ಶಿಗ್ಗಾವಿ: ಶಾಲೆಯ ಆವರಣದಲ್ಲೇ ಕಾಡು ಔಡಲ ಬೀಜ ತಿಂದ ಪರಿಣಾಮ, 9 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಶಿಗ್ಗಾವಿ ತಾಲೂಕಿನ ನೀರಲಕಟ್ಟಿ ತಾಂಡಾದಲ್ಲಿ ನಡೆದಿದೆ.

ಇಂದು ಮದ್ಯಾಹ್ನ ಶಾಲೆಯ ಆವರಣದಲ್ಲಿ ಕಾಡ ಔಡಲ ಬೀಜವನ್ನು ಸೇವಿಸಿ ವಾಂತಿ ಹಾಗೂ ಜ್ವರದಿಂದ ಸುಮಾರು 9 ಜನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ, ತಕ್ಷಣವೇ ಅಸ್ವಸ್ಥ ವಿದ್ಯಾರ್ಥಿಗಳನ್ನು, ಶಿಗ್ಗಾವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ವಿದ್ಯಾರ್ಥಿಗಳಿಗೂ ಪ್ರಾಣಾಪಾಯವಿಲ್ಲ ಅಂತಾ ತಿಳಿದು ಬಂದಿದೆ. ವೈದ್ಯರು ಮಕ್ಕಳ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ ಅಂತಾ ತಿಳಿದು ಬಂದಿದೆ.

ಸಮರ್ಥ್ ರವಿ ಲಮಾಣಿ, ಶರತ್ ಉಮೇಶ್ ಲಮಾಣಿ, ಪೂಜಾ ಗಣಪತಿ ಲಮಾಣಿ, ರೇಣುಕಾ ಸುಭಾಷ್ ಲಮಾಣಿ, ಶಂಕ್ರಪ್ಪ ಹೇಮಂತ್ ಅಕ್ಕಸಾಲಿ, ಪವನ್ ಗಂಗಪ್ಪ ಲಮಾಣಿ, ದೇವಕ್ಕ ಕುಮಾರ್ ಲಮಾಣಿ, ಪ್ರಿಯಾಂಕ ಸಕಾರಾಮ್ ಅಕ್ಕಸಾಲಿ, ನವೀನ್ ದೇವಪ್ಪ ಲಮಾಣಿ ಎಂಬುವ ವಿದ್ಯಾರ್ಥಿಗಳು ಅಸ್ವಸ್ಥಗೊಂಡವರಾಗಿದ್ದಾರೆ.

********************

error: Content is protected !!