ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯರ ಬೀಕರ ಹತ್ಯೆಯ ಹಿಂದೆ ಬೇನಾಮಿ ಆಸ್ತಿಯ ನೆರಳಿದೆ. ಬಹುತೇಕ ಆಪ್ತರೇ ಹಂತಕರು ಅನ್ನೋ ಪ್ರಾಥಮಿಕ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಅಷ್ಟಕ್ಕೂ, ಹಂತಕ ಆರೋಪಿಗಳು ಕಲಘಟಗಿ ತಾಲೂಕಿನ ದುಮ್ಮವಾಡದ ನಿವಾಸಿಗಳು ಎನ್ನಲಾಗಿದೆ. ಬೇನಾಮಿ ಆಸ್ತಿ ಕಾರಣವಾ..? ಇನ್ನು, ಚಂದ್ರಶೇಖರ್ ಗುರೂಜಿ ವನಜಾಕ್ಷಿಯ ಹೆಸರಿಗೆ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಹಾಗೆ ವನಜಾಕ್ಷಿ ಹೆಸರಲ್ಲಿ ಇದ್ದ ಆಸ್ತಿ ವಾಪಸ್ ಕೇಳಿದ್ದ ಕಾರಣಕ್ಕೆ ಇಂತಹ ಭೀಕರ ಹತ್ಯೆ ನಡೆದಿದೆ ಅನ್ನುವ ಮಾತುಗಳು ಕೇಳಿ ಬಂದಿದೆ.
Top Stories
ಅತ್ತಿವೇರಿ ಪಕ್ಷಿಧಾಮದ ಕೂಗಳತೆ ದೂರದಲ್ಲಿ ಮತ್ತೆ ಎರಡು ಶ್ರೀಗಂಧದ ಮರ ಕಳ್ಳತನ..! ಇಲ್ಲಿನ ಅಧಿಕಾರಿಗಳ ನಿರ್ಲಕ್ಷಕ್ಕೆ ಇನ್ನೇಷ್ಟು ಬಲಿ ಬೇಕು..?
ಜೈನ ಸಮುದಾಯದ ಬೇಡಿಕೆ ಈಡೇರಿಸದಿದ್ದರೆ, ಸಲ್ಲೇಖನ ವೃತ ಕೈಗೊಳ್ಳುತ್ತೇನೆ- ಸರ್ಕಾರಕ್ಕೆ ರಾಷ್ಟ್ರಸಂತ ಗುಣಧರ ನಂದಿ ಮುನಿಗಳ ಎಚ್ಚರಿಕೆ..!
KSRTC ಬಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿ, ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಕೇಸ್, RCB ಯಿಂದ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಲಿ; ಶಾಸಕ ಹೆಬ್ಬಾರ್
ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನ ಡಿಕ್ಕಿ, ರಸ್ತೆ ಪಕ್ಕದಲ್ಲೇ ಕುಳಿತ ಗಾಯಗೊಂಡ ಚಿರತೆ, ಜನ ಹೈರಾಣು..!
ಸಚಿವ ಮಂಕಾಳು ವೈದ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಪೊಸ್ಟ್, ಇಬ್ಬರು ವಶಕ್ಕೆ..!
ಬಂಕಾಪುರದಲ್ಲಿ ಬಾಲಕಿ ಮೇಲೆ ಪ್ರಿಯಕರನ ಸ್ನೇಹಿತರೇ ಅತ್ಯಾಚಾರ ಮಾಡಿದ್ರು, ನಂತ್ರ ರಾಜೀ ಪಂಚಾಯ್ತಿ, ನಾಲ್ವರ ಬಂಧನ..!
ಉತ್ತರ ಕನ್ನಡಲ್ಲಿ ಐಟಿಐ ಪ್ರವೇಶಕ್ಕೆ ಆಫ್ಲೈನ್ ಅರ್ಜಿ ಆಹ್ವಾನ..!
