಅಫ್ಜಲ್ ಖಾದರಗೌಸ್ ಗವಾಲಿ(31), ಆಟೋ ಚಾಲಕ ದಾದಾಪೀರ ಅಲಿಯಾಸ್ ಖಲಂದರ್ ಮಹಮ್ಮದ್ ಹನೀಪ್ ಮಿರ್ಜಿ(23) ಎಂಬುವ ಇಬ್ಬರು ಆರೋಪಿಗಳನ್ನು ಎಳೆದು ತಂದಿದ್ದಾರೆ. ಇಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದ್ದ ಕೇಸ್, ಪೊಲೀಸರ ತನಿಖೆಯಲ್ಲಿ ಭಾರೀ ಕುತೂಹಲಗಳಿಗೆ ಕಾರಣವಾಗಿತ್ತು. ಮೊದ ಮೊದಲು ಬೇರೆಯದ್ದೇ ದಿಕ್ಕು ಕಂಡಿದ್ದ ಆರೋಪಿಗಳ ಜಾಡು ಸದ್ಯ ಹಾವೇರಿ ಜಿಲ್ಲೆಯಡೆಗೆ ವಾಲಿಕೊಂಡು ಯಶಸ್ಸು ಕಂಡಿದೆ. ಅವ್ರಲ್ಲ, ಇವ್ರು..! ಅಂದಹಾಗೆ, ಘಟನೆ ನಡೆದ ಕೆಲವೇ ಹೊತ್ತಲ್ಲಿ ತನಿಖೆಗಿಳಿದಿದ್ದ ಮುಂಡಗೋಡ ಪೊಲೀಸರಿಗೆ, ಮೊದ ಮೊದಲು ಈ ದರೋಡೆ ಕೇಸಿನಲ್ಲಿ ಯಾರೋ ಪ್ರೊಫೇಶನಲ್ ಕಳ್ಳರದ್ದೇ ಕೈವಾಡದ ಶಂಕೆ ವ್ಯಕ್ತವಾಗಿತ್ತು....

ಮುಂಡಗೋಡ ಶಿಕ್ಷಕಿಯ ಚಿನ್ನ ದರೋಡೆ ಕೇಸ್, ಕೊನೆಗೂ ಸಿಕ್ಕಾಯ್ತಾ ಕಳ್ಳರ ಸುಳಿವು..? ಅಬ್ಬಾ “ಗುಂತಕಲ್” ಗುಮ್ಮಾಗಳು ಇಷ್ಟೊಂದು ಡೇಂಜರ್ರಾ..?

ಮುಂಡಗೋಡ ಶಿಕ್ಷಕಿಯ ಚಿನ್ನ ದರೋಡೆ ಕೇಸ್, ಕೊನೆಗೂ ಸಿಕ್ಕಾಯ್ತಾ ಕಳ್ಳರ ಸುಳಿವು..? ಅಬ್ಬಾ “ಗುಂತಕಲ್” ಗುಮ್ಮಾಗಳು ಇಷ್ಟೊಂದು ಡೇಂಜರ್ರಾ..?

