ಮುಂಡಗೋಡ ಬಿಜೆಪಿಗೆ ನೂತನ ಪದಾಧಿಕಾರಿಗಳ ಆಯ್ಕೆ, ಯಾರ್ಯಾರು ಗೊತ್ತಾ..?

ವಿವೇಕ್ ಹೆಬ್ಬಾರ್ ಬಳಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ ಮುಂಡಗೋಡ ಬಿಜೆಪಿ ಮೈಕೊಡವಿ ಎದ್ದಿದೆ. ಒಂದಿಷ್ಟು ಯುವಕರ ಪಡೆ ಸ್ಥಳೀಯ ಬಿಜೆಪಿಯನ್ನ ಬಲಿಷ್ಟಗೊಳಿಸಲು, ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದೆ. ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ್ ನೇತೃತ್ವದಲ್ಲಿ ಇಡೀ ತಾಲೂಕಿನ ಬೂತ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.

ನೂತನ ಪದಾಧಿಕಾರಿಗಳ ಆಯ್ಕೆ..!
ಅಂದಹಾಗೆ, ಬಿಜೆಪಿ ತೊರೆದು ಕೈ ಪಡೆಗೆ ಜಿಗಿದ ಹಲವು ಬಿಜೆಪಿ ಪದಾಧಿಕಾರಿಗಳಿಂದ ತೆರವಾದ ಸ್ಥಾನಗಳಿಗೆ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಮುಂಡಗೋಡಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರುಗಳು ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಇವ್ರು ಬಿಜೆಪಿ ಹೊಸ ಪದಾಧಿಕಾರಿಗಳು..!
ಮುಂಡಗೋಡ ಬಿಜೆಪಿ ಮಂಡಲದ ಉಪಾಧ್ಯಕ್ಷರನ್ನಾಗಿ, ಮಂಜುನಾಥ ಹರ್ಮಲ್ಕರ್, ರವಿ ಕಲಘಟಗಿ, ಸುಭಾಷ ಲಮಾಣಿ ನೇಮಕಗೊಂಡಿದ್ದಾರೆ‌. ಇನ್ನು
ಕಾರ್ಯದರ್ಶಿಯಾಗಿ ಶ್ರೀಮತಿ ತೃಪ್ತಿ ಭಜಂತ್ರಿ ಯವರನ್ನು ಆಯ್ಕೆ ಮಾಡಲಾಗಿದೆ.

ಮಹಾಶಕ್ತಿಕೇಂದ್ರ ಅಧ್ಯಕ್ಷರುಗಳು..!
ಮುಂಡಗೋಡ ತಾಲೂಕಿ‌ನ ಬಿಜೆಪಿ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ. ಅದ್ರಂತೆ, ಚಿಗಳ್ಳಿ ಮಹಾಶಕ್ತಿ ಕೇಂದ್ರಕ್ಕೆ, ಸಂತೋಷ್ ಅಂತೋಜಿ, ಇಂದೂರು ಮಹಾಶಕ್ತಿ ಕೇಂದ್ರ – ಪಿ ಜಿ ತಂಗಚ್ಚನ್ ಆಯ್ಕೆಯಾಗಿದ್ದಾರೆ. ಇನ್ನು ಶಕ್ತಿಕೇಂದ್ರದ ಅಧ್ಯಕ್ಷರುಗಳನ್ನೂ ಕೂಡ ಆಯ್ಕೆ ಮಾಡಿದ್ದು, ಪಾಳಾ ಶಕ್ತಿ ಕೇಂದ್ರಕ್ಕೆ ರಾಮಲಿಂಗ ಒಗ್ಗಣ್ಣನವರ್,ಚಿಗಳ್ಳಿ ಶಕ್ತಿ ಕೇಂದ್ರಕ್ಕೆ ಮಂಜುನಾಥ ಹೊತ್ನಳ್ಳಿ, ನಾಗನೂರು ಶಕ್ತಿ ಕೇಂದ್ರಕ್ಕೆ ಪ್ರಮೋದ್ ಕೆಳಗಿನಮನಿ, ಮೈನಳ್ಳಿ ಶಕ್ತಿ ಕೇಂದ್ರಕ್ಕೆ ಯಮ್ಮು ಜೋರೆ, ಗುಂಜಾವತಿ ಶಕ್ತಿ ಕೇಂದ್ರಕ್ಕೆ ದತ್ತಾತ್ರೇಯ ರಾಯ್ಕರ್, ನಂದಿಗಟ್ಟಾ ಶಕ್ತಿ ಕೇಂದ್ರಕ್ಕೆ ಪರಶುರಾಮ್ ಮೆಂತೆಕಾರ, ಚೌಡಳ್ಳಿ ಶಕ್ತಿ ಕೇಂದ್ರ ನಿಂಗಜ್ಜ ಕೋಣನಕೇರಿ,
ಸಾಲಗಾವ ಶಕ್ತಿ ಕೇಂದ್ರಕ್ಕೆ ಸುರೇಶ್ ಕೆರಿಹೊಲದವರ್ ಆಯ್ಕೆಯಾಗಿದ್ದಾರೆ.

error: Content is protected !!