ಉತ್ತರ ಕನ್ನಡದ ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ರಾಜ್ಯ ಡಕಾಯಿತರ ಬಂಧನ..!

ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ಟೀಂ ನಿಜಕ್ಕೂ ಅದ್ಭುತ ಕಾರ್ಯ ಮಾಡಿದೆ. ದರೋಡೆಗೆ ಸಂಚು ರೂಪಿಸಿ ಬಸ್ ಹತ್ತಿ ಹೊರಟಿದ್ದ, ಇಬ್ಬರು ಖತರ್ನಾಕ್ ಅಂತರ್ ರಾಜ್ಯ ದರೋಡೆಕೋರರನ್ನ ಹೆಡೆಮುರಿ ಕಟ್ಟಿದ್ದಾರೆ. ಫಿಲ್ಡಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಕ್ರಿಮಿಗಳು ಮಾತ್ರ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.

ಅನಮೋಡ್ ಚೆಕ್ ಪೊಸ್ಟ್..!
ಅಂದಹಾಗೆ, ನಿನ್ನೆ ಶನಿವಾರ, ಅಂದ್ರೆ, ಜುಲೈ 27 ರಂದು ರಾಮನಗರದ ಅನಮೋಡ್ ಅಬಕಾರಿ ಚೆಕ್ ಪೊಸ್ಟ್ ನಲ್ಲಿ ಸಿಬ್ಬಂದಿಯವ್ರು ತಪಾಸಣೆ ಕಾರ್ಯ ಮಾಡ್ತಿರ್ತಾರೆ. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುವ ಅಕ್ರಮಿಗಳ ಮೇಲೆ ಹದ್ದಿನ ಕಣ್ಣಿಟ್ಟಿರ್ತಾರೆ. ಈ ವೇಳೆ ಪೊಲೀಸ್ರನ್ನ ನೋಡಿ ಅದೊಂದಿಷ್ಟು ಜನ ಮೆಲ್ಲಗೇ ಕಾಲ್ಕಿಳೋಕೆ ಟ್ರೈ ಮಾಡ್ತಾ ಇರ್ತಾರೆ. ಹೀಗಾಗಿ ಅಲರ್ಟ್ ಆದ ಪೊಲೀಸ್ರು ಅವ್ರನ್ನ ಬೆನ್ನತ್ತಿ ಹೋಗಿದ್ದಾಗ ಅವ್ರೇಲ್ಲ ಕಾಡಿನಲ್ಲಿ ಪರಾರಿಯಾಗಿ ಬಿಡ್ತಾರೆ.

ಉತ್ತರ ಕನ್ನಡ ಎಸ್ಪಿ ನಾರಾಯಣ್

ಅವ್ರು ನಾಲ್ಕು ಜನ..!
ಹೀಗಾಗಿ, ರಾತ್ರಿಯಿಡಿ ಆಗಂತುಕರಿಗಾಗಿ ಕಣ್ಣಿಟ್ಟು ಕೂತಿದ್ದ ರಾಮನಗರ ಪೊಲೀಸರಿಗೆ ಕೊನೆಗೂ ಆ ನಾಲ್ವರೂ, ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ದೇವಳ್ಳಿಯ ರೈಲ್ವೆ ಗೇಟ್ ಹತ್ತಿರ ತಿರುಗಾಡ್ತಿದಾರೆ ಅನ್ನೋ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದಾಗ, ಇಬ್ಬರು ಖತರ್ನಾಕ ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ.

ದಾಂಡೇಲಿ ಡಿವೈಎಸ್ಪಿ

ರಾಜಸ್ಥಾನ ಟೂ ಗೋವಾ..!
ಅಸಲು, ಈ ಖತರ್ನಾಕ ಖದೀಮರು ದೂರದ ರಾಜಸ್ಥಾನದವರು, ಸದ್ಯ ಬೆಂಗಳೂರಿನಿಂದ, ದರೋಡೆಯ ಪ್ಲ್ಯಾನ್ ರೂಪಿಸಿಕೊಂಡೇ ಗೋವಾಗೆ ಹೋಗಿದ್ರು. ಅಂದಹಾಗೆ ಇವ್ರು ಸಣ್ಣಪುಟ್ಟ ಕಳ್ಳತನ ಮಾಡೋರಲ್ಲ. ಬದಲಾಗಿ ಕೆಜಿಗಟ್ಟಲೇ ಚಿನ್ನ, ಬೆಳ್ಳಿಯ ವಾಸನೆ ಹಿಡಿದು ಸ್ಕೆಚ್ ಹಾಕೋರು. ಈ ಕಾರಣಕ್ಕಾಗೇ ಕಳೆದ ಒಂದು ವಾರದ ಹಿಂದೆ ಬೆಂಗಳೂರಿನಿಂದ ರಾಕೇಶ ಪ್ರಜಾಪತಿ ಎಂಬುವವ ಗೋವಾದ ಮಡಗಾಂವಿಗೆ ಬಂದು ಹೋಗಿದ್ದ. ಮಡಗಾಂವನಲ್ಲಿರುವ ಸ್ಟಾರ್ ಜ್ಯುವೇಲರಿ ಅಂಗಡಿ ಯೊಂದನ್ನು ಗುರ್ತು ಮಾಡಿಕೊಂಡು ಹೋಗಿದ್ದ. ಹೀಗಾಗಿ, ಬೆಂಗಳೂರಿನ ಚಿಕ್ಕಪೇಟ ಏರಿಯಾದ “ಶ್ರೀನಿವಾಸ ಲಾಡ್ಜ್ ನಲ್ಲಿ, ಕುಳಿತು ಸ್ಕೆಚ್ ರೂಪಿಸಿಕೊಂಡಿದ್ರು.

