Home Public First Newz

Author: Public First Newz (Public First Newz)

Post
ಕಾರವಾರ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ವೈಮಾನಿಕ ವೀಕ್ಷಣೆ..!

ಕಾರವಾರ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ವೈಮಾನಿಕ ವೀಕ್ಷಣೆ..!

ಕಾರವಾರ: ಭಾರತೀಯ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಯೋಜನೆಯ ಬಗ್ಗೆ ಪರಿವಿಕ್ಷಣೆ ಮಾಡಿದ್ದಾರೆ. ಗೋವಾ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಕಾರವಾರದ ಅರಗಾದಲ್ಲಿರುವ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಆಗಮಿಸಿದರು. ವೆಸ್ಟರ್ನ್ ನೇವಲ್ ಕಮಾಂಡ್ ಫ್ಲಾಗ್ ಆಫೀಸರ್ ಆಗಿರುವ ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್...

Post
ಇದು ಟಿಬೇಟಿಯನ್ ಕಾಲೋನಿಯಲ್ಲಿ  ಕಂಡ ಅದ್ಭುತ ದೃಷ್ಯ..! ನೋಡಿದ್ರೆ ಮೈ ಜುಮ್ ಅನ್ನತ್ತೆ..!!

ಇದು ಟಿಬೇಟಿಯನ್ ಕಾಲೋನಿಯಲ್ಲಿ ಕಂಡ ಅದ್ಭುತ ದೃಷ್ಯ..! ನೋಡಿದ್ರೆ ಮೈ ಜುಮ್ ಅನ್ನತ್ತೆ..!!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.6 ರಲ್ಲಿ ಇವತ್ತು ಒಂದು ಅದ್ಭುತ ನಡೆದಿದೆ. ಕಾಳಿಂಗ ಸರ್ಪವೊಂದು ಗಿಡದ ಮೇಲೇರಿ ಹೆಡೆ ಎತ್ತಿ ಸ್ವಚ್ಚಂದವಾಗಿ ಆಟವಾಡಿದೆ. ಯಸ್, ಇದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಕಂಡು ಬಂದ ಅದ್ಭುತ ದೃಷ್ಯ. ಹೇಗಿದೆ ಅಂತಾ ಈ ವಿಡಿಯೋ ನೋಡಿ..  

Post
ಮನೆ ಮೇಲ್ಚಾವಣಿ ಕುಸಿದು ಕಾರ್ಮಿಕ ಸಾವು: ಮತ್ತೋರ್ವ ಗಂಭೀರ..!

ಮನೆ ಮೇಲ್ಚಾವಣಿ ಕುಸಿದು ಕಾರ್ಮಿಕ ಸಾವು: ಮತ್ತೋರ್ವ ಗಂಭೀರ..!

ಕಾರವಾರ: ಮನೆ ಮೇಲ್ಚಾವಣಿ ಕುಸಿದು ಒರ್ವ ಕಾರ್ಮಿಕ ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯವಾದ ಘಟನೆ, ಕಾರವಾರ ತಾಲೂಕಿನ ಸದಾಶಿವಗಡದಲ್ಲಿ ನಡೆದಿದೆ. ಹುಚ್ಚಪ್ಪ ಸಂಗಪ್ಪ(35) ಮೃತ ಕೂಲಿ ಕಾರ್ಮಿಕನಾಗಿದ್ದಾನೆ. ಗಾಯಗೊಂಡ ಮತ್ತೋರ್ವ ಕಾರ್ಮಿಕನನ್ನ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಹಳೆಯ ಮನೆಯನ್ನ ರಿನಿವೇಶನ್ ಮಾಡುವ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ ಇಬ್ಬರೂ ಕಾರ್ಮಿಕರ ಮೇಲೆ ಗೋಡೆ ಕುಸಿದು ಬಿದ್ದಿದೆ. ಗೋಡೆಯಡಿ ಸಿಲುಕಿ ಹುಚ್ಚಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು, ಗೋಡೆಯಡಿ ಸಿಲುಕಿದ್ದವರನ್ನ ಅಗ್ನಿಶಾಮಕದಳದ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಚಿತ್ತಾಕುಲ...

Post
ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 8 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿವೆ. ಸದ್ಯ ತಾಲೂಕಿನಲ್ಲಿ ಒಟ್ಟೂ 88 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 52 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಯಾವುದೇ ಸೋಂಕಿತರು ಇಂದು ಗುಣಮುಖರಾಗಿಲ್ಲ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ

Post
ದೇಶಪಾಂಡೆ ರುಡ್ ಸೆಟಿಯಿಂದ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ..!

ದೇಶಪಾಂಡೆ ರುಡ್ ಸೆಟಿಯಿಂದ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ..!

ಮುಂಡಗೋಡ: ದೇಶಪಾಂಡೆ ರುಡ್ ಸೆಟಿ ಸಂಸ್ಥೆಯ ಮುಖಾಂತರ ಇಂದು ತಾಲೂಕಿನ ಇಂದೂರ ಗ್ರಾಮದಲ್ಲಿ ಇಂದೂರು, ನಂದಿಕಟ್ಟಾ ಹಾಗೂ ಹುನಗುಂದ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮರಾಜ ನಡಿಗೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪ್ರವೈಜರ್ ಫಾತಿಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಇಮ್ರಾನ್ ಖಾನ್ ಬಾಳಿಕಾಯಿ, ರಾಜು ಹರಿಜನ, ಸಂಸ್ಥೆಯ ಸುಪ್ರವೈಜರ್ ಈರಯ್ಯ ಸ್ವಾಮಿ ಸೇರಿದಂತೆ...

Post
ಮುಂಡಗೋಡ ಮಹಿಳಾ ಮೋರ್ಚಾದಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ..!

ಮುಂಡಗೋಡ ಮಹಿಳಾ ಮೋರ್ಚಾದಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಬಿಜೆಪಿ ಮಹಿಳಾ ಮೋರ್ಚಾ ಮಂಡಲ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ 68 ನೇ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶೋಕ ಚಲವಾದಿ, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜೀವನ, ಸಾಧನೆಗಳ ಕುರಿತು ಮಾತನಾಡಿದ್ರು. ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ವೀಣಾ ಓಸಿಮಠ್, ತಾಲೂಕಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲೈಸಾ ಥಾಮಸ್, ಮಹಿಳಾ ಮೋರ್ಚಾ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಾಲತಿ...

Post
ಮುಂಡಗೋಡ ಠಾಣೆಯ 7 ಪೊಲೀಸರ ವರ್ಗಾವಣೆ: ಸನ್ಮಾನಿಸಿ ಬಿಳ್ಕೋಡುಗೆ..!

ಮುಂಡಗೋಡ ಠಾಣೆಯ 7 ಪೊಲೀಸರ ವರ್ಗಾವಣೆ: ಸನ್ಮಾನಿಸಿ ಬಿಳ್ಕೋಡುಗೆ..!

ಮುಂಡಗೋಡ: ಓರ್ವ ಎಎಸ್ಐ ಸೇರಿದಂತೆ ಒಟ್ಟು 7 ಜನ ಪೊಲೀಸರಿಗೆ ಮುಂಡಗೋಡ ಪೊಲೀಸ್ ಠಾಣೆಯಿಂದ ವರ್ಗಾವಣೆಯಾಗಿದೆ. ಎಎಸ್ಐ ಅಶೋಕ ರಾಠೋಡ್, ಖೀರು ಘಟಕಾಂಬಳೆ, ರಾಘೂ ನಾಯ್ಕ್, ಭಗವಾನ್ ಗಾಂವಕರ್, ಕುಮಾರ್ ಬಣಕಾರ್, ಗುರು ನಾಯಕ ಹಾಗೂ ಮಹಿಳಾ ಪೇದೆ ಪೂಜಾ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಮುಂಡಗೋಡ ಠಾಣೆಯಲ್ಲಿ ವರ್ಗಾವಣೆಗೊಂಡ ಪೊಲೀಸರಿಗೆ ಬಿಳ್ಕೋಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿಪಿಐ ಪ್ರಭುಗೌಡ ಕಿರೇದಳ್ಳಿ, ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ್, ಪಿಎಸ್ಐ ಬಸವರಾಜ್ ಮಬೆನೂರು ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

Post
ಉತ್ತರ ಕನ್ನಡದಲ್ಲಿ ಮಕ್ಕಳಿಗೂ ಬಿಡ್ತಿಲ್ಲ ಮಹಾಮಾರಿ..! ಪೋಷಕರೇ, 3 ನೇ ಅಲೆಯಲ್ಲಿ ಮಕ್ಕಳ ಬಗ್ಗೆ ಇರಲಿ ಕಾಳಜಿ..!!

ಉತ್ತರ ಕನ್ನಡದಲ್ಲಿ ಮಕ್ಕಳಿಗೂ ಬಿಡ್ತಿಲ್ಲ ಮಹಾಮಾರಿ..! ಪೋಷಕರೇ, 3 ನೇ ಅಲೆಯಲ್ಲಿ ಮಕ್ಕಳ ಬಗ್ಗೆ ಇರಲಿ ಕಾಳಜಿ..!!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲೂ ಕೊರೋನಾ 3 ನೇ ಅಲೆಯ ಭೀತಿ ಶುರುವಾಗಿದೆ. ಕೊರೋನಾ ಸೋಂಕು ಇಷ್ಟು ದಿನ ವಯಸ್ಕರಿಗೆ, ವೃದ್ಧರಿಗಷ್ಟೇ ಅನ್ನುವಂತಿತ್ತು, ಆದ್ರೆ ಇದೀಗ ಮಕ್ಕಳಲ್ಲೂ ಹೆಚ್ಚಿನ ಸೋಂಕು ಕಾಡತೊಡಗಿದ್ದು ಜಿಲ್ಲೆಯಲ್ಲಿ ಈ ವರೆಗೆ 5338 ಮಕ್ಕಳಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಯಾವ ತಾಲೂಕಲ್ಲಿ ಎಷ್ಟು..? ಜಿಲ್ಲೆಯಲ್ಲಿ ಮಕ್ಕಳಲ್ಲಿ ಈ ವರೆಗೆ ಕಾರವಾರ-387, ಅಂಕೋಲ- 319, ಕುಮಟಾ-511, ಭಟ್ಕಳ- 338, ಹಳಿಯಾಳ- 728, ಜೋಯಿಡಾ- 296, ಹೊನ್ನಾವರ- 568, ಮುಂಡಗೋಡು- 491, ಸಿದ್ದಾಪುರ-498, ಶಿರಸಿ-681,ಯಲ್ಲಾಪುರ- 527 ಪಾಸಿಟಿವ್...

Post
ಗಂಡ ಗುಳೇ ಹೋಗಿದ್ದ, ಪ್ರಿಯಕರನೊಂದಿಗೆ ಸೇರಿ ಹೆಂಡತಿ ಮಾಡಿಕೊಂಡಿದ್ದೇನು ಗೊತ್ತಾ..? ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ..!

ಗಂಡ ಗುಳೇ ಹೋಗಿದ್ದ, ಪ್ರಿಯಕರನೊಂದಿಗೆ ಸೇರಿ ಹೆಂಡತಿ ಮಾಡಿಕೊಂಡಿದ್ದೇನು ಗೊತ್ತಾ..? ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ..!

ಮುದ್ದೇಬಿಹಾಳ: ಆಕೆಯ ವಯಸ್ಸು ಈಗಿನ್ನೂ 36, ಮದುವೆಯಾಗಿ 3 ಮಕ್ಕಳಿದ್ದಾರೆ, ಮತ್ತವನಿಗೆ 40 ವರ್ಷ ವಯಸ್ಸು ಆತನಿಗೂ ಮದುವೆಯಾಗಿ ಬರೋಬ್ಬರಿ 6 ಮಕ್ಕಳಿಗೆ ತಂದೆಯಾಗಿದ್ದಾನೆ. ಹೀಗಿದ್ರೂ ಇವರ ಕಳ್ಳಾಟ ಮಾತ್ರ ಕಡಿಮೆಯಾಗಿರಲಿಲ್ಲ. ಆದ್ರೆ ಅವ್ರ ಕಳ್ಳಾಟ ಅನ್ನೋದು ಇವತ್ತು ನಡೆಯಬಾರದ ಘಟನೆಗೆ ಸಾಕ್ಷಿಯಾಗಿದೆ. ಎಂದೂ ಕೇಳರಿಯದ ಅಮಾನವೀಯ, ಮನಕಲುಕುವ ಘಟನೆ ನಡೆದುಹೋಗಿದೆ. ಆಕೆಯ ಹೆಸ್ರು ರೇಣುಕಾ.. ಅಂದಹಾಗೆ ಆಕೆಯ ಹೆಸ್ರು ರೇಣುಕಾ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರು ಗ್ರಾಮದವಳು. ಮೂರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ...

Post
ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ, ಪ್ರೇಮ, ಪ್ರಣಯ; ನಂತರ ನಡೆದದ್ದು ದುರಂತ ಅಂತ್ಯ..! ಬೆಚ್ಚಿ ಬೀಳಿಸುತ್ತಿದೆ ಪ್ರೇಮಿಗಳ ಡಬಲ್ ಮರ್ಡರ್..!

ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ, ಪ್ರೇಮ, ಪ್ರಣಯ; ನಂತರ ನಡೆದದ್ದು ದುರಂತ ಅಂತ್ಯ..! ಬೆಚ್ಚಿ ಬೀಳಿಸುತ್ತಿದೆ ಪ್ರೇಮಿಗಳ ಡಬಲ್ ಮರ್ಡರ್..!

ದೇವರಹಿಪ್ಪರಗಿ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೀತಾ..? ಇಂತಹದ್ದೊಂದು ಪ್ರಶ್ನೆ ಇವತ್ತು ಮಂಗಳವಾರ ಮದ್ಯಾಹ್ನ ನಡೆದಿರೋ ಭೀಕರ ಘಟನೆ ನೋಡಿದ್ರೆ ಎಂಥವರಿಗೂ ಅನ್ನಿಸದೇ ಇರಲ್ಲ. ಹೌದು, ಸಮಾನತೆ ಸಂದೇಶ ಸಾರಿದ ವಿಶ್ವಗುರು ಬಸವಣ್ಣನ ನಾಡಿನಲ್ಲಿ ಘನಘೋರ ಘಟನೆ ನಡೆದಿದೆ. ಅಪ್ರಾಪ್ತ ಯುವಕ ಹಾಗೂ ಅಪ್ರಾಪ್ತೆಯಾಗಿದ್ದ ಪ್ರೇಮಿಗಳಿಬ್ಬರ ಭೀಕರ ಡಬಲ್‌ ಮರ್ಡರ್ ನಡೆದಿದೆ. ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಘಟನೆ ನಡೆದಿದ್ದು ಬೆಚ್ಚಿ ಬೀಳಿಸಿದೆ. ಇಬ್ಬರೂ ಅಪ್ರಾಪ್ತರೇ..? ಸಲಾದಹಳ್ಳಿ ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ(19)...

error: Content is protected !!