ಪತ್ನಿಯ ತಲೆ ಕಡಿದುಕೊಂಡು ಪೊಲೀಸ್ ಠಾಣೆಗೆ ಬಂದ ಪತಿರಾಯ..!
ಕೃಷಿ ಉದ್ಯಮಿ ಮತ್ತು ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ..!
ಕ್ರೀಡಾಭಿಮಾನಿಗಳ ಸಾವು : ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ..!
ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಭಾರೀ ಇಳಿಕೆ : ಶನಿವಾರ 10 ಗ್ರಾಂ ಬಂಗಾರದ ಬೆಲೆ ₹1,630 ಕುಸಿತ..!
ಕರ್ನಾಟಕದಲ್ಲಿ ಜೂನ್ 10 ರಿಂದ ಮತ್ತೆ ಭಾರಿ ಮಳೆ ಮುನ್ಸೂಚನೆ ; ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ..!
ಬೆಂಗಳೂರು ಕಾಲ್ತುಳಿತ ಘಟನೆ : ವಿರಾಟ್ ಕೊಹ್ಲಿ ವಿರುದ್ದವೂ ದೂರು ದಾಖಲು ; ವರದಿ..!
ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಆರ್ಥಪೂರ್ಣವಾಗಿರಲಿ : ಜಿಲ್ಲಾಧಿಕಾರಿ.
ಶಿಗ್ಗಾವಿ ಗರುಡಾ ಹೊಟೇಲ್ ಬಳಿ ಡಿವೈಡರ್ ಮೇಲೆ ಹತ್ತಿ, ಗುಂಡಿಗೆ ಬಿದ್ದ KSRTC ಬಸ್, 10 ಜನರಿಗೆ ಗಾಯ..!
ಬಾಚಣಕಿ ಬಳ್ಳಿಗಟ್ಟಿ ಕೆರೆ ದಡದಲ್ಲಿ “ವಿಶ್ವ ಪರಿಸರ ದಿನಾಚರಣೆ”
ಜಿಲ್ಲೆಯಲ್ಲಿ ಬಕ್ರೀದ್ ಆಚರಣೆ ಶಾಂತಿಯುತ, ಸೌಹಾರ್ದಯುವಾಗಿರಲಿ; ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಜೂನಿನಲ್ಲೇ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 20ನೇ ಕಂತು; ಫಲಾನುಭವಿಗಳ ಇ-ಕೆವೈಸಿ ಕಡ್ಡಾಯ..!
ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬರ್ಬರ ಹತ್ಯೆ..! 60 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಹಂತಕರು..!
ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬೀಕರ ಹತ್ಯೆಯಾಗಿದೆ. ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ಭಕ್ತರ ಸೋಗಿನಲ್ಲಿ ಬಂದ ವ್ಯಕ್ತಿಯಿಂದ ಕೊಲೆ ನಡೆದಿದೆ. ಕಾಲಿಗೆ ಬೀಳುವ ನೆಪದಲ್ಲಿ ಬಂದ ವ್ಯಕ್ತಿ ಕಾಲಿಗೆ ಬೀಳುತ್ತಿದ್ದಂತೆ, ಮತ್ತೊಂದು ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೇವಲ 40 ಸೆಕೆಂಡ್ ನಲ್ಲೆ 60 ಬಾರಿ ಎದೆಗೆ ಚೂರಿ ಇರಿತವಾಗಿದೆ. ಹೀಗಾಗಿ, ಸ್ಥಳದಲ್ಲೇ ಚಂದ್ರಶೇಖರ ಸ್ವಾಮೀಜಿ ಮೃತಪಟ್ಟಿದ್ದಾರೆ. ಕೊಲೆಗೆ ಕಾರಣವೇನು, ಕೊಲೆಗಾರರು ಯಾರು ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಲಾಬುರಾಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂದ್ರು, ವಿ.ಎಸ್.ಪಾಟೀಲ್, ಮಾಜಿ ಶಾಸಕರ ಮನದಾಳದ ಮಾತು ಎಂಥಾದ್ದು ಗೊತ್ತಾ..?
