Home ಹಾವೇರಿ

Category: ಹಾವೇರಿ

Post
ಶಿಗ್ಗಾವಿ ಯೋಧ ಪಂಜಾಬಿನಲ್ಲಿ ಹುತಾತ್ಮ, ಶೀಲವಂತರ ಸೋಮಾಪುರದಲ್ಲಿ ಮಡುಗಟ್ಟಿದ ಶೋಕ..!

ಶಿಗ್ಗಾವಿ ಯೋಧ ಪಂಜಾಬಿನಲ್ಲಿ ಹುತಾತ್ಮ, ಶೀಲವಂತರ ಸೋಮಾಪುರದಲ್ಲಿ ಮಡುಗಟ್ಟಿದ ಶೋಕ..!

ಶಿಗ್ಗಾವಿ; ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಯೋಧ ಪಂಜಾಬಿನಲ್ಲಿ ಹುತಾತ್ಮರಾಗಿದ್ದಾರೆ‌. ಶಿವರಾಜ್ ಗದಿಗೆಪ್ಪ ಗಂಗಮ್ಮನವರ್ (23) ಎಂಬುವ ಯೋಧ ಹುತಾತ್ಮರಾಗಿದ್ದಾರೆ. ಪಂಜಾಬಿನ ಬಟಿಂಡಾ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತವಾಗಿ ಮರಣ ಹೊಂದಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಯೋಧ ಶಿವರಾಜ್, 2016ರಲ್ಲಿ ಇಂಡಿಯನ್ ಆರ್ಮಿಗೆ ಆಯ್ಕೆಯಾಗಿದ್ದರು. ಇನ್ನು ಶಿಗ್ಗಾವಿ ತಾಲೂಕಿನ ಶೀಲವಂತ ಸೋಮಪುರ ಗ್ರಾಮದಲ್ಲಿ ಮೃತನ ಮನೆಯಲ್ಲಿ ತಂದೆ ಗದಿಗೆಪ್ಪ, ತಾಯಿ ಗೌರಮ್ಮ, 02 ಜನ ಹಿರಿಯ ಸಹೋದರರು (ಒಬ್ಬ ಶಿಕ್ಷಕ,ಇನ್ನೊಬ್ಬರು ವ್ಯವಸಾಯ ಮಾಡುತ್ತಿರುತ್ತಾರೆ) ಹಾಗೂ ಓರ್ವ...

Post
ದುಂಢಸಿ, ಅ.ಮ. ಕೊಪ್ಪದಿಂದ ಹೊಂಬುಜ ಕ್ಷೇತ್ರಕ್ಕೆ ಪಾದಯಾತ್ರೆ, ಅರಟಾಳದಲ್ಲಿ ಮುನಿಶ್ರೀ ಚಾಲನೆ..!

ದುಂಢಸಿ, ಅ.ಮ. ಕೊಪ್ಪದಿಂದ ಹೊಂಬುಜ ಕ್ಷೇತ್ರಕ್ಕೆ ಪಾದಯಾತ್ರೆ, ಅರಟಾಳದಲ್ಲಿ ಮುನಿಶ್ರೀ ಚಾಲನೆ..!

