Shivaram Hebbar: ಯಲ್ಲಾಪುರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳ ಸಾವಿಗೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮಮ್ಮಲ ಮರಗಿದ್ದಾರೆ. ಅಲ್ದೇ RCB ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪತ್ರಿಕಾ ಪ್ರಕಟಣೆಗಾಗಿ ಆಡಿಯೊ ಬಿಡುಗಡೆ‌ ಮಾಡಿರೋ ಹೆಬ್ಬಾರ್ ಅಭಿಯಾನವೊಂದನ್ನು ಶುರು ಮಾಡಿದ್ದಾರೆ.

ಕೋಟಿ ರೂ ಪರಿಹಾರ ಬೇಕು..!
IPL ಎಂಬ ಮಾಯಾಲೋಕದಲ್ಲಿ, ಅಭಿಮಾನಿಗಳಿಂದ ಸಾವಿರಾರು ಕೋಟಿ ಬಾಚಿರೋ RCB, ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಲೇಬೇಕು ಅಂತ ಹೆಬ್ಬಾರ್ ಆಗ್ರಹಿಸಿದ್ದಾರೆ. ಅಲ್ದೇ, ಈ ಬಗ್ಗೆ ರಾಜ್ಯಾದ್ಯಂತ ಅಭಿಯಾನ ಶುರು ಮಾಡೋದಾಗ ಶಿವರಾಮ್ ಹೆಬ್ಬಾರ್ ಘೋಷಿಸಿದ್ದಾರೆ.

ತನಿಖೆ ಮಾಡಲಿ..!
ಸರ್ಕಾರ ಸದ್ಯ ದುರಂತದ ಕುರಿತು ಹಲವು ಆಯಾಮದಲ್ಲಿ ತನಿಖೆಗೆ ನೀಡಿದೆ. ಅಲ್ಲಿ ತನಿಖೆಯ ನಂತರ ಅದ್ಯಾರೇ ತಪ್ಪಿತಸ್ಥರಾದ್ರೂ ಅಂತವರಿಗೆ ಶಿಕ್ಷೆಯಾಗಲಿ ಅಂತಾ ಹೆಬ್ಬಾರ್ ಆಗ್ರಹಿಸಿದ್ದಾರೆ.

error: Content is protected !!