Job fair News: ಶಿಗ್ಗಾವಿ: ನಮ್ಮ ತಾಲೂಕಿನಲ್ಲಿ ಪ್ರತಿ ವರ್ಷ ನೂರಾರು ಯುವಕ-ಯುವತಿಯರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗಕ್ಕಾಗಿ ಹೊರ ಹೋಗುತ್ತಿದ್ದಾರೆ. ನೈಪುಣ್ಯತೆ ಹೊಂದಿರುವ ವಿದ್ಯಾವಂತ ಯುವಕ-ಯುವತಿಯರು ಉದ್ಯೋಗ ಒದಗಿಸುವ ಸಲುವಾಗಿ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.
ಶಿಗ್ಗಾಂವಿ ತಾಲೂಕು ಬನ್ನೂರ ಗ್ರಾಮದಲ್ಲಿ ಎಜುಕೇಶನ್ ವೆಲ್ವೇರ್ ಫೌಂಡೇಶನ್ ಬನ್ನೂರು ಹಾಗೂ ಜಿ.ಆರ್.ಜಿ. ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈ.ಲಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಳ್ಳಿ ಹೈದರಿಗಾಗಿ ಉದ್ಯೋಗ ಉತ್ಸವ-2025ರ ಕಾರ್ಯಕ್ರಮದ ‘ಹಳ್ಳಿ ಹೈದರಿಗಾಗಿ ಉದ್ಯೋಗ’ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ👉 ರಾಜ್ಯದಲ್ಲಿ ಇನ್ನೂ 6 ದಿನ ಮಳೆ, ಉತ್ತರ ಕನ್ನಡ ಸೇರಿ 5 ಜಿಲ್ಲೆಗಳಿಗೆ ಇಂದು ಮತ್ತೆ ರೆಡ್ ಅಲರ್ಟ್..!
ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಲು ನಾವೆಲ್ಲರೂ ಶ್ರಮಿಸಬೇಕು. ಆ ದಿಕ್ಕಿನಲ್ಲಿ ನಾವೆಲ್ಲರೂ ಹೆಜ್ಜೆ ಇಡೋಣ ಎಂದರು.
ಬನ್ನೂರ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಉದ್ಯೋಗ ಮೇಳವು ಉದ್ಯೋಗ ಹುಡುಕುವವರಿಗೂ, ಉದ್ಯೋಗ ನೀಡುವವರಿಗೂ ಅನುಕೂಲಕರ. ಇಂತಹ ಉದ್ಯೋಗ ಮೇಳಗಳನ್ನು ಹಳ್ಳಿ ಭಾಗಗಳಲ್ಲಿ ಹೆಚ್ಚು ನಡೆಸುವುದರಿಂದ ಗ್ರಾಮೀಣ ಪ್ರದೇಶದ ಅನುಕೂಲಕರವಾಗುವುದರ ವಿದ್ಯಾರ್ಥಿಗಳಿಗೆ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿಗೊಳ್ಳುತ್ತಾರೆ ಎಂದರು.
ಇದನ್ನೂ ಓದಿ👉 ದೇಶದಲ್ಲಿ ಸಾವಿರಕ್ಕೂ ಅಧಿಕ ಸಕ್ರಿಯ ಕೋವಿಡ್ ಪ್ರಕರಣಗಳು..! ಕೇರಳ, ಮಹಾರಾಷ್ಟ್ರ, ದೆಹಲಿ ಮುಂಚೂಣಿ..!
ಶಂಕರಗೌಡ ಪೊಲೀಸಗೌಡ್ರ, ವೀರಭದ್ರಪ್ಪ ಅಗಡಿ, ಗ್ರಾ.ಪಂ. ಅಧ್ಯಕ್ಷೆ ಗಿರಿಜಮ್ಮ ದೊಡ್ಡನಿ, ವೀರನಗೌಡ ಹೊನ್ನಾಗೌಡ್ರ, ಟಿ.ವಿ. ಪಾಟೀಲ, ಬಾಪುಗೌಡ ಪೊಲೀಸಗೌಡ್ರ, ಮಹದೇವಪ್ಪ ಸಿದ್ದಣ್ಣವರ, ಪ್ರಕಾಶ ಹೊನ್ನಪ್ಪನವರ, ಬಸವರಾಜ ಲಂಗೋಟಿ, ಬಸವರಾಜ ಮಾಯಣ್ಣವರ ಪಾಲ್ಗೊಂಡಿದ್ದರು. ಪ್ರವೀಣ ಸಿದ್ದಣ್ಣವರ ನಿರೂಪಿಸಿದರು. ಜಾಫರಸಾಬ್ ವಂದಿಸಿದರು.