ಸಾಲಗಾಂವ್ ಕೆರೆಯ ದಂಡೆಯ ನೀರಿನಲ್ಲಿ ಬಿದ್ದು ವೃದ್ಧ ಸಾವು; ಸಂಶಯವೇ ಇಲ್ಲ ಅಂದ ಮಗ

ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮದ ಕೆರೆಯ ದಂಡೆಯ ನೀರಿನಲ್ಲಿ ಬಿದ್ದು ಜೋಗೇಶ್ವರ ಹಳ್ಳದ ವೃದ್ಧನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
​ಜೋಗೇಶ್ವರಹಳ್ಳದ ನಿವಾಸಿ ಮುರುಗಯ್ಯ ಚನ್ನವೀರಯ್ಯ ಹಿರೇಮಠ (63) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಮಗ ಹೇಳೋ ಪ್ರಕಾರ ಏನಾಯ್ತು..?
​ಮೃತರ ಮಗನಾದ ನಾಗರಾಜ ಮುರುಗಯ್ಯ ಹಿರೇಮಠ (30) ಅವರು ಮುಂಡಗೋಡ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಅವರ ತಂದೆ ಮುರುಗಯ್ಯನವರು ದಿನಾಂಕ 04/07/2026 ರಂದು ರಾತ್ರಿ 09:00 ಗಂಟೆಗೆ ಮನೆಯ ಹಿತ್ತಲಿನಲ್ಲಿ ಮಲಗಿಕೊಂಡಿದ್ದರು. ಆದರೆ, ದಿನಾಂಕ 05/07/2026 ರ ಸಾಯಂಕಾಲ 06:00 ಗಂಟೆಯ ನಡುವಿನ ಸಮಯದಲ್ಲಿ ಅವರು ಸಾಲಗಾಂವ ಗ್ರಾಮದ ಸಾಲಗಾಂವ ಕೆರೆಯ ದಂಡೆಯ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರಂತೆ.

ಯಾವುದೇ ಸಂಶಯವಿಲ್ಲ ಎಂದ ಮಗ..!
​ತಮ್ಮ ತಂದೆಯ ಮರಣದಲ್ಲಿ ಯಾವುದೇ ರೀತಿಯ ಸಂಶಯವಿರುವುದಿಲ್ಲ ಎಂದು ಮಗ ನಾಗರಾಜ ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಮೃತರ ದೇಹವನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮುಂದಿನ ತನಿಖೆಗಾಗಿ ಪೊಲೀಸರಿಗೆ ವಿನಂತಿ ಮಾಡಿಕೊಳ್ಳಲಾಗಿದೆ.

​ಈ ಘಟನೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.