 ಶಿಗ್ಗಾವಿ: ತಾಲೂಕಿನ ಅ. ಮ.ಕೊಪ್ಪ ಹಾಗೂ ದುಂಡಶಿ ಗ್ರಾಮದ ಜೈನ ಶ್ರಾವಕರು ಶ್ರೀ ಕ್ಷೇತ್ರ ಹೊಂಬುಜ ಪದ್ಮಾವತಿದೇವಿಯ ದರ್ಶನಕ್ಕಾಗಿ ಪಾದಯಾತ್ರೆ ಹೊರಟಿದ್ದಾರೆ. ನೂರಾರು ಶ್ರಾವಕರ ತಂಡ ಇಂದಿನಿಂದ ಪಾದಯಾತ್ರೆ ಪ್ರಾರಂಭಿಸಿದೆ. ಜೈನರ ಅತಿಶಯ ಕ್ಷೇತ್ರ ಅರಟಾಳದಲ್ಲಿ ಮುನಿಶ್ರೀ ಪುಣ್ಯಸಾಗರ ಮಹಾರಾಜರು ಹಾಗೂ ಬಾ.ಬ್ರ. ಸೋಮದೇವ ಬೈಯಾಜಿಯವವರ ನೇತೃತ್ವದಲ್ಲಿ ಹೊಂಬುಜ ಪಾದಯಾತ್ರೆಗೆ ಚಾಲನೆ ನೀಡಿದ್ರು. ಈ ವೇಳೆ ರವಿ ಪಾಸರ, ಪ್ರಕಾಶ್ ಧರಣೆಪ್ಪನವರ್, ಸುನೀಲ್ ಆರೆಗೊಪ್ಪ, ಸುಧೀರ್ ಛಬ್ಬಿ, ಮಹಾವೀರ ಧಾರವಾಡ, ಪ್ರಶಾಂತ ಬಿಶೆಟ್ಟಿ, ಪಾಯಪ್ಪ ಬ್ಯಾಹಟ್ಟಿ...

Post
ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?

ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?

ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ಕ್ರೈಮುಗಳ ಸಿಟಿಯಾಯ್ತಾ..? ಇಂತಹದ್ದೊಂದು ಅನುಮಾನ ಇಡೀ ಕ್ಷೇತ್ರದ ಪ್ರಜ್ಞಾವಂತರನ್ನ ಬೆಂಬಿಡದೇ ಕಾಡ್ತಿದೆ. ಇಲ್ಲಿ ಕೊಲೆ ಅನ್ನೋದು ಕಾರಣಗಳೇ ಇಲ್ಲದೇ ನಡೆದು ಹೋಗ್ತಿವೆ. ನಿನ್ನೆ ಸಂಜೆ ನಡೆದದ್ದೂ ಇದೆ. ಸರಗೊಲು ಆಡುತ್ತಿದ್ದಾಗ ಕೋಲು ಬಡಿಸಿಕೊಂಡ ಟಿಪ್ಪರ್ ಮಾಲೀಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಅನಾಮತ್ತಾಗಿ ಮರ್ಡರ್ ಆಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಉಮೇಶ್ ಶಿವಜೋಗಿಮಠ್ (45) ಎಂಬುವವನನ್ನು ಬರೋಬ್ಬರಿ ಏಳು ಜನರ ತಂಡ ಮನಬಂದಂತೆ ಥಳಿಸಿ ಕೊಂದು ಹಾಕಿದ್ದಾರೆ...

Post
ಹುಲುಗೂರು ಶೂಟೌಟ್ ಗೆ ಮುಂಡಗೋಡಿನಲ್ಲಿ ಸುಪಾರಿ..? ಖಾಕಿ ಕಂಡು ಎಸ್ಕೇಪ್ ಆದ್ನಾ ಆರೋಪಿ..?

ಹುಲುಗೂರು ಶೂಟೌಟ್ ಗೆ ಮುಂಡಗೋಡಿನಲ್ಲಿ ಸುಪಾರಿ..? ಖಾಕಿ ಕಂಡು ಎಸ್ಕೇಪ್ ಆದ್ನಾ ಆರೋಪಿ..?

 ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪತಿಯೇ ತನ್ನ ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟಿದ್ನಾ..? ಅಷ್ಟಕ್ಕೂ ಆ “ಸುಪಾರಿ” ಕೈ ಬದಲಾಯಿಸಿದ್ದು ಮುಂಡಗೋಡಿನಲ್ಲಾ..? ಯಸ್, ಇಂತಹದ್ದೊಂದು ಅನುಮಾನ ಶಿಗ್ಗಾವಿ ಪೊಲೀಸರಿಗೆ ತಲೆ ಹೊಕ್ಕಿದೆ. ಯಾಕಂದ್ರೆ, ಅವತ್ತು ಗುಂಡಿನ ದಾಳಿ ಮಾಡಲು ಬಂದಿದ್ದ ಆ ಇಬ್ಬರಲ್ಲಿ ಓರ್ವ ಮುಂಡಗೋಡ ತಾಲೂಕಿನ ಆ ಗ್ರಾಮದವನಂತೆ.. ಆದ್ರೆ, ಆತ ಈ ಕ್ಷಣದವರೆಗೂ ಪೊಲೀಸರ ಕೈಗೆ ಸಿಕ್ಕೇ ಇಲ್ಲ ಅನ್ನೋ ಮಾಹಿತಿ ಗೊತ್ತಾಗಿದೆ. ಆದ್ರೆ, ಪೊಲೀಸರು ಮಾತ್ರ ಸುಮ್ನೆ ಕುಳಿತಿಲ್ಲ....

