ದೇವರಹಿಪ್ಪರಗಿ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೀತಾ..? ಇಂತಹದ್ದೊಂದು ಪ್ರಶ್ನೆ ಇವತ್ತು ಮಂಗಳವಾರ ಮದ್ಯಾಹ್ನ ನಡೆದಿರೋ ಭೀಕರ ಘಟನೆ ನೋಡಿದ್ರೆ ಎಂಥವರಿಗೂ ಅನ್ನಿಸದೇ ಇರಲ್ಲ.

ಹೌದು, ಸಮಾನತೆ ಸಂದೇಶ ಸಾರಿದ ವಿಶ್ವಗುರು ಬಸವಣ್ಣನ ನಾಡಿನಲ್ಲಿ ಘನಘೋರ ಘಟನೆ ನಡೆದಿದೆ.
ಅಪ್ರಾಪ್ತ ಯುವಕ ಹಾಗೂ ಅಪ್ರಾಪ್ತೆಯಾಗಿದ್ದ ಪ್ರೇಮಿಗಳಿಬ್ಬರ ಭೀಕರ ಡಬಲ್‌ ಮರ್ಡರ್ ನಡೆದಿದೆ. ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಘಟನೆ ನಡೆದಿದ್ದು ಬೆಚ್ಚಿ ಬೀಳಿಸಿದೆ.

ಇಬ್ಬರೂ ಅಪ್ರಾಪ್ತರೇ..?
ಸಲಾದಹಳ್ಳಿ ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ(19) ಹಾಗೂ ಪಕ್ಕದ ಖಾನಾಪುರ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯ ಕೊಲೆ ನಡೆದಿದೆ.

ಕೊಲೆಯಾದ ಬಸವರಾಜ್

ಬಸವರಾಜ ಹಾಗೂ ಅಪ್ರಾಪ್ತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ರು. ಸಲಾದಹಳ್ಳಿ ಹಾಗೂ ಖಾನಾಪುರ ಅಕ್ಕಪಕ್ಕದ ಗ್ರಾಮಗಳು, ಹೀಗಾಗಿ ಇಬ್ಬರಿಗೂ ಪರಿಚಯವಾಗಿತ್ತು.
ಇಬ್ಬರೂ ಅನ್ಯ ಕೋಮಿನವರಾಗಿದ್ದರಿಂದ ಅಪ್ರಾಪ್ತೆ ಮನೆಯಲ್ಲಿ ವಿರೋಧವಿತ್ತು. ಇಂದು ಮದ್ಯಾಹ್ನ ಇಬ್ಬರೂ ಪ್ರೀತಿ ಪ್ರೇಮದ ಸಲ್ಲಾಪಕ್ಕೆ ಸೇರಿದ್ದ ಸಮಯದಲ್ಲೆ ಬಾಲಕಿಯ ತಂದೆ ನೋಡಿದ್ದಾನೆ.

ಮರ್ಯಾದಾ ಹತ್ಯೆಯಾ..?
ಅನ್ಯ ಕೋಮಿನ ಯುವಕನೊಂದಿಗೆ ಮಗಳು ಇರುವುದನ್ನು ಕಂಡು ಕೆಂಡಾಮಂಡಲವಾದ ತಂದೆಯಿಂದಲೇ ಬರ್ಬರ ಹತ್ಯೆ ನಡೀತಾ ಎನ್ನುವ ಅನುಮಾನ ಶುರುವಾಗಿದೆ‌.

ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಲಕೇರಿ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೇ ಸತ್ಯ ಹೊರಬರಬೇಕಿದೆ.

error: Content is protected !!