CPI ರಾಮನಗರ

ಅವತ್ತು, ಸ್ನೇಹಿತರಾದ ಸಂದೀಪ ಜಾಟ, ಲಾಡು ಸಿಂಗ್ ಗೆ ಗೋವಾದ ಮಡಗಾವಿನ ಚಿನ್ನದ ಅಂಗಡಿ ದರೋಡೆ ಮಾಡಲು ಕಳಿಸಿಕೊಟ್ಟಿದ್ದ. ಜೊತೆಗೆ ಮೂರು ಪಿಸ್ತೂಲಗಳು ಹಾಗೂ ರೌಂಡ್ಸ್ ಗಳನ್ನು ಕೊಟ್ಟು ಕಳುಹಿಸಿದ್ದ.

PSI ರಾಮನಗರ

ಗೋವಾ ಪ್ಲ್ಯಾನ್..!
ಹೀಗಾಗಿ, 4 ಜನ ಆರೋಪಿತರು 2-3 ದಿನಗಳ ಕಾಲ ಮಡಗಾಂವಿನ ಮಾರ್ಕೇಟ್ ಏರಿಯಾದ ದತ್ತರಾಜ್ ಲಾಡ್ಜ್‌ನಲ್ಲಿ ರೂಮ್ ಮಾಡಿಕೊಂಡಿದ್ದರು. ಬೈಕ್, ಕಾರನ್ನು ಬಾಡಿಗೆ ಪಡೆದು ತಿರುಗಾಡಿದ್ದರು, ಎಲ್ಲ ರೀತಿಯಲ್ಲಿ ಡಕಾಯತಿ ಮಾಡುವ ತಯಾರಿಯಲ್ಲಿ ಹೋದರೂ ಅದ್ಯಾಕೋ ಗೊತ್ತಿಲ್ಲ, ಪ್ಲ್ಯಾನ್ ಕೈ ಕೊಟ್ಟಿತ್ತು.

ಹೀಗಾಗಿ, ಗತಿಯಿಲ್ಲ ಅಂತಾ, ಬಸ್ ಮೂಲಕ ಹುಬ್ಬಳ್ಳಿಗೆ ವಾಪಸ್ಸಾಗುತ್ತಿದ್ದರು. ಹಾಗೆ ನಡುವೆ ಎಲ್ಲಾದ್ರೂ ಅವಕಾಶ ಸಿಕ್ರೆ ಖರ್ಚಿಗಾದ್ರೂ ಇರಲಿ ಅಂತಾ ದರೋಡೆ ಮಾಡುವ ಪ್ಲ್ಯಾನ್ ಹಾಕಿಕೊಂಡು ಹುಬ್ಬಳ್ಳಿ ಬಸ್ಚಹತ್ತಿದ್ದರಂತೆ, ಆದ್ರೆ, ನಸೀಬು ಖರಾಬಾಗಿ ರಾಮನಗರ ಪೊಲೀಸರ ಕೈಗೆ ನಾಲ್ವರಲ್ಲಿ ಇಬ್ಬರು ತಗಲಾಕ್ಕೊಂಡಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ರಾಜಸ್ಥಾನ ಮೂಲದ ಶ್ಯಾಮ್ ಲಾಲ್ ಮೇಘವಾಲ್, ಗೋವರ್ಧನ್ ರಾಜಪುರೋಹಿತ್ ಎಂಬುವವರು ಖಾಕಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಉತ್ತರ ಕನ್ನಡ ಎಸ್ಪಿ ನಾರಾಯಣ್, ಹೆಚ್ಚುವರಿ ಎಸ್ಪಿ ಸಿ.ಟಿ ಜಯಕುಮಾರ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ರಾಮನಗರ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿಗಳಾದ ರಾಜು ರಾಠೋಡ, ನಾಮದೇವ ಕಂಕಾಳಿ, ರಾಜು ಚಲವಾದಿ, ಲೊಕೇಶ ದೇವರೆಡ್ಡಿ, ಹಾಲಪ್ಪ ಬಾಗಿ, ಶಿವಾಜಿ ನೇಗಿನಾಳ ರವರುಗಳು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿ ಸಿಬ್ಬಂದಿಗಳನ್ನು ಎಸ್ಪಿ ಸಾಹೇಬ್ರು ಶ್ಲಾಘಿಸಿದ್ದಾರೆ.

error: Content is protected !!