RCB Fan Death: ಬೆಳಗಾವಿ: ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಐಪಿಎಲ್-2025 ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಆರ್ಸಿಬಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಫೈನಲ್ ಮ್ಯಾಚ್ ಮುಗಿದ ಬಳಿಕ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡುವಾಗಲೇ ಈ ದುರಂತ ಸಂಭವಿಸಿದೆ. ಆರ್ಸಿಬಿ ಅಭಿಮಾನಿ ಮಂಜುನಾಥ್ ಈರಪ್ಪ ಕುಂಬಾರ (25) ಮೃತಪಟ್ಟವರು. ಇದನ್ನೂ ಓದಿ👉 ತಮ್ಮ ಮಗನನ್ನೇ ಕಚ್ಚಿ ಕೊಂದಿದ್ದ ವಿಷ ಸರ್ಪವನ್ನು ಜೋಪಾನವಾಗಿ ಹಿಡಿದು ಕಾಡಿಗೆ ಬಿಟ್ಟ ಕುಟುಂಬ..! ಅವರಾದಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಲೇ ಅವರು ಕುಸಿದು ಬಿದ್ದರು. ಕೂಡಲೇ ಗೆಳೆಯರೆಲ್ಲಾ ಸೇರಿ ಸಮೀಪದ ಮಹಾಲಿಂಗಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರೊಳಗೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಂಜುನಾಥ್ಗೆ ಕ್ರಿಕೆಟ್ ಕ್ರೇಜ್ ಬಹಳಷ್ಟಿತ್ತು. ಆರ್ಸಿಬಿ ಎಂದರೆ ಹುಚ್ಚು ಅಭಿಮಾನ. ಫೈನಲ್ ಪಂದ್ಯ...
Top Stories
ತಮ್ಮ ಮಗನನ್ನೇ ಕಚ್ಚಿ ಕೊಂದಿದ್ದ ವಿಷ ಸರ್ಪವನ್ನು ಜೋಪಾನವಾಗಿ ಹಿಡಿದು ಕಾಡಿಗೆ ಬಿಟ್ಟ ಕುಟುಂಬ..!
ಹೆಬ್ಬಾರ್ ಜನ್ಮದಿನ: ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಕೈ ಕಾರ್ಯಕರ್ತರು..!
ಶಿರಸಿ-ಕುಮಟಾ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ..!
ITR ಫೈಲಿಂಗ್ ವೇಳೆ ಈ 7 ತಪ್ಪುಗಳಾಗದಂತೆ ಎಚ್ಚರವಹಿಸಿ; ತಪ್ಪಿದರೆ ಐಟಿ ನೋಟಿಸ್ ಬರಬಹುದು..!
ಹುಲಿಹೊಂಡದ ಈ ಹುಡುಗನ ಸಾವು ನ್ಯಾಯವೇ..? ಟ್ರಾಕ್ಟರ್ ದುರಂತದಲ್ಲಿ ಮಡಿದ ಸತೀಶನಿಗೆ ಕಣ್ಣೀರಿನ ಶೃದ್ಧಾಂಜಲಿ..!
ಹಳೆ ಪಿಂಚಣಿ ಯೋಜನೆ ಬೇಕೆನ್ನುವ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ; ರಾಜ್ಯ ಸರ್ಕಾರದಿಂದ ಒಪಿಎಸ್ ಪ್ರಸ್ತಾವನೆ ಪರಿಶೀಲನೆಗೆ 3 ತಂಡ ರಚನೆ..!
ಚಿನ್ನದ ಬೆಲೆ ಸತತ 2ನೇ ದಿನ ಏರಿಕೆ : ಮಂಗಳವಾರ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ..?
ಗತವೈಭವಕ್ಕೆ ಮರಳುತ್ತಿದೆ ಅನಿಲ್ ಅಂಬಾನಿ ಷೇರು; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ರಿಲಯನ್ಸ್ ಪವರ್ ಸ್ಟಾಕ್..!
ಬಿಜೆಪಿ ಮುಖಂಡ ಅರುಣಕುಮಾರ ಪುತ್ತಿಲಗೆ ಗಡಿಪಾರು ನೋಟಿಸ್..!
ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು..!
