ಹಾವೇರಿ- ಹಾವೇರಿಯಲ್ಲೊಂದು ಹೀನ ಕೃತ್ಯ ನಡೆದಿದೆ..ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಓರ್ವ ಪಾಪಿ ಯುವಕ ಅತ್ಯಾಚಾರ ಎಸಗಿದ್ದಾನೆ..

ಡಿಸೆಂಬರ್ 7 ರ ಮಧ್ಯರಾತ್ರಿ, ಹಾವೇರಿಯ ಎಪಿಎಂಸಿ ಬಳಿಯ ಉಜ್ಜಿವನ್ ಫೈನಾನ್ಸ್ ಕಟ್ಟಡದಲ್ಲಿ ಮಲಗಿದ್ದ ಸುಮಾರು 40-45 ವರ್ಷ ಪ್ರಾಯದ ಬುದ್ದಿಮಾಂದ್ಯೆಗೆ, 24 ವರ್ಷದ ತಸ್ಲೀಮ್ ಸೆರವಾಡ್ ಎಂಬ ಆರೋಪಿ ಊಟ ಕೊಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ.. ಈತನ ಕುಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ..

ಅತ್ಯಾಚಾರ ಆರೋಪಿ ತಸ್ಲೀಮ್

ಇನ್ನು, ಸಿಸಿಟಿವಿ ದೃಶ್ಯ ನೋಡಿದ ಕಟ್ಟಡದ ಮಾಲೀಕ ನವೀನ್ ಕುಮಾರ್ ತೋಟಣ್ಣನವರ್ ಪೋಲಿಸರಿಗೆ ದೂರು ನೀಡಿದ್ದರು.. ಹೀಗಾಗಿ ಕಾರ್ಯಾಚರಣೆಗಿಳಿದಿದ್ದ ಡಿವೈಎಸ್ಪಿ ವಿಜಯಕುಮಾರ್ ಮತ್ತು ಸಿಪಿಐ ಮಂಜಣ್ಣ ನೇತೃತ್ವದ ಕ್ರೈಂ ತಂಡ ಆರೋಪಿಯ ಹೆಡೆಮುರಿ ಕಟ್ಟಿದೆ..

ಅಂದಹಾಗೆ, ಮುಸುಕುದಾರಿಯಾಗಿ ಅತ್ಯಾಚಾರ ಎಸಗಿರೋ ಕಾಮುಕ ಆರೋಪಿ ತಸ್ಲೀಮ್ ಸೆರವಾಡ್, ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ.. ಹಾವೇರಿ ಸಿಟಿಯಲ್ಲಿ ಆಟೋ ಚಾಲಕನಾಗಿದ್ದ ಆರೋಪಿ ರಾತ್ರಿ ಸಮಯದಲ್ಲಿ ಆಟೋ ಚಾಲನೆ ಮಡುತ್ತಿದ್ದ.. ಈ ವೇಳೆ ಅನಾಥ ಬುದ್ದಿಮಾಂದ್ಯ ಮಹಿಳೆಯನ್ನ ಕಂಡು ಊಟ ಕೊಡುವ ನೆಪದಲ್ಲಿ ಐದು ಬಾರಿ ಅತ್ಯಾಚಾರ ನಡೆಸಿರೋ ಬಗ್ಗೆ ಆತನೇ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ..

ಹಾಗಂತ, ಹಾವೇರಿ ಎಸ್ಪಿ ಮಾಹಿತಿ ನೀಡಿದ್ದಾರೆ.. ಹಾವೇರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!