ಕೊಪ್ಪಳ- ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಇನ್ನಿಲ್ಲ ಎನ್ನುವ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರಿಗೆ ಅಚ್ಚರಿ ಎಂಬಂತೆ ಮಗ ಪ್ರತ್ಯಕ್ಷವಾಗಿದ್ದು ಕಂಡು ಇಡೀ ಗ್ರಾಮದ ಜನರಿಗೆ ಅಚ್ಚರಿಯಾಗಿದೆ. ಹೌದು! ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ದೇವಮ್ಮ ಗಂಡ ಗುರಬಸಪ್ಪ ಮಾಸ್ತರ ದಂಪತಿಯ ಮೂರು ಮಕ್ಕಳಲ್ಲಿ ಒರ್ವ ಮಗ ದೇವರಾಜ ಮಾಸ್ತರ ಹತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿ ಸಂಪರ್ಕದಲ್ಲೇ ಇರಲಿಲ್ಲ. ಕೊರೊನಾ ಭೀತಿಯಿಂದ ಕಂಪನಿ ಒಂದರಲ್ಲಿ ಕಾರ್ಮಿಕನಾಗಿರುವ ದೇವರಾಜ ಪಕ್ಕದ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದ ಸ್ನೇಹಿತರ ಸಹಾಯದಿಂದ ಸ್ವಗ್ರಾಮಕ್ಕೆ ಹಿಂತಿರುಗಿ ಬಂದಿದ್ದಾನೆ. ದೇವರಾಜು 2008-09ರಲ್ಲಿ ಬೆಂಗಳೂರಿಗೆ ದುಡಿಯಲೆಂದು ಹೋದವನು ನಾಪತ್ತೆಯಾಗಿದ್ದ, ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಕಳದೆರಡು ದಿನದ ಹಿಂದೆ ಜುಮಲಾಪೂರ ಗ್ರಾಮಕ್ಕೆ ಬಂದಿದ್ದಾನೆ. ಪಾಂಡುರಂಗ ದೇವಾಲಯಕ್ಕೆ ಬಂದು ನಮಸ್ಕರಿಸುವ ಮುನ್ನ ತನ್ನ ಪರಿಚಯವನ್ನು ಹೇಳಿಕೊಂಡಾಗ ಸ್ಥಳದಲ್ಲಿದ್ದವರಿಗೆ ಆಶ್ಚರ್ಯವಾಗಿದೆ. ಈ ವಿಷಯವನ್ನು ತಾಯಿ ದೇವಮ್ಮ, ಗುರಬಸಪ್ಪ ಮಾಸ್ತರ ದಂಪತಿಗೆ ಗ್ರಾಮಸ್ಥರು...
Top Stories
ಜೋಯಿಡಾ ತಾಲೂಕು ದೇಶದ ಮೊದಲ ಸಾವಯವ ತಾಲ್ಲೂಕಾಗಿ ಪರಿವರ್ತನೆ; ಸಚಿವ ಚೆಲುವರಾಯ ಸ್ವಾಮಿ
ಮುಂಡಗೋಡ ತಾಲೂಕಲ್ಲಿ ಕೇಬಲ್ ಕಳ್ಳರ ಹಾವಳಿ ನಿತ್ಯ ನಿರಂತರ.! ಇಂದೂರು ಕೊಪ್ಪದ ರೈತರ ಗೋಳು ಕೇಳೋರು ಯಾರು..?
ರಾಜ್ಯದಲ್ಲಿ ಮುಂಗಾರು ಬಿರುಸು, ಹಲವೆಡೆ ಭೂಕುಸಿತ; ಹಲವು ಅವಾಂತರ..!
ನಿರಂತರ ಮಳೆ; ಜಿಲ್ಲೆಯ 8 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ..!
ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಕೆ ಬಗ್ಗೆ ಪರಿಶೀಲಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ
ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಕಂಬ್ಯಾಕ್: ಸೆನ್ಸೆಕ್ಸ್ 677 ಪಾಯಿಂಟ್ಸ್ ಏರಿಕೆ! 5 ಪ್ರಮುಖ ಕಾರಣಗಳು..!
ವಿಶ್ವ ಯೋಗ ದಿನಾಚರಣೆಗೆ ಸಿದ್ದತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ..!