ಸ್ಥಿರಗೊಂಡಿದ್ದ ಚಿನ್ನದ ಬೆಲೆ ದಿಢೀರ್ ಜಿಗಿತ : ಸೋಮವಾರ 10 ಗ್ರಾಂ ಬಂಗಾರದ ಬೆಲೆ ₹330 ಏರಿಕೆ..!
ಪ್ರಥಮ ಬಿ.ವಿ.ಎ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ..!
ಎಐ ಕಲಿಯದಿದ್ದರೆ ಇನ್ನು ಮುಂದೆ ಕೆಲಸ ಸಿಗಲ್ಲ, ಎಚ್ಚರ..!
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ..!
ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಣೆ ಅರ್ಜಿ ಆಹ್ವಾನ..!
ಕಾವೇರಿ ನೀರು ಕಳ್ಳತನ ಪತ್ತೆಗೆ ಬ್ಲೂ ಪೋರ್ಸ್ ಎಂಬ ಪಡೆ ನೇಮಕ..!
2025ರ ವಿಶ್ವ ಸುಂದರಿ ಪ್ರಶಸ್ತಿ ಗೆದ್ದ ಥೈಲ್ಯಾಂಡ್ ನ ಓಪಲ್ ಸುಚಾಟಾ..!
ಭಾರತದಲ್ಲಿ 3,000 ದಾಟಿದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ; ಒಂದೇ ದಿನದಲ್ಲಿ 685 ಹೊಸ ಸೋಂಕುಗಳು ದಾಖಲು..!
ಮುಂಡಗೋಡ ಸೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ, ಪ್ರಥಮ PUC ದಾಖಲಾತಿ: ಮತ್ತೆ ಅರ್ಜಿ ಆಹ್ವಾನ..!
ತಮ್ಮ ಮಗನನ್ನೇ ಕಚ್ಚಿ ಕೊಂದಿದ್ದ ವಿಷ ಸರ್ಪವನ್ನು ಜೋಪಾನವಾಗಿ ಹಿಡಿದು ಕಾಡಿಗೆ ಬಿಟ್ಟ ಕುಟುಂಬ..!
Chikkodi Snake News: ಚಿಕ್ಕೋಡಿ: ತಮ್ಮ ಕುಟುಂಬದ ಕುಡಿ, ತಮ್ಮ ಕಂದಮ್ಮನನ್ನು ಕಚ್ಚಿಕೊಂದ ಹಾವನ್ನು ಮೂರು ದಿನದ ಬಳಿಕ ಸೆರೆ ಹಿಡಿದು ಕುಟುಂಬಸ್ಥರು ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಕಳೆದ ಮೇ ತಿಂಗಳ 31 ರಂದು ಅಮೀತ ಗುರುಲಿಂಗ ಸಿಂಧೂರ (10) ಮಧ್ಯಾಹ್ನ ಹಾವು ಕಚ್ಚಿ ಮೃತಪಟ್ಟಿದ್ದ. ಬಾಲಕನನ್ನು ಕಳೆದುಕೊಂಡ ಕುಟುಂಬದವರು ಹಾವನ್ನು ಹುಡುಕಿ ಅದನ್ನು ಹೊಡೆದು ಸಾಯಿಸದೆ ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉದಾರತೆ ಮೆರೆದಿದ್ದಾರೆ. ಅಷ್ಟಕ್ಕೂ ನಡೆದದ್ದೇನು..? ಮೇ 31ರ ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೊಡುತ್ತಾ ಮಲಗಿದ್ದ ಅಮೀತ ನಿದ್ದೆಗೆ ಜಾರಿದ್ದ. ಮನೆ ಒಳಗೆ ಬಂದ ಹಾವು ಬಾಲಕನ ಕೈಗೆ ಕಚ್ಚಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. ಹಾವು ಮಾತ್ರ ಅದೇ ಸ್ಥಳದಲ್ಲಿ ಮನೆಯ ಪರಸಿ ಕೆಳಗೆ ಅವಿತಿತ್ತು. ಮೂರು ದಿನಗಳಿಂದ ಆ ಹಾವು ಒಂದೇ ಸ್ಥಳದಲ್ಲಿ ಇರುವುದರಿಂದ ಗಮನಿಸಿದ ಬಾಲಕನ...
