ಮುಂಡಗೋಡ: ಬಿಜೆಪಿ ನಂಗೆ ಒಂದು ವರ್ಷ ಐದು ತಿಂಗಳ ಕಾಲ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು ಹೀಗಾಗಿ, ನಾನು ನನ್ನ ಪಕ್ಷಕ್ಕೆ, ಕ್ಷೇತ್ರದ ಮತದಾರನಿಗೆ ಯಾವಾಗ್ಲೂ ಚಿರ ಋಣಿಯಾಗಿರ್ತೆನೆ ಅಂತಾ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ರು. ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವ್ರು, ನನ್ನ ಕ್ಷೇತ್ರದ ಜನರ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದ ಯಡಿಯೂರಪ್ಪನವರಿಗೆ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ತಿಳಿಸಿದ್ರು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ..! ಇನ್ನು, ನೂತನ ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿಗಿರಿ ಸಿಗತ್ತಾ ..? ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಬ್ಬಾರ್, ಮುಂದಿನ ನೂತನ ಸಚಿವ ಸಂಪುಟದಲ್ಲಿ ನಂಗೆ ಸಚಿವ ಸ್ಥಾನ ನೀಡಿದ್ರೆ ಜವಾಬ್ದಾರಿಯುತವಾಗಿ ನಿಭಾಯಿಸ್ತಿನಿ, ನೀಡದೇ ಇದ್ರೂ ಶಾಸಕನಾಗೇ ನನ್ನ ಕೆಲಸ ಕಾರ್ಯಗಳನ್ನು ಮುಂದುವರಿಸ್ತಿನಿ ಅಂತಾ ಹೆಬ್ಬಾರ್ ತಿಳಿಸಿದ್ರು. ಅದೇನಿದ್ರೂ ಹೈಕಮಾಂಡ್ ನಿರ್ಧಾರಗಳಿಗೆ ನಾನು ಬದ್ಧನಾಗಿರ್ತಿನಿ ಅಂತಾ ಸ್ಪಷ್ಟ ಪಡಿಸಿದ್ರು.
Top Stories
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!
ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ, ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!
ಉತ್ತರ ಕನ್ನಡದ ಹೆಮ್ಮೆ, ಹಾಡುಹಕ್ಕಿ, ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ..!
ಭೀಮಾತೀರದ ಡೆಡ್ಲಿ ಹಂತಕ ಬಾಗಪ್ಪ ಹರಿಜನ ಭೀಕರ ಹತ್ಯೆ| ಮನೆಯ ಬಳಿಯೇ ಕೊಚ್ಚಿ ಕೊಚ್ಚಿ ಕೊಂದ್ರು ಹಂತಕರು..!!
ನಾಲ್ಕೂವರೇ ದಶಕಗಳಿಂದ ಎಣ್ಣೆಇಲ್ಲದೇ ಉರಿಯುತ್ತಿದ್ದ ಚಿಗಳ್ಳಿಯ ದೀಪಗಳು ಆರಿ ಹೋದ್ವಾ..?
NMD ಜಮೀರ್ ಅಹ್ಮದ್ ಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಮುಂಡಗೋಡ ಕೋರ್ಟ್..!
NMD ಜಮೀರ್ ಕೋರ್ಟಿಗೆ ಶರಣು..! ಎಸ್ಪಿ ನಾರಾಯಣ್ ರ “ಗುರಿ” ಗೆ ಥರಗುಟ್ಟಿದ ಮುಂಡಗೋಡ ಮೀಟರ್ ಬಡ್ಡಿ ಮಾಫಿಯಾ..!
ಮೀಟರ್ ಬಡ್ಡಿ, ಮೈಕ್ರೋ ಫೈನಾನ್ಸ್ ಗಳು, ಬಾಲ ಬಿಚ್ಚಿದ್ರೆ ಸುಮ್ಮನಿರಲ್ಲ,, ರೌಡಿಗಳನ್ನು ಸಾಲ ವಸೂಲಿಗೆ ಬಳಸಿದ್ರೆ ನಿರ್ದಾಕ್ಷಿಣ್ಯ ಕ್ರಮ- ಡೀಸಿ, ಎಸ್ಪಿ ಜಂಟೀ ವಾರ್ನಿಂಗ್
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ, ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ, ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ..!
