ಮುಂಡಗೋಡಿನಲ್ಲಿ ಮಾ.20 ರ ಸೋಮವಾರ ಬಿಜೆಪಿ ಸುನಾಮಿ ಏಳಲಿದೆ- ಗುಡ್ಡಪ್ಪ ಕಾತೂರ್

ಮುಂಡಗೋಡ: ಮಾರ್ಚ 20 ರ ಸೋಮವಾರ ಮುಂಡಗೋಡಿನಲ್ಲಿ ಬಿಜೆಪಿ ಸುನಾಮಿ ಏಳಲಿದೆ, ಆ ಸುನಾಮಿಯಲ್ಲಿ ಎದುರಾಳಿಗಳು ಕೊಚ್ಚಿ ಹೋಗಲಿದ್ದಾರೆ ಅಂತಾ ಬಿಜೆಪಿ ಮುಖಂಡ ಗುಡ್ಡಪ್ಪ ಕಾತೂರ ವಿಶ್ವಾಸ ವ್ಯಕ್ತ ಪಡಿಸಿದ್ರು‌.

ಅವ್ರು ಕರಗಿನಕೊಪ್ಪದ ಬಳಿ ಬಿಜೆಪಿ ಸಮಾವೇಶದ ಮೈದಾನದಲ್ಲಿ ಸಮಾವೇಶದ ಪೂರ್ವ ತಯಾರಿ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ರು‌.

ಯಲ್ಲಾಪುರ ಕ್ಷೇತ್ರದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಮಾಡಿರೋ ಅಭಿವೃದ್ಧಿ ಪರ ಕಾರ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇದೇ ಬರುವ ಸೋಮವಾರ ಮಾರ್ಚ 20 ರಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೂ ಮುನ್ನ ಸುಮಾರು 5 ಸಾವಿರ ಬೈಕ್ ಗಳ‌ ಮೂಲಕ ಪಟ್ಟಣದ ಅಯ್ಯಪ್ಪ ಸೇವಸ್ಥಾನದಿಂದ ಬೃಹತ್ ಬೈಕ್ ರ್ಯಾಲಿ ಮೂಲಕ ಸಚಿವ ಶಿವರಾಮ್ ಹೆಬ್ಬಾರ್ ರವರನ್ನು ಮೆರವಣಿಗೆ ಮಾಡಿ ಸಮಾವೇಶದ ವೇದಿಕೆಗೆ ಕರೆತರಲಾಗುತ್ತದೆ ಅಂತಾ ಗುಡ್ಡಪ್ಪ ಕಾತೂರ್ ಮಾಹಿತಿ ನೀಡಿದ್ರು.

10 ಎಕರೆ ಪ್ರದೇಶದಲ್ಲಿ..
ಅಂದಹಾಗೆ, ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಶಿಜ್ಷಣ ಸಂಸ್ಥೆಯ ಸಮೀಪದ ಸುಮಾರು 10 ಎಕರೆ ಜಾಗದಲ್ಲಿ ನಡೆಯಲಿರೋ ಸಮಾವೇಶದಲ್ಲಿ ಏನಿಲ್ಲವೆಂದರೂ 20 ಸಾವಿರದಷ್ಟು ಜನರು ಸೇರುವ ವಿಶ್ವಾಸವಿದೆ. ಹೀಗಾಗಿ, ಈ ಸಮಾವೇಶ ಅಭೂತಪೂರ್ವ ಯಶಸ್ಸು ಕಾಣಲಿದೆ ಅಂತಾ ಗುಡ್ಡಪ್ಪ ಕಾತೂರ್ ಭವಿಷ್ಯ ನುಡಿದ್ರು.

ಪತ್ರಿಕಾಗೋಷ್ಟಿಯಲ್ಲಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲ್, ಸಚಿವ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್, ಜಗದೀಶ್ ಕುರೂಬರ್, ಸಂತೋಷ ತಳವಾರ್, ಸಿದ್ದಪ್ಪ ಹಡಪದ, ಅರುಣ್ ಗೊಂದಳಿ, ಉಮೇಶ್ ಬಿಜಾಪುರ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು.

error: Content is protected !!