Mundgod Accident News: ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮಸ್ಥರು ಇವತ್ತು ಅಲ್ಷರಶಃ ಮಮ್ಮಲ ಮರುಗಿದ್ದಾರೆ. ಟ್ರಾಕ್ಟರ್ ಅಪಘಾತದಲ್ಲಿ ಮನೆಮಗನನ್ನು ಕಳೆದುಕೊಂಡಿದ್ದಾರೆ. ವಯಸ್ಸಲ್ಲದ ವಯಸ್ಸಲ್ಲಿ ದುರಂತ ಸಾವು ಕಂಡಿರೋ ಸತೀಶ್ ತಳವಾರಗಾಗಿ ಕಣ್ಣೀರು ಹಾಕ್ತಿದಾರೆ.
ಹೌದು, ಮುಂಡಗೋಡ ತಾಲೂಕಿನ ಇಂದೂರು ಸಮೀಪ, ಚಲಿಸುತ್ತಿದ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಯುವಕ ಮೃತಪಟ್ಟಿದ್ದಾನೆ. ತಾಲೂಕಿನ ನಂದಿಕಟ್ಟಾ ಗ್ರಾಮ ಪಂ. ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಸತೀಶ ಮಂಜುನಾಥ ತಳವಾರ(18) ದುರಂತ ಸಾವು ಕಂಡಿದ್ದಾನೆ.
Mundgod Accident News:
ಮುಂಡಗೋಡ ಅರಣ್ಯ ಸಸ್ಯ ಪಾಲನ ಕೇಂದ್ರ ದಿಂದ ಹುಲಿಹೊಂಡ ಅರಣ್ಯ ಪ್ರದೇಶಕ್ಕೆ ಸಸಿಗಳನ್ನು ಸಾಗಿಸುವ ಸಲುವಾಗಿ, ಹುಲಿಹೊಂಡ ಗ್ರಾಮದಿಂದ ಬೆಳಿಗ್ಗೆ ಮುಂಡಗೋಡಕ್ಕೆ ತೆರಳಿದ್ದ ಸತೀಶ, ಅಲ್ಲಿಂದ ಸಸಿಗಳನ್ನು ತುಂಬಿಕೊಂಡು ಟ್ರಾಕ್ಟರ್ ನಲ್ಲಿ ವಾಪಸ್ ಆಗುತ್ತಿದ್ದ. ಅದ್ಯಾವ ದುರಾದೃಷ್ಟವೋ ಏನೋ, ಟ್ರೈಲರ್ ಕೊಂಡಿಯ ಮೇಲೆ ನಿಂತಿದ್ದ ಹುಡುಗ, ಇಂದೂರು ಸಮೀಪ ಬರುತ್ತಿದ್ದಂತೆ ಹೇಗೋ ಏನೋ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ಟ್ರೈಲರ್ ಹಿಂಬದಿಯ ಚಕ್ರದ ಅಡಿ ಸಿಲುಕಿದ್ದಾನೆ ಅಷ್ಟೆ. ಬಾಳಿ ಬದುಕಬೇಕಿದ್ದ ಯುವಕ ಜೀವನ್ಮರಣದ ಮದ್ಯೆ ಒದ್ದಾಡಿದ್ದಾನೆ.
ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದ್ರೆ ಮಾರ್ಗ ಮದ್ಯೆಯೇ ಹುಡುಗ ಉಸಿರು ನಿಲ್ಲಿಸಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.