ಮುಂಡಗೋಡಿನಲ್ಲಿ ರಾತ್ರಿ ನಡೀತು ಕಂಡೂ ಕೇಳರಿಯದ ಬಹುದೊಡ್ಡ ಪೊಲೀಸ್ ದಾಳಿ..!ಮೀಟರ್ ಬಡ್ಡಿ ಕುಳಗಳೇ ಪೊಲೀಸರ ಟಾರ್ಗೆಟ್..? ಅಷ್ಟಕ್ಕೂ ಈ ದಾಳಿ ವಿಫಲವಾಯ್ತಾ..?
ಮುಂಡಗೋಡಲ್ಲಿ ಹಾಡಹಗಲೇ ನಡೆದಿದ್ದ ಮನೆಗಳ್ಳತನ ಕೇಸ್ ಬೇಧಿಸಿದ ಪೊಲೀಸ್ರು..! ಇಬ್ಬರು ಲೋಕಲ್ ಆರೋಪಿಗಳ ಬಂಧನ..!
ಅಧಿಕಾರ ಕೊಟ್ರೆ ನಿಭಾಯಿಸ್ತಿನಿ, ಇಲ್ಲಾಂದ್ರೆ ಶಾಸಕನಾಗೇ ಕೆಲಸ ಮುಂದುವರೀಸ್ತಿನಿ; ಮಾಜಿ ಸಚಿವ ಹೆಬ್ಬಾರ್
ಶಿಗ್ಗಾವಿ ಶಿಕ್ಷಣ ಇಲಾಖೆ ಮ್ಯಾನೇಜರ್ ಸುರೇಶ್ ರೋಡ್ಡನವರ ಎಸಿಬಿ ಬಲೆಗೆ..!
ಶಿಗ್ಗಾವಿ: ಶಿಗ್ಗಾವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮ್ಯಾನೇಜರ್ ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದಿದ್ದಾನೆ. ವರ್ಗಾವಣೆ ವಿಷಯಕ್ಕೆ ಸಂಭಂದಿಸಿದಂತೆ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸುರೇಶ್, 4 ಸಾವಿರಕ್ಕೆ ಡೀಲು ಕುದುರಿಸಿದ್ದ ಎನ್ನಲಾಗಿದ್ದು ಶಿಗ್ಗಾವಿ ಗಾಂಧಿನಗರ LPS ಶಾಲೆಯ ಶಿಕ್ಷಕ ಹನುಮಂತಪ್ಪ ಹಳ್ಳೆಪ್ಪನವರ ಅವರ ದೂರಿನ ಮೇರೆಗೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಸುರೇಶನನ್ನು ವಶಕ್ಕೆ ಪಡೆದಿದ್ದಾರೆ. ಡಾವಣಗೇರಿಯ ಎಸಿಬಿ ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಎಸಿಬಿ ಅಧಿಕಾರಿಗಳಾದ ಸುದರ್ಶನ ಪಟ್ಟಣಕುಡೆ, ಶ್ರೀಮತಿ ಪ್ರಭಾವತಿ ಸೇಖ್ ಸನದಿ, ಬಿಎಸ್ ಕರಡೆಣ್ಣನವರ ಕಡಕೊಳ, ವೆಂಕಟೇಶ ಹುಲಿಹಳ್ಳಿ ಮಂಜುನಾಥ, ಮುಲಿಮನಿ ಕೋಂಬಳಿ ಬಸಪ್ಪ ಅವರುಗಳು ದಾಳಿಯಲ್ಲಿ ಭಾಗವಹಿಸಿದ್ದರು.
“ಲಿಂಗಾಯತ” ಶಾಸಕರಿಗೆ ಸಿಎಂ ಸ್ಥಾನ ಪಕ್ಕಾ..! ಆ ಇಬ್ಬರಲ್ಲಿದೆ ತೀವ್ರ ಪೈಪೋಟಿ..!!
