ದಾವಣಗೇರೆಯಲ್ಲಿ ಕೊಲೆ‌ಮಾಡಿ ಶಿಗ್ಗಾವಿಯಲ್ಲಿ ಸರೆಂಡರ್ ಆದ ಶಿವಮೊಗ್ಗದ ಆರೋಪಿಗಳು..!

ಶಿಗ್ಗಾವಿ: ದಾವಣಗೇರೆ ಜಿಲ್ಲೆಯಲ್ಲಿ ಮರ್ಡರ್ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳು ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆ ಚೀಲೂರು ಸಮೀಪದ ಗೋವಿನ ಕೋವಿ ಬಳಿ ನಿ‌ನ್ನೆ ಸಂಜೆ ಆಂಜನೇಯ ಎಂಬಾತನ ಹತ್ಯೆಯಾಗಿತ್ತು.

ಅಂದಹಾಗೆ, ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಆಂಜನೇಯ ಹಾಗೂ ಮಧು ಎಂಬುವರ ಮೇಲೆ ನಿನ್ನೆ ಸಂಜೆ ಹಲ್ಲೆ ನಡೆದಿತ್ತು. ಈ ವೇಳೆ ಆಂಜನೇಯ ಎಂಬುವವರ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಧು ಎಂಬುವವ ಗಂಭೀರವಾಗಿ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಂಜನೇಯನನ್ನು ಕೊಲೆ ಮಾಡಿದ ಆರೋಪಿಗಳು ನಿನ್ನೆ ರಾತ್ರಿಯೇ ಶಿಗ್ಗಾವಿಗೆ ತೆರಳಿ ಪೊಲೀಸರ ಎದುರು ಶರಣಾಗಿದ್ದಾರೆ ಎನ್ನಲಾಗಿದೆ.

ಸುನೀಲ್ ಅಲಿಯಾಸ್ ತಮಿಳ್ ಸುನೀಲ್, ಅಭಿಲಾಷ್, ವೆಂಕಟೇಶ್ ಮತ್ತು ಪವನ್ ಎಂಬವರು ಸರೆಂಡರ್ ಆದವರು. ಈ ನಾಲ್ವರು ಶಿವಮೊಗ್ಗ ಮೂಲದವರಾಗಿದ್ದು, ಹಂದಿ ಅಣ್ಣ ಸಹಚರರು ಎನ್ನಲಾಗುತ್ತಿದೆ.

error: Content is protected !!