ಭಾರೀ ಏರಿಕೆಯ ನಂತರ ಸ್ವಲ್ಪ ಇಳಿದ ಚಿನ್ನದ ಬೆಲೆ; 10 ಗ್ರಾಂಗೆ ₹170 ಕುಸಿತ, ಈಗ ಎಷ್ಟಿದೆ ಗೋಲ್ಡ್ ರೇಟ್..!
ಕಾಲುವೆಗೆ ಬಿದ್ದು 2 ವರ್ಷದ ಪುಟ್ಟ ಕಂದಮ್ಮ ಸಾವು..!
ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ, ಮಗು ಸೇರಿ 7 ಜನರ ದುರ್ಮರಣ..!
ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!
60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು..!
ಜೂನ್ 17ರವರೆಗೂ ಭಾರಿ ಮಳೆ ಮುನ್ಸೂಚನೆ: ಉತ್ತರ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!
ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!
ಇಸ್ರೇಲ್-ಇರಾನ್ ಉದ್ವಿಗ್ನ, ಚಿನ್ನದ ಬೆಲೆ ₹1 ಲಕ್ಷ ಗಡಿ ದಾಟಿದೆ : ಶುಕ್ರವಾರ 10 ಗ್ರಾಂ ಬಂಗಾರದ ಬೆಲೆ ₹2,120 ಏರಿಕೆ..!
ಪಡಿತರ ಚೀಟಿಯಲ್ಲಿನ ಸದಸ್ಯರ ಇಕೆವೈಸಿ ಪೂರ್ಣಗೊಳಿಸುವ ಅಂತಿಮ ಅವಕಾಶ..!
ಯೋಗೇಶ ಗೌಡ ಕೊಲೆ ಪ್ರಕರಣ : ಕೋರ್ಟಿಗೆ ಹಾಜರಾದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ..!
ವಿದ್ಯಾರ್ಥಿ ಬಸ್ ಪಾಸ್ ಬಗ್ಗೆ ವಿಳಂಬದ ಗೊಂದಲ, ಈ ದಾಖಲೆ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು..!
ಮುಂಡಗೋಡ ಪಿಡ್ಬ್ಲೂಡಿ ಇಂಜಿನೀಯರ್ ಸುಭಾಸ್ ವಡ್ಡತ್ತಿ ನಿಧನ..!
ಮುಂಡಗೋಡ- ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಭಾಸ್ ವಡ್ಡತ್ತಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವ್ರು ಇಂದು ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ರವಿವಾರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೃತರ ಸ್ವಗ್ರಾಮದಲ್ಲಿ ನಡೆಯಲಿದೆ ಅಂತಾ ಕುಟುಂಬ ಮೂಲಗಳು ತಿಳಿಸಿವೆ. ಇನ್ನು, ಸುಭಾಸ್ ವಡ್ಡತ್ತಿ ನಿಧನಕ್ಕೆ ತಾಲೂಕಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಂಡಗೋಡ ತಾಲೂಕಿನಲ್ಲಿ ಝಂಡೂ ಮೆಣಸಿನಕಾಯಿ ಬೆಳೆದ ರೈತರಿಗೆ ಸಂಕಷ್ಟ..!
ಮುಂಡಗೋಡ-ತಾಲೂಕಿನಲ್ಲಿ ಲಾಕ್ ಡೌನ್ ತಂದಿರೋ ಸಂಕಷ್ಟ ಒಂದಾ ಎರಡಾ.. ಬಡ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಗೋಳು ಒಂದೆಡೆಯಾದ್ರೆ, ಕೃಷಿಯನ್ನೇ ನಂಬಿ ಬದುಕುತ್ತಿರೊ ರೈತರ ಗೋಳು ಮತ್ತೊಂದೆಡೆಯಾಗಿದೆ. ಹೌದು, ಮುಂಡಗೋಡ ತಾಲೂಕಿನಲ್ಲಿ ಬೇಸಿಗೆ ಬೆಳೆಯಾಗಿ ಬೆಳೆಯಲಾಗಿರೊ ಝಂಡೂ ಮೆಣಸಿನಕಾಯಿ ಬರಪೂರ ಬೆಳೆದಿದ್ದರೂ ಸೂಕ್ತ ಬೆಲೆ ಸಿಗದೆ ರೈತನ ಕನಸಿಗೆ ಕೊಳ್ಳೆ ಇಟ್ಟಿದೆ. ಲಾಕ್ ಡೌನ್ ಆಗುವ ಮುನ್ನ ಪ್ರತೀ ಕ್ವಿಂಟಲ್ ಗೆ 4 ಸಾವಿರದ ವರೆಗೂ ಇದ್ದ ಝಂಡೂ ಮೆಣಸಿನಕಾಯಿ ಬೆಲೆ, ಈಗ 2 ಸಾವಿರ ರೂ. ಆಸುಪಾಸಿಗೆ ಬಂದು ನಿಂತಿದೆ. ಹೀಗಾಗಿ, ಈ ಹಣ ಮೆಣಸಿನಕಾಯಿ ಕೀಳಲು ಕೂಲಿ ಕೊಡುವುದಕ್ಕೂ ಸಾಕಾಗುವುದಿಲ್ಲ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.
