ಇಬ್ಬರ ಮೇಲೆ ಹರಿದ ಟ್ರ್ಯಾಕ್ಟರ್ ಚಕ್ರ, ಆದ್ರೂ ಬಚಾವಾದ್ರು, ಕಲಘಟಗಿಯಲ್ಲಿ ಅಚ್ಚರಿಯ ಘಟನೆ..!

Accident News;
ಕಲಘಟಗಿ; ಟ್ರ್ಯಾಕ್ಟರ್ ಚಕ್ರದಲ್ಲಿ ಸಿಲುಕಿ ಇಬ್ಬರು ಒದ್ದಾಡಿದ ಘಟನೆ, ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ನಲ್ಲಿ ನಿನ್ನೆ ಸಂಜೆ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರ್ಯಾಕ್ಟರ್ ಹಾಗೂ ಗೂಡ್ಸ್ ವಾಹನ ಚಾಲಕರ ನಡುವೆ ಜಗಳ ನಡೆದಿತ್ತು, ಎರಡು ವಾಹನಗಳ ನಡುವೆ ಸಣ್ಣ ಅಪಘಾತವಾಗಿತ್ತು, ಆಗ ಇಬ್ಬರು ಚಾಲಕರ ಮಧ್ಯೆ ಮಾತಿನ ವಾಗ್ವಾದ ನಡೆದಿತ್ತು, ಗೂಡ್ಸ್ ವಾಹನ ಚಾಲಕ ಟ್ರ್ಯಾಕ್ಟರ್ ಹತ್ತಿ ವಾಗ್ವಾದ ನಡೆಸುತ್ತಿದ್ದ. ಆಗ ಟ್ರ್ಯಾಕ್ಟರ್ ಚಾಲಕ ಗಾಡಿ ಚಾಲಾಯಿಸಿದ್ದಾನೆ. ಹೀಗಾಗಿ, ಇಬ್ಬರೂ ಆಯ ತಪ್ಪಿ ಬಿದ್ದಿದ್ದು ಟ್ರ್ಯಾಕ್ಟರ್ ಚಕ್ರದ ಕೆಳಗೆ ಸಿಲುಕಿದ್ದಾರೆ. ಈ ವೇಳೆ ಇಬ್ಬರ ಮೇಲೂ ಟ್ರ್ಯಾಕ್ಟರ್ ಚಕ್ರ ಹತ್ತಿ ಇಳದಿದೆ. ಆದರೂ ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಕಲಘಟಗಿ ಮತ್ತು ಬೆಲವಂತರ ಗ್ರಾಮ ನಿವಾಸಿಗಳು ಎನ್ನಲಾಗಿದೆ.

ಗಾಯಾಳುಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸ್ ಬೇಧಿಸಿದ ಪೊಲೀಸರು, 58 ಕೆಜಿ ಬಂಗಾರ ದೋಚಿದ್ದವರು ಅಂದರ್..!

Rain forecast; ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಮುಂದಿನ 3 ಗಂಟೆಗಳಲ್ಲಿ ಮಳೆ, ಗಾಳಿಯ ಮುನ್ಸೂಚನೆ..!

ಶಿಗ್ಗಾವಿಯ ಭೀಕರ ಮರ್ಡರ್ ಕೇಸ್ ಹಾಗೂ ಫೈರಿಂಗ್ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಹಾವೇರಿ ಎಸ್ಪಿ..!

ನಿರಂತರ ಸುದ್ದಿಗಾಗಿ ವಾಟ್ಸಾಪ್ ಚಾನಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

error: Content is protected !!