ಬೆಳಗಾವಿ; ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಮೊದಲ ವಿಕೆಟ್ ಪತನವಾಗಿದೆ. ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗುಡ್ ಬೈ ಹೆಳಿದ್ದಾರೆ. ಹಾಗಂತ ಖುದ್ದು ಲಕ್ಷ್ಮಣ ಸವದಿ ಅಥಣಿಯಲ್ಲಿಂದು ಘೋಷಣೆ ಮಾಡಿದ್ದಾರೆ.

ನಾಳೆ ಕ್ಷೇತ್ರದ ಜನರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ತಿನಿ ಅಂತಾ ಹೇಳಿರೋ ಸವದಿ, ಸಿಎಂ ಬಸವರಾಜ್ ಬೊಮ್ಮಾಯಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಬೊಮ್ಮಾಯಿಯವರು ಸೌಜನ್ಯಕ್ಕಾದ್ರೂ ನನ್ನ ಜೊತೆ ಮಾತಾಡಬೇಕಿತ್ತು. ಆದ್ರೆ, ಬೊಮ್ಮಾಯಿ ಸಾಹೇಬ್ರು ನನ್ನ ಜೊತೆ ಮಾತಾಡಿಲ್ಲ ಅಂದ್ರು. ಮೊದಲೇ ನಿಂಗೆ ಟಿಕೆಟ್ ಸಿಗಲ್ಲ ಅಂತಾ ಹೇಳಿದ್ದಿದ್ರೆ ನಾನು ಮನಸ್ಥತಿಯನ್ನು ಬದಲಾಯಿಸಿಕೊಳ್ತಿದ್ದೆ. ಆದ್ರೆ, ಕೊನೆ ಗಳಿಗೆವರೆಗೂ ಗುಟ್ಟು ಬಿಟ್ಟು ಕೊಡದೆ ನಂಗೆ ನೋವು ನೀಡಿದ್ರು ಅಂತಾ ಸವದಿ ಅಸಮಾಧಾನ ಹೊರ ಹಾಕಿದ್ರು..

ಬೊಮ್ಮಾಯಿ ಪಿಎಂ ಆಗ್ತಾರೆ..!
ಇನ್ನು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಿಎಂ ಬೊಮ್ಮಾಯಿ ವಿರುದ್ದ ಆಕ್ರೋಶ ಹೊರಹಾಕಿದ್ದು, ಕಾಂಗ್ರೆಸ್ ಸೇರಲು ಹೊರಟಿದ್ದ ಬೊಮ್ಮಾಯಿವರನ್ನು ನಾನು, ಸಿ.ಸಿ.ಪಾಟೀಲ್ ಜೊತೆಯಾಗಿ ಯಡಿಯೂರೊಪ್ಪನವರ ಮುಖಾಂತರ ಬಿಜೆಪಿ ಸೇರುವಂತೆ ಶ್ರಮಿಸಿದ್ದೆವು. ಆ ಕಾರಣಕ್ಕಾಗೇ ಇವತ್ತು ಬೊಮ್ಮಾಯಿಯವರು ಸಿಎಂ ಆಗಿದ್ದಾರೆ. ಆದ್ರೆ ಎರಡನೇ ಬಾರಿಗೆ ಸಿಎಂ ಆಗುವ ಸೌಭಾಗ್ಯ ಅವರಿಗಿಲ್ಲ, ಮುಂದೆ ನರೇಂದ್ರ ಮೋದಿಯವರಿಗೆ 75 ವರ್ಷ ಆದಮೇಲೆ ಬೊಮ್ಮಾಯಿಯವರೇ ಪಿಎಂ ಕೂಡ ಆಗ್ತಾರೆ ಅಂತಾ ಟಾಂಗ್ ನೀಡಿದ್ರು.

error: Content is protected !!