Education Department;
ಮುಂಡಗೋಡ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪಾಲಕರು ಮತ್ತೆ ಆಕ್ರೋಶಗೊಂಡಿದ್ದಾರೆ. ಪ್ರೌಢಶಾಲೆಯ ಇಡೀ ಅಂಗಳದಲ್ಲಿ ರಾಜಕೀಯ ಅನ್ನೋದು ಹಾಸು ಹೊಕ್ಕಾಗಿದೆ, ಹೀಗಾಗಿ, ಇಲ್ಲಿ ಕಾನೂನು ಅನ್ನೋದು ಯಾರಿಗೂ ಅನ್ವಯವಾಗ್ತಿಲ್ಲ, ತಮಗೆ ಇಷ್ಟ ಬಂದಂಗೆ ಎಲ್ಲವನ್ನೂ ನಡೆಸಿಕೊಂಡು ಹೋಗ್ತಿದಾರೆ. ಹೀಗಾಗಿ, ಇಲ್ಲಿನ ಶಿಕ್ಷಣ ಅಧೋಗತಿಗೆ ಇಳಿದಿದೆ ಅಂತಾ ಹಲವು ಪಾಲಕರು ಬಿಇಓ ಗೆ ಲಿಖಿತವಾಗಿ ದೂರು ನೀಡಿದ್ದಾರೆ.
SDMC ಸಮಿತಿ ಆಯ್ಕೆ ಅದ್ವಾನ..?
ಅಸಲು, ಆ ಪ್ರೌಢಶಾಲೆಯಲ್ಲಿ ಕಲಿಯುತ್ತಿರೋ ವಿದ್ಯಾರ್ಥಿಗಳ ಪಾಲಕರು ಸಭೆ ಮಾಡಿ, SDMC ರಚನೆ ಮಾಡಬೇಕಾಗಿರತ್ತೆ. ಆದ್ರೆ, ಈ ಪ್ರೌಢಶಾಲೆಯಲ್ಲಿ ಮಾತ್ರ ಅಂತಹ ಯಾವ ಸಭೆಯನ್ನೂ ಕರೆಯದೇ, ಕೆಲ ರಾಜಕೀಯದವರ ಮೂಗಿನ ನೇರಕ್ಕೆ ಸದಸ್ಯರುಗಳು, ಅಧ್ಯಕ್ಷರುಗಳ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಹೀಗಾಗಿ, ಇದೇಲ್ಲ ಸರಿಯಲ್ಲ, ಕೂಡಲೇ ಪಾಲಕರ ಸಭೆ ಕರೆದು, ಕಾನೂನುಬದ್ಧ, ನಿಯಮಾನುಸಾರ SDMC ರಚನೆ ಆಗಬೇಕು ಅಂತ ಪಾಲಕರು ಬಿಇಓ ಗೆ ಒತ್ತಾಯಿಸಿದ್ದಾರೆ.

ಇಲ್ಲಿ ದೈಹಿಕ ಶಿಕ್ಷಕರು HM ಆಗಬಹುದಾ..?
ಇನ್ನು, ಇದೇ ಚಿಗಳ್ಳಿ ಪ್ರೌಢಶಾಲೆಯಲ್ಲಿ, ದೈಹಿಕ ಶಿಕ್ಷಕರಿಗೇ ಮುಖ್ಯೋಪಾಧ್ಯಾಯರ ಹುದ್ದೆ ನೀಡಲಾಗಿದೆಯಂತೆ. ಅಸಲು, ಅವ್ರಿಗಿಂತಲೂ ಅನುಭವ ಹಾಗೂ ಜೇಷ್ಟತೆಯ ಅರ್ಹತೆ ಹೊಂದಿದವರು ಇಲ್ಲಿ ಇದ್ದರೂ ಅಂತವರನ್ನು ಸೈಡಿಗೆ ಇಟ್ಟು, ದೈಹಿಕ ಶಿಕ್ಷಕರಿಗೆ ಮಣೆ ಹಾಕಲಾಗಿದೆಯಂತೆ, ಹೀಗಾಗಿ, ಪ್ರಸಕ್ತ ವರ್ಷದ SSLC ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಿದ್ದು, ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದು ಪಾಲಕರ ಆಗ್ರಹ. ಇಲ್ಲವಾದಲ್ಲಿ, ಇಡೀ ಪಾಲಕರ ಸಮೂಹ ಉಗ್ರವಾದ ಪ್ರತಿಭಟನೆ ಕೈಗೊಳ್ತಿವಿ ಅಂತಾ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಇದನ್ನಾದ್ರೂ ಸನ್ಮಾನ್ಯ ಬಿಇಓ ಮೇಡಮ್ಮು ಗಮನಿಸ್ತಾರಾ..? ಕಾದು ನೋಡಬೇಕಿದೆ. ಇದೇಲ್ಲ ಒಂದು ಭಾಗ..!

