Death News; ವಿಜಯನಗರ; ಚೆಕ್ ಡ್ಯಾಂನಲ್ಲಿ ಈಜಲು ಹೋಗಿ ಇಬ್ಬರು ಮಕ್ಕಳು ದುರಂತ ಸಾವು ಕಂಡಿದ್ದಾರೆ. ಹೊಸಪೇಟೆಯ ಕಾರಿಗನೂರು ಹೊರವಲಯದ ಗುಡ್ಡದ ತಿಮ್ಮಪ್ಪನ ದೇಗುಲದ ಬಳಿ ಘಟನೆ ನಡೆದಿದೆ.
ಹನುಮಂತ ( 14) ಅರವಿಂದ (14) ಮೃತಪಟ್ಟ ಬಾಲಕರಾಗಿದ್ದಾರೆ. ಇಬ್ಬರು 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ರು. ಈಜಲು ಚೆಕ್ ಡ್ಯಾಂ ಬಳಿ ಇಳಿದಿದ್ದು, ಈಜು ಬಾರದೇ ಮೃತಪಟ್ಟಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.