ಹೆಬ್ಬಾರ್ ಜನ್ಮದಿನ: ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಕೈ ಕಾರ್ಯಕರ್ತರು..!
Hebbar Birthday: ಮುಂಡಗೋಡ: ಶಾಸಕ ಶಿವರಾಮ್ ಹೆಬ್ಬಾರ್ ರವರ 68 ನೇ ಹುಟ್ಟುಹಬ್ಬದ ಅಂಗವಾಗಿ, ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ತಾಲೂಕಾ ಕಾಂಗ್ರೆಸ್ ನ ಕಾರ್ಯಕರ್ತರು ಶಾಸಕರ ಹುಟ್ಟುಹಬ್ಬಕ್ಕೆ ಈ ಮೂಲಕ ಶುಭಕೋರಿದರು. ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ನೇತೃತ್ವದಲ್ಲಿ, ಹಿರಿಯ ಮುಖಂಡರಾದ ರವಿಗೌಡ ಪಾಟೀಲ್, ದೇವು ಪಾಟೀಲ್, ಧರ್ಮರಾಜ್ ನಡಗೇರಿ, ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ, ಅಹ್ಮದ್ ರಜಾ, ನಂದಿಗಟ್ಟಾ ಗ್ರಾಪಂ ಅಧ್ಯಕ್ಷ ಸಂತೋಷ ಭೋಸಲೆ, ಹುನಗುಂದ ಗ್ರಾಪಂ ಅಧ್ಯಕ್ಷ ಷರೀಪಸಿಂಗ್ ಸಿಗ್ಗಟ್ಟಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ.ಭುಜಂಗಿ, ರಾಜು ಗುಬ್ಬಕ್ಕನವರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.
ಶಿರಸಿ-ಕುಮಟಾ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ..!
Sirsi-Kumta Road Open: ಕುಮಟಾ : ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬೆಣ್ಣೆ ಹೊಳೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮಾಡಿದ್ದ ರಸ್ತೆಯು ಮಳೆಯ ನೀರಿಗೆ ಕೊಚ್ಚಿ ಹೋಗಿದ್ದರಿಂದ ಸಂಪೂರ್ಣ ಬಂದ್ ಆಗಿದ್ದ ಸಂಚಾರ, ಪುನರ್ ಆರಂಭವಾಗಿದೆ. ಶಿರಸಿ-ಕುಮಟಾ ರಸ್ತೆಯಲ್ಲಿ ಬೆಣ್ಣೆ ಹಳ್ಳ ಬ್ರಿಜ್ ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿ ತಾತ್ಕಾಲಿಕ ಸಂಚಾರ ವ್ಯವಸ್ಥೆಗಾಗಿ ಕಲ್ಪಿಸಿದ್ದ ಪರ್ಯಾಯ ರಸ್ತೆಯ ಮೇಲೆ “ಬೆಣ್ಣೆ ಹೊಳೆ”ಯ ನೀರು ಹರಿದಿದ್ದ ಹಿನ್ನೆಲೆಯಲ್ಲಿ ಶಿರಸಿ ಕುಮಟಾ ರಸ್ತೆಯಲ್ಲಿ ಬ್ಯಾರೀಕೆಡ್ ಅಳವಡಿಸಿ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ತಾತ್ಕಾಲಿಕ ವಾಗಿ ನಿಷೇಧಿಸಲಾಗಿತ್ತು. ಇದನ್ನೂ ಓದಿ👉ಹುಲಿಹೊಂಡದ ಈ ಹುಡುಗನ ಸಾವು ನ್ಯಾಯವೇ..? ಟ್ರಾಕ್ಟರ್ ದುರಂತದಲ್ಲಿ ಮಡಿದ ಸತೀಶನಿಗೆ ಕಣ್ಣೀರಿನ ಶೃದ್ಧಾಂಜಲಿ..! ಸದ್ಯ, ತಾತ್ಕಾಲಿಕ ರಸ್ತೆ ದುರಸ್ಥಿ ಆದ ಹಿನ್ನೆಲೆಯಲ್ಲಿ ಹಾಗೂ ಮಳೆಯ ಪ್ರಮಾಣ ತಗ್ಗಿರೊ ಹಿನ್ನೆಲೆಯಲ್ಲಿ, ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ITR ಫೈಲಿಂಗ್ ವೇಳೆ ಈ 7 ತಪ್ಪುಗಳಾಗದಂತೆ ಎಚ್ಚರವಹಿಸಿ; ತಪ್ಪಿದರೆ ಐಟಿ ನೋಟಿಸ್ ಬರಬಹುದು..!