ಮುಂಡಗೋಡ: ತಮ್ಮ ಸುಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ತಮ್ಮ ಮನದಾಳದ ನೋವು ಹಂಚಿಕೊಂಡಿರೋ ಪಾಟೀಲರು, ಮಮ್ಮಲ ಮರುಗಿದ್ದಾರೆ. ಯಾವ ತಂದೆಗೂ ಈ ಪರಿಸ್ಥಿತಿ ಬರೋದು ಬೇಡ ಅಂತ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?
ವಿ.ಎಸ್.ಪಾಟೀಲ್, ಈ ಹೆಸ್ರು ಕೇಳಿದ್ರೆ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದ್ರಲ್ಲೂ ಯಲ್ಲಾಪುರ ಕ್ಷೇತ್ರದಲ್ಲಿ ಅದೇನೋ ಒಂದು ಅಭಿಮಾನ. ಅದೇನೋ ಒಂದು ಪ್ರೀತಿ. ಅವರ ಅಪ್ಪಟ ಜವಾರಿ ಭಾಷೆಯ ಮಾತುಗಳು, ನೇರ ನುಡಿಗಳು, ನಿಷ್ಕಲ್ಮಶ ಮನಸ್ಸು ಹೀಗೆ ಅವ್ರನ್ನ ನಾನು ಇವತ್ತಿಗೂ ಒಬ್ಬ ರಾಜಕಾರಣಿ ಅಂತಾ ನೋಡಿಯೇ ಇಲ್ಲ. ಅವ್ರು ನಮ್ಮ ಮಾರ್ಗದರ್ಶಿ ಸ್ಥಾನದಲ್ಲಿ ಯಾವಾಗ್ಲೂ ಇರ್ತಾರೆ. ಹೀಗಿರೋ ಅವ್ರಿಗೆ ಇಂತಹದ್ದೊಂದು ಪರಿಸ್ಥಿತಿ ಬಂದಿದೆಯಾ..? ಆ ಮಟ್ಟಿಗಿನ ಅನಿವಾರ್ಯತೆ ಎದುರಾಗಿದೆಯಾ..? ನಿಜಕ್ಕೂ ವಿ.ಎಸ್.ಪಾಟೀಲರ ಮನಸ್ಸು ಈ ಮಟ್ಟಿಗೆ ನೋವು ಉಂಡಿದೆಯಾ..? ಛೇ ಯಾವ ತಂದೆಗೂ ಬೇಡ ಈ ಅವಸ್ಥೆ..! ನಿನ್ನೆ ರಾತ್ರಿಯಿಂದ ಬಹುತೇಕ ವಾಟ್ಸಾಪ್ ಗಳಲ್ಲಿ ಅದೊಂದು ಸಾರ್ವಜನಿಕ ಪ್ರಕಟಣೆಯ ನೋಟೀಸು ಹರಿದಾಡ್ತಿದೆ. ಮಾಜಿ ಶಾಸಕ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಲಿ ಅಧ್ಯಕ್ಷ ವಿ.ಎಸ್.ಪಾಟೀಲ್ ಲೆಟರ್ ಹೆಡ್ ನಲ್ಲೇ ಇಂತಹದ್ದೊಂದು ಪ್ರಕಟಣೆ ಹೊರಡಿಸಲಾಗಿದೆ. ತಮ್ಮ ಪುತ್ರನಿಗೆ ಯಾರೂ ನನ್ನ ಹೆಸರು ಹೇಳಿ ಬಂದ್ರೆ ಸಾಲ ಕೊಡಬೇಡಿ ಅಂತಾ ಉಲ್ಲೇಖಿಸಲಾಗಿರೋ ಪ್ರಕಟಣೆ...
ಹಳಿಯಾಳದಲ್ಲಿ 4 ನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಪ್ರತಿಭಟನೆ, ಮಳೆಯ ನಡುವೆಯೂ ಆರದ ಕಿಚ್ಚು..!
