ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ ಹೇಗ್ ಮಾಡಿದ್ರು ಗೊತ್ತಾ..?

ಚಿಕ್ಕೋಡಿ: ತಾಲೂಕಿನಲ್ಲಿ ಮಳೆ ನಿಂತ್ರು, ಪ್ರವಾಹದ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ..
ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನನ್ನು ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು
ಪ್ರವಾಹದ ನೀರಲ್ಲಿ ಕೊಚ್ಚಿ ಹೋಗ್ತಿದ್ದ ಅದೇ ಗ್ರಾಮದ ಯುವಕ ಕುಮಾರ್ ಕಾಂಬಳೆಯನ್ನು ರಕ್ಷಿಸಲಾಗಿದೆ. ಸ್ಥಳೀಯರೇ ಹಗ್ಗ ಹಾಕಿ ಕುಮಾರ್‌ನನ್ನ ರಕ್ಷಿಸಿದ್ದಾರೆ. ಪರಶುರಾಮ್ ಕಾಂಬಳೆ ಹಾಗೂ ಸ್ಥಳೀಯರು ಪ್ರಾಣ ಪಣಕ್ಕಿಟ್ಟು ಕುಮಾರ್ ಎಂಬ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಹುಲಿ ಗಡ್ಡಿಯಿಂದ ಹುಲಗಬಾಳಿ ಗ್ರಾಮಕ್ಕೆ ತೆರಳುತ್ತಿದ್ದ ಯುವಕ, ಪ್ರವಾಹ ದಾಟಲು ಹೋಗಿದ್ದ. ಹೀಗಾಗಿ, ಪ್ರವಾಹ ರಭಸಕ್ಕೆ ಸಿಕ್ಕು ಕೊಚ್ಚಿ ಹೋಗ್ತಿದ್ದ. ಆದ್ರೆ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಯುವಕನ ರಕ್ಷಣೆ ಮಾಡಿದ್ದಾರೆ.

error: Content is protected !!