ITR Filling Mistakes: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವುದೆಂದರೆ ಬಹುತೇಕರು ಬಹಳ ಸಂಕೀರ್ಣ ಮತ್ತು ಕಷ್ಟಕರವಾದ ಕೆಲಸ ಎದೇ ಭಾವಿಸುತ್ತಾರೆ. ಏಕೆಂದರೆ ಯಾವುದೇ ತಪ್ಪುಗಳಿಲ್ಲದೆ ಐಟಿಆರ್ ಸಲ್ಲಿಸುವುದು ಬಹಳ ಮುಖ್ಯ. ಐಟಿಆರ್ ಫೈಲಿಂಗ್ ಸಮಯದಲ್ಲಿ ಯಾವುದೇ ರೀತಿಯ ತಪ್ಪುಗಳಾದರೆ, ಐಟಿ ಇಲಾಖೆಯಿಂದ ನೋಟಿಸ್ ಬರಬಹುದು. ಹೀಗಾಗಿ ನೋಟಿಸ್ ಬರದಂತೆ ತಡೆಯಲು ಜಾಗೃತೆಯಿಂದ ಐಟಿಆರ್ ಫೈಲ್ ಮಾಡಬೇಕು. ಪ್ರಸ್ತುತ ಹಣಕಾಸು ವರ್ಷದ (2025-26) ಐಟಿಆರ್ ಫೈಲಿಂಗ್ ಸೀಸನ್ ಈಗಾಗಲೇ ಆರಂಭವಾಗಿದೆ. ಕಳೆದ ಬಜೆಟ್ನಲ್ಲಿ ಪರಿಚಯಿಸಲಾದ ಗಮನಾರ್ಹ ಬದಲಾವಣೆಗಳಿಂದಾಗಿ ತೆರಿಗೆದಾರರಿಗೆ ಹೆಚ್ಚುವರಿ 45 ದಿನಗಳನ್ನು ನೀಡಲಾಗಿದೆ. ಅಂದರೆ, ಐಟಿಆರ್ ಫೈಲಿಂಗ್ಗೆ ಸಾಮಾನ್ಯವಾಗಿ ಜುಲೈ 31 ಕೊನೆಯ ದಿನವಾಗಿರುತ್ತದೆ. ಆದರೆ, ಈ ಬಾರಿ ಐಟಿಆರ್ ಫೈಲಿಂಗ್ ಗಡುವನ್ನು ಸೆಪ್ಟೆಂಬರ್ 15ಕ್ಕೆ ವಿಸ್ತರಿಸಲಾಗಿದೆ. ಗಡುವು ವಿಸ್ತರಣೆಯು ಅನೇಕರಿಗೆ ಪ್ರಯೋಜನಕಾರಿಯಾಗಿದ್ದರೂ, ಐಟಿ ರಿಟರ್ನ್ಸ್ ಫೈಲಿಂಗ್ ಸಮಯದಲ್ಲಿ ಹಲವು ತಪ್ಪುಗಳಾಗುವ ಸಾಧ್ಯತೆ ಇದೆ. ಎಕನಾಮಿಕ್ ಟೈಮ್ಸ್ ವರದಿಯಯಲ್ಲಿ ತಿಳಿಸಿರುವಂತೆ ಐಟಿಆರ್ ಫೈಲಿಂಗ್ ವೇಳೆ ಈ 7 ತಪ್ಪುಗಳಾಗದಂತೆ ಎಚ್ಚರವಹಿಸುವುದು...
ಹುಲಿಹೊಂಡದ ಈ ಹುಡುಗನ ಸಾವು ನ್ಯಾಯವೇ..? ಟ್ರಾಕ್ಟರ್ ದುರಂತದಲ್ಲಿ ಮಡಿದ ಸತೀಶನಿಗೆ ಕಣ್ಣೀರಿನ ಶೃದ್ಧಾಂಜಲಿ..!
