Consumer Court News : ಕಾರವಾರ; ಗ್ರಾಹಕರೊಬ್ಬರು ಪ್ರವಾಸಕ್ಕಾಗಿ ಮುಂಗಡವಾಗಿ ಪಾವತಿಸಿದ ಹಣವನ್ನು ನೀಡದೇ ಸೇವಾನ್ಯೂನತೆ ಹಾಗೂ ಅನುಚಿತ ವ್ಯಾಪಾರ ನೀತಿ ಅನುಸರಿಸಿರುವುದರಿಂದ ಮಲ್ಲಿಕಾರ್ಜುನ ಟ್ರಾವೆಲ್‌ರವರಿಗೆ 30 ಸಾವಿರ ದಂಡದೊAದಿಗೆ ಮುಂಗಡ ಪಾವತಿಸಿದ ರೂ. 40,000 ಗಳಿಗೆ ಶೇ.12ರ ಬಡ್ಡಿಯನ್ನು ಪಾವತಿಸುವಂತೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಪ್ರಕರಣದ ಹಿನ್ನಲೆ..!
ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆಯ ನಿವಾಸಿಯಾದ ಮನೋಹರ ರಾಮಕೃಷ್ಣ ಹೆಗಡೆರವರು ಮಲ್ಲಿಕಾರ್ಜುನ ಟ್ರಾವೆಲ್ಸ್ ಏಜೆನ್ಸಿ ಮೂಲಕ ಕಾಶಿ ಹಾಗೂ ಆಯೋಧ್ಯೆಯ ಪ್ರವಾಸಕ್ಕೆ ತೆರಳಲು ಪ್ಯಾಕೇಜನ್ನು ರೂ.60,000 ಗಳನ್ನು ಪಾವತಿಸಿ ಮುಂಗಡ ಆಸನಗಳನ್ನು ಕಾಯ್ದಿರಿಸಿದ್ದರು.

ಆದರೆ ಅನಾರೋಗ್ಯ ಹಾಗೂ ತುರ್ತು ಕೆಲಸಗಳು ಬಂದಿದ್ದರಿಂದ ತಾವು ಕಾಯ್ದಿರಿಸಿದ ಆಸನಗಳನ್ನು ರದ್ದುಗೊಳಿಸುವಂತೆ ಪ್ರವಾಸ ಆರಂಭವಾಗುವ 45 ದಿನಗಳ ಮುಂಚಿತವಾಗಿಯೇ ಏಜೆನ್ಸಿಯವರಿಗೆ ತಿಳಿಸಿದ್ದರು. ಹೀಗೆ ಮುಂಚಿತವಾಗಿ ತಿಳಿಸಿದಾಗಲೂ ಕೂಡ ಏಜೆನ್ಸಿಯವರು ದೂರುದಾರರು ಪಾವತಿಸಿದ ಪೂರ್ಣ ಮೊತ್ತ ಪಾವತಿಸದೇ ಕೇವಲ ರೂ.20,000 ಗಳನ್ನು ದೂರುದಾರರಿಗೆ ಪಾವತಿಸಿದ್ದರು.

ತಾನು ಪಾವತಿಸಿದ ಉಳಿದ ಮೊತ್ತವನ್ನು ಪಾವತಿಸದ್ದರಿಂದ ಮನೋಹರ ರಾಮಕೃಷ್ಣ ಹೆಗಡೆಯವರು ಮಲ್ಲಿಕಾರ್ಜುನ್ ಟ್ರಾವೆಲ್ ಏಜೆನ್ಸಿ ವಿರುದ್ಧ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ.ಮಂಜುನಾಥ ಎಂ. ಬಮ್ಮನಕಟ್ಟಿ ಹಾಗೂ ಸದಸ್ಯೆ ವಿಶಾಲಾಕ್ಷಿ ಅಣ್ಣಪ್ಪ ಬೋಳಶೆಟ್ಟಿ ಇವರು ಪ್ರವಾಸ ಏಜನ್ಸಿರವರು ದೂರುದಾರರು ಮುಂಗಡವಾಗಿ ಪಾವತಿಸಿದ ಮೊತ್ತವನ್ನು ಪೂರ್ತಿಯಾಗಿ ಪಾವತಿಸದೇ ದೂರುದಾರರು ಆರೋಪಿಸಿದಂತೆ ಸೇವಾ ನ್ಯೂನತೆ ಎಸಗಿದ್ದಲ್ಲದೆ. ಅನುಚಿತ ವ್ಯಾಪಾರ ನೀತಿಯನ್ನು ಅನುಸರಿಸಿದ್ದಾರೆಂದು ಆದೇಶಿಸಿದ್ದಾರೆ.

ಪ್ರಕರಣವನ್ನು ಪ್ರವಾಸಿ ಏಜೆನ್ಸಿಯವರ ವಿರುದ್ಧ ಆದೇಶಿಸಿ, ದೂರುದಾರರು ಮುಂಗಡವಾಗಿ ಪಾವತಿಸಿದ್ದ ಮೊತ್ತ ರೂ.40,000 ಗಳನ್ನು ವಾರ್ಷಿಕ ಶೇ.12ರ ಬಡ್ಡಿಯೊಂದಿಗೆ ದೂರುದಾರರಿಗೆ -ಪಾವತಿಸುವಂತೆ ಹಾಗೂ ಪರಿಹಾರವಾಗಿ ರೂ.20,000 ಗಳನ್ನು ಮತ್ತು ರೂ.10,000 ಗಳನ್ನು ಪ್ರಕರಣದ ಖರ್ಚು-ವೆಚ್ಚಕ್ಕಾಗಿ ಪಾವತಿಸುವಂತೆ ಆದೇಶಿಸಿದೆ.

ಜೊತೆಗೆ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಕಲಂ 39(1)(ಡಿ) ಪ್ರಕಾರ ಮಲ್ಲಿಕಾರ್ಜುನ್ ಟ್ರಾವೆಲ್ ಏಜೆನ್ಸಿಯು ಇನ್ನು ಮುಂದೆ ಗ್ರಾಹಕರಿಗೆ ಈ ರೀತಿ ತೊಂದರೆ. ನೀಡದಂತೆ ಎಚ್ಚರಿಕೆ ನೀಡಿ ಗ್ರಾಹಕರ ಕಲ್ಯಾಣ ನಿಧಿಗೆ ರೂ.10,000/-ಗಳ ದಂಡವನ್ನು ವಿಧಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರರ ಪರವಾಗಿ ಹಿರಿಯ ವಕೀಲರಾದ ಡಿ.ಆರ್ ಭಟ್ ರವರು ವಾದ ಮಂಡಿಸಿದ್ದರು.

error: Content is protected !!