ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!

ಮುಂಡಗೋಡ: ಕರಡಿ ದಾಳಿಯಿಂದ ಸ್ಥಳದಲ್ಲೇ ಸಾವುಕಂಡಿದ್ದ ರೈತನ ಕುಟುಂಬಕ್ಕೆ ಸರ್ಕಾರ ನೆರವಿನ ಹಸ್ತ ನೀಡಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಲ್ಲಿನ ಅರಣ್ಯ ಅಧಿಕಾರಿಗಳು ನೊಂದ ಕುಟುಂಬಕ್ಕೆ ಪರಿಹಾರದ ಆಸರೆ ಒದಗಿಸುವಲ್ಲಿ ಜವಾಬ್ದಾರಿ ಮೆರೆದಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ಹ್ಯಾಟ್ಸ್ ಅಪ್..

ಅಂದಹಾಗೆ, ಕರಡಿ ದಾಳಿಯಿಂದ ಮುಂಡಗೋಡ ತಾಲೂಕಿನ ಮರಗಡಿ ಗೌಳಿದಡ್ಡಿಯ ಜಿಮ್ಮು ವಾಘು ತೋರವತ್ ಎಂಬುವ ರೈತ ಭೀಕರ ಸಾವು ಕಂಡಿದ್ದ‌. ಹೀಗಾಗಿ, ಅಕ್ಷರಶಃ ನಲುಗಿ ಹೋಗಿದ್ದ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಪರಿಹಾರದ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಈ ವೇಳೆ CCF ವಸಂತ ರೆಡ್ಡಿ, ಯಲ್ಲಾಪುರ ವಿಭಾಗದ DFO ಶಶಿಧರ್ ಹೆಗಡೆ, ACF ರವಿ ಹುಲಕೋಟಿ, RFO ಸುರೇಶ್ ಕುಲ್ಲೋಳ್ಳಿ, DRFO ನಾಗರಾಜ್ ಕಲಾಲ, ಮಾಜಿ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!