ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಂಕಾಳು ವೈದ್ಯ ಗಂಭೀರ ಆರೋಪ ಮಾಡಿದ್ದಾರೆ. ಇದು ಚುನಾವಣೆಗಾಗಿ ಬಿಜೆಪಿಯವರು ಮಾಡಿರೋ ಸಂಚು ಅನ್ನೊ ವ್ಯಾಕ್ಯಾನ ಮಾಡಿರೋ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿಯವರು ಚುನಾವಣೆಗಾಗಿ ಏನ್ ಬೇಕಾದ್ರೂ ಮಾಡ್ತಾರೆ ಅಂತಾ ಆರೋಪಿಸಿದ್ರು.

ಅವರು, ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು, ಚುನಾವಣೆ ಹೊತ್ತಲ್ಲಿ ಮತದಾರರ ಗಮನ ಸೆಳೆಯಲು ಯಾರು, ಯಾವ ಪಕ್ಷದವರು ಏನ್ ಮಾಡ್ತಾರೆ ಅಂತಾ ನಿಮಗೂ ಗೊತ್ತಿದೆ, ಎಲ್ಲರಿಗೂ ಗೊತ್ತಿದೆ. ಈ ಕೃತ್ಯ ಯಾರದ್ದು ಅಂತಾ ಇಡೀ ಜಗತ್ತಿಗೇ ಗೊತ್ತಿದೆ. ಹೀಗಾಗಿ, ಯಾರೂ ಭಯ ಪಡುವ ಅಗತ್ಯವಿಲ್ಲ. ನಮ್ಮ‌ ಸರ್ಕಾರ ಅದ್ಯಾರೇ ಈ ಕೃತ್ಯದಲ್ಲಿ ಭಾಗಿಯಾಗಿದ್ರೂ ಖಂಡಿತವಾಗಿ ಕಠಿಣ ಕ್ರಮ ಜರುಗಿಸುತ್ತದೆ ಅಂತಾ ಸಚಿವ್ರು ತಿಳಿಸಿದ್ರು.

ಬಿಜೆಪಿಯವ್ರದ್ದೇ ಸಂಚು ಆರೋಪ..!
ಇನ್ನು, ಹಾಗಿದ್ರೆ ನಿಮ್ಮ ಪ್ರಕಾರ ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣವನ್ನು ಮಾಡಿಸಿದ್ದು ಯಾರು ಅಂತಾ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮಂಕಾಳು ವೈದ್ಯ, ಇದೇಲ್ಲ ಬಿಜೆಪಿಯವರ ಸಂಚು, ಇದುವರೆಗೂ ಬಿಜೆಪಿಯವರು ಯಾವ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಮಾತಾನಾಡಿದ್ದಾರೆ..? ಬಡವರ ಪರವಾಗಿ ಯಾವ ಕಾರ್ಯಕ್ರಮ ನೀಡಿ ಚುನಾವಣೆ ಎದುರಿಸಿದ್ದಾರೆ‌..? ಅವ್ರು ಇದುವರೆಗೂ ಇಂತದ್ದೇ ಮಾಡಿಕೊಂಡು ಚುನಾವಣೆ ಎದುರಿಸಿದ್ದು ಅಲ್ವಾ ಅಂತಾ ಹೇಳಿದ್ರು.

 

error: Content is protected !!