ಮುಂಡಗೋಡ: ಪ್ರಿಯ ಓದುಗರೇ, ತಮಗೆ ನಿನ್ನೆನೇ ಹೇಳಿದ್ವಿ ಅಲ್ವಾ..? ನಮ್ಮ ಮುಂಡಗೋಡ ಪೊಲೀಸ್ ಠಾಣೆಯಲ್ಲಿನ ಯುವ ಪೊಲೀಸರು ಅದೇಷ್ಟು ಸ್ಟ್ರಾಂಗ್ ಇದ್ದಾರೆ ಅಂತಾ.. ಅದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಶನಿವಾರ ಮುಂಡಗೋಡಿನಲ್ಲಿ ನಡೆದಿದ್ದ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ್ದ ಕೇಸಿಗೆ ಸಂಬಂಧಿಸಿದಂತೆ ಖತರ್ನಾಕ ಖದೀಮರ ಸುಳಿವು ಬಹುತೇಕ ಸಿಕ್ಕಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಈ ಬಲಿಷ್ಟ ಟೀಂ ಒಂದು ಹಂತದಲ್ಲಿ ಮಹತ್ವದ ಸುಳಿವು ಹೆಕ್ಕಿ ತೆಗೆದಿದೆ. ಇನ್ನೇನು ಕನ್ಪರ್ಮ್ ಅಂತಾ ಆದರೇ ಆರೋಪಿಗಳನ್ನ ಹೆಡೆಮುರಿ ಕಟ್ಟೋದೊಂದೇ ಬಾಕಿ ಇದೆ ಎನ್ನುವ ಮಾಹಿತಿ ಇದೆ. “ಇಲ್ಲ” ಗಳ ನಡುವೆ..! ಅಸಲು, ನಿನ್ನೆ ಶನಿವಾರ ಶಾಲೆಯಿಂದ ಮನೆಗೆ ಹೊರಟಿದ್ದ ಶಿಕ್ಷಕಿಗೆ ಆಘಾತ ಕಾದಿತ್ತು. ಶಿಕ್ಷಕಿಯ ಮಾಂಗಲ್ಯ ಸರವನ್ನು ಹಾಡಹಗಲೇ ಕಿತ್ತುಕೊಂಡು ಪರಾರಿಯಾಗಿದ್ದ ಖತರ್ನಾಕ ಖದೀಮರು ಇಡೀ ಮುಂಡಗೋಡಿಗರನ್ನೇ ಒಂದುಕ್ಷಣ ಬೆಚ್ಚಿ ಬೀಳುವಂತೆ ಮಾಡಿದ್ದರು. ಘಟನೆ ಬಳಿಕ ಎಚ್ಚೆತ್ತುಕೊಂಡಿದ್ದ ನಮ್ಮ ಪೊಲೀಸು ಸಾಹೇಬರುಗಳು, ತಕ್ಷಣವೇ ತಮ್ಮ ಪಡೆಗೆ ಕೆಲಸ ವಹಿಸಿದ್ದರು, ಹೇಗೋ ಗೊತ್ತಿಲ್ಲ ಮೊದಲು...

ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?

ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?

ಮುಂಡಗೋಡ ಪಟ್ಟಣದ ಸರ್ಕಾರಿ ಮಾದರಿ ಶಾಲೆಯ ಶಿಕ್ಷಕಿಯೋರ್ವರ ಬಂಗಾರದ ಚೈನ್ ಎಗರಿಸಿದ್ದಾರೆ ಕಳ್ಳರು. ಬೈಕ್ ಮೇಲೆ ಬಂದಿದ್ದ ಇಬ್ಬರು ಏಕಾಏಕಿ ಶಿಕ್ಷಕಿಯ ಕೊರಳಲ್ಲಿದ್ದ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಘಟನೆಯಲ್ಲಿ, ಶಿಕ್ಷಕಿಯ ಮೂಕ ರೋಧನವಷ್ಟೇ ಬಾಕಿ ಉಳಿದಿದೆ. ಮಟ ಮಟ ಮದ್ಯಾಹ್ನವೇ..! ಅಂದಹಾಗೆ, ಶನಿವಾರ ಮದ್ಯಾಹ್ನ ಸರಿಸುಮಾರು 12- 40 ಗಂಟೆಯ ಹೊತ್ತಲ್ಲಿ, ಮಾದರಿ ಶಾಲೆಯ ದೈಹಿಕ ಶಿಕ್ಷಕಿ ಸರೋಜಾ ಮಹೇಶ್ ಬೈಂದೂರ್ ಶಾಲೆಯಿಂದ ಬಸ್ ನಿಲ್ದಾಣಕ್ಕೆ ಕಾಲ್ನಡಿಯಲ್ಲೇ ಹೊರಟಿದ್ದರು. ಈ ವೇಳೆ, ಹೊಸಓಣಿಯ ವಿ.ಎಸ್. ಕೊಣಸಾಲಿಯವರ ಮನೆ ಹತ್ತಿರ ಶಿಕ್ಷಕಿಯ ಹಿಂದಿನಿಂದ ಬೈಕಿನಲ್ಲಿ ಬಂದ ಕಳ್ಳರು ಕೃತ್ಯ ಎಸಗಿದ್ದಾರೆ. ಬೈಕ್ ಹಿಂದುಗಡೆ ಕುಳಿತ ವ್ಯಕ್ತಿ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಏಕಾ ಏಕಿ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಸುಮಾರು 85 ಸಾವಿರ ರೂ.‌ ಮೌಲ್ಯದ 22 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಇದಾಗಿದ್ದು, ಶಿಕ್ಷಕಿ ಗಾಬರಿಗೊಂಡು ಚೀರಾಡಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ಚಾಲಾಕಿ ಕಳ್ಳರು...

ಸನವಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಒದ್ದಾಡಿ ಪ್ರಾಣ ಬಿಟ್ಟ ಎತ್ತು, ರಕ್ಷಿಸಲು ಹೋದ ರೈತನ ದುರಂತ ಸಾವು..!

ಸನವಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಒದ್ದಾಡಿ ಪ್ರಾಣ ಬಿಟ್ಟ ಎತ್ತು, ರಕ್ಷಿಸಲು ಹೋದ ರೈತನ ದುರಂತ ಸಾವು..!

ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ರೈತನೋರ್ವ ತನ್ನ ಎತ್ತು ಬದುಕಿಸಲು ಹೋಗಿ ಆತನೂ ವಿದ್ಯುತ್ ಗೆ ಬಲಿಯಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಜೀವಗಳು ದುರಂತ ಸಾವು ಕಂಡಿವೆ. ಸನವಳ್ಳಿ ಗ್ರಾಮದ ಈರಪ್ಪ ಯಲ್ಲಪ್ಪ ಕೆರೆಹೊಲದವರ (65) ಎಂಬುವವರೇ ವಿದ್ಯುತ್ ಆಘಾತಕ್ಕೆ ಬಲಿಯಾದವರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಎತ್ತು ಒದ್ದಾಡುತ್ತಿತ್ತು. ಈ ವೇಳೆ ಇದನ್ನು ಕಂಡ ರೈತ ತನ್ನ ಎತ್ತು ರಕ್ಷಣೆ ಮಾಡಲು ದುಮುಕಿದ್ದಾನೆ. ಈ ವೇಳೆ ವಿದ್ಯುತ್ ರೈತನಿಗೂ ಆಕ್ರಮಿಸಿ ಆತನೂ ಕೂಡ ಸಾವು ಕಂಡಿದ್ದಾನೆ ಅಂತಾ ಹೇಳಲಾಗ್ತಿದೆ. ಸದ್ಯ ಮುಂಡಗೋಡ ಪೊಲೀಸರು, ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡಿನಲ್ಲಿ ಮಾತೆ ಬಸವೇಶ್ವರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ..!

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡಿನಲ್ಲಿ ಮಾತೆ ಬಸವೇಶ್ವರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ..!

  ಮುಂಡಗೋಡ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಮುಂಡಗೋಡಿನಲ್ಲಿ ಶುಕ್ರವಾರ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ನೇತೃತ್ವದಲ್ಲಿ ವಿವಿಧ ಸಂಘಟನೆ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ನಿರೀಕ್ಷಣಾ ಮಂದಿರದಿಂದ ಹೊರಟ ಸಾತ್ವಿಕ ಪ್ರತಿಭಟನಾ ಮೆರವಣಿಗೆ, ಶಿವಾಜಿ ವೃತ್ತದಲ್ಲಿ ಸಾಗಿ ಬಂದಿತು, ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಅಲ್ಲದೇ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ರು. ಮಾತೆಯವರ ಮಾತು..! ಇದಕ್ಕೂ ಮೊದಲು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತೆಯವರು, ಸಮಾಜದಲ್ಲಿ ಇಂತಹ ಕೃತ್ಯ ನಿಜಕ್ಕೂ, ಯಾರೂ ಉಹಿಸಲೂ ಸಾಧ್ಯವಾಗದ ರೀತಿಯಲ್ಲಿ ಭಯಾನಕವಾಗಿ ನಡೆದಿದೆ. ಹೀಗಾಗಿ, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ...

error: Content is protected !!