Post
ಶಿಗ್ಗಾವಿಯ ಹುಲಗೂರಲ್ಲಿ ನಡೆದ ಗುಂಡಿನ ದಾಳಿಗೂ, ಮುಂಡಗೋಡಿಗೂ ಏನದು ನಂಟು..? ಅಷ್ಟಕ್ಕೂ ಬಂದೂಕು ಯಾರದ್ದು..?

ಶಿಗ್ಗಾವಿಯ ಹುಲಗೂರಲ್ಲಿ ನಡೆದ ಗುಂಡಿನ ದಾಳಿಗೂ, ಮುಂಡಗೋಡಿಗೂ ಏನದು ನಂಟು..? ಅಷ್ಟಕ್ಕೂ ಬಂದೂಕು ಯಾರದ್ದು..?

ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಹಿಂದೆ ಮುಂಡಗೋಡ ತಾಲೂಕಿನ ಲಿಂಕ್ ಇದೆಯಾ..? ಹೌದು ಅಂತಿದೆ ಮೂಲಗಳು. ನಿನ್ನೆ ರಾತ್ರಿ ಹುಲಗೂರಿನ ತನ್ನ ಮನೆಯ ಜಗುಲಿಯಲ್ಲಿ ಕುಳಿತಿದ್ದ ಮಹಿಳೆ ಸಲ್ಮಾಬಾನು ಮೇಲೆ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕ್ ಮೇಲೆ ಬಂದು ಒಂದು ಸುತ್ತು ಗುಂಡಿನ ದಾಳಿ ನಡೆಸಿದ್ರು. ಅದೃಷ್ಟವಶಾತ್ ಮಹಿಳೆಗೆ ಗುಂಡು ತಗುಲಿಲ್ಲ. ಅದ್ರೆ, ಸಿಡಿದ ಗುಂಡಿನ ರಭಸಕ್ಕೆ ಗೋಡೆ ಸೀಳಿ ಒಳ ನುಗ್ಗಿವೆ ಗುಂಡುಗಳು. ಪಕ್ಕಾ ಸುಳಿವು..? ಆದ್ರೆ, ಹುಲಗೂರಿನಲ್ಲಿ ನಿನ್ನೆ...

Post
ಶಿಗ್ಗಾವಿಯ ಹುಲಗೂರಿನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ, ಬೈಕ್ ಮೇಲೆ ಬಂದಿದ್ದವರು ಹಾರಿಸಿದ್ರು ಗುಂಡು..!

ಶಿಗ್ಗಾವಿಯ ಹುಲಗೂರಿನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ, ಬೈಕ್ ಮೇಲೆ ಬಂದಿದ್ದವರು ಹಾರಿಸಿದ್ರು ಗುಂಡು..!

