ಮುಂಡಗೋಡ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಅಹ್ವಾನ..!

ಮುಂಡಗೋಡಿನಲ್ಲಿ ಅಕ್ಟೊಬರ್ 16 ರಂದು ನಡೆಯುತ್ತಿರೋ ಮುಂಡಗೋಡ ತಾಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಎಸ್. ಪಕ್ಕೀರಪ್ಪ ಆಯ್ಕೆಯಾಗಿದ್ದಾರೆ. ಹೀಗಾಗಿ ಸರ್ವಾಧ್ಯಕ್ಷರಿಗೆ ಸಮ್ಮೇಳನದ ಕಾರ್ಯಕಾರಿ ಸಮಿತಿಯಿಂದ ಅಧಿಕೃತ ಅಹ್ವಾನ ನೀಡಲಾಯಿತು.

ತಾಲೂಕಾ ಕಸಾಪ ಅಧ್ಯಕ್ಷ ವಸಂತ ಕೋಣಸಾಲಿ ತಮ್ಮ ಸದಸ್ಯರುಗಳೊಂದಿಗೆ ಸೇರಿ ಎಸ್. ಪಕ್ಕೀರಪ್ಪ ರವರಿಗೆ ಸನ್ಮಾನಿಸಿ ಆಮಂತ್ರಣ ಕೋರಿದ್ರು.

ಈ ವೇಳೆ ಎಸ್.ಬಿ.ಹೂಗಾರ, ಸುಭಾಸ್ ವಡ್ಡರ್, ಸಂಗಪ್ಪ ಕೋಳೂರು, ಶ್ರೀಮತಿ ಶಾರದಾ ರಾಠೋಡ, ಎಸ್. ಕೆ. ಬೋರಕರ, ಮಾಜಿ ಸಮ್ಮೇಳನ ಸರ್ವಾಧ್ಯಕ್ಷರು ಹಾಗೂ ಪತ್ರಕರ್ತರಾದ ರಾಜಶೇಖರ ನಾಯ್ಕ, ಶಿವಾನಂದ ವಾಲಿಶೆಟ್ಟರ, ನಾಗರಾಜ ಅರ್ಕಸಾಲಿ, ಮಲ್ಲಮ್ಮ ನೀರಲಗಿ, ಆನಂದ ಹೊಸೂರು,ಕು. ಸ್ನೇಹಾ ಹೊಸಮನಿ, ಸಾನಿಯಾ ಹೊಸಮನಿ ಹಾಗೂ ಪಕ್ಕೀರಪ್ಪರವರ ಧರ್ಮ ಪತ್ನಿ ಗಂಗಾ ಹೊಸಮನಿ, ಶೀಲಾ ರಾಠೋಡ ಮುಂತಾದವರು ಹಾಜರಿದ್ದರು. ಗೌರವ ಕಾರ್ಯದರ್ಶಿ ವಿನಾಯಕ. ಶೇಟ್ ಸ್ವಾಗತಿಸಿದರು, ಎಸ್ ಡಿ. ಮುಡೆಣ್ಣವರ ವಂದಿಸಿದರು.

error: Content is protected !!