ಕಣ್ಣೀರು ಹಾಕುತ್ತಲೇ ರಾಜೀನಾಮೆ ಘೋಶಿಸಿದ ಸಿಎಂ ಯಡಿಯೂರಪ್ಪ..!

ಕಣ್ಣೀರು ಹಾಕುತ್ತಲೇ ರಾಜೀನಾಮೆ ಘೋಶಿಸಿದ ಸಿಎಂ ಯಡಿಯೂರಪ್ಪ..!

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರೋ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶದಲ್ಲಿ ಸಿಎಂ ಮಹತ್ವದ ಘೋಷಣೆ ಮಾಡಿದ್ದಾರೆ. ಅಕ್ಷರಶಃ ಕಣ್ಣೀರಾಗುತ್ತಲೇ ವಿದಾಯ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ, ಕಾರ್ಯಕ್ರಮ ಮುಗಿದ ಬಳಿಕ, ರಾಜ್ಯಪಾಲರ ಬಳಿಗೆ ಹೋಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತಿನಿ ಅಂತಾ ಭಾವುಕರಾಗೇ ಘೋಷಣೆ ಮಾಡಿದ್ರು..

ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ ಹೇಗ್ ಮಾಡಿದ್ರು ಗೊತ್ತಾ..?

ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ ಹೇಗ್ ಮಾಡಿದ್ರು ಗೊತ್ತಾ..?

ಚಿಕ್ಕೋಡಿ: ತಾಲೂಕಿನಲ್ಲಿ ಮಳೆ ನಿಂತ್ರು, ಪ್ರವಾಹದ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ.. ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನನ್ನು ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗ್ತಿದ್ದ ಅದೇ ಗ್ರಾಮದ ಯುವಕ ಕುಮಾರ್ ಕಾಂಬಳೆಯನ್ನು ರಕ್ಷಿಸಲಾಗಿದೆ. ಸ್ಥಳೀಯರೇ ಹಗ್ಗ ಹಾಕಿ ಕುಮಾರ್‌ನನ್ನ ರಕ್ಷಿಸಿದ್ದಾರೆ. ಪರಶುರಾಮ್ ಕಾಂಬಳೆ ಹಾಗೂ ಸ್ಥಳೀಯರು ಪ್ರಾಣ ಪಣಕ್ಕಿಟ್ಟು ಕುಮಾರ್ ಎಂಬ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಹುಲಿ ಗಡ್ಡಿಯಿಂದ ಹುಲಗಬಾಳಿ ಗ್ರಾಮಕ್ಕೆ ತೆರಳುತ್ತಿದ್ದ ಯುವಕ, ಪ್ರವಾಹ ದಾಟಲು ಹೋಗಿದ್ದ. ಹೀಗಾಗಿ, ಪ್ರವಾಹ ರಭಸಕ್ಕೆ ಸಿಕ್ಕು ಕೊಚ್ಚಿ ಹೋಗ್ತಿದ್ದ. ಆದ್ರೆ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಯುವಕನ ರಕ್ಷಣೆ ಮಾಡಿದ್ದಾರೆ.

ನಂದಿಕಟ್ಟಾದಲ್ಲಿ ತಾಯಿಯ ಸೀರೆಯಿಂದಲೇ ನೇಣಿಗೆ ಶರಣಾದ ಯುವಕ..!

ನಂದಿಕಟ್ಟಾದಲ್ಲಿ ತಾಯಿಯ ಸೀರೆಯಿಂದಲೇ ನೇಣಿಗೆ ಶರಣಾದ ಯುವಕ..!

ಮುಂಡಗೋಡ: ಮಾನಸಿಕ ಖಿನ್ನತೆಗೆ ಒಳಗಾದ ಯುವಕನೊಬ್ಬ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಅಮಿತ್ ಬಸವರಾಜ್ ಲೋಹಾರ್ (20) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಳೆ ಸಿಎಂ ಉತ್ತರ ಕನ್ನಡ ಜಿಲ್ಲಾ ಪ್ರವಾಸ..! ಪ್ರವಾಹದ ಸ್ಥಿತಿ ವೀಕ್ಷಿಸಲಿರೋ ಯಡಿಯೂರಪ್ಪ

