ಶಿಗ್ಗಾವಿಯಲ್ಲಿ ಭರ್ಜರಿ ಪ್ರಚಾರ ಶುರು ಮಾಡಿದ JDS ಅಭ್ಯರ್ಥಿ ಶಶಿಧರ್ ಎಲಿಗಾರ್..!

ಶಿಗ್ಗಾವಿ: ಶಿಗ್ಗಾವಿ ಸವಣೂರ ಮತ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಅಬ್ಬರದ ಪ್ರಚಾರ ಶುರುವಾಗಿದೆ. JDS ಪಕ್ಷದ ಅಭ್ಯರ್ಥಿ ಶಶಿಧರ ಯಲಿಗಾರ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿವು ಓಟ್ ಹಾಕಿ ಆರಿಸಿಕಳುಹಿಸಿದ ಶಾಸಕ ಬೆಂಗಳೂರಲ್ಲಿ ಜಿವನ ಮಾಡೋರು ಬೇಕೊ.? ನಿಮ್ಮ ಜೊತೆ ಸದಾ ಸೇವೆ ಮಾಡುವ ಶಾಸಕ ಬೇಕೊ..? ಎಂದು ನೀವೇ ತಿರ್ಮಾನ ಮಾಡಿ ಓಟ್ ಹಾಕಿ ಅಂತಾ ಮನವಿ ಮಾಡಿದ್ರು.

ಈ ಸಂದರ್ಭದಲ್ಲಿ ಹಲವರು ಜೆಡಿಎಸ್ ಪಕ್ಷಕ್ಕೆ ಸೇಪ೯ಡೆಗೊಂಡರು. ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಚಾರವನ್ನು ಯಶಸ್ವಿಗೊಳಿಸಿದರು.

JDS ತಾಲೂಕ ಅಧ್ಯಕ್ಷರಾದ ಈರಣ್ಣ ನವಲಗುಂದ, ಉಪಾಧ್ಯಕ್ಷರು B.C. ಗುದ್ಲಿ ಶೆಟ್ಟರ್, ತಾಲೂಕ ಪ್ರದಾನ ಕಾರ್ಯದರ್ಶಿ ರಾಜು ಮಾಳೋದೆ, ಶಹರ ಘಟಕದ ಅಧ್ಯಕ್ಷರು ಸಂಜೀವ್ ಮಣ್ಣನ್ನವರ, ಬಂಕಾಪುರ ಶಹರ ಘಟಕದ ಅಧ್ಯಕ್ಷರು ರವಿ ಕುರಗೊಡಿ, ಹಾಗೂ ಹಲವಾರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು…

ವರದಿ: ಮಂಜುನಾಥ್ ಪಾಟೀಲ್

error: Content is protected !!