Yallapur Crime News; ಯಲ್ಲಾಪುರ ತಾಲೂಕಿನ ಚಿಕ್ಕಮಾವಳ್ಳಿಯ ಇಂಡಿಯಾ ಗೇಟ್ ಹೋಟೆಲ ಎದುರು ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸಾವು ಕಂಡಿದ್ದ ಘಟನೆಯಲ್ಲಿ, ಡಿಕ್ಕಿ ಹೊಡೆದು ಪರಾರಿಯಾಗಿ ತಲೆಮರೆಸಿಕೊಂಡಿದ್ದ ವಾಹನ ಚಾಲಕನನ್ನು ಯಲ್ಲಾಪುರ ಪೊಲೀಸ್ರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರಿನ ಶೀತಲಾಪ್ರಸಾದ ಅಲಗೂ ಬಿಂದ್ (49) ಎಂಬುವ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.
ಅಪಘಾತದಲ್ಲಿ ಧಾರವಾಡ ಜಿಲ್ಲೆ ಕಲಘಟಗಿಯ ಬೈಕ್ ಸವಾರ, ರಾಮು ಮಾರುತಿ ಗುಜಲೂರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿಯ ಸವಾರ ವಿಷ್ಣು ಜಯಪ್ಪ ಗುಜಲೂರಗೆ ಗಾಯವಾಗಿತ್ತು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೂಡ ಸಾವನ್ನಪ್ಪಿದ್ದ. ಹೀಗಾಗಿ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಐ ರಮೇಶ್ ಹನಾಪುರ ಮಾನವೀಯತೆ..!
ಇನ್ನು ಅವತ್ತು ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದ ಯಲ್ಲಾಪುರ ಪಿಐ ರಮೇಶ ಹನಾಪುರ, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಹೇಗಾದ್ರೂ ಸರಿ ಬದುಕಿಸಬೇಕು ಅಂತ ತಮ್ಮದೇ ಜೀಪ್ ನಲ್ಲಿ ಯಲ್ಲಾಪುರ ಆಸ್ಪತ್ರೆಗೆ ಸಾಗಿಸಿದ್ರು. ಅಪ್ಪಟ ಮಾನವೀಯತೆ ತೋರಿಸಿದ್ರು. ಆದ್ರೆ, ದುರಾದೃಷ್ಟವಶಾತ್ ಆತನೂ ಕೂಡ ಉಸಿರು ಚೆಲ್ಲಿದ್ದ. ಹೀಗಾಗಿ, ಪಿಐ ಸಾಹೇಬರ ಪರಿಶ್ರಮ ಅವತ್ತು ಫಲ ಕೊಟ್ಟಿರಲಿಲ್ಲ.
ಪೇಂಟಿನ ತುಣುಕೇ ಆರೋಪಿಯ ಪತ್ತೆ ಹಚ್ಚಿತ್ತು..!
ಆದ್ರೆ, ಹಾಗೆ ಅಪಘಾತ ಪಡಿಸಿ ಪರಾರಿಯಾಗಿದ್ದ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪಣತೊಟ್ಟು ನಿಂತಿದ್ದ ಪಿಐ ರಮೇಶ್ ಹನಾಪುರ್, ಅಪಘಾತವಾದ ಸ್ಥಳದಲ್ಲಿ ಸಿಕ್ಕಿದ್ದ ವಾಹನದ ಪೇಂಟಿನ ತುಣುಕಿನ ಆಧಾರದಲ್ಲೇ ಆರೋಪಿಯ ಹೆಡೆಮುರಿಕಟ್ಟಿದರು. ಹೀಗಾಗಿ, ಯಲ್ಲಾಪುರ ಪೊಲೀಸ್ರು ಕೊನೆಗೂ ನಿರುಮ್ಮಳರಾಗಿದ್ದಾರೆ.
ಇದನ್ನೂ ಓದಿ ಟ್ರಕ್-ಬೊಲೆರೊ ಮುಖಾಮುಖಿ ಡಿಕ್ಕಿ: ಮದುವೆ ಮುಗಿಸಿ ಮರಳುತ್ತಿದ್ದ 9 ಮಂದಿ ಸಾವು..!
ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ್ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ ಹಾಗೂ ಎಮ್ ಜಗದೀಶ್ ಮತ್ತು ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್, ಯಲ್ಲಾಪುರ ಪಿಐ ರಮೇಶ ಹನಾಪುರ ಇವರ ನೇತ್ರತ್ವದಲ್ಲಿ ಪಿಎಸ್ಐ ರವರುಗಳಾದ ಯಲ್ಲಾಲಿಂಗ ಕುನ್ನೂರ, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಯವರಾದ ಮಹಮ್ಮದ ಶಫೀ, ಧರ್ಮಾ ನಾಯ್ಕ, ಗಿರೀಶ್ ಲಮಾಣಿ. ಶೋಭಾ ನಾಯ್ಕ, ಶಿಲ್ಪಾ ಗೌಡ ಇವರು ಪ್ರಕರಣದಲ್ಲಿ ಆರೋಪಿಯನ್ನು ಎಳೆದು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.