ಹಳಿಯಾಳ: ಪಟ್ಟಣದ ಪುರಸಭೆಯ ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರೋ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸುರಿಯುತ್ತಿರೋ ಮಳೆಯನ್ನು ಲೆಕ್ಕಿಸದೆ ಮುಷ್ಕರದಲ್ಲಿ ನಿರತರಾಗಿರೋ ಪೌರಕಾರ್ಮಿಕರು, ತಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಅಂತಾ ಜಿದ್ದಿಗೆ ಬಿದ್ದಿದ್ದಾರೆ. ಅನಿರ್ಧಿಷ್ಟ ಧರಣಿ ನಡೆಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಹಳಿಯಾಳ ಘಟಕದ ತಾಲೂಕಾಧ್ಯಕ್ಷ ಫಯಾಜ್ ಅಹ್ಮದ್ ಗೊರೆಖಾನ್, ಉಪಾಧ್ಯಕ್ಷೆ ಲಲಿತ ಚಲವಾದಿ, ಕಾರ್ಯದರ್ಶಿ ಮಂಜುನಾಥ್ ಮಾದಾರ, ಫ್ರಾನ್ಸಿಸ್ ಬ್ರುಗಾಂಜ, ಸುನಿಲ್ ಘೋಟ್ನೇಕರ, ಪರಶುರಾಮ್ ಚಲವಾದಿ, ಅಂಜನ ಕಲ್ಕೆಕನವರ್, ಸುವಾರ್ಥ ಮಾದಾರ, ಸರಸ್ವತಿ ಮಾದಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.
ಇಂದೂರು ಗ್ರಾಪಂ ಅಧ್ಯಕ್ಷರ ಬದಲಾವಣೆ ಪೀಕಲಾಟ, ಸಚಿವ ಹೆಬ್ಬಾರ್ ಭೇಟಿಗೆ ಹೋದ್ರು ಅಸಮಾಧಾನಿತರು..!
ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ “ರಾಜೀ”ನಾಮೆ ಕೊಡಿಸುವ ವಿಚಾರ, ಲೊಕಲ್ ಬಿಜೆಪಿಗರಿಗೆ ಭಾರೀ ಪೀಕಲಾಟ ತಂದಿಟ್ಟಿದೆ. ನಾನು ರಾಜೀನಾಮೆ ಕೊಡಲ್ಲ ಅಂತಾ ಕಡ್ಡಿಮುರಿದಂತೆ ಹೇಳಿರೋ ಅಧ್ಯಕ್ಷೆ ಅನ್ನಪೂರ್ಣಾ ಬೆಣ್ಣಿ ಮೇಡಂ, ಇಂದೂರಿನ ಬಿಜೆಪಿಗರಿಗೆ ಬಿಸಿ ತುಪ್ಪವಾಗಿದ್ದಾರಾ..? ಹೇಗಾದ್ರೂ ಸರಿ ಮಾತು ಕೊಟ್ಟಂತೆ ನಡೆದುಕೊಳ್ಳಲೇ ಬೇಕು ಅಂತಾ ಜಿದ್ದಿಗೆ ಬಿದ್ದಿರೋ ಅಸಮಾಧಾನಿತ ಇಂದೂರಿನ ಸದಸ್ಯರಿಗೆ, ಅದ್ಯಾಕೋ ಏನೋ ಅಂದುಕೊಂಡಂತೆ ಆಗುತ್ತಲೇ ಇಲ್ಲ. ಮಾತು ಬದಲಿಸಿದ್ರಾ ಉಪಾಧ್ಯಕ್ಷ..? ಅಂದಹಾಗೆ, ಅಧ್ಯಕ್ಷರ ಬದಲಾವಣೆಗೆ ಪಣತೊಟ್ಟು ನಿಂತಿರೊ ಇಂದೂರಿನ ಬಿಜೆಪಿ ಬಳಗ, ಈಗಾಗಲೇ ಸಭೆ ಮೇಲೆ ಸಭೆ ಮಾಡುತ್ತಿದೆ. ಒಟ್ಟೂ 12 ಬಿಜೆಪಿ ಬೆಂಬಲಿತರ ಸದಸ್ಯರಿರೋ ಇಂದೂರು ಗ್ರಾಮ ಪಂಚಾಯತಿಯಲ್ಲಿ ಸದ್ಯ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ, ಹಾಗೂ ಉಪಾಧ್ಯಕ್ಷ ಸಿಖಂದರ್ ಬಂಕಾಪುರ ಹೊರತುಪಡಿಸಿ ಕೇವಲ 10 ಸದಸ್ಯರ ಒಂದೆಡೆ ಇದ್ದಾರೆ. ಇದುವರೆಗೂ ನಾನು ರಾಜೀನಾಮೆ ನೀಡೋಕೆ ರೆಡಿ ಅಂತಾ ಹೇಳಿಕೊಂಡಿದ್ದ ಉಪಾಧ್ಯಕ್ಷ ಸಿಖಂದರ ಬಂಕಾಪುರ, ಈಗ ಅದ್ಯಾಕೋ ಏನೋ ಮಾತು ಬದಲಿಸಿದ್ದಾರಂತೆ. ಅಲ್ದೆ ಮೊನ್ನೆ ಸಭೆಯ ಬಳಿಕ...
ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!
ಹುಬ್ಬಳ್ಳಿ: ಕರ್ನಾಟಕ ಸೂಪರ್ ಕಾಪ್ ವಾಟ್ಸಾಪ್ ಗ್ರೂಪ್ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳ ಕಾರ್ಯಾಗಾರ ಮತ್ತು ಪ್ರಥಮ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ವಿದ್ಯಾನಗರದ ಜಿವಿಜಿ ಟೆಕ್ನಾಲಜಿ ಮತ್ತು ಇಂಜನೀಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಲವು ಬಗೆಯ ಅಪರಾಧಗಳ ಬೆನ್ನತ್ತಿ ಆರೋಪಿಗಳ ಹೆಡೆಮುರಿ ಕಟ್ಟುವ “ಸೂಪರ್ ಕಾಪ್” ಗಳಿಗೆ ಮತ್ತಷ್ಟು ಹುರಿದುಂಬಿಸುವ ಕಾರ್ಯಾಗಾರ ಇದಾಗಿದ್ದು, ಉತ್ಸುಕತೆಯಿಂದಲೇ ನೂರಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಸಿಡ್ಲಗುಂಡಿ ಬಳಿ ಲಾರಿ, ಬೊಲೆರೊ ಮದ್ಯೆ ಮುಖಾಮುಕಿ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!
ಮುಂಡಗೋಡ:ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿ ಅಪಘಾತವಾಗಿದೆ. ಅಶೋಕ ಲೈಲ್ಯಾಂಡ್ ಹಾಗೂ ಬುಲೆರೊ ವಾಹನದ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಿಡ್ಲಗುಂಡಿ, ಮೈನಳ್ಳಿ ಸಮೀಪದ ಕಿರು ಸೇತುವೆ ಬಳಿ ಘಟನೆ ನಡೆದಿದ್ದು, ಅಪಘಾತದ ಭೀಕರತೆಗೆ, ಡಿಕ್ಕಿಯ ರಭಸಕ್ಕೆ ಅಶೋಕ ಲೈಲಾಂಡ್ ಲಾರಿ ಉರುಳಿ ಬಿದ್ದಿದೆ. ಇಷ್ಟಾದ್ರೂ, ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬೊಲೆರೋ ವಾಹನದಲ್ಲಿ ಸಾಕಷ್ಟು ಜನ ಪ್ರಯಾಣಿಕರಿದ್ರು. ಆದ್ರೆ ಯಾರಿಗೂ ತೊಂದರೆಯಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಕೆಲಸ ಬಾಕಿ ಇದೆ, ಮುಗಿದ ಮೇಲೆಯೇ ರಾಜೀನಾಮೆ ಅಂದ್ರು ಇಂದೂರು ಗ್ರಾಪಂ ಅಧ್ಯಕ್ಷೆ..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ “ಇನ್ನಷ್ಟು ಪ್ರಮುಖ ಕೆಲಸಗಳಿವೆ ಅವೇಲ್ಲ ಮುಗಿಯೋವರೆಗೆ ರಾಜೀನಾಮೆ ಕೊಡಲ್ಲ” ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿರೋ ಅಧ್ಯಕ್ಷರು ಸ್ಪಷ್ಟವಾಗಿ ಉತ್ತರಿಸಿದ್ದಾರೆ. ನಮ್ಮಲ್ಲಿ ಗೊಂದಲವೇ ಇಲ್ಲ..! ಅಸಲು, ನಮ್ಮಲ್ಲಿ ಯಾವ ಗೊಂದಲವೇ ಇಲ್ಲ. ನಾವೇಲ್ಲರೂ ಒಗ್ಗಟ್ಟಾಗೇ ಇದ್ದಿವಿ. ನಂಗೆ ನಮ್ಮ ಸದಸ್ಯರೇಲ್ಲರೂ ಬೆಂಬಲ ಕೊಟ್ಟಿದ್ದಾರೆ. ಆದ್ರೆ, ಕೋವಿಡ್ ಕಾರಣಕ್ಕಾಗಿ ಸಾಕಷ್ಟು ಅಭಿವೃದ್ಧಿಪರ ಕೆಲಸಗಳು ಬಾಕಿ ಉಳಿದಿವೆ. ಅವನ್ನೇಲ್ಲ ಪೂರೈಸಿದ ನಂತರ ನಾನು ರಾಜೀನಾಮೆ ನೀಡುತ್ತೇನೆ ಅಂದಿದ್ದಾರೆ ಅಧ್ಯಕ್ಷರು. ನಮ್ಮ ಭೂಮಿ, ನಮ್ಮ ತೋಟ..! ಇನ್ನು, ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಮ್ಮ ಭೂಮಿ, ನಮ್ಮ ತೋಟ ಯೋಜನೆಯಡಿ ಸಾಕಷ್ಟು ಫಲಾನುಭವಿಗಳಿದ್ದಾರೆ. ಆದ್ರೆ ಅದೇಷ್ಟೋ ವರ್ಷಗಳಿಂದ ಆ ಯೋಜನೆಯಡಿ ಭೂಮಿ ಹಂಚಿಕೆಯಾಗೇ ಇಲ್ಲ. ಯೋಜನೆಯ ಅನುಷ್ಠಾನದಲ್ಲಿ ಸಾಕಷ್ಟು ಎಡರು ತೊಡರು ಬಂದಿದ್ದವು. ಹೀಗಾಗಿ,...
ಇಂದೂರು ಬಳಿ ಸ್ಕೂಟಿಗೆ ಅಡ್ಡ ಬಂದ ಎಮ್ಮೆ; ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ನಂದಿಕಟ್ಟಾ ಯುವಕ..!
ಮುಂಡಗೋಡ : ತಾಲೂಕಿನ ಇಂದೂರು ಬಳಿ ಅಪಘಾತವಾಗಿದೆ. ಎಮ್ಮೆ ಅಡ್ಡ ಬಂದ ಪರಿಣಾಮ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಯುವಕ ಗಂಭೀರ ಗಾಯಗೊಂಡಿದ್ದಾನೆ. ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕ ಗಂಭೀರ ಗಾಯಗೊಂಡಿದ್ದಾನೆ. ಯುವಕನ ಹೆಸರು ಇನ್ನು ತಿಳಿದು ಬಂದಿಲ್ಲ. ಗಂಭೀರ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.