Tadas Crime News: ಶಿಗ್ಗಾವಿ ತಾಲೂಕಿನ ತಡಸ ಪೊಲೀಸರು ಅದೇಲ್ಲಿಗೆ ಹೋಗಿ ಅದೇನು ಕಡಿದು ಗುಡ್ಡೆ ಹಾಕ್ತಿದಾರೋ ಏನೋ ಯಾರಿಗೂ ಅರ್ಥವಾಗ್ತಿಲ್ಲ.. ಈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯಬಾರದ ಅಡ್ಡಕಸುಬುಗಳು, ಅಕ್ರಮಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಮಟ್ಕಾ ಅನ್ನೋದು ಈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಮಾತಾಗಿದೆ. ಮದ್ಯ ಅನ್ನೋದು ಇಲ್ಲಿನ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಎಗ್ಗಿಲ್ಲದೇ ಬಿಕರಿ ಆಗ್ತಿದೆ. ಇನ್ನು ಇಸ್ಪೀಟು ಅಡ್ಡೆಗಳು ಕಾಡಿನ ನಡುವೆ ಸಂತೆ ಮಾಡ್ತಿವೆ.
ದುಂಢಸಿ ಕಾಡಲ್ಲಿ ಅಂದರ್ ಬಾಹರ್..!
ಇನ್ನು ತಡಸ ಪೊಲೀಸರ ಕೃಪಾಶೀರ್ವಾದದ ಬಲದಿಂದಲೋ ಏನೋ ಗೊತ್ತಿಲ್ಲ, ದುಂಢಸಿಯ ಕಾಡಲ್ಲಿ ಇಸ್ಪೀಟು ಅಡ್ಡೆಗಳು ಹೆಜ್ಜೆಗೊಂದರಂತೆ ಹುಟ್ಟಿಕೊಂಡಿವೆ. ಬೆಳಗಾಯಿತೆಂದರೆ ಸಾಕು ನಿತ್ಯವೂ ಇಲ್ಲಿನ ಅಡ್ಡೆಗಳು ಚಟಾಧೀಶರುಗಳನ್ನು ಕೈ ಬೀಸೀ ಕರಿತಿವೆ. ನಿಜ ಅಂದ್ರೆ ಇಲ್ಲಿನ ಒಂದೊಂದು “ಕಣ” ದಲ್ಲಿ ಏನಿಲ್ಲವೆಂದರೂ 50 ರಿಂದ 60 ಜನ ಅಂದರ್ ಬಾಹರ್ ಆಟದಲ್ಲಿ ಬ್ಯಸಿಯಾಗಿರ್ತಾರೆ. ಅಸಲು ಇಲ್ಲಿ ಒಂದೊಂದು ಆಟದಲ್ಲೇ ಲಕ್ಷ ಲಕ್ಷ ಹಣ ಕೈ ಬದಲಾಯಿಸ್ತಿದೆ. ಅಂದ್ರೆ, ಇಷ್ಟೇಲ್ಲ ದಂಧೆಯ ಕಿಂಗ್ ಪಿನ್ ಗಳು ಅವ್ರಿಬ್ಬರು ಮಾತ್ರ.. ಅದೂ ಕೂಡ ಶಾಸಕನ ಹೆಸರಲ್ಲಿ ದಂಧೆಗಿಳಿದಿರೋ ಈ ಖತರ್ನಾಕ ಕಿಲಾಡಿಗಳಿಗೆ ಕೆಲ ಎಂಜಲು ಬುರುಕ ಖಾಕಿಗಳ ನೆರಳಿದೆ ಅನ್ನೋದು ಈ ಭಾಗದಲ್ಲಿ ಜನರ ಮಾತು.
ಪೊಲೀಸರಿಗೆ ಗೊತ್ತಿಲ್ವಾ..?
ಹಾಗೆ ನೋಡಿದ್ರೆ, ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳದ್ದೇ ಪಾರುಪತ್ಯವಾಗಿದೆ. ಇಲ್ಲಿನ ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗಳು ಎಗ್ಗಿಲ್ಲದೇ ನೆಲ ಬಗಿಯುತ್ತಿದ್ದರೆ, ಇಸ್ಪೀಟು ಅಡ್ಡೆಗಳು ಹೆಜ್ಜೆಗೊಂದರಂತೆ ತಲೆಎತ್ತಿ, ಇಡೀ ಪರಿಸರವನ್ನೇ ಬರ್ಬಾದು ಮಾಡ್ತಿವೆ. ಇಲ್ಲಿನ ಅಂದರ್ ಬಾಹರ್ ಅಡ್ಡೆಗಳಿಗೆ ಹುಬ್ಬಳ್ಳಿ ಹಾನಗಲ್, ಸೇರಿದಂತೆ ಹಲವು ಕಡೆಗಳಿಂದ ಗಿರಾಕಿಗಳು ಬಂದು ಕೂರುತ್ತಿವೆ. ಹೀಗಾಗಿ, ಇಲ್ಲಿ ಲಕ್ಷ ಲಕ್ಷ ಹಣ “ಕಣ” ದಲ್ಲಿರತ್ತೆ.