ನಾಳೆ ಸಿಎಂ ಉತ್ತರ ಕನ್ನಡ ಜಿಲ್ಲಾ ಪ್ರವಾಸ..! ಪ್ರವಾಹದ ಸ್ಥಿತಿ ವೀಕ್ಷಿಸಲಿರೋ ಯಡಿಯೂರಪ್ಪ

ಬೆಳಗಾವಿ: ನಾಳೆ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲು ಯಡಿಯೂರಪ್ಪ ನಾಳೆ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ 2 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಅವರು ಉತ್ತರ ಕನ್ನಡ ಜಿಲ್ಲೆಗೆ ತೆರಳುವರು. ಕಾರನಾರ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದರು. ಇಂದು ಸಂಜೆಯ ಹೊತ್ತಿಗೆ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಹೈಕಮಾಂಡ್ ಸಂದೇಶ ಬರಲಿದೆ ಎಂದು ಕಾಯುತ್ತಿರುವ ಯಡಿಯೂರಪ್ಪ ನಾಳೆಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಘೋಷಿಸುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ನಾನು ಸಂತೃಪ್ತನಾಗಿದ್ದೇನೆ. ರಾಜ್ಯದಲ್ಲಿ ಯಾರಿಗೂ ಸಿಗದ ಅವಕಾಶ, ಸ್ಥಾನ ಮಾನ ನನಗೆ ಸಿಕ್ಕಿದೆ. ನಾವೆಲ್ಲರೂ ಹೈಕಮಾಂಡ್ ಮಾತನ್ನು ಕೇಳಬೇಕಾಗುತ್ತದೆ. 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಯಡಿಯೂರಪ್ಪ ತಿಳಿಸಿದರು.

ಬಿಜೆಪಿ ನಾಯಕತ್ವ “ಬದಲೀ” ಆಟದಲ್ಲಿ, ಸೇಫ್ ಆಗ್ತಾರಾ ಹೆಬ್ಬಾರ್..?

ಬಿಜೆಪಿ ನಾಯಕತ್ವ “ಬದಲೀ” ಆಟದಲ್ಲಿ, ಸೇಫ್ ಆಗ್ತಾರಾ ಹೆಬ್ಬಾರ್..?

ಯಲ್ಲಾಪುರ ಕ್ಷೇತ್ರಕ್ಕೂ ತಾಗತ್ತಾ ಸಿಎಂ ಬದಲಾವಣೆ ಬಿಸಿ..? ಇಂತಹದ್ದೊಂದು ಆತಂಕ ಈಗಾಗಲೇ ಬಹುತೇಕ ವಲಸಿಗ ಸಚಿವರುಗಳ ಕ್ಷೇತ್ರದಲ್ಲಿ ಒಳಗೊಳಗೇ ಹೊಗೆಯಾಡ್ತಿದೆ. ಅದ್ರಂತೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲೂ ಅಂತಹ ಆತಂಕ ಬಹುಶಃ ಒಳಗೊಳಗೇ ತಲ್ಲಣಗೊಳಿಸಿದೆಯಾ.? ಹೌದು, ಅನ್ನುತ್ತಿವೆ ಬಲ್ಲ ಮೂಲಗಳು‌. ಬದಲಾವಣೆ ಪಕ್ಕಾ..! ಸಿಎಂ ಯಡಿಯೂರಪ್ಪ ಈಗಷ್ಟೇ ರಾಜೀನಾಮೆ ನೀಡುವ ಸುಳಿವು ನೀಡಿ ಆಗಿದೆ. ಹೈಕಮಾಂಡ್ ಹೇಗ್ ಹೇಳತ್ತೋ ಹಾಗೆ ಕೇಳ್ಕೊಂಡು ಇರ್ತಿನಿ ಅನ್ನೋ ಸಂದೇಶ ರವಾನಿಸಿಯೂ ಆಗಿದೆ. ಜುಲೈ 25 ಕ್ಕೆ ಹೈಕಮಾಂಡ್ ನಾಯಕರಿಂದ ಬರೋ ಅದೇಶಕ್ಕಾಗಿ ಎಲ್ರೂ ಕಾಯ್ತಿವಿ, ಆ ಆದೇಶ ಅದೇನೇ ಬಂದ್ರೂ ಅದ್ರಂತೆ ನಡ್ಕೋತಿವಿ ಅನ್ನೋ ಸ್ಪಷ್ಟ ಸಂದೇಶ ಯಡಿಯೂರಪ್ಪನವರೂ ರವಾನಿಸಿದ್ದಾರೆ. ಇದ್ರೊಂದಿಗೆ ಜುಲೈ 25 ರ ಆದೇಶ ಅದೇನಾಗತ್ತೊ ಅನ್ನೋ ಹಲವು ಆಯಾಮಗಳ ಲೆಕ್ಕಾಚಾರ ಗರಿಗೆದರಿದೆ. ಒಟ್ನಲ್ಲಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಕಾ ಅನ್ನಲಾಗ್ತಿದೆ. ವಲಸಿಗರ ಚಿಂತೆ..! ಯಾವಾಗ, ಯಡಿಯೂರಪ್ಪನವರ ಖುರ್ಚಿ ಬದಲಾಗತ್ತೆ ಅನ್ನೋ ಸ್ಪಷ್ಟ ಸಂದೇಶ ರಾಜ್ಯ ರಾಜಕೀಯ ಅಂಗಳದಲ್ಲಿ ಚರ್ಚೆಯಾಗತೊಡಗಿತೋ, ಅದ್ರ ಜೊತೆ...