Mundgod Accident News: ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮಸ್ಥರು ಇವತ್ತು ಅಲ್ಷರಶಃ ಮಮ್ಮಲ ಮರುಗಿದ್ದಾರೆ. ಟ್ರಾಕ್ಟರ್ ಅಪಘಾತದಲ್ಲಿ ಮನೆಮಗನನ್ನು ಕಳೆದುಕೊಂಡಿದ್ದಾರೆ. ವಯಸ್ಸಲ್ಲದ ವಯಸ್ಸಲ್ಲಿ ದುರಂತ ಸಾವು ಕಂಡಿರೋ ಸತೀಶ್ ತಳವಾರಗಾಗಿ ಕಣ್ಣೀರು ಹಾಕ್ತಿದಾರೆ. ಹೌದು, ಮುಂಡಗೋಡ ತಾಲೂಕಿನ ಇಂದೂರು ಸಮೀಪ, ಚಲಿಸುತ್ತಿದ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಯುವಕ ಮೃತಪಟ್ಟಿದ್ದಾನೆ. ತಾಲೂಕಿನ ನಂದಿಕಟ್ಟಾ ಗ್ರಾಮ ಪಂ. ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಸತೀಶ ಮಂಜುನಾಥ ತಳವಾರ(18) ದುರಂತ ಸಾವು ಕಂಡಿದ್ದಾನೆ. Mundgod Accident News: ಮುಂಡಗೋಡ ಅರಣ್ಯ ಸಸ್ಯ ಪಾಲನ ಕೇಂದ್ರ ದಿಂದ ಹುಲಿಹೊಂಡ ಅರಣ್ಯ ಪ್ರದೇಶಕ್ಕೆ ಸಸಿಗಳನ್ನು ಸಾಗಿಸುವ ಸಲುವಾಗಿ, ಹುಲಿಹೊಂಡ ಗ್ರಾಮದಿಂದ ಬೆಳಿಗ್ಗೆ ಮುಂಡಗೋಡಕ್ಕೆ ತೆರಳಿದ್ದ ಸತೀಶ, ಅಲ್ಲಿಂದ ಸಸಿಗಳನ್ನು ತುಂಬಿಕೊಂಡು ಟ್ರಾಕ್ಟರ್ ನಲ್ಲಿ ವಾಪಸ್ ಆಗುತ್ತಿದ್ದ. ಅದ್ಯಾವ ದುರಾದೃಷ್ಟವೋ ಏನೋ, ಟ್ರೈಲರ್ ಕೊಂಡಿಯ ಮೇಲೆ ನಿಂತಿದ್ದ ಹುಡುಗ, ಇಂದೂರು ಸಮೀಪ ಬರುತ್ತಿದ್ದಂತೆ ಹೇಗೋ ಏನೋ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ಟ್ರೈಲರ್ ಹಿಂಬದಿಯ ಚಕ್ರದ ಅಡಿ ಸಿಲುಕಿದ್ದಾನೆ ಅಷ್ಟೆ. ಬಾಳಿ...
ಹಳೆ ಪಿಂಚಣಿ ಯೋಜನೆ ಬೇಕೆನ್ನುವ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ; ರಾಜ್ಯ ಸರ್ಕಾರದಿಂದ ಒಪಿಎಸ್ ಪ್ರಸ್ತಾವನೆ ಪರಿಶೀಲನೆಗೆ 3 ತಂಡ ರಚನೆ..!
