Forest News; ಅತ್ತಿವೇರಿ ಪಕ್ಷಿಧಾಮದ ಕೂಗಳತೆ ದೂರದಲ್ಲಿ, ಅಂದ್ರೆ ಅತ್ತಿವೇರಿ ಗ್ರಾಮದಲ್ಲೇ ಶ್ರೀಗಂಧದ ಮರಗಳ ಕಳ್ಳತನವಾಗಿದೆ. ಎರಡು ಮರಗಳನ್ನು ಕಳ್ಳತನ ಮಾಡಲು ಯತ್ನಿಸಿರೋ ಖದೀಮರು ಒಂದು ಮರವನ್ನು ಕಡಿದು ಸಾಗಿಸಿದ್ದಾರೆ. ಮತ್ತೊಂದು ಮರವನ್ನು ಅರ್ಧಮರ್ದ ಕಡಿದು ಅಲ್ಲೇ ಬಿಟ್ಟು ಹೋಗಿದ್ದಾರೆ. ವಿಚಿತ್ರ ಅಂದ್ರೆ ಇಲ್ಲಿ ಕರ್ತವ್ಯ ನಿರ್ವಹಿಸ್ತಿರೋ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಅದೇಲ್ಲಿಗೆ ಹೋಗಿ ನಿದ್ದೆಗೆ ಜಾರಿದ್ದಾರೋ ಗೊತ್ತಿಲ್ಲ, ಈ ಭಾಗದಲ್ಲಿ ಅರಣ್ಯ ಸಂಪತ್ತು ಅನ್ನೋದು ನಿತ್ಯವೂ ಲೂಟಿಯಾಗ್ತಿದೆ.
ಅದು ಜಸ್ಟ್ ಜನವಸತಿ ಏರಿಯಾ..!
ಅಂದಹಾಗೆ, ಅತ್ತಿವೇರಿಯಲ್ಲಿ ಮೆಹಬೂಬ್ ಸುಭಹಾನಿ ಜಂಡೇ ಕಟ್ಟೆ ಇದೆ. ಅದರ ಹತ್ತಿರ ಹುಲುಸಾಗಿ ಬೆಳೆದಿದ್ದ ಎರಡು ಶ್ರೀಗಂಧದ ಮರ ಕಳ್ಳರ ಪಾಲಾಗಿದೆ. ಅಸಲು, ಇದೇ ಅತ್ತಿವೇರಿ ಪಕ್ಷಿಧಾಮದ ಮಡಿಲಲ್ಲೇ ಇದ್ದ ಅದೇಷ್ಟೋ ಶ್ರೀಗಂಧದ ಮರಗಳು ಕಳ್ಳರ ಕೈ ಸೇರಿವೆ. ಹಾಡಹಗಲೇ ಇಲ್ಲಿ ಕಳ್ಳತನ ನಡೆದ್ರೂ ಅದರ ಬಗ್ಗೆ ಇಲ್ಲಿನ ಅಧಿಕಾರಿಗಳು ತುಟಿ ಬಿಚ್ಚೋದೇ ಇಲ್ಲ. ಅದ್ರಲ್ಲೂ ಇಲ್ಲಿನ ಕೆಲ ಸಿಬ್ಬಂದಿಗಳು ಅರಣ್ಯದ ರಕ್ಷಣೆಗೆ ಇದ್ದಾರೋ ಇಲ್ವೊ ಅನ್ನೋದೇ ಅನುಮಾನವಾಗಿದೆ. ಹೀಗಾಗಿ, ಕಳ್ಳರಿಗೆ ಇಲ್ಲಿ ರಹದಾರಿಯಾಗಿದೆ. ದುರಂತ, ಅಂದ್ರೆ ಹಾಗೇ ಶ್ರೀಗಂಧದ ಮರ ಕಳ್ಳತನವಾದ್ರೆ, ಇಲ್ಲಿನ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಅದನ್ನ ಯಾರ ಕಣ್ಣಿಗೂ ಬೀಳದ ಹಾಗೆ ನೋಡಿಕೊಳ್ತಾರೆ. ಇಡೀ ಇಡಿಯಾಗೇ ಪ್ರಕರಣಗಳನ್ನು ಮುಚ್ಚಿ ಹಾಕುವ ಧಾವಂತದಲ್ಲಿ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಸದ್ಯ ಈ ಪ್ರಕರಣವೂ ಕೂಡ ಹಾಗೇ ಕಣ್ಮುಚ್ಚಿ ಹೋಗತ್ತೆ. ಬಿಟ್ರೆ, ಬೇರೆ ಏನೂ ಕ್ರಮಕೈಗೊಳ್ಳೊಕೆ ಇಲ್ಲಿನ ಅಧಿಕಾರಿಗಳಿಗೆ ಪುರುಸೋತ್ತೇ ಇರಲ್ಲ. ಬರೀ ಕಾಮಗಾರಿಗಳ ಮೇಲೆಯೇ ಇವ್ರ ದೃಷ್ಟಿ ನೆಟ್ಟಿರತ್ತೆ.
ಅದು 2023, ರ ಅಕ್ಟೋಬರ್ 23..!
