ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!


ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲನಿಯ ಟಿಬೇಟಿಗನೊಬ್ಬ ಡಿಜಿಟಲ್ ವಂಚಕರ ಜಾಲದಲ್ಲಿ ಅನಾಮತ್ತಾಗಿ ತಗಲಾಕ್ಕೊಂಡಿದ್ದಾನೆ. ಮುಂಬೈ ಪೊಲೀಸರ ಹೆಸರಿನಲ್ಲಿ ಬಂದ ಅದೊಂದು ವಾಟ್ಸ್ ಆಪ್ ಕರೆಗೆ ಥರಗುಟ್ಟಿ, ಬರೋಬ್ಬರಿ 1.61 ಕೋಟಿ ರೂಪಾಯಿಯನ್ನು ಅನಾಮತ್ತಾಗಿ ಕಳೆದುಕೊಂಡಿದ್ದಾನೆ. ಎಲ್ಲಾ ಕಳೆದುಕೊಂಡ ಮೇಲೆ ಸೈಬರ್ ಪೊಲೀಸರ ಮೊರೆ ಹೋಗಿದ್ದಾನೆ. ಪಾಪ, ಪೊಲೀಸ್ರು ಅದೇಷ್ಟೇ ಬಡಕೊಂಡ್ರೂ, ಇಂತಹ ವಂಚಕರ ಜಾಲದಲ್ಲಿ ನಿತ್ಯವೂ ಸಿಲುಕಿ ಒದ್ದಾಡುವವರ ಸಾಲಿನಲ್ಲಿ ಮತ್ತೊಬ್ಬ ನಿವೃತ್ತ ಟಿಬೇಟಿಯನ್ ಶಿಕ್ಷಕ ಸೇರಿಕೊಂಡಿದ್ದಾನೆ.

ಆತ ಕ್ಯಾಂಪ್ ನಂಬರ್ 8 ರ ನಿವಾಸಿ..!
ಅಂದಹಾಗೆ, ಟಿಬೆಟಿಯನ್ ಕ್ಯಾಂಪ್ ನಂ.8ರ ನಿವಾಸಿ ಪಲ್ಡೆನ್ ಲೋಬ್ಸಂಗ್ ಚೊಡಾಕ್ ವಂಚನೆಗೊಳಗಾದ ಶಿಕ್ಷಕನಾಗಿದ್ದಾನೆ. ಕೇಂದ್ರಿಯ ಶಾಲೆಯ ನಿವೃತ್ತ ಶಿಕ್ಷಕನಿಗೆ ವಂಚಕರು ‘ಡಿಜಿಟಲ್ ಆರೆಸ್ಟ್’ ಮಾಡುವ ಬೆದರಿಕೆ ಮೂಲಕ ಹಂತ ಹಂತವಾಗಿ ಹಣ ದೋಚಿದ್ದಾರೆ.

ಘಟನೆ ಹೇಗಾಯ್ತು ಗೊತ್ತಾ..?
2025 ನವೆಂಬರ್ 29ರಂದು ಪಲ್ಡೆನ್ ಅವರಿಗೆ ಯುವತಿಯೊಬ್ಬಳು ವಾಟ್ಸ್ ಆಪ್ ಕರೆ ಮಾಡಿ ತಾನು ಮಹಾರಾಷ್ಟದ ಕೋಲವಾ ಪೊಲೀಸ್ ಠಾಣೆಯವಳು ನಮ್ಮ ಇನ್ಸ್‌ಪೆಕ್ಟರ್ ಮಾತನಾಡುತ್ತಾರೆ ಎಂದು ಬೇರೊಬ್ಬರಿಗೆ ಪೋನ್ ನೀಡಿ ನಾನು ಈ ಠಾಣೆಯ ಇನೇಸ್ಪೇಕ್ಟರ್ ಮುಂಬಯಿಯಲ್ಲಿ ಇತ್ತಿಚೇಗೆ ಮುಂಬೈನಲ್ಲಿ ಓ.ಎಮ್.ಅಬ್ದುಲಸಲಾಂ ಎಂಬ ಉಗ್ರವಾದಿ ನಾಯಕನನ್ನು ಬಂಧಿಸಲಾಗಿದ್ದು ಆತನ ಬಳಿ ಸಿಕ್ಕ ಬರೋಬ್ಬರಿ 250 ಎ.ಟಿ.ಎಂ. ಕಾರ್ಡ್‌ಗಳಲ್ಲಿ ಸಿಕ್ಕಿದ್ದು ಅದರಲ್ಲಿ ನಿಮ್ಮ ಹೆಸರಿನ ಕೆನರಾ ಬ್ಯಾಂಕ್ ಕಾರ್ಡ್ ಕೂಡ ಇದೆ ಎಂದು ನಂಬಿಸಿದ್ದಾರೆ. ಅಷ್ಟೇ ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಕೋಟ್ಯಾಂತರ ರೂಪಾಯಿ ಮನಿ ಲಾಂಡ್ರಿಂಗ್ ನಡೆದಿದ್ದು, ನಿಮ್ಮ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾನೆ.