OPS News: ಬೆಂಗಳೂರು : ಹಳೆ ಪಿಂಚಣಿ ಯೋಜನೆ (Old pension Scheme) ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹಳೆ ಪಿಂಚಣಿ ಯೋಜನೆ (OPS) ಪ್ರಸ್ತಾವನೆ ಪರಿಶೀಲಿಸಲು ಮೂರು ತಂಡಗಳ ರಚನೆ ಮಾಡಿ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂಬುದು ಸರ್ಕಾರಿ ನೌಕರರ ಬಹುದಿನಗಳ ಒತ್ತಾಯವಾಗಿದೆ. ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ತಲಾ ಮೂವರು ಅಧಿಕಾರಿ/ನೌಕರರನ್ನೊಳಗೊಂಡಂತೆ ಮೂರು ತಂಡಗಳನ್ನು ರಚಿಸಿ ಕಾರ್ಯ ಹಂಚಿಕೆ ಮಾಡಿದೆ. ಈ ಅಧಿಕಾರಿ / ನೌಕರರು ಪ್ರತಿ ದಿನ ಅಪರಾಹ್ನ ಕಡ್ಡಾಯವಾಗಿ ಹಾಜರಾಗಿ ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ಗೆ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಆದೇಶಿಸಲಾಗಿದೆ. ಅನೇಕ ಕೇಂದ್ರ ಸರ್ಕಾರಿ ಮತ್ತು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ. ಹಲವು ರಾಜ್ಯಗಳು ಹಳೆಯ ಪಿಂಚಣಿ...
ಚಿನ್ನದ ಬೆಲೆ ಸತತ 2ನೇ ದಿನ ಏರಿಕೆ : ಮಂಗಳವಾರ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ..?
Gold Price Today: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಗೆ ಸಾಕ್ಷಿಯಾಗಿದ್ದು, ಜೂನ್ 03ರಂದು ಹಳದಿ ಲೋಹದ ಬೆಲೆ ಮತ್ತಷ್ಟು ಎತ್ತರಕ್ಕೆ ಜಿಗಿತವನ್ನ ಸಾಧಿಸಿದೆ. ವೀಕೆಂಡ್ ಬ್ರೇಕ್ ಬಳಿಕ ಬಂಗಾರದ ಬೆಲೆಯು ಸೋಮವಾರ ದಿಢೀರ್ ಜಿಗಿತಗೊಂಡಿತ್ತು. ನಿನ್ನೆ ಚಿನ್ನದ ಬೆಲೆ 10 ಗ್ರಾಂ 330 ರೂಪಾಯಿ ಹೆಚ್ಚಾಗಿತ್ತು. ಇದೀಗ ಹಳದಿ ಲೋಹದ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆ ಸಹ ಚಿನ್ನದ ಜೊತೆಗ ಏರಿಕೆಗೊಂಡಿದೆ. ಜಾಗತಿಕ ಮಟ್ಟದಲ್ಲಿ ಇಂದು ಸ್ವಲ್ಪ ಪಾಸಿಟಿವ್ ಸೂಚನೆ ಹೊರತಾಗಿಯೂ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮೊರೆ ಹೋಗಿದ್ದಾರೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ತಾರಕ್ಕೇರಿದ್ದು, ಭಾರತ-ಅಮೆರಿಕಾ ನಡುವಿನ ಟ್ರೇಡ್ ಅಂತಿಮಗೊಳ್ಳದಿರುವುದು ಹಾಗೂ ಚೀನಾ-ಅಮೆರಿಕಾ ನಡುವಿನ ವ್ಯಾಪಾರ ಯುದ್ಧ ಮುಂದುವರೆದಿದೆ. ಹೀಗಾಗಿ ಹೂಡಿಕೆದಾರರಲ್ಲಿ ಕಳವಳ ಮೂಡಿಸಿದ್ದು, ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲೆ ಮತ್ತೆ ಹೂಡಿಕೆ ಮಾಡಲು ಯತ್ನಿಸಿದ್ದಾರೆ. ಮತ್ತೊಂದೆಡೆ ಭಾರತೀಯ ಷೇರುಪೇಟೆ ಮಂಗಳವಾರ ಫ್ಲ್ಯಾಟ್ ಆಗಿ ವಹಿವಾಟು ನಡೆಸಿದೆ. ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ...
ಗತವೈಭವಕ್ಕೆ ಮರಳುತ್ತಿದೆ ಅನಿಲ್ ಅಂಬಾನಿ ಷೇರು; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ರಿಲಯನ್ಸ್ ಪವರ್ ಸ್ಟಾಕ್..!
