Mundgod Police News; ಮುಂಡಗೋಡ ಠಾಣೆಯಲ್ಲಿ ಯಾವುದೇ ಬ್ರಷ್ಟಾಚಾರ ನಡೀತಿಲ್ಲ, ಏಜೇಂಟರುಗಳ ಹಾವಳಿಯೂ ಇಲ್ಲ. ನಿತ್ಯವೂ ಇಲ್ಲಿ ಹತ್ತಾರು ಜನ ಜನಪ್ರತಿನಿಧಿಗಳು, ವಕೀಲರು, ಪತ್ರಕರ್ತರು, ಸಾರ್ವಜನಿಕರು ಬಂದು ಹೋಗ್ತಾರೆ, ಹಾಗೇನಾದ್ರೂ L.T. ಪಾಟೀಲ್ ರಿಗೆ ಏಜೇಂಟರುಗಳ ಹಾವಳಿ ಇದೆ ಅ.ಮತಾ ಕಂಡುಬಂದಲ್ಲಿ, ಆ ಏಜೇಂಟರುಗಳು ಯಾರು..? ಅವ್ರ ಹೆಸರೇನು ಅಂತಾ ನಮಗೆ ಮಾಹಿತಿ ನೀಡಲು ಖಂಡಿತ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ತಿವಿ ಅಂತಾ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್ ನಯವಾಗೇ ವಿನಂತಿಸಿದ್ದಾರೆ.
ಅವ್ರು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ರು.
ಬಿಜೆಪಿ ಮುಖಂಡ L.T. ಪಾಟೀಲ್ ನಿನ್ನೆ ಮಂಗಳವಾರ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಏಜೇಂಟರುಗಳ ಹಾವಳಿಯ ಬಗ್ಗೆ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಐ, ಎಲ್ .ಟಿ.ಪಾಟೀಲರಿಗೆ ಹಾಗೆ ಯಾಕೆ ಅನಿಸಿದೆಯೋ ಗೊತ್ತಿಲ್ಲ. ಆದ್ರೆ, ನಮ್ಮ ಠಾಣೆಯಲ್ಲಿ ಅವ್ರು ಹೇಳಿದ ರೀತಿಯಲ್ಲಿ ಯಾವುದೇ ಏಜೇಂಟರುಗಳ ಹಾವಳಿ ಇಲ್ಲ, ಹಾಗೇನಾದ್ರು ಅವ್ರು ಮಾಹಿತಿ ನೀಡಿದ್ರೆ ಖಂಡಿತ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದ್ರು.
ಇನ್ನು, ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ, ಮುಂಡಗೋಡಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ಸಾರ್ವಜನಿಕರು ಮಾದಕ ವಸ್ತುಗಳ ಸಾಗಾಟ, ಮಾದಕ ವಸ್ತುಗಳ ಸೇವನೆಯಂತಹ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ ಆ್ಯಪ್ ಮೂಲಕ ಮಾಹಿತಿ ಹಂಚಿಕೊಳ್ಳಬಹುದು ಅಂತಾ ವಿವರಿಸಿದ್ರು.