ಮಹಾರಾಷ್ಟ್ರ ಪೊಲೀಸ್ರ ಹೆಸರಲ್ಲಿ ದಂಧೆ..!
ವಂಚಕನು ಪೊಲೀಸ್ ಸಮವಸ್ತ್ರ ಧರಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವೀಡಿಯೋ ಕರೆ ಮಾಡಿ ಪೊಲೀಸ್ ಠಾಣೆಯ ವಾತಾವರಣವನ್ನು ತೋರಿಸಿ ಪೂರ್ತಿಯಾಗಿ ನಂಬಿಸಿದ್ದಾನೆ. ಪಲ್ಡೆನ್ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿರುವ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಕೂಡ ಕಳುಹಿಸಿ ಆರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪಲ್ಡೆನ್ ಹೇಳಿದಾಗ ತನಿಖೆಯ ನೆಪದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ‘ನ್ಯಾಷನಲ್ ಫಂಡ್’ಗೆ ಜಮಾ ಮಾಡಬೇಕು, ತನಿಖೆ ಮುಗಿದ ನಂತರ ಹಣ ವಾಪಸ್ ನೀಡಲಾಗುವುದು ಎಂದು ವಂಚಕನು ನಂಬಿಸಿದ್ದಾನೆ.

ವಿಷಯವನ್ನು ಯಾರೊಂದಿಗೂ ಹೇಳಬೇಡ ಎಂದು ಮತ್ತು ಪ್ರತಿ ಎರಡು ಗಂಟೆಗೊಮ್ಮೆ ವಾಟ್ಸ್ ಆಪ್ ಮೂಲಕ ವರದಿ ನೀಡುವಂತೆ (ಗುಡ್ ಮಾರ್ನಿಂಗ್‌, ಗುಡ್ ನೈಟ್ ಸಂದೇಶಗಳನ್ನು ಕಳಿಸಿ) ಆದೇಶಿಸಿ ಅವರನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾನೆ.

ಸುಳ್ಳು ಬೆದರಿಕೆಗೆ ಹೆದರಿದ ಪಲ್ಡೆನ್ ತಮ್ಮ ಕೆನರಾ ಬ್ಯಾಂಕ್, ಎಸ್‌ಬಿಐ ಮತ್ತು ಕೆಡಿಸಿಸಿ ಬ್ಯಾಂಕ್‌ನಲ್ಲಿದ್ದ ಸ್ಥಿರ ಠೇವಣಿ (FD) ಹಣವನ್ನು ಬಿಡಿಸಿಕೊಂಡು ಹಾಗೂ ಪರಿಚಿತರಿಂದ ಸಾಲ ಪಡೆದು, ಡಿಸೆಂಬರ್ 3 ರಿಂದ ಡಿಸೆಂಬರ್ 11ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,61,00,047 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ನಂತರ ಪೋನ್ ಕರೆ ಮಾಡಿ ನಮ್ಮ ತನಿಖೆ ಮುಗಿದಿದೆ ತನಿಖೆಯ ನಂತರ ನಿಮ್ಮ ಹಣ ವರ್ಗಾವಣೆ ಮಾಡುತ್ತೇವೆ. ಇನ್ನೂ ಮುಂದೆ ಈಡಿ ತನಿಖೆ ನಡೆಯಲಿದೆ ಅವರು ಕೂಡ ನಿಮ್ಮ ನಿಮ್ಮ ಮನೆಗೆ ಬಂದು ಬಂದಿಸುವ ಸಾಧ್ಯತೆ ಇದೆ ಎಂದು ಮತ್ತೆ 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ದಿಕ್ಕೂ ತೋಚದೆ ಇದ್ದಾಗ ತನ್ನ ಸ್ನೇಹಿತನ ಹತ್ತಿರ ಹೋಗಿ ಹಣ ನೀಡುವಂತೆ ಪಲ್ಡೇನ್ ಕೇಳಿದಾಗ ಏಕೆ ತುಂಬಾ ಅರ್ಜಂಟ್ ಮಾಡುತ್ತಿದಿ ನಿನಗೆ ಯಾಕೆ ಹಣ ಬೇಕು ಏನು ನಡೆದಿದೆ ಹೇಳು ಎಂದು ಸ್ನೇಹಿತ ಒತ್ತಡ ಹಾಕಿದಾಗ ನಡೆದ ವಿಷಯವನ್ನು ಸ್ನೇಹಿತನಿಗೆ ಹೇಳಿದ್ದಾನೆ. ನಂತರ ಎಚ್ಚರಗೊಂಡ ಪಲ್ಡೇನ ತನ್ನ ಸ್ನೇಹಿತನೊಂದಿಗೆ
ತಾನು ವಂಚನೆಗೆ ಒಳಗಾಗಿರುವುದು ತಿಳಿದು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಅಂತಾ ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಮಾಹಿತಿ ನೀಡಿದ್ದಾನೆ.