ಯಸ್, ಬಿಜೆಪಿ ಹೈಕಮಾಂಡ್ ಬಯಸಿದಂತೆ ಎಲ್ಲವೂ ಆಗಿ ಹೋಗಿದೆ. ಸಿಎಂ ಆಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದ್ರ ಜೊತೆ ಈಗ ಯಡಿಯೂರಪ್ಪ ಸಚಿವ ಸಂಪುಟ ಮಾಜಿಯಾಗಿದೆ. ಹಾಗಾದ್ರೆ ಯಾರು ಮುಂದಿನ ಸಿಎಂ..? ಈ ಕುತೂಹಲ ಸದ್ಯ ಇಡೀ ರಾಜ್ಯದ ಜನರಲ್ಲಿದೆ. ಬಹುಶಃ ಅಂದುಕೊಂಡಂತೆ ಆದ್ರೆ ಗುರುವಾರ ಅಥವಾ ಶುಕ್ರವಾರ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸೋದು ಪಕ್ಕಾ ಎನ್ನುವಂತಾಗಿದೆ. ಆ ಇಬ್ಬರ ನಡುವೆಯಷ್ಟೇ ಪೈಪೋಟಿ..! ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಬಾಗಲಕೋಟೆ ಬೀಳಗಿ ಶಾಸಕ ಮುರುಗೇಶ್ ನಿರಾಣಿ ನಡುವೆ ಸಿಎಂ ಪಟ್ಟಕ್ಕಾಗಿ ಹಾಣಹಣಿ ನಡೆಯುತ್ತಿದೆ ಎನ್ನಲಾಗ್ತಿದೆ. ಆದ್ರೆ, ಇಬ್ಬರ ನಡುವೆ ಯಾರು ಹಿತವರು ಅನ್ನೋದನ್ನ ಹೈಕಮಾಂಡ್ ಅಳೆದು ತೂಗಿ ತೀರ್ಮಾನಿಸಲಾಗ್ತಿದೆ ಅನ್ನೋ ಮಾಹಿತಿ ಇದೆ. ಹೊಸ ಮುಖಕ್ಕೆ ಆದ್ಯತೆ..? ಅಂದಹಾಗೆ, ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಪಕ್ಕಾ ಪ್ಲಾನ್ ಮೂಲಕವೇ ಹೊಸ ಸಿಎಂ ಆಯ್ಕೆ ಮಾಡಲು ಸನ್ನಧ್ದವಾಗಿದೆ. ಬಹುತೇಕ ಲಿಂಗಾಯತ ಶಾಸಕರಿಗೇ...
ನಾನೀಗ ಮಾಜೀ ಸಚಿವನಾಗಿಬಿಟ್ಟೆ..! ಪಬ್ಲಿಕ್ ಫಸ್ಟ್ ಗೆ ಹೆಬ್ಬಾರ್ ಫಸ್ಟ್ ರಿಯಾಕ್ಷನ್..!!
ಮುಂಡಗೋಡ: “ಸಿಎಂ ರಾಜೀನಾಮೆ ನೀಡ್ತಿದಾರೆ, ಹೀಗಾಗಿ ನಾನೂ ಈಗ ಮಾಜಿ ಸಚಿವನಾಗಿಬಿಟ್ಟೆ..! ಹೀಗಂತ ಸಚಿವ ಶಿವರಾಂ ಹೆಬ್ಬಾರ್ ಬೇಸರದ ನುಡಿ ಹಂಚಿಕೊಂಡ್ರು. “ಪಬ್ಲಿಕ್ ಫಸ್ಟ್ ನ್ಯೂಸ್” ಜೊತೆ ಎಕ್ಸ್ ಕ್ಲೂಸಿವ್ ಆಗಿ ಮೊದಲ ಪ್ರತಿಕ್ರಿಯೆ ನೀಡಿದ ಸಚಿವ ಶಿವರಾಮ್ ಹೆಬ್ಬಾರ್ ಭಾವುಕರಾದಂತೆ ಕಂಡ್ರು, ರಾಜ್ಯ ರಾಜಕೀಯದಲ್ಲಿ ಇಂದು ನಡೆದ ಮಹತ್ತರ ಬೆಳವಣಿಗೆ ಕುರಿತು ಬಹುಶಃ ಸಚಿವ ಶಿವರಾಮ್ ಹೆಬ್ಬಾರ್ ರವರಿಗೂ ಬೇಸರವಾಗಿರೋದು ಅವ್ರ ಮಾತುಗಳಲ್ಲಿ ಕಂಡು ಬಂತು. ಮುಂದೇನು..? ಸಿಎಂ ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಯಡಿಯೂರಪ್ಪರ ರಾಜೀನಾಮೆ ಅಂಗೀಕರಿಸಿಯೂ ಆಗಿದೆ. ಸಿಎಂ ರಾಜೀನಾಮೆ ಬಳಿಕ ಬಹುತೇಕ ಸಚಿವ ಸಂಪುಟ ವಿಸರ್ಜನೆ ಆಗತ್ತೆ. ಹೊಸ ಸಿಎಂ ಆಯ್ಕೆಯಾಗಿ ಮತ್ತೆ ನೂತನ ಸಚಿವ ಸಂಪುಟ ರಚನೆಯಾಗತ್ತೆ. ಹೀಗಾಗಿ, ಸಿಎಂ ರಾಜೀನಾಮೆ ಬಳಿಕ ನಾವು ಹೇಗೆ ಸಚಿವರಾಗಿ ಉಳಿಯೋಕೆ ಸಾಧ್ಯ ಅಂದ್ರು ಹೆಬ್ಬಾರ್. ಸಮಾವೇಶಕ್ಕೆ ಹಾಜರಾಗಿಲ್ಲ ಸಚಿವ್ರು.. ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಇಂದಿಗೆ ಎರಡು ವರ್ಷ...
ಕಣ್ಣೀರು ಹಾಕುತ್ತಲೇ ರಾಜೀನಾಮೆ ಘೋಶಿಸಿದ ಸಿಎಂ ಯಡಿಯೂರಪ್ಪ..!
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರೋ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶದಲ್ಲಿ ಸಿಎಂ ಮಹತ್ವದ ಘೋಷಣೆ ಮಾಡಿದ್ದಾರೆ. ಅಕ್ಷರಶಃ ಕಣ್ಣೀರಾಗುತ್ತಲೇ ವಿದಾಯ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ, ಕಾರ್ಯಕ್ರಮ ಮುಗಿದ ಬಳಿಕ, ರಾಜ್ಯಪಾಲರ ಬಳಿಗೆ ಹೋಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತಿನಿ ಅಂತಾ ಭಾವುಕರಾಗೇ ಘೋಷಣೆ ಮಾಡಿದ್ರು..
ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ ಹೇಗ್ ಮಾಡಿದ್ರು ಗೊತ್ತಾ..?
ಚಿಕ್ಕೋಡಿ: ತಾಲೂಕಿನಲ್ಲಿ ಮಳೆ ನಿಂತ್ರು, ಪ್ರವಾಹದ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ.. ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನನ್ನು ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗ್ತಿದ್ದ ಅದೇ ಗ್ರಾಮದ ಯುವಕ ಕುಮಾರ್ ಕಾಂಬಳೆಯನ್ನು ರಕ್ಷಿಸಲಾಗಿದೆ. ಸ್ಥಳೀಯರೇ ಹಗ್ಗ ಹಾಕಿ ಕುಮಾರ್ನನ್ನ ರಕ್ಷಿಸಿದ್ದಾರೆ. ಪರಶುರಾಮ್ ಕಾಂಬಳೆ ಹಾಗೂ ಸ್ಥಳೀಯರು ಪ್ರಾಣ ಪಣಕ್ಕಿಟ್ಟು ಕುಮಾರ್ ಎಂಬ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಹುಲಿ ಗಡ್ಡಿಯಿಂದ ಹುಲಗಬಾಳಿ ಗ್ರಾಮಕ್ಕೆ ತೆರಳುತ್ತಿದ್ದ ಯುವಕ, ಪ್ರವಾಹ ದಾಟಲು ಹೋಗಿದ್ದ. ಹೀಗಾಗಿ, ಪ್ರವಾಹ ರಭಸಕ್ಕೆ ಸಿಕ್ಕು ಕೊಚ್ಚಿ ಹೋಗ್ತಿದ್ದ. ಆದ್ರೆ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಯುವಕನ ರಕ್ಷಣೆ ಮಾಡಿದ್ದಾರೆ.