ಪಠಾಣ್ ಸಾಹೇಬ್ರೇ ಗಮನಿಸಿ..!
ಇಡೀ, ಶಿಗ್ಗಾವಿ ಕ್ಷೇತ್ರದಲ್ಲಿ ಕಳೆದ ಉಪಚುನಾವಣೆಯಲ್ಲಿ ಬೊಮ್ಮಾಯಿ ಬಳಗವನ್ನೇ ಧಿಕ್ಕರಿಸಿ, ಪಠಾಣ್ ಅನ್ನೋ ಹೊಸಮುಖ, ಮನೆ ಮಗನಿಗೆ ಇಲ್ಲಿನ ಮರದಾರ ಭರವಸೆಯ ಮಣೆ ಹಾಕಿದ್ದ.. ಯಾಸೀರಖಾನ್ ಪಠಾಣ್ ಶಾಸಕರಾದ್ರೆ ಕ್ಷೇತ್ರದ ಬಡವ ಉದ್ಧಾರ ಆಗ್ತಾನೆ ಅನ್ನೊ ಭರವಸೆ ಈ ಕ್ಷಣಕ್ಕೂ ಇದೆ. ನಿಜ ಅಂದ್ರೆ ಶಾಸಕ ಯಾಸೀರಖಾನ್ ಪಠಾಣ್ ಕೂಡ ಜನರ ಜೊತೆ ಬೆರಿತಿದಾರೆ ಅನ್ನೊ ಮಾತಿದೆ.
ಆದ್ರೆ, ಕ್ಷೇತ್ರದ ಕೆಲ ಅಡ್ನಾಡಿಗಳು, ದಂಧೆಕೋರರು, ನಾಲಾಯಕ ಮನಸ್ಥಿತಿಯ ಪುಡಾರಿಗಳು ಶಾಸಕರ ಹೆಸರಲ್ಲಿ ಅಕ್ರಮ ಮಾಡ್ತಿದಾರೆ ಅನ್ನೋ ಆರೋಪಗಳು ಕೇಳಿ ಬರ್ತಿವೆ. ದುಂಢಸಿ ಕಾಡಲ್ಲಿನ ಇಸ್ಪೀಟು ಅಡ್ಡೆಗಳನ್ನು ನಡೆಸ್ತಿರೋ ಆ ಇಬ್ಬರೂ ಪುಡಾರಿಗಳು ಪಠಾಣರ ಪರಮಾಪ್ತರು ಅನ್ನೋ ಟ್ರಂಪ್ ಕಾರ್ಡ್ ಬಳಸಿ ದಂಧೆ ಮಾಡ್ತಿವೆ ಅನ್ನೋ ಮಾತು ಕೇಳಿ ಬರ್ತಿದೆ. ಹೀಗಾಗಿ, ಶಾಸಕ ಯಾಸೀರಖಾನ್ ಪಠಾಣ್, ಇಂತಹ ನಾಲಾಯಕ ದಂಧೆಕೋರರ ಬಗ್ಗೆ ಒಂದಿಷ್ಟು ಜಾಗ್ರತೆ ವಹಿಸಲಿ ಅನ್ನೋದು ಹಿತೈಸಿಗಳ, ಅಭಿಮಾನಿಗಳ ಅಭಿಪ್ರಾಯ. ಇಲ್ಲವಾದಲ್ಲಿ ಬಹುಶಃ ಇಂತವರಿಂದ ಶಾಸಕರಿಗೆ ಕಳಂಕ ಬರೋದರಲ್ಲಿ ಎರಡು ಮಾತಿಲ್ಲ.
ಇನ್ನು, ಈ ಭಾಗದಲ್ಲಿ ಅವ್ಯಾಹತವಾಗಿ ನಡಿತಿರೋ ಇಂತಹ ಇಸ್ಪೀಟು ಅಡ್ಡೆಗಳು, ಮಟ್ಕಾದಂತಹ ದಂಧೆಗಳಿಗೆ, ಬೆಂಗಾವಲಾಗಿ ನಿಂತಿರೋ ಕೆಲ ಆಸೆಬುರುಕ, ಲಂಚಬಾಕ ಪೊಲೀಸರಿಗೆ ಹಾವೇರಿ ಎಸ್ಪಿ ಕಿವಿ ಹಿಂಡಬೇಕಿದೆ. ಇಲ್ಲವಾದಲ್ಲಿ ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತಷ್ಟು ಅಂದಾ ದರ್ಬಾರ್ ನಡೆಯೋದರಲ್ಲಿ ಎರಡು ಮಾತಿಲ್ಲ.