ರಾಜೀನಾಮೆ ಸುಳಿವು ಕೊಟ್ಟ ಸಿಎಂ..! ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸಾ..?

ರಾಜೀನಾಮೆ ಸುಳಿವು ಕೊಟ್ಟ ಸಿಎಂ..! ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸಾ..?

ಬೆಂಗಳೂರು: ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಮೌನ ಮುರಿದಿದ್ದಾರೆ. ಜುಲೈ 25 ರಂದು ವರಿಷ್ಟರು ನೀಡುವ ತೀರ್ಮಾನಕ್ಕೆ ನಾನು ಬದ್ದನಾಗಿ ನಡೆದುಕೊಳ್ಳುತ್ತೇನೆ. ಜುಲೈ 25 ಕ್ಕೆ ಹೈಕಮಾಂಡ್ ನಿಂದ ಒಂದು ಸಂದೇಶ ಬರುತ್ತೆ ಆ ಸಂದೇಶದ ಅನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಅಂತಾ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗುವೆ.. ಇನ್ನು, ಬಹುತೇಕ ರಾಜೀನಾಮೆ ನೀಡುವ ಕುರಿತು ಪರೋಕ್ಷವಾಗಿ ಹೇಳಿರೋ ಸಿಎಂ ಯಡಿಯೂರಪ್ಪ, ಜುಲೈ 26 ರಿಂದ ನಾನು ವರಿಷ್ಟರ ಸೂಚನೆಯಂತೆ ಕೆಲಸ ಶುರು ಮಾಡುತ್ತೇನೆ. ಪಕ್ಷದ ಸಂಘಟನೆಗೆ ಒತ್ತು ಕೊಡುತ್ತೇನೆ ಅಂತಾ ತಿಳಿಸಿದ್ರು. ಪ್ರತಿಭಟನೆ ಮಾಡಬೇಡಿ..! 75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ, ಆದ್ರೂ ಬಿಜೆಪಿ ನಂಗೆ ಎಲ್ಲವನ್ನೂ ಕೊಟ್ಟಿದೆ. 75 ವರ್ಷವಾದ್ರೂ ನನ್ನನ್ನ ಸಿಎಂ ಸ್ಥಾನಕ್ಕೆ ಕೂರಿಸಿದ್ದಾರೆ. ಹೀಗಾಗಿ, ಯಾರೂ ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡಬೇಡಿ....

ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!

ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!

ಹುಬ್ಬಳ್ಳಿ: ಲಾರಿ ಹಾಗೂ ಆಟೋ ಮದ್ಯೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ, ಹುಬ್ಬಳ್ಳಿಯ ಹೊರಹೊಲಯದ ಗಬ್ಬೂರು ಬೈಪಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ವರೂರಿಗೆ ಹೊರಟಿದ್ದ ಆಟೋಗೆ, ಎದುರಿನಿಂದ ಬಂದ ಲಾರಿಯಿಂದ ಡಿಕ್ಕಿಯಾಗಿದೆ. ಹೀಗಾಗಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆದ್ರೆ, ಸಾವಿಗೀಡಾದ ವ್ಯಕ್ತಿಗಳ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೋಡಿಮಠದ ಶ್ರೀಗಳು ನುಡಿದ್ರು ಭಯಾನಕ ಭವಿಷ್ಯ..!

ಕೋಡಿಮಠದ ಶ್ರೀಗಳು ನುಡಿದ್ರು ಭಯಾನಕ ಭವಿಷ್ಯ..!