ಕೊರೋನಾ ಕುರಿತು ಕುಂಚಗಳಲ್ಲೇ ಜಾಗ್ರತಿ ಮುಡಿಸುತ್ತಿರೊ ಕಲಾವಿದ
ವಿಶೇಷ ವರದಿ: ಮುಂಡಗೋಡ: ಆತ ಓರ್ವ ಚಿತ್ರ ಕಲಾವಿದ, ಪೇಂಟಿಂಗ್ ಮಾಡಿಕೊಂಡು ತನ್ನ ಬದುಕು ಕಟ್ಟಿಕೊಂಡಿದ್ದವ, ಆದ್ರೆ ಸದ್ಯ ಕೊರೋನಾ ಮಹಾಮಾರಿ ಜನರ ಜೀವ ಹಿಂಡುತ್ತಿರೋ ಸಂದರ್ಭದಲ್ಲಿ ಆತನೂ ಬಸವಳಿದು ಹೋಗಿದ್ದ.. ಕೊರೋನಾ ಮಹಾಮಾರಿಯಿಂದ ಅದೇಷ್ಟೋ ಸ್ನೇಹಿತರಿಗೆ ಆಗುತ್ತಿರೋ ತೊಂದರೆ, ಸಂಕಷ್ಟಗಳನ್ನು ಕಣ್ಣಾರೆ ಕಂಡಿದ್ದ, ಹೀಗಾಗಿ ಕೊರೋನಾ ವಿರುದ್ಧ ತಾನೂ ಯುದ್ಧ ಸಾರಬೇಕು ಅಂತಾ ನಿರ್ಧಾರ ಮಾಡಿದ್ದ.. ಯಸ್, ಹೀಗೆ ಕೊರೋನಾ ಹಿಮ್ಮೆಟ್ಟಿಸಲು ಆ ಕಲಾವಿದನಿಗೆ ಹೊಳೆದದ್ದು ಬೇರೆ ಏನೂ ಅಲ್ಲ.. ಜನ್ರಿಗೆ ಜಾಗ್ರತಿ ಮೂಡಿಸುವ ಮಹತ್ಕಾರ್ಯ.. ಹೀಗಾಗಿ, ತನ್ನ ಬತ್ತಳಿಕೆಯಲ್ಲಿದ್ದ ಕುಂಚಗಳನ್ನೇ ಆಯುಧಗಳನ್ನಾಗಿ ಮಾಡಿಕೊಂಡು ಫಿಲ್ಡಿಗಿಳಿದುಬಿಟ್ಟ.. ಪರಿಣಾಮ, ಹಳ್ಳಿ ಹಳ್ಳಿಗಳಲ್ಲಿ ಕೊರೋನಾ ಕುರಿತು ಚಿತ್ರಗಳ ಮೂಲಕವೇ ಜಾಗ್ರತಿ ಮೂಡಿಸುತ್ತಿದ್ದಾನೆ.. ಆತನ ಹೆಸ್ರು ಚಿದಾನಂದ್ ಬಡಿಗೇರ್.. ಮುಂಡಗೋಡಿನ ಹಳೂರು ನಿವಾಸಿ. ಚಿತ್ರನಟ ಉಪೇಂದ್ರರ ಬಹುದೊಡ್ಡ ಫ್ಯಾನ್. ಉಪೇಂದ್ರರವರ ಸಾಮಾಜಿಕ ಜವಾಬ್ದಾರಿಯ ಕಾರ್ಯದಂತೆಯೇ ಅವ್ರ ಅಭಿಮಾನಿಯಾದ ಚಿದಾನಂದ ಕೂಡ ತನ್ನ ಕೈಲಾದ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ.. ಮುಂಡಗೋಡ ತಾಲೂಕಿನ ಹಲವು ಹಳ್ಳಿಗಳಿಗೆ ತೆರಳಿ,...