 ಶಿಗ್ಗಾವಿ ತಾಲೂಕಿನಲ್ಲಿ ಮತ್ತೊಂದು ಪೈರಿಂಗ್ ನಡೆದಿದೆ. ಹುಲಗೂರಿನಲ್ಲಿ ಮನೆಯ ಹೊರಗಡೆ ಜಗುಲಿಯ ಮೇಲೆ ಕುಳಿತ ಮಹಿಳೆ ಮೇಲೆ ಬೈಕ್ ಮೇಲೆ ಬಂದಿದ್ದ ಅಪರಿಚಿತರಿಂದ ಕತ್ತಲಿನಲ್ಲೇ ಗುಂಡಿನ ದಾಳಿ ನಡೆದಿದೆ‌. ಅದೃಷ್ಟವಶಾತ್ ಗುಂಡಿನ ದಾಳಿಯಲ್ಲಿ ಮಹಿಳೆ ಬಚಾವ್ ಆಗಿದ್ದಾಳೆ. ಹುಲಗೂರಿನಲ್ಲಿ ತಡರಾತ್ರಿ ಮನೆಯ ಎದುರು ಕುಳಿತಿದ್ದ ಸಲ್ಮಾ ಎಂಬುವವಳ ಮೇಲೆ ಬೈಕ್ ನಲ್ಲಿ ಬಂದ ಮುಸುಕುಧಾರಿಗಳಿಂದ ಕತ್ತಲಿನಲ್ಲೇ ಒಂದು ಸುತ್ತು ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಯುತ್ತಲೇ ಮಹಿಳೆ ಮನೆಯ ಒಳಗೆ ಓಡಿದ್ದಾಳೆ. ಹೀಗಾಗಿ, ಹಾರಿ...

Post
ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು, ಪೋಸು ಕೊಡುತ್ತಿದ್ದವ ಆಸ್ಪತ್ರೆ ಪಾಲು..!

ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು, ಪೋಸು ಕೊಡುತ್ತಿದ್ದವ ಆಸ್ಪತ್ರೆ ಪಾಲು..!

ಯಾವೊಂದೂ ಮುಂಜಾಗ್ರತಾ ಕ್ರಮವಿಲ್ಲದೇ ಹಾವು ಹಿಡಿಯಲು ಹೋದ ವ್ಯಕ್ತಿಗೆ ಹಾವು ಕಚ್ಚಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸದಲ್ಲಿ ಘಟನೆ ನಡೆದಿದ್ದು, ರಾಜು ಕೌದಿ ಎಂಬ ವ್ಯಕ್ತಿಯೇ ಹಾವು ಕಚ್ಚಿಸಿಕೊಂಡಿದ್ದಾನೆ. ತಡಸ ಗ್ರಾಮದ ಇಟ್ಟಿಗೆ ಭಟ್ಟಿಯೊಂದರಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ಹಿಡಿಯಲು ಮುಂದಾಗಿದ್ದ ರಾಜೂ ಕೌದಿ, ಕೋಲಿನಿಂದ ಇಟ್ಟಿಗೆ ಅಡಿಯಲ್ಲಿದ್ದ ನಾಗರಹಾವನ್ನು ಗಾಸಿಗೊಳಿಸಿದ್ದ. ಕೋಲಿನಿಂದ ಹಾವಿನ ಹೆಡೆಗೆ ಗಟ್ಟಿಯಾಗಿ ಹಿಡಿದು, ಆ ನಂತರದಲ್ಲಿ ಕೈಯಿಂದ ಹಿಡಿದುಕೊಂಡಿದ್ದ. ಈ ವೇಳೆ ಹಾವು ಆತನ ಕೈಗೆ ಬಲವಾಗಿ ಕಚ್ಚಿದೆ. ಪರಿಣಾಮ...

Post
ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ; ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು..!

ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ; ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು..!

ಹಾನಗಲ್: ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸ್ಥಳದಲ್ಲೆ ಇಬ್ಬರು ಬೈಕ್ ಸವಾರರು ಸಾವಿಗೀಡಾದ ಘಟನೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಣಸಿಕಟ್ಟಿ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದೆ. ಚೇತನ್ ಈಳಗೇರ್ (32) ಹಾಗೂ ಸುರೇಶ್ ಚಕ್ರಸಾಲಿ (33) ಮೃತ ಬೈಕ್ ಸವಾರರು. ಮೃತರಿಬ್ಬರೂ ಹಾನಗಲ್ ತಾಲೂಕಿನ ಬೆಳಗಾಲಪೇಟೆಯ ನಿವಾಸಿಗಳು ಎನ್ನಲಾಗಿದೆ. ಹಾನಗಲ್ ನಿಂದ ಸ್ವಗ್ರಾಮ ಬೆಳೆಗಾಲಪೇಟೆ ಗೆ ಹೋಗುವಾಗ ದುರಂತ ನಡೆದಿದೆ. ಅಪಘಾತ ತೀವ್ರತೆಗೆ ದೇಹಗಳು ಚಿದ್ರಗೊಂಡಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೆ ಸಾವು ಕಂಡಿದ್ದಾರೆ....

Post
ಸವಣೂರಿನಲ್ಲಿ ನಿನ್ನೆ ನಡೆದ ಮರ್ಡರನ ಎದೆ ನಡುಗಿಸುವ ರಣಭೀಕರ ದೃಷ್ಯ..!

ಸವಣೂರಿನಲ್ಲಿ ನಿನ್ನೆ ನಡೆದ ಮರ್ಡರನ ಎದೆ ನಡುಗಿಸುವ ರಣಭೀಕರ ದೃಷ್ಯ..!

ಸವಣೂರು: ಇಲ್ಲಿನ ಕಾರಡಗಿ ಕ್ರಾಸ್ ಬಳಿ ನಿನ್ನೆ ರವಿವಾರ, ನಡು ರಸ್ತೆಯಲ್ಲೇ ನಡೆದಿದ್ದ ರೌಡಿಶೀಟರ್ ಬರ್ಬರ ಹತ್ಯೆಯ ಭಯಾನಕ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಚ್ಚು ಹಾಗೂ ಕೊಡಲಿಯಿಂದ ಮನಸೊಯಿಚ್ಚೆ ಹೊಡೆದು ಕೊಂದು ಹಾಕಿದ್ದಾರೆ ಕೊಲೆ ಪಾತಕಿಗಳು. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್‌ ಬಳಿ ನಿನ್ನೆ ಸಂಜೆ ನಡೆದಿದ್ದ ಘಟನೆಯಲ್ಲಿ, ಅನ್ವರ ಶೇಕ್ ಅಲಿಯಾಸ್ ಹಜರತ್ ಅಲಿ ಮೂಮಿನ್ ಎಂಬುವ 40 ವರ್ಷ ವಯಸ್ಸಿನ ರೌಡಿಶೀಟರ್ ಬರ್ಬರ ಹತ್ಯೆಯಾಗಿದ್ದ‌. ಇಮ್ರಾನ್ ಚೌದರಿ (28) ಹಾಗೂ...

Post
ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ..!

ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ..!

ಶಿಗ್ಗಾವಿ : ಅನ್ನದಾನತನ ಮೇಲೆ ಕರಡಿಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ, ಹಾವೇ‌ರಿ‌ ಜಿಲ್ಲೆ ಶಿಗ್ಗಾವಿ ತಾಲೂಕಿನ ದುಂಢಶಿ‌ ಗ್ರಾಮದ ಬಳಿ ನಡೆದಿದೆ. ಮಹಾವೀರ ಧರ್ಮಪ್ಪ ದಿಪ್ಪಣ್ಣನವರ (55) ಎಂಬುವವರೇ ಕರಡಿ ದಾಳಿಗೆ ತುತ್ತಾದವರು. ಇಂದು ತನ್ನ ಜಮೀನಿನಲ್ಲಿ ಕೆಲಸಕ್ಕೆ ಹೋದ ವೇಳೆ ದಾಳಿ ನಡೆಸಿದ ಕರಡಿ, ರೈತನ ಮುಖ,ತಲೆ, ಮೈಮೇಲೆ ಮನಬಂದಂತೆ ಕಚ್ಚಿದೆ. ಪರಿಣಾಮ ರೈತ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಕೆಲಹೊತ್ತು ನರಳಾಡುತ್ತ ಬಿದ್ದಿದ್ದಾನೆ. ನಂತರ, ಸ್ಥಳೀಯರು ಅಂಬ್ಯುಲೆನ್ಸ್ ಗೆ ಕರೆ‌ಮಾಡಿ ಗಂಭೀರ...

error: Content is protected !!