Karwar News : ಕಾರವಾರ, ಜೂ.10 ರಂದು ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಮೇ-2025 ಮಾಹೆಯ “ಬೆಸ್ಟ್ ಪಿಡಿಓ ಆಪ್ ದ ಮಂತ್” ಪ್ರಶಸ್ತಿಗೆ ಭಾಜನರಾದ ಸಿದ್ದಾಪೂರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಉಮೇಶ ಡಿ. ಗೌಡರ ಅವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಮಂಗಳವಾರ ಪ್ರಶಸ್ತಿ ನೀಡಿ, ಅಭಿನಂದಿಸಿದರು.
ನಂತರ ಮಾತನಾಡಿದ ಅವರಿ ಉತ್ತರ ಕನ್ನಡ ಜಿಲ್ಲಾ ಪಂಚಾಯತನ ಎಲ್ಲ ಪಿಡಿಓಗಳು ತುಂಬ ಚೆನ್ನಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಜಿಲ್ಲಾ ಪಂಚಾಯತ ಕರ್ನಾಟಕದ ಪ್ರಮುಖ ಐದರಲ್ಲಿ ಒಂದು ಎಂದು ಗುರುತಿಸಲು ಪಿಡಿಓಗಳ ಕಾರ್ಯ ಮಹತ್ತರವಾಗಿದೆ. ಹಾಗಾಗಿ ಅವರುಗಳನ್ನು ಗುರುತಿಸಿ ಸತ್ಕಾರ ಮಾಡಿ, ಅಭಿನಂದಿಸುವುದರಿಂದ ಎಲ್ಲರಲ್ಲಿ ಕಾರ್ಯಪ್ರವರ್ತತೆ ಹೆಚ್ಚಿಸಲು ಸಾಧ್ಯವೆಂದು ಹೇಳಿದರು.
ಇದನ್ನೂ ಓದಿ👉 ಬಾಚಣಕಿ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ, ನಾಲ್ವರಿಗೆ ಗಾಯ..! ಮೂವರು ಗಂಭೀರ, ಓರ್ವನ ಸ್ಥಿತಿ ಚಿಂತಾಜನಕ..!
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರು ಕರೀಂ ಆಸದಿ, ಮುಖ್ಯ ಯೋಜನಾ ಅಧಿಕಾರಿ ಸೋಮಶೇಖರ ಮೇಸ್ತಾ, ಆಡಳಿತ ಶಾಖೆಯ ಸಹಾಯಕ ನಿರ್ದೇಶಕ ವೆಂಕಟ್ರಾಯ ನಾಯ್ಕ, ಸಹಾಯಕ ಯೋಜನಾ ಅಧಿಕಾರಿ ಕೃಷ್ಣ ಶಾಸ್ತ್ರಿ ಹಾಗೂ ಲೆಕ್ಕ ಅಧಿಕ್ಷಕ ಸೂರ್ಯಕಾಂತ ಸೇರಿದಂತೆ ಜಿಲ್ಲಾ ಪಂಚಾಯತನ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ👉 ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ 3 ದಿನ ರೆಡ್ ಅಲರ್ಟ್: ಎಚ್ಚರವಹಿಸಲು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!