ಸನವಳ್ಳಿ ಗ್ರಾಮದಲ್ಲಿ ಗಟಾರದ ಕೊಳಚೆ ನೀರು ರಸ್ತೆ ಮೇಲೆ: ಕಣ್ಣಿದ್ದು ಕುರುಡಾದ ಅಧಿಕಾರಿಗಳು..!
ಮುಂಡಗೋಡ- ತಾಲೂಕಿನ ಸಾಲಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸನವಳ್ಳಿ ಗ್ರಾಮದಲ್ಲಿ ಇದುವರೆಗೂ ಗ್ರಾಮದ ಮುಖ್ಯರಸ್ತೆಯಲ್ಲಿ ಪಕ್ಕಾಗಟಾರ ಇಲ್ಲದೆ ಚರಂಡಿ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ಇನ್ನಿಲ್ಲದ ಪಜೀತಿ ತಂದಿಡುತ್ತಿದೆ..! ಗಟಾರದ ಕಲುಷಿತ ನೀರು ಸಂಪೂರ್ಣವಾಗಿ ಮುಖ್ಯ ರಸ್ತೆಯ ಮೇಲೆ ಬಂದು ಸಾರ್ವಜನಿಕರ ಓಡಾಟಕ್ಕೆ, ವಾಹನ ಸವಾರರಿಗೆ ತೊಂದರೆಯಾಗಿದೆ. ವಾಹನ ಸವಾರರು ಪ್ರತಿದಿನವೂ ಈ ರಸ್ತೆಯಲ್ಲಿ ಜಾರಿಬಿದ್ದು ಗಾಯಗೊಂಡಿರೋ ಸಾಕಷ್ಟು ಪ್ರಕರಣಗಳಿವೆ. ನಿತ್ಯವೂ ಹೀಗೆ ಈ ರಸ್ತೆಯಲ್ಲಿ ಎದ್ದು ಬಿದ್ದು ಅಂಗೈಯಲ್ಲಿ ಜೀವ ಹಿಡಿದು ಓಡಾಡುವುದು ಅನಿವಾರ್ಯ ಎಂಬಂತಾಗಿದೆ. ಚರಂಡಿ ನೀರು ಗ್ರಾಮದಲ್ಲಿ ಸುಮಾರು ಎರಡು ಕಿಲೋಮೀಟರ್ ವರೆಗೆ ಹರಿಯುತ್ತದೆ. ಸಾಂಕ್ರಾಮಿಕ ರೋಗಗಳಿಗೆ ಕಾರ್ಖಾನೆಯಂತಾಗಿದೆ. ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಆದ್ರೆ ಇದುವರೆಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಗಾಲಿ, ಚುನಾಯಿತ ಜನಪ್ರತಿನಿಧಿಳಗಾಲಿ ಈ ಗ್ರಾಮದ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ.. ಕೊಳಚೆ ನೀರಿಗೆ ಸಮರ್ಪಕವಾದ ಗಟಾರ ನಿರ್ಮಿಸಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ ಅನ್ನೋದು ಗ್ರಾಮಸ್ಥರ...
ಮುಂಡಗೋಡ ತಾಲೂಕಾಸ್ಪತ್ರೆಗೆ, ಅಂಬ್ಯುಲೆನ್ಸ್, ಕೋವಿಡ್ ಕೇರ್ ಕಿಟ್ ವಿತರಿಸಿದ ಹೆಬ್ಬಾರ್..!
ಮುಂಡಗೋಡ- ತಾಲೂಕಾಸ್ಪತ್ರೆಯ ಆವರಣದಲ್ಲಿ ಇಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮುಂಡಗೋಡ ತಾಲೂಕಾ ಆಸ್ಪತ್ರೆಗೆ 2 ಹೊಸ ಅಂಬ್ಯುಲೆನ್ಸ್ ಹಸ್ತಾಂತರ ಹಾಗೂ ಕೋವಿಡ್ ಶಂಕಿತರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ನಿಶಾನೆ ತೋರಿಸುವ ಮೂಲಕ ಅಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್, ಕೋವಿಡ್ ಶಂಕಿತರಿಗೆ ನೀಡಲಾಗುವ ಕೋವಿಡ್ ಕೇರ್ ಕಿಟ್ ಬಿಡುಗಡೆಗೊಳಿಸಿದ್ರು. ಈ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯಿತಿ ಸಿಇಓ ಪ್ರಿಯಾಂಗ್, ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿಎಂ ಬದಲಾವಣೆ ಯಾವ ಕಾರಣಕ್ಕೂ ಇಲ್ಲ: ಸಿ.ಪಿ.ಯೋಗೀಶ್ವರ್ ಗೆ ಸಚಿವ ಹೆಬ್ಬಾರ್ ಟಾಂಗ್..!