Education Department; ಹಾಗೆ ನೋಡಿದ್ರೆ, ಮುಂಡಗೋಡ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಯಾಕೋ ಗೊತ್ತಿಲ್ಲ. ಏನಂದ್ರೆ ಏನೂ ನಡೆಯುತ್ತಿಲ್ಲ. ಇಲ್ಲಿ ನೂತನವಾಗಿ ಶಿಕ್ಷಣಾಧಿಕಾರಿಯಾಗಿ ಸುಮಾ ಮೇಡಮ್ಮು ಬಂದಾಗ ತುಂಬಾ ನಿರೀಕ್ಷೆಗಳಿದ್ದವು. ಆದ್ರೆ, ಆ ನಿರೀಕ್ಷೆಗಳೇಲ್ಲವೂ ಈಗ ಬಹುತೇಕ ಠುಸ್ಸ್ ಆಗುವ ಹಂತಕ್ಕೆ ಬಂದಿದೆ ಅಂತಿದಾರೆ ಅದೇ ಇಲಾಖೆಯ ಹಲವು ಮಂದಿ. ಯಾಕಂದ್ರೆ ಇಲ್ಲಿ ಮಂತ್ರಕ್ಕಿಂತ ಬರೀ ಉಗುಳೇ ಜಾಸ್ತಿ ಎನ್ನುವಂತಾಗಿದೆ ಅನ್ನೋದು ಕೆಲ ಪ್ರಬುದ್ಧ ಶಿಕ್ಷಕರ ಮಾತು. ಅದಕ್ಕೆ ಪಕ್ಕಾ ಉಧಾಹರಣೆ ಅಂದ್ರೆ, ಪ್ರಸಕ್ತ ವರ್ಷದ SSLC ಫಲಿತಾಂಶ..! ಬರೀ ಭಾಷಣದಲ್ಲೇ ಎಲ್ಲ ಸುಧಾರಣೆ ಮಾಡೋಕೆ ಆಗತ್ತಾ.? ಅನ್ನೋದೂ ಕೂಡ ಹಲವು ಶಿಕ್ಷಣ ಪ್ರೇಮಿಗಳ ಪ್ರಶ್ನೆ..!

ಡಿಡಿಪಿಐ ಸಾಹೇಬ್ರೇ ಗಮನಿಸಿ..!
ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸಾಹೇಬ್ರಿಗೆ ಅದೇನು ಭಯವೋ ಏನೋ ನಮಗಂತೂ ಗೊತ್ತಿಲ್ಲ, ಇಲ್ಲಿನ ಕೆಲ ಶಿಕ್ಷಕರನ್ನು ನೋಡಿದ್ರೆ, ಮೈಯೆಲ್ಲಾ ಬೇವರಿಕೊಳ್ತಾರಂತೆ. ಅಂತಹ ಶಿಕ್ಷಕರು ಅದೇನೆ ಮಾಡಿದ್ರೂ ಅದೇಲ್ಲ ಮಾಫಿ ಅಂತೆ. ಹೀಗಾಗಿ, ಮುಂಡಗೋಡ ತಾಲೂಕಿನ ಶಿಕ್ಷಣ ವ್ಯವಸ್ಥೆ ಅನ್ನೋದು ಅಷ್ಟಕ್ಕಷ್ಟೆ ಆಗಿದೆ. ಪ್ರೌಢಾಶಾಲೆ ಇರಲಿ, ಅಸಲು, ಇಲ್ಲಿನ ಪ್ರಾಥಮಿಕ ಶಿಕ್ಷಣ ಅನ್ನೋದು ಕೂಡ “ಮೊಬೈಲ್” ನೊಳಗಿನ ರೀಲ್ಸ್ ತರಹ ಆಗಿದೆ ಅನ್ನೋದು ಖುದ್ದು ಅದೇ ಶಿಕ್ಷಣ ಇಲಾಖೆಯ ಪ್ರಬುದ್ಧ ಶಿಕ್ಷಕರ ಮಾತು. ಹೀಗಾಗಿ, ಈಗಲಾದ್ರೂ ಬೀಡೇ ಬಿಟ್ಟು ದೇಖರೇಕಿ ಮಾಡಿ ಡಿಡಿಪಿಐ ಸಾಹೇಬ್ರೆ ಅಂತಾ ಜನರು ಆಗ್ರಹಿಸ್ತಿದಾರೆ.
Education Department; ದುರಂತ ಅಂದ್ರೆ, ಏಳನೇ ತರಗತಿ ಪಾಸ್ ಆಗಿ ಹೈಸ್ಕೂಲಿಗೆ ಕಾಲಿಡೋ ವಿದ್ಯಾರ್ಥಿಗಳಿಗೆ ಬಹುತೇಕ ಮೂಲಾಕ್ಷರಗಳೇ ಬರುತ್ತಿಲ್ಲ. ಹೀಗಾಗಿ, ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಹಗಲು ರಾತ್ರಿ ಶಿಕ್ಷಣ ನೀಡುತ್ತಿರೊ ಕೆಲ ಪ್ರೌಢಶಾಲಾ ಶಿಕ್ಷಕರಿಗೆ ಈ ಎಂಟನೇ ತರಗತಿಗೆ, ಬರುವ ವಿದ್ಯಾರ್ಥಿಗಳನ್ನು ಹದ ಮಾಡುವುದೇ ಸವಾಲಾಗಿದೆ. ಈ ಕಾರಣಕ್ಕಾದ್ರೂ ಬಿಇಓ ಮೇಡಮ್ಮು ಪ್ರಾಥಮಿಕ ಶಾಲೆಗಳತ್ತ ಕಣ್ಣು ಹಾಯಿಸಲಿ ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ. ಅಲ್ದೇ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ಅದೇನು ಮಾಡ್ತಿದಾರೆ ಅಂತಾ ಒಂದಿಷ್ಟು ಗಮನಿಸಿದ್ರೆ, ಮುಂದೆ ಸರ್ಕಾರಿ ಶಾಲೆಗಳಿಗೆ ಒಂದು ಕಳೆ ಆದ್ರೂ ಬಂದೀತು. ಅಲ್ವಾ..?
ಸಾರ್ವಜನಿಕರ ಬೇಡಿಕೆಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿ: ಸುಷಮಾ ಗೋಡಬೋಲೆ