PWD ರಸ್ತೆಯಲ್ಲಿ ಯಮರೂಪಿ ಗುಂಡಿಗಳು, ಖುದ್ದಾಗಿ ನಿಂತು ಗುಂಡಿ ಮುಚ್ಚಿಸಿದ ಹುನಗುಂದ ಗ್ರಾಪಂ ಅಧ್ಯಕ್ಷರು..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ರಸ್ತೆಗಳು ಹದಗೆಟ್ಟು ಹಳ್ಳ ಹಿಡಿದಿವೆ. ಅದ್ರಲ್ಲೂ ಇಂದೂರಿ‌ನಿಂದ ಕ್ಯಾಂಪ್ ನಂಬರ್ 8 ರ ಮಾರ್ಗವಾಗಿ ಹುನಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಅಗಡಿ ವರೆಗೂ ನಡೆದಾಡಲೂ ಆಗದ ಸ್ಥಿತಿಯಲ್ಲಿದೆ. ಈ ಮಾರ್ಗದಿಂದ ಸಂಚರಿಸುವ ಬಸ್ ಗಳು ಎದ್ದು, ಬಿದ್ದು ಸಾಗುವ ಹಾಗಿದೆ‌. ಹೀಗಾಗಿ, ಹುನಗುಂದ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಒಂದೊಳ್ಳೆ ಕೆಲಸ ಮಾಡಿದ್ದಾರೆ. ರಸ್ತೆಯಲ್ಲಿ ಯಮರೂಪಿಯಾಗಿದ್ದ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಮಾಡಿದ್ದಾರೆ.

ಅಂದಹಾಗೆ, PWD ಇಲಾಖೆ ಅಧಿಕಾರಿಗಳಿಗೆ ಈ ರಸ್ತೆ ಪ್ರಾಬ್ಲೆಂ ಹೇಳಿಕೊಂಡಿದ್ದ ಗ್ರಾಪಂ ಅಧ್ಯಕ್ಷರಿಗೆ, ಅಲ್ಲಿನ ಅಧಿಕಾರಿಗಳು, ನಮಗೆ ಇವಾಗ ಗುಂಡಿ ಮುಚ್ಚಿಸಲು ಸಾಧ್ಯವಿಲ್ಲ, ನಮ್ಮಲ್ಲಿ ಹಣವಿಲ್ಲ ಅಂತಾ ಕೈ ಎತ್ತಿದ್ದರಂತೆ, ಜಸ್ಟ್ ಜಲ್ಲಿ ಕಲ್ಲು ನೀಡುತ್ತೇವೆ ಅದನ್ನ ನೀವೇ ಲೇಬರ್ ಮೂಲಕ ಮುಂದೆ ನಿಂತು ಗುಂಡಿ ಮುಚ್ಚಿಸಿ ಅಂತಾ ಹೇಳಿದ್ದರಂತೆ, ಹೀಗಾಗಿ, ಇಂದು ಇಡೀ ದಿನ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿ ಮುಂದೆ ನಿಂತು ರಸ್ತೆ ಗುಂಡಿ ಮುಚ್ಚಿಸಿದ್ದಾರೆ. ಇದ್ರೊಂದಿಗೆ, ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

ಹೀಗಾಗಿ, ಗ್ರಾಮ ಪಂಚಾಯತಿ ಅಧ್ಯಕ್ಷ ಷರೀಫ್ ಸಿಂಗ್ ಶಿಗ್ಗಟ್ಟಿ, ಸದಸ್ಯರಾದ ಈಶ್ವರಗೌಡ ಅರಳಿಹೊಂಡ, ಬಸನಗೌಡ ಪಾಟೀಲ್ ಸೇರಿದಂತೆ ಹಲವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!