ಯಲ್ಲಾಪುರ: ಮುಖ್ಯಮಂತ್ರಿ ಬದಲಾವಣೆ ಯಾವ ಕಾರಣಕ್ಕೂ ಇಲ್ಲ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಸಿಎಂ ಬದಲಾವಣೆ ವಿಚಾರವಾಗಿ, ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆಗೆ ನನ್ನ ಸಹಮತ ಇಲ್ಲ ಅಂತಾ ಖಡಕ್ಕಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ರು. ಸರಕಾರದಲ್ಲಿ ಇದ್ದುಕೊಂಡು ಈ ರೀತಿಯ ಹೇಳಿಕೆ ನೀಡುವುದು ಯೋಗೀಶ್ವರಗೆ ಶೋಭೆ ತರುವುದಿಲ್ಲ ಅಂತಾ ಹೆಬ್ಬಾರ್ ಕಿಡಿ ಕಾರಿದ್ರು. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದಿದ್ದಾಗಿ ಸಚಿವ ಅಶೋಕ್ ಹೇಳಿದ್ದು ನಿಜ, ಆದ್ರೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತೇವೆ ಅಂತಾ ಹೇಳಿಲ್ಲ. ಮುಂದಿನ ಚುನಾವಣೆ ಕೂಡಾ ಯಡಿಯೂರಪ್ಪ ನೇತೃತ್ವದಲ್ಲಿಯೇ ನಡೆಯಲಿದೆ ಅಂತಾ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತ ಪಡಿಸಿದ್ರು.
ಮುಂಡಗೋಡ ತಾಲೂಕಾಸ್ಪತ್ರೆಗೆ 1.33 ಲಕ್ಷ ರೂ. ವೈದ್ಯಕೀಯ ಸಲಕರಣೆ ನೀಡಿದ, ಟಿಬೇಟಿಗರ ಕರ್ಮಾ ಪೌಂಡೇಶನ್..!
ಮುಂಡಗೋಡ-ತಾಲೂಕಿನಲ್ಲಿ ನೊಂದವರ ಕಣ್ಣೀರು ಒರೆಸುತ್ತಿರೋ ಟಿಬೇಟಿಗರ ಕರ್ಮಾ ಪೌಂಡೇಶನ್ ಈಗ ಮತ್ತೊಂದು ಮಹತ್ತರ ಕಾರ್ಯ ಮಾಡಿ ಆದರ್ಶ ತೋರಿದೆ. ಬುದ್ದ ಪೂರ್ಣಿಮೆಯ ಅಂಗವಾಗಿ, ಮುಂಡಗೋಡ ತಾಲೂಕಾಸ್ಪತ್ರೆಗೆ ಒಟ್ಟೂ 1,33,280 ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ್ದಾರೆ. ಅದ್ರಲ್ಲಿ, 49280 ರೂ.ಮೌಲ್ಯದ NIBP patient monitor machine, 84,000 ರೂ. ಮೌಲ್ಯದ oxygen concentrator ಸೆರಿದ್ದು ಮುಂಡಗೋಡ ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆಯವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ. ಇನ್ನು ಟಿಬೇಟಿಯನ್ ಕಾಲೋನಿಯ ಡಿಟಿಆರ್ ಆಸ್ಪತ್ರೆಗೂ ಕೂಡ 84 ಸಾವಿರ ರೂ. ಮೌಲ್ಯದ oxygen concetratore machine ನೀಡಿದ್ದಾರೆ. ಅಂದಹಾಗೆ, ಅಮೇರಿಕದಲ್ಲಿ ವಾಸವಾಗಿರೋ ಯೊಂಗಚೆನ್ ಕುಟುಂಬ ಹಾಗೂ ಲೋಬ್ಚಾಂಗ್ ಚೋದೇನ್ ಕುಟುಂಬ ಕರ್ಮಾ ಪೌಂಡೇಶನ್ ಗೆ ಈ ವೈದ್ಯಕೀಯ ಸಲಕರಣೆಗಳನ್ನು ದೇಣಿಗೆ ನೀಡಿತ್ತು, ಹೀಗಾಗಿ ಕರ್ಮಾ ಪೌಂಡೇಶನ್ ತಾಲೂಕಾಸ್ಪತ್ರೆಗೆ ಹಾಗೂ ಡಿಟಿಆರ್ ಆಸ್ಪತ್ರೆಗೆ ಹಸ್ತಾಂತರಿಸಿದೆ
4 ದಿನದ ಹಿಂದೆಯಷ್ಟೇ ಮದುವೆಯಾದ ನವ ವಿವಾಹಿತೆ ಕೊರೋನಾಗೆ ಬಲಿ..!