ಹೌದು, ಇದೇ ಅತ್ತಿವೇರಿ ಪಕ್ಷಿಧಾಮದಲ್ಲಿ, ಅದ್ರಲ್ಲೂ ಹಿಂಡು ಹಿಂಡು ಸಿಬ್ಬಂದಿಗಳೊಂದಿಗೆ, ಅಧಿಕಾರಿಗಳ ಕಣ್ಗಾವಲು ಇರುವ ವಿಶೇಷ ಪಾರ್ಕಿನಲ್ಲೇ ಬರೋಬ್ಬರಿ 5 ಶ್ರೀಗಂಧದ ಮರಗಳನ್ನು ಕಳ್ಳರು ಕಡಿದು ಸಾಗಿಸಿದ್ದರು. ವಿಚಿತ್ರ ಅಂದ್ರೆ, ಹಾಗೆ ಲಕ್ಷಾಂತರ ಬೆಲೆ ಬಾಳುವ 5 ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿದ್ದರೂ ಇಲ್ಲಿನ ಅಧಿಕಾರಿಗಳು ಅದರ ಬಗ್ಗೆ ಕ್ರಮ ಕೈಗೊಳ್ಳುವುದಿರಲಿ, ಅದರ ಬಗ್ಗೆ ಹೊರ ಜಗತ್ತಿನ ಯಾರಿಗೂ ತಿಳಿಯದ ಹಾಗೆ ಮುಚ್ಚಿ ಹಾಕಿದ್ದರು. ಗಂಧದ ಮರದ ಅವಶೇಷಗಳನ್ಜು ಕತ್ತರಿಸಿ, ಗುಂಡಿ ತೋಡಿ ಮುಚ್ಚಿದ್ದರು. ಅವತ್ತು, ಖಚಿತ ಬಾತ್ಮಿ ಆಧಾರದಲ್ಲಿ ಪಬ್ಲಿಕ್ ಫಸ್ಟ್ ಇಡೀ ಪ್ರಕರಣವನ್ನೇ ಬಯಲು ಮಾಡಿತ್ತು. ಕೇಸು ದಾಖಲಾಗುವಂತೆ ಆಗಿತ್ತು. ಆದ್ರೆ, ಆ ಕಳ್ಳರು ಸಿಕ್ಕರಾ..? ಒಂದೂವರೇ ವರ್ಷವಾದ್ರೂ ಅದರ ಬಗ್ಗೆ ಇಲ್ಲಿನ ಅಧಿಕಾರಿಗಳು ತುಟಿ ಬಿಚ್ಚಿಲ್ಲ.. ಹಾಗಿದ್ರೆ ಅರ್ಥವೇನು..? ಇದು ಒಂಥರಾ ಕಣ್ಣಾಮುಚ್ಚಾಲೆ ಆಟವಾಗಿದೆ.
ಅರಣ್ಯ ರಕ್ಷಕರದ್ದೇ ನಿರ್ಲಕ್ಷ..!
ಅಸಲು, ಇಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆಯ ರಕ್ಷಕರು ಇಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸುತ್ತಿದ್ದಾರಾ..? ಅಥವಾ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಕೆಟ್ಟದ್ದನ್ನ ನೋಡುವುದಿಲ್ಲ ಅಂತಾ ಬೆಪ್ಪಗಿದ್ದಾರಾ..? ಒಂದೂ ತಿಳಿಯುತ್ತಿಲ್ಲ. ಯಾಕಂದ್ರೆ, ಇದೇ ಅತ್ತಿವೇರಿಯ ಹಳ್ಳದಲ್ಲಿ ನಿತ್ಯವೂ ಅಕ್ರಮವಾಗಿ ಟ್ರಾಕ್ಟರುಗಳಲ್ಲಿ ಮರಳು ಸಾಗಾಟವಾಗ್ತಿದೆ. ಇವ್ರ ಕಣ್ಣೇದುರೇ ಅಕ್ರಮ ದಂಧೆ ನಡೆದ್ರೂ, ತುಟಿ ಬಿಚ್ಚದ ಅಧಿಕಾರಿಗಳ ನಿಯತ್ತೇ ಅನುಮಾನವಾಗಿದೆ.
ಅಸಲು, ಇಲ್ಲಿನ ಪಕ್ಷಿಧಾಮದ “ಅಂದರ್” ಕೀ ಬಾತ್ ಗಳು ತುಂಬಾ ಇವೆ. ಅದರ ಬಗ್ಗೆ ವಿಸ್ತೃತವಾಗಿ ಆಮೇಲೆ ಹೇಳ್ತಿನಿ. ಅದೇಲ್ಲದರ ನಡುವೆ, ಇಲ್ಲಿನ ಅರಣ್ಯ ಸಂಪತ್ತು ಮಾತ್ರ
ಬರ್ಬಾದು ಆಗ್ತಿದೆ ಅನ್ನೋದು ಎಲ್ಲರಿಗೂ ನೋವಿನ ಜೊತೆ ಆಕ್ರೋಶದ ಸಂಗತಿ. ಇಲ್ಲಿ ನಾಮಕೆವಾಸ್ತೆ ಆಗಿದ್ದಾರಾ ಸಿಬ್ಬಂದಿಗಳು..? ಅನುಮಾನವಿದೆ.
👇ಇದು 2023 ರಲ್ಲಿ ಅತ್ತಿವೇರಿ ಪಕ್ಷಿಧಾಮದಲ್ಲಿ ಗಪ್ ಚುಪ್ ಆಗಿದ್ದ ಶ್ರೀಗಂಧ ಮರ ಕಳ್ಳತನದ ಸುದ್ದಿ👇