ಹಾವೇರಿಯಲ್ಲಿ ಬಿಜೆಪಿ ಬಂಡಾಯದ ಬೆಂಕಿ ಧಗಧಗಿಸುತ್ತಿದೆ. ಹಾವೇರಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ರೆಬೆಲ್ ಶಾಸಕ ನೆಹರೂ ಓಲೇಕಾರ್ ಹಾಗೂ ಬೆಂಬಲಿಗರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಬೊಮ್ಮಾಯಿ ಭಾವಚಿತ್ರ ಹರಿದು ಹಾಕಿ ಆಕ್ರೋಶ ವ್ಯಕ್ತ ಪಡಿಸಿ, ಬೊಮ್ಮಾಯಿ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿದ್ದಾರೆ.

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿರೋ ನೆಹರೂ ಓಲೇಕಾರ್ ಬೆಂಬಲಿಗರು, ಸಿಎಂ ಬೊಮ್ಮಾಯಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ನೆಹರೂ ಓಲೆಕಾರ್ ಬೆಂಬಲಿಗರನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಆದ್ರೆ, ಆಕ್ರೋಶಗೊಂಡಿರೋ ಬೆಂಬಲಿಗರು ರೆಬೆಲ್ ಶಾಸಕ ನೆಹರೂ ಓಲೇಕಾರ್ ನೇತೃತ್ವದಲ್ಲಿ ಬಿಜೆಪಿ ವಿರಿದ್ಧ ಕಿಡಿ ಕಾರಿದ್ದಾರೆ.

ಹಾವೇರಿ ಕ್ಷೇತ್ರದಿಂದ ಟಿಕೆಟ್ ಸಿಗದ ಹಿನ್ನಲೆ.
ಬುಗಿಲೆದ್ದಿರುವ ನೇಹರು ಓಲೇಕಾರ ಅಸಮಾಧಾನಗೊಂಡಿದ್ದಾರೆ, ಅನ್ಯಾಯ ಅನ್ಯಾಯ ನೆಹರು ಓಲೇಕಾರ ಗೆ ಅನ್ಯಾಯ ಎಂದು ಘೋಷಣೆ ಕೂಗುತ್ತ, ಬೇಕೆ ಬೇಕೆ ಟಿಕೆಟ್ ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ‌. ಹಿಗಾಗಿ, ಸಿಎಂ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿದ್ದಾರೆ.
ಟಿಕೆಟ್ ತಪ್ಪಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಎಂದು ಧಿಕ್ಕಾರ ಕೂಗಿ, ಅವರ ಪೋಟೊಗೆ ಚಪ್ಪಲಿ ಏಟು ಹಾಕಿದ್ದಾರೆ.

error: Content is protected !!