ಶಿವಮೊಗ್ಗ: ಕಳೆದ ನಾಲ್ಕು ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಕೊರೊನಾಗೆ ಬಲಿಯಾದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದಲ್ಲಿ ನಡೆದಿದೆ. ಪೂಜಾ ಎಂಬುವವರೇ ಕೊರೋನಾಗೆ ಬಲಿಯಾದ ನವವಧು ಆಗಿದ್ದಾರೆ.. ಪೂಜಾ ಅವರ ವಿವಾಹ ಕಳೆದ ನಾಲ್ಕು ದಿನದ ಹಿಂದೆ ಅಂದರೆ ಮೇ 24 ರಂದು ಹರಿಗೆಯ ಮಹೇಶ್ ಅವರೊಂದಿಗೆ ನಡೆದಿತ್ತು. ಮದುವೆಯ ಮರು ದಿನದಿಂದಲೇ ಪೂಜಾಗೆ ಜ್ವರ ಕಾಣಿಸಿಕೊಂಡಿತ್ತು. ಆದರೆ ಸ್ಥಳೀಯ ಕ್ಲಿನಿಕ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಪೂಜಾಗೆ, ಇಂದು ಜ್ವರ ಜಾಸ್ತಿಯಾದ ಹಿನ್ನೆಲೆಯಲ್ಲಿ ಪೂಜಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಹೀಗಾಗಿ, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕ ಆವರಿಸಿದೆ.
ಇಂದೂರು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ: CCTV ಕ್ಯಾಮೆರಾ ಕದ್ದೊಯ್ದ ಕಳ್ಳರು..!
ಮುಂಡಗೋಡ: ತಾಲೂಕಿನ ಇಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಇಂದೂರು ಗ್ರಾಮವನ್ನು ವಿಶೇಷ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ, ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಇದೇ ಸಮಯವನ್ನೇ ಉಪಯೋಗಿಸಿಕೊಂಡಿರೋ ಕಳ್ಳರು, ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.. ಅಂದಹಾಗೆ, ಶಾಲೆಯ ವರಾಂಡದಲ್ಲಿ ಹಾಕಲಾಗಿದ್ದ ಎರಡು CCTV ಕ್ಯಾಮೆರಾಗಳನ್ನು ಕಿತ್ತೊಯ್ದಿರೋ ಕಳ್ಳರು, ಶಾಲೆಯ 5 ಕೊಠಡಿಗಳ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ, ಅಲ್ದೆ ಬಾತ್ ರೂಮಿನ ಬೀಗವನ್ನೂ ಮುರಿದಿದ್ದಾರೆ. ಆದ್ರೆ ಯಾವುದೇ ವಸ್ತುಗಳನ್ನೂ ಮುಟ್ಟಿಲ್ಲ. ಇನ್ನು ಶುಕ್ರವಾರ ಅಂಗನವಾಡಿ ಕಾರ್ಯಕರ್ತೆ ಶಾಲೆಯ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಶಾಲಾ ಆಡಳಿತ ಸಮಿತಿಗೆ ಮಾಹಿತಿ ನೀಡಿದಾಗ, SDMC ಅಧ್ಯಕ್ಷ ಹಾಗೂ ಗ್ರಾಮಸ್ಥರು ಬಂದು ಪರಿಶೀಲಿಸಿದ್ದಾರೆ. ಆ ನಂತರ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.