ಶಿರಸಿ: ಕೋಡಿಮಠದ ಶ್ರೀಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಸದ್ಯದ ರಾಜಕೀಯ ವಿಪ್ಲವಗಳ ಮದ್ಯೆ ಕೋಡಿಮಠದ ಶ್ರೀಗಳ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ಸುಖಾಂತ್ಯ..! ರಾಜ್ಯದಲ್ಲಿ ಎದ್ದಿರೋ ರಾಜಕೀಯ ವಿಪ್ಲವ ಸದ್ಯದಲ್ಲೇ ಸುಖಾಂತ್ಯ ಕಾಣಲಿದೆ ಅಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನೇರಲಕಟ್ಟೆ (ಈಚಲಬೆಟ್ಟ) ಗ್ರಾಮದಲ್ಲಿರೋ ಭೂದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಕೋಡಿಮಠದ ಶ್ರೀಗಳು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮಾತನಾಡೋ ಸ್ವಾತಂತ್ರ್ಯವಿದೆ. ಅದಕ್ಕೆ ಸ್ವಾಮೀಜಿಗಳು ಹೊರತಾಗಿಲ್ಲ’ ಅಂತ ಪರೋಕ್ಷವಾಗಿ ವೀರಶೈವ ಸ್ವಾಮೀಜಿಗಳ ನಡೆ ಸಮರ್ಥಿಸಿದರು. ಧರ್ಮಸಂಕಟ..! ‘ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು...

ಇಂದೂರು ಕ್ಷೇತ್ರಕ್ಕೆ ಮತ್ತೊಂದು ಹೊಸಮುಖ..! ಠಕ್ಕರ್ ಕೊಡೋಕೆ ರೆಡಿಯಾಗ್ತಿದೆ “ಯುವ ಪಡೆ”

ಇಂದೂರು ಕ್ಷೇತ್ರಕ್ಕೆ ಮತ್ತೊಂದು ಹೊಸಮುಖ..! ಠಕ್ಕರ್ ಕೊಡೋಕೆ ರೆಡಿಯಾಗ್ತಿದೆ “ಯುವ ಪಡೆ”

ರಾಜಕಾರಣ ಅಂದ್ರೆನೇ ಹಾಗೆ, ಇಲ್ಲಿ ಯಾವಾಗ ಯಾರು, ಯಾರ್ ಕಾಲ್ ಎಳಿತಾರೋ ಗೊತ್ತೇ ಆಗಲ್ಲ. ಎದುರು ಆಡೋ ಮಾತು ಒಂದಾದ್ರೆ, ತಲೇಲಿ ತಿರುಗಿಸೋ ಲೆಕ್ಕಾಚಾರವೇ ಮತ್ತೊಂದಿರತ್ತೆ. ಇಲ್ಲಿ ಬೆಳಿಗ್ಗೆ ಹೀರೋ ಅನ್ನಿಸಿಕೊಂಡವನು, ಸಂಜೆಯಾಗ್ತಿದ್ದಂತೆ ಜೀರೋ ಆಗಿರ್ತಾನೆ. ಹಾಗೇ, ಜೀರೋ ಆಗಿದ್ದವನು ಏಕಾಏಕಿ ಹೀರೋ ಆಗಿ ಪಟ್ಟಕ್ಕೇರಿರ್ತಾನೆ. ಇಲ್ಲಿ ಎಲ್ಲವೂ ಅವರವರ ಬೌದ್ದಿಕ ತಾಕತ್ತಿನ ಮೇಲೆಯೇ ಡಿಸೈಡ್ ಆಗತ್ತೆ. ಅದಿರಲಿ. ಮತ್ತಷ್ಟು ಟೈಮ್ ಸಿಕ್ತು..! ಸದ್ಯ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆ ಕಾವು ಏರತೊಡಗಿದೆ. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೂ ಚುನಾವಣೆ ನಡೆಸಲ್ಲ ಅಂತಾ ರಾಜ್ಯ ಸರ್ಕಾರ ಖಡಾ ಖಂಡಿತವಾದ ತೀರ್ಮಾನ ಮಾಡಿ ಆಗಿದೆ. ಆದ್ರೂ ಚುನಾವಣೆಯ ಬಿರುಸಿಗೆ ಏನ್ ಅಂದ್ರೆ ಏನೂ ಫರಕ್ ಆಗಿಲ್ಲ. ಒಳಗೊಳಗೇ ನಡೆಯುತ್ತಿರೋ ಮಸಲತ್ತುಗಳೇನು ಕಡಿಮೆಯಾಗಿಲ್ಲ. ಮತ್ತಷ್ಟು ಟೈಮ್ ಸಿಕ್ತು ಅಂತಾ ಹುರಿಯಾಳುಗಳು ಹುಲಿಯಂತೆ ಘರ್ಜಿಸುತ್ತಿದ್ದಾರೆ. ಇಂದೂರು ಕ್ಷೇತ್ರದ್ದೇ ಪೀಕಲಾಟ..!ಮುಂಡಗೋಡ ತಾಲೂಕಿನ ಮಟ್ಟಿಗೆ ಜಿಪಂ ಚುನಾವಣೆ ಹೈ ವೋಲ್ಟೇಜ್ ಕಣ ಅಂದ್ರೆ ಅದು ಇಂದೂರು...

ಪಾತಕ ಲೋಕದ ಸುಳಿಯಲ್ಲಿ ಮುಂಡಗೋಡ..? ಅಷ್ಟಕ್ಕೂ ಎತ್ತ ಸಾಗ್ತಿದೆ ನಮ್ಮೂರು..?

ಪಾತಕ ಲೋಕದ ಸುಳಿಯಲ್ಲಿ ಮುಂಡಗೋಡ..? ಅಷ್ಟಕ್ಕೂ ಎತ್ತ ಸಾಗ್ತಿದೆ ನಮ್ಮೂರು..?

ಮುಂಡಗೋಡಿನಲ್ಲಿ ರವಿವಾರ ಭೀಕರ ಹತ್ಯೆಯಾಗಿದೆ. ಯುವಕನೋರ್ವನ ಪ್ರಾಣ, ಹಂತಕರ ರಕ್ತದಾಹಕ್ಕೆ ಬಲಿಯಾಗಿದೆ. ಪೊಲೀಸರೂ ಒಂದರ್ಥದಲ್ಲಿ ದಿಗಿಲಿಗೆ ಬೀಳುವಂತಾಗಿದೆ. ಅಸಲು, ಮುಂಡಗೋಡಿನ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟು ಹೋಯ್ತಾ..? ಈ ಪ್ರಶ್ನೆ ತಾಲೂಕಿನ ಪ್ರತಿಯೊಬ್ಬ ನಾಗರೀಕನಿಗೂ ಆತಂಕ ತಂದಿಟ್ಟಿದೆ‌.  ಅದ್ಯಾಕೋ ಗೊತ್ತಿಲ್ಲ, ನಂಗೆ ಈ ಕ್ರೈಂ ವರದಿ ಮಾಡೋಕೆ ಮನಸ್ಸೇ ಬರ್ಲಿಲ್ಲ.. ಈ ಮರ್ಡರ್ ವಿಷಯವಾಗಿ ಏನೂ ಬರಿಯೋದೇ ಬೇಡ ಅಂತಾ ಅನಕೊಂಡಿದ್ದೆ, ಯಾಕ್ ಗೊತ್ತಾ..? ಒಂದು ಕಾಲದಲ್ಲಿ ಮುಂಡಗೋಡ ತಾಲೂಕು ಹೇಗಿತ್ತು..? ಈಗ ಹೇಗಾಗಿದೆ..? ಅಯ್ಯೋ, ನೆನಪಿಸಿಕೊಂಡ್ರೆ ಇನ್ನಿಲ್ಲದ ಆತಂಕ ಹುಟ್ಟಿಸಿದೆ. ಮೊನ್ನೆಯಿಂದಲೂ ಹತ್ತಾರು ಪೋನ್ ಕಾಲ್ ಗಳು..! ಏನ್ರಿ ಇದೇಲ್ಲ..? ಏನಾಗಿದೆ ನಮ್ಮ ಮುಂಡಗೋಡಿಗೆ..? ಹಿಂಗ್ಯಾಕೆ ಹೆಣಗಳು ಉರುಳ್ತಿವೆ..? ರೌಡಿಸಂ ಅನ್ನೋದರ ಗಂಧ ಗಾಳಿಯೂ ಗೊತ್ತಿರದ ಮುಂಡಗೋಡಿನ ಮಂದಿಯ ಬಾಯಲ್ಲಿ, ಮನಸಲ್ಲಿ ಬರೀ ಆತಂಕ.. ಆತಂಕ.. ಆತಂಕ… ಆತ್ಮಹತ್ಯೆ ಸುದ್ದಿಗೇ ಹೆದ್ರೊ ಜನ ನಾವು..! ನಿಜಾ ರೀ, ಅಲ್ಯಾವನೋ ಒಬ್ಬ ನೇಣು ಬಿಗಿದೋ, ವಿಷ ಕುಡಿದೋ ಆತ್ಮಹತ್ಯೆ ಮಾಡಿಕೊಂಡ ಅಂತಾ...

error: Content is protected !!