ನಂದಿಕಟ್ಟಾದಲ್ಲಿ ತಾಯಿಯ ಸೀರೆಯಿಂದಲೇ ನೇಣಿಗೆ ಶರಣಾದ ಯುವಕ..!
ಮುಂಡಗೋಡ: ಮಾನಸಿಕ ಖಿನ್ನತೆಗೆ ಒಳಗಾದ ಯುವಕನೊಬ್ಬ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಅಮಿತ್ ಬಸವರಾಜ್ ಲೋಹಾರ್ (20) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಳೆ ಸಿಎಂ ಉತ್ತರ ಕನ್ನಡ ಜಿಲ್ಲಾ ಪ್ರವಾಸ..! ಪ್ರವಾಹದ ಸ್ಥಿತಿ ವೀಕ್ಷಿಸಲಿರೋ ಯಡಿಯೂರಪ್ಪ
ಬೆಳಗಾವಿ: ನಾಳೆ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲು ಯಡಿಯೂರಪ್ಪ ನಾಳೆ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ 2 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಅವರು ಉತ್ತರ ಕನ್ನಡ ಜಿಲ್ಲೆಗೆ ತೆರಳುವರು. ಕಾರನಾರ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದರು. ಇಂದು ಸಂಜೆಯ ಹೊತ್ತಿಗೆ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಹೈಕಮಾಂಡ್ ಸಂದೇಶ ಬರಲಿದೆ ಎಂದು ಕಾಯುತ್ತಿರುವ ಯಡಿಯೂರಪ್ಪ ನಾಳೆಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಘೋಷಿಸುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ನಾನು ಸಂತೃಪ್ತನಾಗಿದ್ದೇನೆ. ರಾಜ್ಯದಲ್ಲಿ ಯಾರಿಗೂ ಸಿಗದ ಅವಕಾಶ, ಸ್ಥಾನ ಮಾನ ನನಗೆ ಸಿಕ್ಕಿದೆ. ನಾವೆಲ್ಲರೂ ಹೈಕಮಾಂಡ್ ಮಾತನ್ನು ಕೇಳಬೇಕಾಗುತ್ತದೆ. 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಯಡಿಯೂರಪ್ಪ ತಿಳಿಸಿದರು.
ಬಿಜೆಪಿ ನಾಯಕತ್ವ “ಬದಲೀ” ಆಟದಲ್ಲಿ, ಸೇಫ್ ಆಗ್ತಾರಾ ಹೆಬ್ಬಾರ್..?
ಯಲ್ಲಾಪುರ ಕ್ಷೇತ್ರಕ್ಕೂ ತಾಗತ್ತಾ ಸಿಎಂ ಬದಲಾವಣೆ ಬಿಸಿ..? ಇಂತಹದ್ದೊಂದು ಆತಂಕ ಈಗಾಗಲೇ ಬಹುತೇಕ ವಲಸಿಗ ಸಚಿವರುಗಳ ಕ್ಷೇತ್ರದಲ್ಲಿ ಒಳಗೊಳಗೇ ಹೊಗೆಯಾಡ್ತಿದೆ. ಅದ್ರಂತೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲೂ ಅಂತಹ ಆತಂಕ ಬಹುಶಃ ಒಳಗೊಳಗೇ ತಲ್ಲಣಗೊಳಿಸಿದೆಯಾ.? ಹೌದು, ಅನ್ನುತ್ತಿವೆ ಬಲ್ಲ ಮೂಲಗಳು. ಬದಲಾವಣೆ ಪಕ್ಕಾ..! ಸಿಎಂ ಯಡಿಯೂರಪ್ಪ ಈಗಷ್ಟೇ ರಾಜೀನಾಮೆ ನೀಡುವ ಸುಳಿವು ನೀಡಿ ಆಗಿದೆ. ಹೈಕಮಾಂಡ್ ಹೇಗ್ ಹೇಳತ್ತೋ ಹಾಗೆ ಕೇಳ್ಕೊಂಡು ಇರ್ತಿನಿ ಅನ್ನೋ ಸಂದೇಶ ರವಾನಿಸಿಯೂ ಆಗಿದೆ. ಜುಲೈ 25 ಕ್ಕೆ ಹೈಕಮಾಂಡ್ ನಾಯಕರಿಂದ ಬರೋ ಅದೇಶಕ್ಕಾಗಿ ಎಲ್ರೂ ಕಾಯ್ತಿವಿ, ಆ ಆದೇಶ ಅದೇನೇ ಬಂದ್ರೂ ಅದ್ರಂತೆ ನಡ್ಕೋತಿವಿ ಅನ್ನೋ ಸ್ಪಷ್ಟ ಸಂದೇಶ ಯಡಿಯೂರಪ್ಪನವರೂ ರವಾನಿಸಿದ್ದಾರೆ. ಇದ್ರೊಂದಿಗೆ ಜುಲೈ 25 ರ ಆದೇಶ ಅದೇನಾಗತ್ತೊ ಅನ್ನೋ ಹಲವು ಆಯಾಮಗಳ ಲೆಕ್ಕಾಚಾರ ಗರಿಗೆದರಿದೆ. ಒಟ್ನಲ್ಲಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಕಾ ಅನ್ನಲಾಗ್ತಿದೆ. ವಲಸಿಗರ ಚಿಂತೆ..! ಯಾವಾಗ, ಯಡಿಯೂರಪ್ಪನವರ ಖುರ್ಚಿ ಬದಲಾಗತ್ತೆ ಅನ್ನೋ ಸ್ಪಷ್ಟ ಸಂದೇಶ ರಾಜ್ಯ ರಾಜಕೀಯ ಅಂಗಳದಲ್ಲಿ ಚರ್ಚೆಯಾಗತೊಡಗಿತೋ, ಅದ್ರ ಜೊತೆ...
ರಾಜೀನಾಮೆ ಸುಳಿವು ಕೊಟ್ಟ ಸಿಎಂ..! ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸಾ..?
ಬೆಂಗಳೂರು: ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಮೌನ ಮುರಿದಿದ್ದಾರೆ. ಜುಲೈ 25 ರಂದು ವರಿಷ್ಟರು ನೀಡುವ ತೀರ್ಮಾನಕ್ಕೆ ನಾನು ಬದ್ದನಾಗಿ ನಡೆದುಕೊಳ್ಳುತ್ತೇನೆ. ಜುಲೈ 25 ಕ್ಕೆ ಹೈಕಮಾಂಡ್ ನಿಂದ ಒಂದು ಸಂದೇಶ ಬರುತ್ತೆ ಆ ಸಂದೇಶದ ಅನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಅಂತಾ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗುವೆ.. ಇನ್ನು, ಬಹುತೇಕ ರಾಜೀನಾಮೆ ನೀಡುವ ಕುರಿತು ಪರೋಕ್ಷವಾಗಿ ಹೇಳಿರೋ ಸಿಎಂ ಯಡಿಯೂರಪ್ಪ, ಜುಲೈ 26 ರಿಂದ ನಾನು ವರಿಷ್ಟರ ಸೂಚನೆಯಂತೆ ಕೆಲಸ ಶುರು ಮಾಡುತ್ತೇನೆ. ಪಕ್ಷದ ಸಂಘಟನೆಗೆ ಒತ್ತು ಕೊಡುತ್ತೇನೆ ಅಂತಾ ತಿಳಿಸಿದ್ರು. ಪ್ರತಿಭಟನೆ ಮಾಡಬೇಡಿ..! 75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ, ಆದ್ರೂ ಬಿಜೆಪಿ ನಂಗೆ ಎಲ್ಲವನ್ನೂ ಕೊಟ್ಟಿದೆ. 75 ವರ್ಷವಾದ್ರೂ ನನ್ನನ್ನ ಸಿಎಂ ಸ್ಥಾನಕ್ಕೆ ಕೂರಿಸಿದ್ದಾರೆ. ಹೀಗಾಗಿ, ಯಾರೂ ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡಬೇಡಿ....