ಹಳಿಯಾಳ: ಪಟ್ಟಣದ ಪುರಸಭೆಯ ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರೋ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಸುರಿಯುತ್ತಿರೋ ಮಳೆಯನ್ನು ಲೆಕ್ಕಿಸದೆ ಮುಷ್ಕರದಲ್ಲಿ ನಿರತರಾಗಿರೋ ಪೌರಕಾರ್ಮಿಕರು, ತಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಅಂತಾ ಜಿದ್ದಿಗೆ ಬಿದ್ದಿದ್ದಾರೆ. ಅನಿರ್ಧಿಷ್ಟ ಧರಣಿ ನಡೆಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಹಳಿಯಾಳ ಘಟಕದ ತಾಲೂಕಾಧ್ಯಕ್ಷ ಫಯಾಜ್ ಅಹ್ಮದ್ ಗೊರೆಖಾನ್, ಉಪಾಧ್ಯಕ್ಷೆ ಲಲಿತ ಚಲವಾದಿ, ಕಾರ್ಯದರ್ಶಿ ಮಂಜುನಾಥ್ ಮಾದಾರ, ಫ್ರಾನ್ಸಿಸ್ ಬ್ರುಗಾಂಜ, ಸುನಿಲ್ ಘೋಟ್ನೇಕರ, ಪರಶುರಾಮ್ ಚಲವಾದಿ, ಅಂಜನ ಕಲ್ಕೆಕನವರ್, ಸುವಾರ್ಥ ಮಾದಾರ, ಸರಸ್ವತಿ ಮಾದಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

error: Content is protected !!