Anil Ambani Stocks: ಭಾರತೀಯ ಷೇರುಮಾರುಕಟ್ಟೆ ಸೋಮವಾರ (ಜೂನ್ 2) ವಹಿವಾಟಿನಲ್ಲಿ ತೀವ್ರ ಏರಿಳಿತದ ನಂತರ ರೆಡ್ಮಾರ್ಕ್ನಲ್ಲಿ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್ 77 ಪಾಯಿಂಟ್ಸ್ ಇಳಿಕೆಯೊಂದಿಗೆ 81,373ರಲ್ಲಿ ಮುಚ್ಚಿದೆ. ನಿಫ್ಟಿ ಕೂಡ 34 ಪಾಯಿಂಟ್ಸ್ ಏರಿಕೆಯೊಂದಿಗೆ 24716ರಲ್ಲಿ ಮುಚ್ಚಿದೆ. ಆದರೆ, ಮಾರುಕಟ್ಟೆ ಕುಸಿತದ ನಡುವೆಯೂ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಮುಖೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಒಡೆತನದ ‘ರಿಲಯನ್ಸ್ ಪವರ್’ ಷೇರುಗಳು ಭರ್ಜರಿ ಜಿಗಿತ ದಾಖಲಿಸಿವೆ. ಸತತ ಮೂರನೇ ಸೆಷನ್ನಲ್ಲೂ ಏರಿಕೆಯ ಟ್ರೆಂಡ್ ಮುಂದುವರಿಸಿದೆ. ಇಂದು ಸೋಮವಾರ ಒಂದು ಹಂತದಲ್ಲಿ ಷೇರುಪೇಟೆಯು ಶೇ.8 ರಷ್ಟು ಏರಿಕೆಯೊಂದಿಗೆ ₹62.80ಕ್ಕೆ ತಲುಪಿತ್ತು. ಇದು ಈ ಷೇರಿನ 52 ವಾರಗಳ ಗರಿಷ್ಠ ಮಟ್ಟವೂ ಆಗಿದೆ. ದಿನದ ಅಂತ್ಯಕ್ಕೆ ಶೇ.5.96ರಷ್ಟು ಏರಿಕೆಯೊಂದಿಗೆ ₹61.56ರಲ್ಲಿ ವಹಿವಾಟು ಮುಗಿಸಿದೆ. ರಿಲಯನ್ಸ್ ಪವರ್ ಷೇರುಗಳು ಕಳೆದ ಒಂದು ವಾರದಲ್ಲಿ ಶೇ.21 ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿವೆ. ಕಳೆದ ಒಂದು ತಿಂಗಳಲ್ಲಿ ಶೇ.53ರಷ್ಟು ಏರಿಕೆ ದಾಖಲಿಸಿವೆ. ಕಳೆದ ಮೂರು ತಿಂಗಳಲ್ಲಿ ಶೇ.85...
ಬಿಜೆಪಿ ಮುಖಂಡ ಅರುಣಕುಮಾರ ಪುತ್ತಿಲಗೆ ಗಡಿಪಾರು ನೋಟಿಸ್..!
BJP News: ಮಂಗಳೂರು: ಬಿಜೆಪಿ (BJP) ಮುಖಂಡ ಹಾಗೂ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣಕುಮಾರ ಪುತ್ತಿಲ (Arun Kumar Puthila) ವಿರುದ್ಧ ಗಡೀಪಾರು ನೋಟಿಸ್ (Deportation Notice) ನೀಡಲಾಗಿದೆ. ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಗಡೀಪಾರು ನೋಟಿಸ್ ನೀಡಿದ್ದು, ಜೂನ್ ೬ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಪೊಲೀಸರು ಮತ್ತು ಗೃಹ ಇಲಾಖೆಯ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಗೃಹ ಸಚಿವ ಡಾ. ಜಿ ಪರಮೇಶ್ವರ ಹಾಗೂ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಬದಲಾವಣೆಗೆ ಆಗ್ರಹಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕರ್ನಾಟಕ ಪೊಲೀಸು ಅಧಿನಿಯಮ, 1963 ಕಲಂ: 58 ರಡಿ ಗಡೀಪಾರು ನೋಟೀಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ👉ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು..! ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕೃಷ್ಣಯ್ಯ ಎಂಬವರ ಮಗ ಅರುಣಕುಮಾರ ಪುತ್ತಿಲ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 55 ರಂತೆ ದಕ್ಷಿಣ...